AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಷೇರು ಮಾರುಕಟ್ಟೆ ಭಾರೀ ಕುಸಿತ; ಸಿಕ್ಕಾಪಟ್ಟೆ ನಷ್ಟ ಕಂಡ ಸೆನ್ಸೆಕ್ಸ್, ನಿಫ್ಟಿ; ಈ ಪರಿ ಕುಸಿತಕ್ಕೆ ಕಾರಣಗಳೇನು?

Indian stock market crashes on Ugadi day: ಯುಗಾದಿ ಹಬ್ಬದ ದಿನವಾದ ಇಂದು ಗುರುವಾರ ಭಾರತೀಯ ಷೇರು ಮಾರುಕಟ್ಟೆ ತಲ್ಲಣಗೊಂಡಿದೆ. ಬಿಎಸ್​ಇಯ ಸೆನ್ಸೆಕ್ಸ್, ಎನ್​ಎಸ್​ಇಯ ನಿಫ್ಟಿ ಇಂಡೆಕ್ಸ್​ಗಳು ತೀವ್ರ ಹಿನ್ನಡೆ ಕಂಡಿವೆ. ಸೆನ್ಸೆಕ್ಸ್ ಬಹುತೇಕ 2,500 ಅಂಕಗಳನ್ನು ನಷ್ಟ ಮಾಡಿಕೊಂಡಿದೆ. ನಿಫ್ಟಿ 23,000 ಅಂಕಗಳ ಗಡಿಯೊಳಗೆ ಇಳಿಯುವ ಧಾವಂತದಲ್ಲಿದೆ. ಈ ಕುಸಿತಕ್ಕೆ ಏನು ಕಾರಣ?

ಷೇರು ಮಾರುಕಟ್ಟೆ ಭಾರೀ ಕುಸಿತ; ಸಿಕ್ಕಾಪಟ್ಟೆ ನಷ್ಟ ಕಂಡ ಸೆನ್ಸೆಕ್ಸ್, ನಿಫ್ಟಿ; ಈ ಪರಿ ಕುಸಿತಕ್ಕೆ ಕಾರಣಗಳೇನು?
ಷೇರು ಮಾರುಕಟ್ಟೆ ಕುಸಿತ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 19, 2026 | 5:42 PM

Share

ನವದೆಹಲಿ, ಮಾರ್ಚ್ 19: ಭಾರತದ ಷೇರು ಮಾರುಕಟ್ಟೆ (Stock Market) ಯುಗಾದಿ ಹಬ್ಬದ ದಿನದಂದು ಅಕ್ಷರಶಃ ಗಡಗಡ ಅಲುಗಾಡಿದೆ. ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ಹೆಚ್ಚೂಕಡಿಮೆ ಶೇ. 3ರಷ್ಟು ಕುಸಿತವನ್ನು ಕಂಡಿವೆ. ಮೂರು ದಿನ ಪಾಸಿಟಿವ್ ಆಗಿದ್ದ ಈ ಇಂಡೆಕ್ಸ್ ಗುರುವಾರ ನೆಲಕಚ್ಚಿವೆ. ಸೆನ್ಸೆಕ್ಸ್ 2,496 ಅಂಕಗಳನ್ನು ಕಳೆದುಕೊಂಡು 74,207.24 ಮಟ್ಟಕ್ಕೆ ಮುಟ್ಟಿದೆ. ನಿಫ್ಟಿ50 ಇಂಡೆಕ್ಸ್ 775.65 ಅಂಕಗಳ ಕಳೆದುಕೊಂಡು 23,002.15 ಮಟ್ಟ ಮುಟ್ಟಿದೆ.

ಈ ಇಂಡೆಕ್ಸ್​ನಲ್ಲಿರುವ ಹತ್ತಾರು ಕಂಪನಿಗಳಷ್ಟೇ ಹಿನ್ನಡೆ ಹೊಂದಿಲ್ಲ, ಬಹುತೇಕ ಇಡೀ ಷೇರು ಮಾರುಕಟ್ಟೆಯ ಹೆಚ್ಚಿನ ಕಂಪನಿಗಳ ಷೇರುಗಳಿಗೆ ಹಿನ್ನಡೆಯಾಗಿದೆ. ಎನ್​ಎಸ್​ಇನಲ್ಲಿ ಲಿಸ್ಟ್ ಆಗಿರುವ ಸುಮಾರು 4,000 ಷೇರುಗಳ ಪೈಕಿ 3,048 ಷೇರುಗಳು ನೆಗಟಿವ್ ಆಗಿವೆ. 864 ಷೇರುಗಳು ಮಾತ್ರವೇ ಗುರುವಾರ ಲಾಭ ಕಂಡಿರುವುದು.

ಇದನ್ನೂ ಓದಿ: ಇಂಧನ ದತ್ತಾಂಶವನ್ನು ರಾಷ್ಟ್ರೀಯ ಭದ್ರತಾ ವಿಚಾರವೆಂದು ವರ್ಗೀಕರಿಸಿದ ಸರ್ಕಾರ; ತೈಲ, ಅನಿಲ ಕ್ಷೇತ್ರದ ಸಂಸ್ಥೆಗಳಿಗೆ ಹೊಸ ಜವಾಬ್ದಾರಿ

ಎಚ್​ಡಿಎಫ್​ಸಿ ಬ್ಯಾಂಕ್, ಎಟರ್ನಲ್, ಶ್ರೀರಾಮ್ ಫೈನಾನ್ಸ್ ಷೇರುಗಳು ಅತಿಹೆಚ್ಚು ಕಳೆದುಕೊಂಡಿರುವುದು. ಗುರುವಾರ ಗಳಿಕೆ ಕಂಡಿರುವ ಷೇರುಗಳಲ್ಲಿ ಹೆಚ್ಚಿನವು ತೈಲ ಮತ್ತು ಇಂಧನ ಕ್ಷೇತ್ರದ ಕಂಪನಿಗಳಾಗಿವೆ.

ಷೇರು ಮಾರುಕಟ್ಟೆ ಕುಸಿತಕ್ಕೆ ಕೆಲ ಸಂಭಾವ್ಯ ಕಾರಣಗಳು ಇಂತಿವೆ:

  • ಅಮೆರಿಕ ಇರಾನ್ ಸಂಘರ್ಷ ತಣ್ಣಗಾರುವ ಲಕ್ಷಣ ಕಾಣುತ್ತಿಲ್ಲ. ತನ್ನನ್ನು ಹೊಡೆದರೆ ತಾನು ಯಾರನ್ನೂ ಬಿಡುವುದಿಲ್ಲ ಎಂದು ಇರಾನ್ ಮಾಡು ಇಲ್ಲ ಮಡಿ ಹೋರಾಟಕ್ಕೆ ಸಿದ್ಧಗೊಂಡಿದೆ. ಇದು ಎಲ್ಲೆಡೆ ಭಯ ಮೂಡಲು ಕಾರಣವಾಗಿದೆ.
  • ಇರಾನ್ ಯುದ್ಧದಿಂದಾಗಿ ಕಚ್ಚಾ ತೈಲ ಬೆಲೆ ಬ್ಯಾರಲ್​ಗೆ 110 ಡಾಲರ್ ದಾಟಿದೆ. ಇದು ಜಾಗತಿಕವಾಗಿ ಹಣದುಬ್ಬರ ಏರಿಕೆಗೆ ಮತ್ತು ಆರ್ಥಿಕ ಕುಸಿತಕ್ಕೆ ಕಾರಣವಾಗಬಹುದು. ಹೀಗಾಗಿ, ಮಾರುಕಟ್ಟೆ ಭಯಗ್ರಸ್ತವಾಗಿದೆ.
  • ಎಚ್​ಡಿಎಫ್​ಸಿ ಬ್ಯಾಂಕ್​ನ ಛೇರ್ಮನ್ ಅತಾನು ಚಕ್ರಬರ್ತಿ ಅವರು ನೈತಿಕ ಕಾರಣವೊಡ್ಡಿ ರಾಜೀನಾಮೆ ನೀಡಿರುವುದು ಅದರ ಷೇರು ಕುಸಿತಕ್ಕೆ ಎಡೆ ಮಾಡಿಕೊಟ್ಟಿದೆ. ಎಚ್ಡಿಎಫ್​ಸಿ ಬ್ಯಾಂಕ್​ನ ಷೇರುಬೆಲೆ ಒಂದೇ ದಿನದಲ್ಲಿ ಶೇ. 8ರಷ್ಟು ಕುಸಿತವಾಗಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತದ ಎಲ್​ಪಿಜಿ ಟ್ಯಾಂಕರ್​ಗಳಲ್ಲಿ ಗ್ಯಾಸ್ ಎಷ್ಟು ದಿನಕ್ಕಾಗುವಷ್ಟಿದೆ ಗೊತ್ತಾ?

ಹಾಗೆಯೇ, ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆಯು ಹಣದುಬ್ಬರ ಏರಬಹುದು ಎಂದು ಹೇಳಿದ್ದು, ಡಾಲರ್ ಎದುರು ರುಪಾಯಿ ಮೌಲ್ಯದ ಕುಸಿತ ಮುಂದುರಿಯುತ್ತಿರುವುದು, ಎಫ್​ಐಐಗಳಿಂದ ಷೇರುಗಳ ಬಿಕರಿಯಾಗುತ್ತಿರುವುದು ಇವೆಲ್ಲವೂ ಭಾರತದ ಷೇರು ಮಾರುಕಟ್ಟೆಯ ಹಿನ್ನಡೆಗೆ ಕಾರಣಗಳಾಗಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
ಎಲ್​ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಎಲ್​ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​