AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paytm share price: ಪೇಟಿಎಂ ಷೇರಿನ ಬೆಲೆ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 990 ರೂಪಾಯಿಗೆ ಕುಸಿತ

ಪೇಟಿಎಂ ಬ್ರ್ಯಾಂಡ್​ನ ಮಾತೃ ಸಂಸ್ಥೆಯಾದ ಒನ್​97 ಕಮ್ಯುನಿಕೇಷನ್ಸ್ ಜನವರಿ 19ನೇ ತಾರೀಕಿನ ಬುಧವಾರದಂದು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 990 ರೂಪಾಯಿ ಮುಟ್ಟಿದೆ. ಈ ಷೇರನ್ನು ಐಪಿಒದಲ್ಲಿ 2150 ರೂಪಾಯಿಗೆ ವಿತರಿಸಲಾಗಿತ್ತು.

Paytm share price: ಪೇಟಿಎಂ ಷೇರಿನ ಬೆಲೆ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 990 ರೂಪಾಯಿಗೆ ಕುಸಿತ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jan 19, 2022 | 8:21 PM

Share

ಪೇಟಿಎಂ (Paytm) ಬ್ರ್ಯಾಂಡ್​ನ ಮಾತೃಸಂಸ್ಥೆಯಾದ ಒನ್97 ಕಮ್ಯುನಿಕೇಷನ್ಸ್ (One97 Communications) ಜನವರಿ 19ನೇ ತಾರೀಕಿನ ಬುಧವಾರದಂದು ಸಾರ್ವಕಾಲಿಕ ಕನಿಷ್ಠ ಮಟ್ಟ 990 ರುಪಾಯಿ ಮುಟ್ಟಿದ್ದು, ದುರ್ಬಲ ಮಾರುಕಟ್ಟೆಯಲ್ಲಿ ಶೇಕಡಾ 5ರ ತನಕ ಕುಸಿತ ಕಂಡಿದೆ. ಕಳೆದ ಕೆಲ ಸಮಯದಿಂದಲೇ ಪೇಟಿಎಂ ಷೇರು ಇಳಿಕೆ ಹಾದಿಯಲ್ಲಿದೆ. ಕಳೆದ 12 ಟ್ರೇಡಿಂಗ್​ ಸೆಷನ್​ ಪೈಕಿ 11ರಲ್ಲಿ ಕುಸಿತ ದಾಖಲಿಸಿ, ಶೇ 26ರಷ್ಟು ದರ ಇಳಿಕೆ ಆಗಿದೆ. ಇನ್ನು ಐಪಿಒ ವಿತರಣೆ ಬೆಲೆಗೆ ಹೋಲಿಸಿ ನೋಡುವುದಾದರೆ ಶೇ 54ರಷ್ಟು ದರ ಇಳಿದಿದೆ.

ಈ ಸ್ಟಾಕ್​ ಈಗ ಮತ್ತಷ್ಟು ಆತಂಕಕ್ಕೆ ದೂಡುವಂಥ ದರವಾದ 900 ರೂಪಾಯಿಯತ್ತ ಸಾಗುತ್ತಿದೆ. ಪೇಟಿಎಂ ಲಿಸ್ಟಿಂಗ್ ಆದಾಗಲೇ ಈ ಮೊತ್ತದ ಅಂದಾಜನ್ನು ಮಾಡಲಾಗಿತ್ತು. ಒನ್​97 ಕಮ್ಯುನಿಕೇಷನ್ಸ್ ಭಾರತದ​ ಷೇರು ಮಾರುಕಟ್ಟೆಯ ಅತಿ ದೊಡ್ಡ ಐಪಿಒ ಆಗಿತ್ತು. ಎರಡು ತಿಂಗಳ ಹಿಂದೆ ಭಾರೀ ನಿರೀಕ್ಷೆಗಳೊಂದಿಗೆ ಲಿಸ್ಟಿಂಗ್ ಆಗಿತ್ತು. ಆದರೆ ಆ ನಂತರದಲ್ಲಿ ಸನ್ನಿವೇಶ ಬದಲಾಯಿತು. ಮರ್ಚೆಂಟ್ ಬ್ಯಾಂಕರ್​ಗಳಿಗೆ ಸಂಬಂಧಿಸಿದ ವಿಶ್ಲೇಷಕರು ಸಹ ಪೇಟಿಎಂ ಐಪಿಒ ದರಕ್ಕಿಂತ ಕಡಿಮೆ ಗುರಿ ಇರಿಸಿದ್ದಾರೆ.

ಸದ್ಯದ ಮಟ್ಟಿಗೆ ಸಕಾರಾತ್ಮಕವಾದ- ಏರಿಕೆ ಗುರಿ ಅಂದರೆ, ಈಗಿನ ಮಾರುಕಟ್ಟೆ ಬೆಲೆಯು ಹತ್ತಿರ ಹತ್ತಿರ ದುಪ್ಪಟ್ಟು 1,875 ರೂಪಾಯಿ ತಲುಪಬಹುದು. ಜನವರಿ 19ನೇ ತಾರೀಕಿನ ದಿನಾಂತ್ಯಕ್ಕೆ ಪೇಟಿಎಂ ಎನ್​ಎಸ್​ಇಯಲ್ಲಿ 997.35 ರೂಪಾಯಿ ದಿನಾಂತ್ಯದ ವಹಿವಾಟು ಮುಗಿಸಿದೆ. ಇನ್ನು ದಿನದ ಕನಿಷ್ಠ ಮಟ್ಟವಾದ 990 ರೂಪಾಯಿ ಕಂಡಿದೆ. ಈಚೆಗೆ ಕಂಪೆನಿ ಹೇಳಿರುವಂತೆ, ಸಾಲ ನೀಡುವ ವ್ಯವಹಾರದಲ್ಲಿ ಅದ್ಭುತ ಬೆಳವಣಿಗೆ ಕಂಡಿದೆ. ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಮಾತನಾಡಿ, ಮಾರುಕಟ್ಟೆಯು ಕಂಪೆನಿಯ ಪಾವತಿ ವ್ಯವಹಾರವನ್ನು ಕಡಿಮೆ ಅಂದಾಜು ಮಾಡುತ್ತಿದೆ ಎಂದಿದ್ದಾರೆ. ಆದರೆ ಇವ್ಯಾವುದೂ ಭಾರೀ ಇಳಿಕೆಯನ್ನು ತಡೆಯುವುದಕ್ಕೆ ಸಹಾಯ ಮಾಡಲ್ಲ.

(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಆಯಾ ಲೇಖಕರವು. ಇದಕ್ಕೂ ಟಿವಿ9ಕನ್ನಡ ಡಿಜಿಟಲ್​ಗೂ ಸಂಬಂಧ ಇಲ್ಲ. ಹಣಕಾಸಿನ ವಿಚಾರ ಆದ್ದರಿಂದ ತಜ್ಞರ ಸಲಹೆ ಪಡೆದು, ಸೂಕ್ತ ನಿರ್ಧಾರ ಕೈಗೊಳ್ಳಬೇಕು)

ಇದನ್ನೂ ಓದಿ: ಒಂದೇ ದಿನಕ್ಕೆ ಹೂಡಿಕೆದಾರರು ಬರುವುದಿಲ್ಲ: ಷೇರುಪೇಟೆಯಲ್ಲಿ ಕುಸಿತದ ನಂತರ ಪೇಟಿಎಂ ಕಾರ್ಯತಂತ್ರ ವಿವರಿಸಿದ ಸಿಇಒ ವಿಜಯ್ ಶೇಖರ್ ಶರ್ಮಾ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು