AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕೌಂಟ್​ನಲ್ಲಿ ಹೆಚ್ಚುವರಿ ಹಣಕ್ಕೆ ಶೇ. 6.5 ಬಡ್ಡಿ; ಇದು ಜಿಯೋ ಪೇಮೆಂಟ್ಸ್ ಬ್ಯಾಂಕ್​ನ ಆಫರ್

Jio Payments Bank's Savings Pro scheme: ಜಿಯೋ ಪೇಮೆಂಟ್ಸ್ ಬ್ಯಾಂಕ್ ಇದೀಗ ಸೇವಿಂಗ್ಸ್ ಪ್ರೋ ಎನ್ನುವ ಹೊಸ ಸ್ಕೀಮ್ ಪರಿಚಯಿಸಿದೆ. ಇದರಲ್ಲಿ ಜಿಯೋ ಬ್ಯಾಂಕ್ ಗ್ರಾಹಕರು ಈ ಸ್ಕೀಮ್ ಆಯ್ದುಕೊಂಡರೆ, ಅವರ ಖಾತೆಯಲ್ಲಿನ ಹೆಚ್ಚುವರಿ ಹಣಕ್ಕೆ ಒಳ್ಳೆಯ ರಿಟರ್ನ್ಸ್ ಸಿಗುತ್ತದೆ. ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರ ಹಣವನ್ನು ಓವರ್​ನೈಟ್ ಫಂಡ್​ಗಳಲ್ಲಿ ಹೂಡಿಕೆ ಮಾಡುತ್ತದೆ. ಯಾವಾಗ ಬೇಕಾದರೂ ಗ್ರಾಹಕರು ಹಣ ಹಿಂಪಡೆಯಬಹುದು.

ಅಕೌಂಟ್​ನಲ್ಲಿ ಹೆಚ್ಚುವರಿ ಹಣಕ್ಕೆ ಶೇ. 6.5 ಬಡ್ಡಿ; ಇದು ಜಿಯೋ ಪೇಮೆಂಟ್ಸ್ ಬ್ಯಾಂಕ್​ನ ಆಫರ್
ಜಿಯೋ ಫೈನಾನ್ಷಿಯಲ್ ಸರ್ವಿಸಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 22, 2025 | 6:02 PM

Share

ಮುಂಬೈ, ಸೆಪ್ಟೆಂಬರ್ 22: ರಿಲಾಯನ್ಸ್ ಇಂಡಸ್ಟ್ರೀಸ್​ಗೆ ಸೇರಿದ ಜಿಯೋ ಫೈನಾನ್ಷಿಯಲ್ ಸರ್ವಿಸಸ್​ನ ಅಂಗಸಂಸ್ಥೆಯಾದ ಜಿಯೋ ಪೇಮೆಂಟ್ಸ್ ಬ್ಯಾಂಕ್ (Jio Payments Bank) ತನ್ನ ಗ್ರಾಹಕರಿಗೆ ಆಕರ್ಷಕ ಆಫರ್ ಮುಂದಿಟ್ಟಿದೆ. ಗ್ರಾಹಕರು ತಮ್ಮ ಖಾತೆಯಲ್ಲಿರುವ ಹೆಚ್ಚುವರಿ ಹಣವನ್ನು ವ್ಯರ್ಥವಾಗಲು ಬಿಡದೆ ಹೆಚ್ಚಿನ ಬಡ್ಡಿ ಗಳಿಸಲು ಅವಕಾಶ ಕೊಡಲಾಗಿದೆ. ಈ ನಿಟ್ಟಿನಲ್ಲಿ ‘ಸೇವಿಂಗ್ಸ್ ಪ್ರೋ’ ಎನ್ನುವ ಹೊಸ ಫೀಚರ್ ಅನ್ನು ಜಿಯೋ ಪೇಮೆಂಟ್ಸ್ ಬ್ಯಾಂಕ್ ಪರಿಚಯಿಸಿದೆ.

ಸದ್ಯ ಹೆಚ್ಚಿನ ಬ್ಯಾಂಕುಗಳಲ್ಲಿ ಸೇವಿಂಗ್ಸ್ ಅಕೌಂಟ್​ಗಳಲ್ಲಿರುವ ಹಣಕ್ಕೆ ಶೇ. 2.5ರಷ್ಟು ಬಡ್ಡಿ ಸಿಗುತ್ತದೆ. ಆದರೆ, ಜಿಯೋ ಪೇಮೆಂಟ್ಸ್ ಬ್ಯಾಂಕ್​ನ ‘ಸೇವಿಂಗ್ಸ್ ಪ್ರೋ’ ಫೀಚರ್​ನಲ್ಲಿ ಗ್ರಾಹಕರು ತಮ್ಮ ಅನುತ್ಪಾದಕ ಹಣಕ್ಕೆ ಶೇ. 6.5ರಷ್ಟು ಬಡ್ಡಿ ಪಡೆಯಬಹುದು.

ಹೆಚ್ಚಿನ ಬಡ್ಡಿ ಕೊಡಲು ಜಿಯೋ ಬ್ಯಾಂಕ್ ಏನು ಮಾಡುತ್ತೆ?

ಜಿಯೋ ಪೇಮೆಂಟ್ಸ್ ಬ್ಯಾಂಕ್ ಓವರ್​ನೈಟ್ ಮ್ಯೂಚುವಲ್ ಫಂಡ್​ಗಳ ಗ್ರೋತ್ ಪ್ಲಾನ್​ಗಳ ಮೇಲೆ ಹೂಡಿಕೆ ಮಾಡುತ್ತದೆ. ಈ ಫಂಡ್​ಗಳು 15 ದಿನಗಳವರೆಗೆ ಹೂಡಿಕೆಗೆ ಅವಕಾಶ ಕೊಡುತ್ತವೆ. ಇಂಥ ಫಂಡ್​ಗಳು ಹೆಚ್ಚಿನ ರಿಸ್ಕ್ ಹೊಂದಿರುವುದಿಲ್ಲ.

ಇದನ್ನೂ ಓದಿ: ಗ್ರಾಚುಟಿ ನಿಯಮ ಏನಿದೆ? ಎಷ್ಟು ವರ್ಷದ ಸರ್ವಿಸ್ ಮಾಡಿದ್ರೆ ಎಷ್ಟು ಹಣ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ

ಜಿಯೋ ಬ್ಯಾಂಕ್ ಗ್ರಾಹಕರು ನಿರ್ದಿಷ್ಟ ಥ್ರಿಶೋಲ್ಡ್ ಮೊತ್ತ ನಿಗದಿ ಮಾಡಬೇಕು. ಈ ಥ್ರಿಶೋಲ್ಡ್ ಮೊತ್ತ 5,000 ರೂನಿಂದ ಆರಂಭವಾಗುತ್ತದೆ. ನೀವು 5,000 ರೂ ಅನ್ನು ಥ್ರಿಶೋಲ್ಡ್ ಮೊತ್ತವಾಗಿ ಆಯ್ಕೆ ಮಾಡಿದಲ್ಲಿ, ಬ್ಯಾಂಕು ನಿಮ್ಮ ಖಾತೆಯಿಂದ 5,000 ರೂಗೆ ಹೆಚ್ಚುವರಿಯಾಗಿ ಇರುವ ಮೊತ್ತವನ್ನು ಓವರ್​ನೈಟ್ ಮ್ಯುಚುವಲ್ ಫಂಡ್​ಗಳ ಮೇಲೆ ಹೂಡಿಕೆ ಮಾಡುತ್ತದೆ.

ದಿನಕ್ಕೆ ಒಂದೂವರೆ ಲಕ್ಷ ರೂ ಮಿತಿ

ಗ್ರಾಹಕರು ತಮ್ಮ ಜಿಯೋ ಬ್ಯಾಂಕ್ ಖಾತೆಯಿಂದ ಈ ರೀತಿಯಲ್ಲಿ ದಿನಕ್ಕೆ ಒಂದೂವರೆ ಲಕ್ಷ ರೂವರೆಗೆ ಹೂಡಿಕೆ ಮಾಡಲು ಅವಕಾಶ ಇರುತ್ತದೆ. ನೀವು ಯಾವಾಗ ಬೇಕಾದರೂ ಹಣವನ್ನು ಹಿಂಪಡೆಯಬಹುದು. ಆದರೆ, ಪೂರ್ಣ ಮೊತ್ತ ಹಿಂಪಡೆಯಲಾಗುವುದಿಲ್ಲ. ಶೇ. 90ರಷ್ಟು ಹೂಡಿಕೆಯನ್ನು ವಿತ್​ಡ್ರಾ ಮಾಡಬಹುದು.

ನೀವು ಒಮ್ಮೆಗೇ ಅಷ್ಟೂ ಹಣ ಪಡೆಯಲು ಆಗುವುದಿಲ್ಲ. ಮೊದಲಿಗೆ 50,000 ರೂವರೆಗೆ ಹಣವನ್ನು ತತ್​ಕ್ಷಣಕ್ಕೆ ಪಡೆಯಬಹುದು. ಇನ್ನುಳಿದ ಮೊತ್ತವನ್ನು 1-2 ಕಾರ್ಯದಿನಗಳಲ್ಲಿ ರಿಡೀಮ್ ಮಾಡಬಹುದು.

ಇದನ್ನೂ ಓದಿ: ಐದು ವರ್ಷ ಪ್ರೀಮಿಯಮ್ ಕಟ್ಟಿ, ಜೀವನ ಪೂರ್ತಿ ಆದಾಯ ಗಳಿಸಿ; ಇದು ಎಲ್​ಐಸಿಯ ಜೀವನ್ ಉತ್ಸವ್ ಪಾಲಿಸಿ

ನೀವು ಹೂಡಿಕೆ ಮಾಡಲು ಎಂಟ್ರಿ ಶುಲ್ಕವಾಗಲೀ, ಹೂಡಿಕೆ ಹಿಂಪಡೆಯಲು ಎಕ್ಸಿಟ್ ಶುಲ್ಕವಾಗಲೀ ಇರುವುದಿಲ್ಲ. ಯಾವುದೇ ಹಿಡ್ಡನ್ ಚಾರ್ಜ್, ಲಾಕಿನ್ ಪೀರಿಯಡ್ ಇತ್ಯಾದಿ ಇರುವುದಿಲ್ಲ.

ಬೇರೆ ಬ್ಯಾಂಕುಗಳಲ್ಲಿ ಹೇಗೆ ವ್ಯವಸ್ಥೆ?

ಸಾಮಾನ್ಯವಾಗಿ ಬ್ಯಾಂಕುಗಳಲ್ಲಿ ಸೇವಿಂಗ್ಸ್ ಅಕೌಂಟ್​ನಲ್ಲಿರುವ ಹಣಕ್ಕೆ ಶೇ. 2.5ರಿಂದ ಶೇ. 4.5ರವರೆಗೂ ಬಡ್ಡಿ ಸಿಗುತ್ತದೆ. ಕೆಲ ಬ್ಯಾಂಕುಗಳು ಹೆಚ್ಚುವರಿ ಬಡ್ಡಿ ಆಫರ್ ಮಾಡಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ