AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Investment: ಟ್ರೆಷರಿ ಬಿಲ್​ನಲ್ಲಿ ಹೂಡಿಕೆ ಮಾಡಿ; ಎಫ್​ಡಿಗೆ ಉತ್ತಮ ಪರ್ಯಾಯ, ಹೆಚ್ಚು ಬಡ್ಡಿ, ಹೆಚ್ಚು ಸುರಕ್ಷತೆ

Treasury Bill vs Fixed Deposit: ಬ್ಯಾಂಕುಗಳಲ್ಲಿ 1 ವರ್ಷದವರೆಗಿನ ಎಫ್​ಡಿಗಳಿಗೆ ಶೇ. 4.5ರಿಂದ ಶೇ. 6ರವರೆಗೂ ಬಡ್ಡಿ ಸಿಗುತ್ತದೆ. ಅದೇ ಸರ್ಕಾರದ ಟ್ರೆಷರಿ ಬಿಲ್ ಅಥವಾ ಬಾಂಡ್​ಗಳಲ್ಲಿ ಇದೇ ಅವಧಿಗೆ ಹೂಡಿಕೆ ಮಾಡಿದರೆ ಶೇ. 6.7ರಷ್ಟು ಬಡ್ಡಿ ಪಡೆಯಬಹುದು.

Investment: ಟ್ರೆಷರಿ ಬಿಲ್​ನಲ್ಲಿ ಹೂಡಿಕೆ ಮಾಡಿ; ಎಫ್​ಡಿಗೆ ಉತ್ತಮ ಪರ್ಯಾಯ, ಹೆಚ್ಚು ಬಡ್ಡಿ, ಹೆಚ್ಚು ಸುರಕ್ಷತೆ
ಟ್ರೆಷರಿ ಬಿಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 25, 2023 | 5:01 PM

Share

ಹಣಕಾಸು ಸಮೃದ್ಧಿಗೆ ಎರಡು ಪ್ರಮುಖ ಅಂಶಗಳಿವೆ. ಒಂದು, ಗಳಿಸಿದ ಹಣವನ್ನು ಸಾಧ್ಯವಾದಷ್ಟೂ ಉಳಿಸುವುದು. ಉಳಿಸಿದ ಹಣವನ್ನು ಸಾಧ್ಯವಾದಷ್ಟೂ ಹೂಡಿಕೆ ಮಾಡುವುದು. ಭಾರತೀಯರಲ್ಲಿ ದಿನೇ ದಿನೇ ಹೂಡಿಕೆ ಪ್ರವೃತ್ತಿ ಹೆಚ್ಚುತ್ತಿದೆ. ಹೆಚ್ಚಿನ ಮಂದಿಗೆ ಈಗಲೂ ಎಫ್​ಡಿ ಯೋಜನೆಯು ಪ್ರಮುಖ ಹೂಡಿಕೆ ಸಾಧನವಾಗಿದೆ. ವರದಿಗಳ ಪ್ರಕಾರ ಭಾರತದಲ್ಲಿ ಪ್ರತೀ ವರ್ಷ 60 ಲಕ್ಷಕೋಟಿ ರೂನಷ್ಟು ಹೂಡಿಕೆಗಳಾಗುತ್ತಿವೆ. ಬ್ಯಾಂಕ್ ಠೇವಣಿಗಳಿಂದ ಹಿಡಿದು ಷೇರುಮಾರುಕಟ್ಟೆಯವರೆಗೂ ಹೂಡಿಕೆಗಳು (Investment) ಇದರಲ್ಲಿವೆ. ಈ ಪೈಕಿ ಎಫ್​ಡಿ ಮತ್ತು ಚಿನ್ನದ ಮೇಲೆ ಶೇ. 15ರಷ್ಟು ಹೂಡಿಕೆಯಾಗುತ್ತವಂತೆ. ಎಫ್​ಡಿ ವಿಚಾರಕ್ಕೆ ಬಂದರೆ ಬ್ಯಾಂಕುಗಳು, ಪೋಸ್ಟ್ ಆಫೀಸ್ ಇತ್ಯಾದಿಯಲ್ಲಿ ಠೇವಣಿ ಸ್ಕೀಮ್​ಗಳುಂಟು. ಉತ್ತಮ ಬಡ್ಡಿ ಮತ್ತು ಸುರಕ್ಷತೆ ಹಾಗೂ ಸುಲಭ ನಿರ್ವಹಣೆ ಕಾರಣದಿಂದ ನಿಶ್ಚಿತ ಠೇವಣಿಗಳು ಜನಪ್ರಿಯವಾಗಿವೆ. ಈಗ ಸರ್ಕಾರದ್ದೇ ಟ್ರೆಷರಿ ಬಿಲ್​ಗಳು (Treasury Bills) ಎಫ್​ಡಿಗೆ ಉತ್ತಮ ಪರ್ಯಾಯ ಎನಿಸಿವೆ. ಇವು ಹೆಚ್ಚು ಬಡ್ಡಿ ಮತ್ತು ಸುರಕ್ಷತೆಯನ್ನು ಒದಗಿಸುತ್ತವೆ.

ಏನಿವು ಟ್ರೆಷರಿ ಬಿಲ್​ಗಳು?

ಹೂಡಿಕೆದಾರರು ಅಥವಾ ಜನಸಾಮಾನ್ಯರಿಂದ ಸಾಲ ಪಡೆಯಲು ಸರ್ಕಾರ ನೀಡುವ ಬಿಲ್ ಅಥವಾ ಸಾಲ ಪತ್ರಗಳಿವು. ನಿಶ್ಚಿತ ಠೇವಣಿಗಳಂತೆ ನಿರ್ದಿಷ್ಟ ಅವಧಿಗೆ ಇವು ಮೆಚ್ಯೂರ್ ಆಗುತ್ತವೆ. ನಿಗದಿತ ಬಡ್ಡಿ ದರದಲ್ಲಿ ರಿಟರ್ನ್ ಸಿಗುತ್ತದೆ.

ಇದನ್ನೂ ಓದಿ: Youtube Income: ಫೇಸ್ಬುಕ್, ಇನ್​ಸ್ಟಾ ರೀಲ್ಸ್, ಯೂಟ್ಯೂಬ್​ನಿಂದ ಗಳಿಸಿದ ಆದಾಯಕ್ಕೆ ತೆರಿಗೆ ಎಷ್ಟು? ಹೇಗೆ ಸಲ್ಲಿಸುವುದು?

ಟ್ರೆಷರಿ ಬಿಲ್​ಗಳನ್ನು ಸರ್ಕಾರದ ಪರವಾಗಿ ಆರ್​ಬಿಐ ಪ್ರತೀ ವಾರ ವಿತರಿಸುತ್ತದೆ. 91 ದಿನ, 182 ದಿನ ಮತ್ತು 364 ದಿನಗಳ ಮೆಚ್ಯೂರಿಟಿ ಇರುವ ವಿವಿಧ ಟ್ರೆಷರಿ ಬಿಲ್​ಗಳ ಆಯ್ಕೆ ಹೂಡಿಕೆದಾರರಿಗೆ ಇರುತ್ತದೆ. ಇವುಗಳಿಗೆ ಶೇ. 6.7 ರಷ್ಟು ವಾರ್ಷಿಕ ಬಡ್ಡಿ ದರ ಇರುತ್ತದೆ. ಇದೇ ಅವಧಿಗೆ ಬೇರೆ ಸಾಮಾನ್ಯ ಎಫ್​ಡಿಗಳಲ್ಲಿ ಸಿಗುವ ಬಡ್ಡಿ ಶೇ. 4.5ರಿಂದ ಶೇ. 6ರಷ್ಟು ಮಾತ್ರ.

ಸರ್ಕಾರವೇ ವಿತರಿಸುವ ಸಾಲಪತ್ರವಾದ್ದರಿಂದ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. ಜೊತೆಗೆ ಉತ್ತಮ ಬಡ್ಡಿಯನ್ನೂ ಕೊಡುತ್ತದೆ. ಎಫ್​ಡಿಯಲ್ಲಿ ಎಷ್ಟು ಬೇಕಾದರೂ ಹಣವನ್ನು ಠೇವಣಿಗೆ ಇಡಬಹುದು. ಆದರೆ, ಟ್ರೆಷರಿ ಬಿಲ್​ನಲ್ಲಿ ಕನಿಷ್ಠ ಹೂಡಿಕೆ 25,000 ರೂ ಇರಬೇಕು.

ಆದರೆ ಎಫ್​ಡಿಯಲ್ಲಿ ಟಿಡಿಎಸ್ ಮುರಿದುಕೊಳ್ಳುವಂತೆ ಟ್ರೆಷರಿ ಬಿಲ್​ನಿಂದ ಬರುವ ಆದಾಯವನ್ನು ಅಲ್ಪಾವಧಿ ಲಾಭ ಹೆಚ್ಚಳ ಎಂದು ಪರಿಗಣಿಸಿ ಅದಕ್ಕೆ ತೆರಿಗೆ ಹಾಕಲಾಗುತ್ತದೆ.

ಇದನ್ನೂ ಓದಿ: LIC Loan: ಎಲ್​ಐಸಿ ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ? ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ವಿಧಾನ

ಟ್ರೆಷರಿ ಬಿಲ್​ಗಳನ್ನು ಎಲ್ಲಿ ಪಡೆಯುವುದು?

ನೀವು ಟ್ರೆಷರಿ ಬಿಲ್ ಪಡೆಯಬೇಕಾದರೆ ಡೀಮ್ಯಾಟ್ ಅಕೌಂಟ್ ಹೊಂದಿರಬೇಕು. ಆರ್​ಬಿಐ ಪ್ರತೀ ವಾರ ನಡೆಸುವ ಹರಾಜಿನಲ್ಲಿ ಇದನ್ನು ಖರೀದಿಸಬಹುದು. ಹೂಡಿಕೆದಾರ ನೇರವಾಗಿ ಹರಾಜಿನಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಬ್ಯಾಂಕ್ ಅಥವಾ ಬ್ರೋಕರ್ ಮೂಲಕ ಈ ಬಾಂಡ್​ಗಳನ್ನು ಪಡೆಯಬಹುದು. ನಂತರ ಬೇಕಾದರೆ ಈ ಟ್ರೆಷರಿ ಬಿಲ್​ಗಳನ್ನು ಎನ್​ಎಸ್​ಇ, ಬಿಎಸ್​ಇ ಇತ್ಯಾದಿ ಷೇರು ವಿನಿಮಯ ಕೇಂದ್ರಗಳಲ್ಲಿ ಮಾರಾಟ ಮಾಡಬಹುದು. ಈ ಬಿಲ್​ಗಳು ಮೆಚ್ಯೂರ್ ಆಗುವ ಮುನ್ನ ಅವನ್ನು ಮಾರಿ ಹಣ ಪಡೆದುಕೊಳ್ಳಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ