AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SB Account: ಎಫ್​ಡಿ ಬೇಡ, ಆರ್​ಡಿ ಬೇಡ; ಹಾಗೇ ಸುಮ್ಮನೆ ಹಣ ಇದ್ದರೂ ಶೇ. 7.50ರವರೆಗೆ ಬಡ್ಡಿ ಕೊಡುತ್ತೆ ಈ ಬ್ಯಾಂಕ್

Fincare Small finance Bank: ಸೇವಿಂಗ್ಸ್ ಬ್ಯಾಂಕ್ ಅಕೌಂಟ್​​ನಲ್ಲಿ ನೀವು ಉಳಿಸಿ ಇರಿಸುವ ಹಣಕ್ಕೆ ಅತಿಹೆಚ್ಚು ಬಡ್ಡಿ ಕೊಡುವ ಬ್ಯಾಂಕುಗಳಲ್ಲಿ ಫಿನ್​ಕೇರ್ ಸ್ಮಾಲ್ ಫೈನಾನ್ಸ್ ಸಂಸ್ಥೆ ಒಂದು. ಇದು 5 ಲಕ್ಷ ರೂ ಮೇಲ್ಟಪ್ಪ ಹಣಕ್ಕೆ ಶೇ. 7.25ರಷ್ಟು ಬಡ್ಡಿ ಕೊಡುತ್ತದೆ.

SB Account: ಎಫ್​ಡಿ ಬೇಡ, ಆರ್​ಡಿ ಬೇಡ;  ಹಾಗೇ ಸುಮ್ಮನೆ ಹಣ ಇದ್ದರೂ ಶೇ. 7.50ರವರೆಗೆ ಬಡ್ಡಿ ಕೊಡುತ್ತೆ ಈ ಬ್ಯಾಂಕ್
ಎಸ್​ಬಿ ಖಾತೆಯ ಠೇವಣಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 03, 2023 | 5:29 PM

ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಯಾವುದಕ್ಕೂ ಹೂಡಿಕೆ ಆಗದೇ ಹಾಗೇ ಇದ್ದರೆ, ಅಂದರೆ ನಿಮ್ಮ ಎಸ್​ಬಿ ಖಾತೆಯಲ್ಲಿ (Savings Bank Account) ಇರುವ ಹಣಕ್ಕೆ ಶೇ. 4 ಆಸುಪಾಸಿನ ವಾರ್ಷಿಕ ಬಡ್ಡಿ ಸಿಗುತ್ತದೆ. ದೊಡ್ಡ ಕಮರ್ಷಿಯಲ್ ಬ್ಯಾಂಕುಗಳು ಇನ್ನೂ ಕಡಿಮೆ ಬಡ್ಡಿ ನೀಡುತ್ತವೆ. 5 ಲಕ್ಷಕ್ಕೂ ಮೇಲ್ಪಟ್ಟ ಹಣಕ್ಕೆ ಶೇ. 7ರವರೆಗೂ ಬಡ್ಡಿ ಕೊಡುವ ಹಲವು ಸಣ್ಣ ಹಣಕಾಸು ಸಂಸ್ಥೆಗಳು, ಕೋ ಆಪರೇಟಿವ್ ಬ್ಯಾಂಕುಗಳು ಇವೆ. ಎಸ್​ಬಿ ಅಕೌಂಟ್​ಗೆ ಹೆಚ್ಚಿನ ಬಡ್ಡಿ ಕೊಡುವ ಅಂಥ ಬ್ಯಾಂಕುಗಳಲ್ಲಿ ಫಿನ್​ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Fincare Small Finance Bank) ಒಂದು. ಬ್ಯಾಂಕಿಂಗ್ ವಲಯದಲ್ಲಿ ಎಸ್​ಬಿ ಅಕೌಂಟ್​ಗೆ ಅತಿಹೆಚ್ಚು ಬಡ್ಡಿ ಕೊಡುವ ಸಂಸ್ಥೆ ಇದು. ಸೇವಿಂಗ್ಸ್ ಬ್ಯಾಂಕ್ ಅಕೌಂಟ್​ನ ಕೆಲ ಮೊತ್ತಕ್ಕೆ ಇದು ಶೇ. 7.50ರಷ್ಟು ಬಡ್ಡಿ ಕೊಡುತ್ತದೆ. ಪ್ರಮುಖ ಬ್ಯಾಂಕುಗಳು ಫಿಕ್ಸೆಡ್ ಡೆಪಾಸಿಟ್​ಗೆ ಕೊಡುವುದಕ್ಕಿಂತ ಹೆಚ್ಚಿನ ಬಡ್ಡಿಯನ್ನು ಫಿನ್​ಕೇರ್ ಬ್ಯಾಂಕ್ ತನ್ನ ಎಸ್​ಬಿ ಅಕೌಂಟ್​ಗೆ ಕೊಡುತ್ತದೆ.

ಫಿನ್​ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಎಸ್​ಬಿ ಖಾತೆಯ ಠೇವಣಿಗಳಿಗೆ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಆಗಸ್ಟ್ 1ರಿಂದು ಈ ದರಗಳು ಅನ್ವಯಕ್ಕೆ ಬಂದಿವೆ. 5 ಲಕ್ಷ ರೂ ಮೇಲ್ಪಟ್ಟ ಠೇವಣಿಗಳಿಗೆ ಶೇ. 7.25ರಷ್ಟು ಬಡ್ಡಿ ಕೊಡುತ್ತದೆ. 2 ರಿಂದ 5 ಲಕ್ಷ ರೂ ಮೊತ್ತದ ಬ್ಯಾಲನ್ಸ್ ಇದ್ದರೂ ಶೇ. 7.11ರಷ್ಟು ಬಡ್ಡಿ ಕೊಡಲಾಗುತ್ತದೆ. ಇದರಿಂದ ಗ್ರಾಹಕರು ಹೆಚ್ಚೆಚ್ಚು ಹಣ ಉಳಿಸಲು ಇದು ನೆರವಾಗುತ್ತದೆ ಎಂಬುದು ಬ್ಯಾಂಕ್​ನ ಅನಿಸಿಕೆ.

ಇದನ್ನೂ ಓದಿ: Ancestral Property: ಪಿತ್ರಾರ್ಜಿತವಾಗಿ ಪಡೆಯುವ ಆಸ್ತಿಗೆ ತೆರಿಗೆ ಕಟ್ಟಬೇಕಾ? ಮಾರಿದಾಗ ಎಷ್ಟು ಟ್ಯಾಕ್ಸ್ ಪಾವತಿಸಬೇಕು?

ಫಿನ್​ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಎಸ್​ಬಿ ಅಕೌಂಟ್ ಬ್ಯಾಲನ್ಸ್​ಗೆ ಸಿಗುವ ಬಡ್ಡಿ ದರಗಳು

  • 1 ಲಕ್ಷ ರೂವರೆಗಿನ ಹಣಕ್ಕೆ: ಶೇ. 3.51 ಬಡ್ಡಿ
  • 1 ಲಕ್ಷದಿಂದ 2 ಲಕ್ಷ ರೂವರೆಗೆ: ಶೇ. 5.11 ಬಡ್ಡಿ
  • 2ರಿಂದ 5 ಲಕ್ಷ ರೂ: ಶೇ. 7.11 ಬಡ್ಡಿ
  • 5ರಿಂದ 50 ಲಕ್ಷ ರೂ: ಶೇ. 7.25 ಬಡ್ಡಿ
  • 50 ಲಕ್ಷ ರೂನಿಂದ 2 ಕೋಟಿ ರೂ: ಶೇ. 7.50 ಬಡ್ಡಿ
  • 2 ರಿಂದ 15 ಕೋಟಿ ರೂ: ಶೇ. 7 ಬಡ್ಡಿ
  • 10ರಿಂದ 15 ಕೋಟಿ ರೂ: ಶೇ. 6.50 ಬಡ್ಡಿ
  • 15ರಿಂದ 20 ಕೋಟಿ ರೂ: ಶೇ. 5 ಬಡ್ಡಿ
  • 20ರಿಂದ 25 ಕೋಟಿ ರೂ: ಶೇ. 4 ಬಡ್ಡಿ
  • 25ರಿಂದ 30 ಕೋಟಿ ರೂ: ಶೇ. 3.25 ಬಡ್ಡಿ
  • 30 ಕೋಟಿ ಮೇಲ್ಪಟ್ಟ ಹಣ: ಶೇ. 3

ಇದನ್ನೂ ಓದಿ: ತಿಂಗಳಿಗೆ 1 ಲಕ್ಷ ರೂ ಆದಾಯ ಬರುವಂತಾಗಲು ಎಷ್ಟು ವರ್ಷ ಎಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ಐಡಿಯಾ

1 ಲಕ್ಷ ರೂವರೆಗಿನ ಎಸ್​ಬಿ ಖಾತೆ ಠೇವಣಿಗೆ ಅತಿಹೆಚ್ಚು ಬಡ್ಡಿ ಕೊಡುವ ಬ್ಯಾಂಕುಗಳು

  • ಆರ್​ಬಿಎಲ್ ಬ್ಯಾಂಕ್: ಶೇ. 4.25
  • ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 4.25 ಬಡ್ಡಿ
  • ಯೆಸ್ ಬ್ಯಾಂಕ್: ಶೇ. 4 ಬಡ್ಡಿ
  • ಇಎಸ್​​ಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 4
  • ಐಡಿಎಫ್​ಸಿ ಬ್ಯಾಂಕ್: ಶೇ. 4
  • ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 4
  • ಇಂಡಸ್​ಇಂಡ್ ಬ್ಯಾಂಕ್: ಶೇ. 4
  • ಫಿನ್​ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 3.51
  • ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 3.50
  • ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 3.50 ಬಡ್ಡಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:27 pm, Thu, 3 August 23

ಕ್ರಿಮಿನಲ್​ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಕ್ರಿಮಿನಲ್​ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ