AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PAN: ನಿಷ್ಕ್ರಿಯ ಪ್ಯಾನ್ ಬಳಸಿದರೆ ಯಾವ್ಯಾವ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ? ಇಲ್ಲಿದೆ ಡೀಟೇಲ್ಸ್

What Not To Do With Inoperative PAN: ಆಧಾರ್​ಗೆ ಲಿಂಕ್ ಆಗದ ಪ್ಯಾನ್ ನಂಬರ್ ನಿಷ್ಕ್ರಿಯಗೊಂಡಿರುತ್ತದೆ. ನೀವು ದಂಡ ಕಟ್ಟಿ ಈಗಲೂ ಸಕ್ರಿಯಗೊಳಿಸಬಹುದು. ಪ್ಯಾನ್ ಸಕ್ರಿಯಗೊಳ್ಳುವವರೆಗೂ ಅದನ್ನು ಬಳಕೆ ಮಾಡಿದರೆ ಕ್ರಮ ಎದುರಿಸಬೇಕಾಗಬಹುದು.

PAN: ನಿಷ್ಕ್ರಿಯ ಪ್ಯಾನ್ ಬಳಸಿದರೆ ಯಾವ್ಯಾವ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ? ಇಲ್ಲಿದೆ ಡೀಟೇಲ್ಸ್
ಪ್ಯಾನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 11, 2023 | 12:31 PM

Share

ಆಧಾರ್ ನಂಬರ್​ಗೆ ಲಿಂಕ್ ಆಗದ ಪ್ಯಾನ್ ನಂಬರ್ (PAN) ಜುಲೈ 1ರಿಂದ ನಿಷ್ಕ್ರಿಯವಾಗಿದೆ. ಹಣಕಾಸು ವಹಿವಾಟಿಗೆ ಪ್ಯಾನ್ ನಂಬರ್ ಬಹಳ ಅಗತ್ಯ. ಹೀಗಾಗಿ, ಆಧಾರ್ ಜೊತೆ ಪ್ಯಾನ್ ಲಿಂಕ್ (PAN Linking With Aadhaar) ಮಾಡುವುದು ಅಗತ್ಯ. ನೀವು ನಿಷ್ಕ್ರಿಯಗೊಂಡ ಪ್ಯಾನ್​ನ ಬಳಕೆ ಮುಂದುವರಿಸಿದರೆ ಸರ್ಕಾರದಿಂದ ಕ್ರಮ ಎದುರಿಸಬೇಕಾಗಬಹುದು. ಅಲ್ಲದೇ ಹಲವು ಹಣಕಾಸು ಚಟುವಟಿಕೆ ನಡೆಸಲು ನಿಷ್ಕ್ರಿಯ ಪ್ಯಾನ್​ನಿಂದ ಸಾಧ್ಯವಾಗದೇ ಹೋಗಬಹುದು. ನಿಮ್ಮ ದೈನಂದಿನ ಹಣಕಾಸು ಚಟುವಟಿಕೆಗೂ ಕಷ್ಟವಾಗಬಹುದು. ನೀವು ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡದೇ ಹೋಗಿದ್ದರೆ 1,000 ರೂ ದಂಡ ಕಟ್ಟಿ ಈಗಲೂ ಮಾಡಬಹುದು. ಅದು ಸಕ್ರಿಯಗೊಳ್ಳಲು 30 ದಿನಗಳಾದರೂ ಬೇಕು. ಅಲ್ಲಿಯವರೆಗೂ ನೀವು ಪ್ಯಾನ್ ಬಳಸುವಂತಿಲ್ಲ. ನಿಷ್ಕ್ರಿಯಗೊಂಡ ಪ್ಯಾನ್​ನಿಂದ ಏನೇನು ವಹಿವಾಟು ಸಾಧ್ಯವಾಗುವುದಿಲ್ಲ ಎಂಬ ವಿವರ ಇಲ್ಲಿದೆ

  • ನಿಷ್ಕ್ರಿಯ ಪ್ಯಾನ್ ಬಳಸಿ ಐಟಿ ರಿಟರ್ನ್ ಸಲ್ಲಿಸಲು ಆಗುವುದಿಲ್ಲ
  • ಜೂನ್ 30ಕ್ಕೆ ಮುನ್ನ ನೀವು ಐಟಿಆರ್ ಸಲ್ಲಿಸಿದ್ದು ನಿಮ್ಮ ಪ್ಯಾನ್ ಈಗ ನಿಷ್ಕ್ರಿಯವಾಗಿದ್ದರೆ ಐಟಿಆರ್ ಅರ್ಜಿ ಪ್ರೋಸಸ್ ಆಗುವುದಿಲ್ಲ. ರೀಫಂಡ್ ಕೂಡ ಆಗುವುದಿಲ್ಲ.
  • ನಿಷ್ಕ್ರಿಯ ಪ್ಯಾನ್ ಬಳಸಿ ನೀವು ಹೊಸ ಬ್ಯಾಂಕ್ ಖಾತೆ ಪಡೆಯಲು ಆಗುವುದಿಲ್ಲ. ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಸಿಗುವುದಿಲ್ಲ.
  • ಯಾವುದೇ ಬ್ಯಾಂಕ್​ನಲ್ಲಿ 50,000 ರೂಗಿಂತ ಹೆಚ್ಚು ನಗದು ಹಣವನ್ನು ಜಮೆ ಮಾಡಲು ಆಗುವುದಿಲ್ಲ.

ಇದನ್ನೂ ಓದಿIT Return: ಒಂದಿಷ್ಟು ತೆರಿಗೆ ಉಳಿಸಲು ಆದಾಯ ಕಡಿಮೆ ತೋರಿಸದಿರಿ; ಜೈಲಿಗೆ ಹೋಗಬೇಕಾದೀತು ಜೋಕೆ..!

  • ನಿಷ್ಕ್ರಿಯ ಪ್ಯಾನ್ ಬಳಸಿ ಡಿಮ್ಯಾಟ್ ಅಕೌಂಟ್ ತೆರೆಯಲು ಆಗುವುದಿಲ್ಲ. ಮ್ಯೂಚುವಲ್ ಫಂಡ್​ನಲ್ಲಿ 50,000 ರೂಗಿಂತ ಹೆಚ್ಚು ಮೊತ್ತದ ಪಾವತಿ ಮಾಡಲು ಆಗುವುದಿಲ್ಲ.
  • ಯಾವುದೇ ಕಂಪನಿ ಅಥವಾ ಸಂಸ್ಥೆಗಳ ಡಿಬಂಚರ್ ಅಥವಾ ಬಾಂಡ್​ಗಳು 50,000 ರೂಗಿಂತ ಹೆಚ್ಚಿರುವಂತಿಲ್ಲ.
  • 1 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಸೆಕ್ಯೂರಿಟಿಗಳ ವಹಿವಾಟು ಸಾಧ್ಯವಿಲ್ಲ. ಲಿಸ್ಟ್ ಆಗಿಲ್ಲ ಕಂಪನಿಯ ಷೇರುಗಳ ವಹಿವಾಟು 1 ಲಕ್ಷ ರೂಗಿಂತ ಹೆಚ್ಚಿರುವಂತಿಲ್ಲ.
  • ಹೋಟೆಲ್ ಅಥವಾ ರೆಸ್ಟೋರೆಂಟ್​ಗಳಲ್ಲಿ ಒಮ್ಮೆಗೆ 50,000 ರೂಗಿಂತ ಹೆಚ್ಚು ಮೊತ್ತದ ನಗದಿ ಪಾವತಿ ಮಾಡಲು ಆಗುವುದಿಲ್ಲ.
  • ವಿದೇಶೀ ಪ್ರಯಾಣಕ್ಕಾಗಿ ಅಥವಾ ವಿದೇಶೀ ಕರೆನ್ಸಿ ಖರೀದಿಗೆ 50,000 ರೂಗಿಂತ ಹೆಚ್ಚು ನಗದು ಪಾವತಿ ಸಾಧ್ಯವಿಲ್ಲ.
  • ಪೇಟಿಎಂ, ಫೋನ್​ಪೇ ಇತ್ಯಾದಿ ಮೊಬೈಲ್ ವ್ಯಾಲಟ್​ಗಳಿಗೆ ಒಂದು ವರ್ಷದಲ್ಲಿ 50,000 ರೂಗಿಂತ ಹೆಚ್ಚು ಪಾವತಿ ಸಾಧ್ಯವಿಲ್ಲ.
  • ಆರ್​ಬಿಐ ನೀಡುವ ಬಾಂಡ್​ಗಳನ್ನು ಖರೀದಿಸಲು ನೀವು ಮಾಡುವ ಪಾವತಿ 50,000 ರೂ ಮೀರಲಾಗುವುದಿಲ್ಲ.

ಇದನ್ನೂ ಓದಿInvestments: ನವವಿವಾಹಿತರು ಜಾಣರಾದರೆ ಈ 5 ಹೂಡಿಕೆಗಳನ್ನು ಮರೆಯಲ್ಲ; ತಪ್ಪದೇ ಅಳವಡಿಸಿ ಜೀವನದ ಭದ್ರತೆಗೆ ಅಡಿಪಾಯ ಹಾಕಿ

  • ಬ್ಯಅಕ್ ಡ್ರಾಫ್ಟ್, ಪೇ ಆರ್ಡರ್, ಬ್ಯಾಂಕರ್ ಚೆಕ್ ಇತ್ಯಾದಿಯನ್ನು ಖರೀದಿಸಲು ಒಂದು ದಿನದಲ್ಲಿ 50,000 ರೂಗಿಂತ ಹೆಚ್ಚು ಹಣ ವ್ಯಯಿಸಲು ಆಗುವುದಿಲ್ಲ.
  • ಬ್ಯಾಂಕು, ಅಂಚೆ ಕಚೇರಿ ಇತ್ಯಾದಿ ಕಡೆ 50,000ರೂಗಿಂತ ಹೆಚ್ಚು ಮೊತ್ತದ ಟೈಮ್ ಡೆಪಾಸಿಟ್ ಆರಂಭಿಸಲು ಸಾಧ್ಯವಿಲ್ಲ.
  • ಎಲ್​ಐಸಿ ಪ್ರೀಮಿಯಮ್​ಗಳನ್ನು ವರ್ಷಕ್ಕೆ 50,000 ರೂಗಿಂತ ಹೆಚ್ಚು ಪಾವತಿಸಲು ಆಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:29 pm, Tue, 11 July 23

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್