AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೆಡಿಟ್ ಕಾರ್ಡ್ ಪರ್ಸನಲ್ ಲೋನ್​ಗೆ ಜಿಎಸ್​ಟಿ ತೆರಿಗೆ ಇದೆಯಾ? ಇಲ್ಲಿದೆ ಡೀಟೇಲ್ಸ್

GST on personal loan: ಪರ್ಸನಲ್ ಲೋನ್​ಗಳು ಜಿಎಸ್​ಟಿ ವ್ಯಾಪ್ತಿಯಿಂದ ಹೊರಗಿರುತ್ತವೆ. ಸಾಲ ಪಡೆಯುವಾಗ ವಿಧಿಸಲಾಗುವ ಪ್ರೋಸಸಿಂಗ್ ಫೀ ಮೇಲಷ್ಟೇ ತೆರಿಗೆ ಇರುತ್ತದೆ. ಆದರೆ, ಕ್ರೆಡಿಟ್ ಕಾರ್ಡ್ ಆಧಾರಿತವಾಗಿ ಪಡೆದ ಸಾಲಗಳಲ್ಲಿ ಬಡ್ಡಿ ಮೊತ್ತಕ್ಕೆ ಜಿಎಸ್​ಟಿ ಹಾಕಲಾಗುತ್ತದೆ. ಅಸಲು ಹಣ ಅಥವಾ ಪ್ರಿನ್ಸಿಪಾಲ್ ಅಮೌಂಟ್​ಗೆ ತೆರಿಗೆ ಇರುವುದಿಲ್ಲ.

ಕ್ರೆಡಿಟ್ ಕಾರ್ಡ್ ಪರ್ಸನಲ್ ಲೋನ್​ಗೆ ಜಿಎಸ್​ಟಿ ತೆರಿಗೆ ಇದೆಯಾ? ಇಲ್ಲಿದೆ ಡೀಟೇಲ್ಸ್
ಜಿಎಸ್​ಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 25, 2024 | 2:25 PM

Share

ಇವತ್ತು ಹೆಚ್ಚಿನ ಹಣಕಾಸು ಯೋಜನೆಗಳಿಗೆ ಆದಾಯ ತೆರಿಗೆ ಇರುತ್ತದೆ. ಠೇವಣಿಗಳಿಂದ ಬರುವ ಬಡ್ಡಿ ಆದಾಯಗಳಿಗೂ ಇನ್ಕಮ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಆದರೆ, ಪರ್ಸನಲ್ ಲೋನ್​ಗೂ ಜಿಎಸ್​ಟಿ ಇದೆ ಎನ್ನುವ ಮಾತಿದೆ. ವಾಸ್ತವವಾಗಿ ಪರ್ಸನಲ್ ಲೋನ್ ಮೇಲೆ ಜಿಎಸ್​ಟಿ ಇರುವುದಿಲ್ಲ. ಅಸಲು ಹಣವಾಗಲೀ, ಇಎಂಐ ಹಣದ ಮೇಲಾಗಲೀ ಜಿಎಸ್​ಟಿ ಇರುವುದಿಲ್ಲ. ಆದರೆ, ಪರ್ಸನಲ್ ಲೋನ್​ನ ಪ್ರೋಸಸಿಂಗ್ ಫೀ ಮೇಲೆ ಮಾತ್ರವೇ ಜಿಎಸ್​ಟಿ ತೆರಿಗೆ ಇರುತ್ತದೆ.

ಆದರೆ, ಕ್ರೆಡಿಟ್ ಕಾರ್ಡ್ ಆಧಾರವಾಗಿ ಪ್ರೀ ಅಪ್ರೂವ್ಡ್ ಲೋನ್ ಸಿಕ್ಕಾಗ, ಆ ಸಾಲದ ಮೇಲಿನ ಬಡ್ಡಿ ಮೊತ್ತಕ್ಕೆ ಜಿಎಸ್​ಟಿ ಅನ್ವಯ ಆಗುತ್ತದೆ. ಇಡೀ ಸಾಲಕ್ಕೆ ಜಿಎಸ್​ಟಿ ಇರುವುದಿಲ್ಲ. ಬಡ್ಡಿ ಮೇಲೆ ಶೇ. 18ರಷ್ಟು ಜಿಎಸ್​ಟಿ ಇರುತ್ತದೆ. ಈ ಬಡ್ಡಿಯಿಂದಾಗಿ ಕ್ರೆಡಿಟ್ ಕಾರ್ಡ್ ಸಾಲದ ಇಎಂಐ ಮೊತ್ತ ತುಸು ಹಿಗ್ಗುತ್ತದೆ.

ಸಾಲದ ಮೇಲಿನ ಬಡ್ಡಿಗೆ ಜಿಎಸ್​ಟಿ ಹೇಗಿ ಅನ್ವಯ ಆಗುತ್ತೆ ನೋಡಿ…

ನೀವು ಶೇ. 12ರ ಬಡ್ಡಿಗೆ 3 ವರ್ಷದ ಮಟ್ಟಿಗೆ 3 ಲಕ್ಷ ರೂ ಸಾಲ ಪಡೆಯುತ್ತೀರಿ ಎಂದಿಟ್ಟುಕೊಳ್ಳಿ. ತಿಂಗಳ ಇಎಂಐ 9,964.29 ರೂ ಆಗಬಹುದು. ಇದರಲ್ಲಿ ಮೊದಲ ಕಂತಿನಲ್ಲಿ ಬಡ್ಡಿ ಹಣ 3,000 ರೂ ಎಂತಿದ್ದರೆ, ಈ ಮೂರು ಸಾವಿರ ರೂ ಹಣಕ್ಕೆ ಶೇ. 18ರಷ್ಟು ಜಿಎಸ್​ಟಿ ಪಾವತಿಸಬೇಕು. ಅಂದರೆ ಸುಮಾರು 540 ರೂ ಜಿಎಸ್​ಟಿ ಆಗುತ್ತದೆ. ಅಲ್ಲಿಗೆ ಇಎಂಐ ಮೊತ್ತವು 10,504.29 ರೂಗೆ ಏರುತ್ತದೆ.

ಇದನ್ನೂ ಓದಿ: ಏರ್ಟೆಲ್ ಬಳಕೆದಾರರಿಗೆ ಸಖತ್ ಆಫರ್; ತಿಂಗಳಿಗೆ ಸಾವಿರ ರೂಗೂ ಹೆಚ್ಚು ಕ್ಯಾಷ್​ಬ್ಯಾಕ್ ಪಡೆಯುವುದು ಹೇಗೆ?

ಎರಡನೇ ಕಂತಿನಲ್ಲಿ ಬಡ್ಡಿದರದ ಪ್ರಮಾಣ 2,930.36 ರೂಗೆ ಇಳಿದಿರುತ್ತದೆ. ಇದಕ್ಕೆ ಜಿಎಸ್​ಟಿ ದರ 527 ರೂ ಆಗುತ್ತದೆ. ಅಲ್ಲಿಗೆ ಇಎಂಐ ಮೊತ್ತ 10,491.29 ರೂ ಆಗುತ್ತದೆ.

ಪ್ರತೀ ತಿಂಗಳೂ ಇಎಂಐನಲ್ಲಿ ಬಡ್ಡಿ ಪಾಲು ಕಡಿಮೆ ಆಗುತ್ತಾ ಹೋಗುತ್ತದೆ. ಜಿಎಸ್​ಟಿಯೂ ಕಡಿಮೆ ಆಗುತ್ತಾ ಹೋಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ