AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Patanjali: ಕೋರ್ಟ್ ತೀರ್ಪು ಪ್ರಶ್ನಿಸಿ ನ್ಯಾಯಮಂಡಳಿ ಮೊರೆ ಹೋಗಲಿರುವ ಪತಂಜಲಿ

Patanjali says its mild and ghee rigorously tested: 2020ರಲ್ಲಿ ಪತಂಜಲಿ ತುಪ್ಪದ ಸ್ಯಾಂಪಲ್ ಪರೀಕ್ಷೆಯೊಂದು ವಿಫಲವಾದ ಪ್ರಕರಣ ಸಂಬಂಧ ಕೋರ್ಟ್​ವೊಂದು ಸಂಸ್ಥೆಗೆ ದಂಡ ಹಾಕಿದೆ. ಮಾನ್ಯತೆ ಇಲ್ಲದ ಮತ್ತು ಕಳಪೆ ಮಟ್ಟದ ಲ್ಯಾಬ್​ನಲ್ಲಿ ಪರೀಕ್ಷೆ ನಡೆಸಲಾಗಿದೆ ಎಂದು ವಾದಿಸಿರುವ ಪತಂಜಲಿ, ಮರುಪರೀಕ್ಷೆಗೆ ಒತ್ತಾಯಿಸಿದೆ. ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅದು ಆಹಾರ ಸುರಕ್ಷತೆ ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ.

Patanjali: ಕೋರ್ಟ್ ತೀರ್ಪು ಪ್ರಶ್ನಿಸಿ ನ್ಯಾಯಮಂಡಳಿ ಮೊರೆ ಹೋಗಲಿರುವ ಪತಂಜಲಿ
ಪತಂಜಲಿ ತುಪ್ಪ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 01, 2025 | 5:18 PM

Share

ನವದೆಹಲಿ, ಡಿಸೆಂಬರ್ 1: ಪತಂಜಲಿಯ ಹಸುವಿನ ತುಪ್ಪದ ಸ್ಯಾಂಪಲ್​ಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ಹೇಳಿ 1 ಲಕ್ಷ ರೂ ದಂಡ ವಿಧಿಸಿರುವ ಸ್ಥಳೀಯ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಆ ಕಂಪನಿಯು (Patanjali) ಆಹಾರ ಸುರಕ್ಷತೆ ನ್ಯಾಯಮಂಡಳಿಯ ಮೊರೆಹೋಗಲು ನಿರ್ಧರಿಸಿದೆ. ಉತ್ತರಾಖಂಡ್ ರಾಜ್ಯದ ಹರಿದ್ವಾರದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ನವೆಂಬರ್ 27ರಂದು ಪತಂಜಲಿ ಆಯುರ್ವೇದ ಕಂಪನಿಯ ಮೇಲೆ 1 ಲಕ್ಷ ರೂ ದಂಡ ವಿಧಿಸಿದ್ದರು. ಹಸುವಿನ ತುಪ್ಪ ವಿತರಿಸಿದ ಬ್ರಹ್ಮ ಏಜೆನ್ಸಿಗೆ 25,000 ರೂ ಹಾಗೂ ಅದನ್ನು ಮಾರಾಟ ಮಾಡಿದ ಚಿಲ್ಲರೆ ವ್ಯಾಪಾರಿಯಾದ ಕರಣ್ ಜನರಲ್ ಸ್ಟೋರ್​ಗೆ 15,000 ರೂ ಅನ್ನೂ ದಂಡ ಹಾಕಿ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ತೀರ್ಪು ನೀಡಿದ್ದರು.

ಐದು ವರ್ಷದ ಹಿಂದೆ ನಡೆದ ಸ್ಯಾಂಪಲ್ ಪರೀಕ್ಷೆಯಲ್ಲಿ ಗುಣಮಟ್ಟ ವಿಫಲವಾಗಿದ್ದುದು ಕಂಡು ಬಂದಿತ್ತು. ಆದರೆ, ತೀರ್ಪು ಈಗ ಬಂದಿದೆ. ಕೋರ್ಟ್​ನ ಈ ತೀರ್ಪನ್ನು ಪತಂಜಲಿ ಸಂಸ್ಥೆ ಪ್ರಶ್ನಿಸುತ್ತಿದೆ. ತುಪ್ಪದ ಪರೀಕ್ಷೆ ಮಾಡಿದ ಲ್ಯಾಬೊರೇಟರಿಯು ಎನ್​ಎಬಿಎಲ್ ಮಾನ್ಯತೆ ಹೊಂದಿರಲಿಲ್ಲ. ಪರೀಕ್ಷೆಗೆ ಬಳಸಲಾದ ಯಂತ್ರೋಪಕರಣವೂ ಹಾಳಾಗಿದೆ. ಇದನ್ನು ಆಧರಿಸಿ ಕೋರ್ಟ್ ನೀಡಿರುವ ತೀರ್ಪು ತಪ್ಪು ಎಂದು ಪತಂಜಲಿ ಸಂಸ್ಥೆ ಹೇಳಿದೆ.

ಇದನ್ನೂ ಓದಿ: ದಂತ ಕಾಂತಿಯೋ, ಅಲೋವೆರಾ ಜೆಲ್ಲೋ, ಹಸುವಿನ ತುಪ್ಪವೋ… ಅತಿಹೆಚ್ಚು ಮಾರಾಟವಾಗುವ ಪತಂಜಲಿ ಉತ್ಪನ್ನಗಳಿವು

2020ರ ಅಕ್ಟೋಬರ್ 20ರಂದು ಆಹಾರ ಸುರಕ್ಷತೆ ಅಧಿಕಾರಿ ದಿಲೀಪ್ ಜೈನ್ ಅವರು ಕರಣ್ ಜನರಲ್ ಸ್ಟೋರ್​ನಿಂದ ಒಂದು ತುಪ್ಪದ ಸ್ಯಾಂಪಲ್ ಪಡೆದು, ಅದನ್ನು ರುದ್ರಾಪುರ್​ನ ಸರ್ಕಾರಿ ಲ್ಯಾಬ್​ವೊಂದರಲ್ಲಿ ಪರೀಕ್ಷೆಗೆ ಒಳಪಡಿಸಿದರು. ಗುಣಮಟ್ಟದ ಪರೀಕ್ಷೆಯಲ್ಲಿ ತುಪ್ಪ ವಿಫಲವಾಗಿದೆ. ನಂತರ ಪತಂಜಲಿಗೆ 2021ರಲ್ಲಿ ನೋಟೀಸ್ ಕೊಡಲಾಯಿತು.

ಮತ್ತೊಮ್ಮೆ ಪರೀಕ್ಷೆ ನಡೆಸಬೇಕು ಎಂದು ಪತಂಜಲಿ ಹೇಳಿದ ಬಳಿಕ ಘಾಜಿಯಾಬಾದ್​ನಲ್ಲಿರುವ ನ್ಯಾಷನಲ್ ಫುಡ್ ಲ್ಯಾಬ್​ನಲ್ಲಿ ಮರುಪರೀಕ್ಷೆ ಮಾಡಲಾಯಿತು. ಅದರಲ್ಲೂ ವಿಫಲವಾಯಿತು. ಆದರೆ, ಪತಂಜಲಿ ಸಂಸ್ಥೆ ಹೇಳುವ ಪ್ರಕಾರ ಮರುಪರೀಕ್ಷೆ ವೇಳೆ ಗಡುವು ಮೀರಿದ ತುಪ್ಪದ ಸ್ಯಾಂಪಲ್ ಅನ್ನು ಪಡೆಯಲಾಗಿತ್ತು. ಹೀಗಾಗಿ, ಎರಡನೇ ಪರೀಕ್ಷೆಯೂ ಅಸಮರ್ಪಕ ಎಂಬುದು ಅದರ ವಾದ.

ಇದನ್ನೂ ಓದಿ: ಆರ್ಗ್ಯಾನಿಂಗ್ ಫಾರ್ಮ್​ನಿಂದ ಸೋಲಾರ್ ಎನರ್ಜಿವರೆಗೆ ಪರಿಸರ ಉಳಿಸುವ ಜವಾಬ್ದಾರಿ ಹೊತ್ತ ಪತಂಜಲಿ

ಪತಂಜಲಿ ಸಂಸ್ಥೆಯು ತನ್ನ ಹಾಲು ಹಾಗು ತುಪ್ಪದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಮರ್ಪಕ ವ್ಯವಸ್ಥೆ ಹೊಂದಿದ್ದೇವೆ ಎಂದು ಹೇಳಿಕೊಂಡಿದೆ. ತನ್ನ ತುಪ್ಪದ ಸ್ಯಾಂಪಲ್ ಅನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಬೇಕು ಎಂಬುದು ಅದರ ಆಗ್ರಹವಾಗಿದೆ. ಪತಂಜಲಿ ಸಹ-ಸಂಸ್ಥಾಪಕ ಬಾಬಾ ರಾಮದೇವ್ ಅವರೂ ಕೂಡ ವಿಡಿಯೋವೊಂದರಲ್ಲಿ ಈ ವಿಚಾರ ಪ್ರಸ್ತಾಪಿಸಿ, ದೇಶದಲ್ಲೆಡೆ ಇರುವ ಪತಂಜಲಿ ತುಪ್ಪದ ಯಾವುದೇ ಸ್ಯಾಂಪಲ್ ಅನ್ನು ತೆಗೆದು, ಗುಣಮಟ್ಟ ಪರೀಕ್ಷೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ