Sign In

By signing in or creating an account, you agree with Associated Broadcasting Company's Terms & Conditions and Privacy Policy.

EPF Withdrawal: ಉಮಂಗ್ ಆ್ಯಪ್ ಮೂಲಕ ಇಪಿಎಫ್ ಹಣ ವಿತ್​ಡ್ರಾ ಮಾಡುವುದು ಬಹಳ ಸುಲಭ; ಇಲ್ಲಿದೆ ವಿವರ

Using Umang app, How To Withdraw EPF Fund: ಇಪಿಎಫ್ ಖಾತೆಯಿಂದ ಹಣ ಹಿಂಪಡೆಯಲು ಉಮಂಗ್ ಆ್ಯಪ್​ನಲ್ಲಿ ಸುಲಭ ಕ್ರಮಗಳಿವೆ. ಈ ಬಗ್ಗೆ ಒಂದು ವರದಿ ಇಲ್ಲಿದೆ...

EPF Withdrawal: ಉಮಂಗ್ ಆ್ಯಪ್ ಮೂಲಕ ಇಪಿಎಫ್ ಹಣ ವಿತ್​ಡ್ರಾ ಮಾಡುವುದು ಬಹಳ ಸುಲಭ; ಇಲ್ಲಿದೆ ವಿವರ
ಉಮಂಗ್ ಆ್ಯಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 25, 2023 | 6:15 PM

ಉದ್ಯೋಗಿಗಳು ಕೆಲಸ ಮಾಡುವಾಗ ಪ್ರತೀ ತಿಂಗಳು ಸಂಬಳದಲ್ಲಿ ನಿರ್ದಿಷ್ಟ ಭಾಗವು ಇಪಿಎಫ್ ಖಾತೆಗೆ (EPF) ಜಮೆ ಆಗುತ್ತಾ ಹೋಗುತ್ತದೆ. ಇದು ನಿವೃತ್ತಿ ಬಳಿಕ ಜೀವನ ಸಹಾಯಕ್ಕೆಂದು ಕೇಂದ್ರದ ಇಪಿಎಫ್​ಒ ರೂಪಿಸಿರುವ ಯೋಜನೆ. ಇದೀಗ ಆನ್​ಲೈನ್​ನಲ್ಲಿ ಇಪಿಎಫ್ ಖಾತೆಯ ಎಲ್ಲಾ ವಿವರಗಳನ್ನೂ ನೋಡುವ ಅವಕಾಶ ಇದೆ. ಇಪಿಎಫ್​ಒನ ಪೋರ್ಟಲ್​ನಲ್ಲಿ ಮಾತ್ರವಲ್ಲ, ಉಮಂಗ್ ಆ್ಯಪ್​ನಲ್ಲೂ ಇಪಿಎಫ್ ಸೌಲಭ್ಯ ಇದೆ. ಇಪಿಎಫ್ ಅಷ್ಟೇ ಅಲ್ಲದೆ ಆಧಾರ್, ನ್ಯಾಷನಲ್ ಪೆನ್ಷನ್ ಸ್ಕೀಮ್, ಆಭಾ ಹೆಲ್ತ್ ಸ್ಕೀಮ್ (ABHA) ಇತ್ಯಾದಿ ಯೋಜನೆಗಳ ಮಾಹಿತಿ ಈ ಉಮಂಗ್ ಆ್ಯಪ್​ನಲ್ಲಿ ನೋಡಬಹುದಾಗಿದೆ.

ಉಮಂಗ್ ಆ್ಯಪ್​ನಲ್ಲಿ ಇಪಿಎಫ್​ನ ವಿವಿಧ ಸೇವೆಗಳು ಲಭ್ಯ ಇವೆ. ನಿಮ್ಮ ಯುಎಎನ್ ಅಡಿಯಲ್ಲಿ ಎಷ್ಟು ಇಪಿಎಫ್ ಖಾತೆಗಳಿವೆ, ಎಷ್ಟು ಹಣ ಶೇಖರಣೆ ಆಗಿದೆ ಇತ್ಯಾದಿ ವಿವರ ಇದೆ. ಅಲ್ಲದೇ ಇಪಿಎಫ್ ಹಣವನ್ನು ವಿತ್​ಡ್ರಾ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವ ಅವಕಾಶವೂ ಇದೆ.

ಇದನ್ನೂ ಓದಿ7 IPOs: ಮುಂದಿನ ವಾರ ಏಳು ಐಪಿಒಗಳ ಬಿಡುಗಡೆ; 1600 ಕೋಟಿ ರೂ ಬಂಡವಾಳ ಸಂಗ್ರಹದ ಗುರಿ

ಉಮಂಗ್ ಆ್ಯಪ್​ನಲ್ಲಿ ಇಪಿಎಫ್ ಕ್ಲೈಮ್ ಮಾಡುವುದು ಹೇಗೆ?

  • ಉಮಂಗ್ ಆ್ಯಪ್ ಡೌನ್​ಲೋಡ್ ಮಾಡಿ, ಲಾಗಿನ್ ಆಗಿರಿ.
  • ಹೊಸದಾಗಿ ಸೈನಪ್ ಆಗಿದ್ದರೆ ಇಪಿಎಫ್​ಒ ಅನ್ನು ಸರ್ಚ್ ಮಾಡಿ ತೆರೆಯಿರಿ.
  • ಇಪಿಎಫ್​ಒ ಸೇವೆಗಳ ಪಟ್ಟಿಯಲ್ಲಿ ‘ರೈಸ್ ಕ್ಲೈಮ್’ ಮೇಲೆ ಕ್ಲಿಕ್ ಮಾಡಿ
  • ಯುಎಎನ್ ನಂಬರ್ ಹಾಕಿರಿ. ಬಳಿಕ ಯುಎಎನ್ ಜೊತೆ ಜೋಡಿತವಾಗಿರುವ ನಂಬರ್​ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ.
  • ಹಣ ಹಿಂಪಡೆಯಲು ಯಾಕೆ ಎಂದು ಆರಿಸಿ, ಬಳಿಕ ಸಬ್ಮಿಟ್ ಕೊಡಿ

ಇದಾದ ಬಳಿಕ ನಿಮಗೆ ಸ್ವೀಕೃತಿ ಪತ್ರ ಅಥವಾ ಕ್ಲೈಮ್ ರೆಫರೆನ್ಸ್ ಸಂಖ್ಯೆ ಬರುತ್ತದೆ. ನಿಮ್ಮ ಅರ್ಜಿಯ ಸ್ಥಿತಿ ಏನಾಯಿತು ಎಂದು ತಿಳಿಯಲು ಈ ಸಂಖ್ಯೆಯನ್ನು ಬಳಸಬಹುದು. ಕೆಲ ದಿನಗಳಲ್ಲೇ ನಿಮ್ಮ ಕ್ಲೈಮ್ ಸ್ಥಿತಿಗತಿ ಏನೆಂದು ತಿಳಿಸಿ ಮೊಬೈಲ್ ನಂಬರ್​ಗೆ ಸಂದೇಶ ಬರುತ್ತದೆ. ಅಥವಾ ಉಮಂಗ್ ಆ್ಯಪ್​ಗೆ ಬಂದು ಬೇಕಾದರೂ ಇದನ್ನು ತಿಳಿಯಬಹುದು. ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸಲಾಗಿದ್ದರೆ ಅದಕ್ಕೆ ಏನು ಕಾರಣ ಎಂದೂ ಇದರಲ್ಲಿ ತಿಳಿಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು