AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Investment Ideas: 2024ರಲ್ಲಿ ಎಲ್ಲೆಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ ಮತ್ತು ಲಾಭಕಾರಿ? ಇಲ್ಲಿದೆ ಡೀಟೇಲ್ಸ್

Know Where to Invest In 2024: ಷೇರು ಮಾರುಕಟ್ಟೆ ಹೊಸ ದಾಖಲೆಯ ಎತ್ತರ ಮುಟ್ಟಿದೆ. ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಫಂಡ್​ಗಳು ಒಳ್ಳೆಯ ಲಾಭ ಮಾಡಿವೆ. ಆದರೆ, 2024ರಲ್ಲಿ ಲಾರ್ಜ್ ಕ್ಯಾಪ್ ಫಂಡ್​​ಗಳು ಹೆಚ್ಚು ಸುರಕ್ಷಿತ ಮತ್ತು ಲಾಭದಾಯಕವಾಗುವ ನಿರೀಕ್ಷೆ ಇದೆ. ನಿಮ್ಮ ಹಣದಲ್ಲಿ ಶೇ. 70ರಷ್ಟು ಹಣ ಲಾರ್ಜ್ ಕ್ಯಾಪ್ ಫಂಡ್​ಗಳಿಗೆ ಹೋಗಲಿ. ಉಳಿದವು ಡೆಟ್ ಫಂಡ್​ಗಳಲ್ಲಿ ಹೂಡಿಕೆಯಾಗಲಿ.

Investment Ideas: 2024ರಲ್ಲಿ ಎಲ್ಲೆಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ ಮತ್ತು ಲಾಭಕಾರಿ? ಇಲ್ಲಿದೆ ಡೀಟೇಲ್ಸ್
ಹೂಡಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 18, 2024 | 2:40 PM

Share

ಇವತ್ತು ಷೇರು ಮಾರುಕಟ್ಟೆ ಬಹಳ ಉಚ್ಛ್ರಾಯ ಸ್ಥಿತಿಯಲ್ಲಿದೆ. ಬಹಳಷ್ಟು ಹೂಡಿಕೆದಾರರ ಷೇರುಸಂಪತ್ತು ಅಚ್ಚರಿಪಡುವಷ್ಟು ಎತ್ತರಕ್ಕೇರಿದೆ. ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಈಗ ಯಾರಿಗಾದರೂ ಪ್ರೇರೇಪಣೆ ಆಗಬಹುದು. ಷೇರು ಮಾರುಕಟ್ಟೆಯನ್ನೇ ನೋಡಿದರೆ ಸ್ಮಾಲ್ ಕ್ಯಾಪ್ ಮತ್ತು ಮಿಡ್​ಕ್ಯಾಪ್ ಷೇರುಗಳು ಬಹಳ ಬೆಳೆದಿದ್ದು, ಹೂಡಿಕೆದಾರರಿಗೆ ಸಖತ್ ಲಾಭ ತಂದಿವೆ. ಒಂದು ಕಂಪನಿಗಳ ಷೇರು ಸಂಖ್ಯೆ ಮತ್ತು ಮೌಲ್ಯಕ್ಕೆ (market capital) ಅನುಗುಣವಾಗಿ ಅವುಗಳನ್ನು ಲಾರ್ಜ್ ಕ್ಯಾಪ್, ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್ ಎಂದು ವರ್ಗೀಕರಿಸಲಾಗುತ್ತದೆ. ಇಲ್ಲಿ ಲಾರ್ಜ್ ಕ್ಯಾಪ್​ಗಿಂತ ಸಣ್ಣ ಹಾಗೂ ಮಧ್ಯಮ ಷೇರುಮೊತ್ತದ ಕಂಪನಿಗಳು 2023ರಲ್ಲಿ ಹೆಚ್ಚು ಬೆಳೆದಿವೆ. ಹಾಗಂತ 2024ರಲ್ಲೂ ಇದೇ ಟ್ರೆಂಡ್ ಇರುತ್ತಾ? ಬಹಳಷ್ಟು ತಜ್ಞರು 2024ರಲ್ಲಿ ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಷೇರುಗಳ ಬೆನ್ನತ್ತಬೇಡಿ ಎಂದು ಸಲಹೆ ನೀಡುತ್ತಿದ್ದಾರೆ. ಹಾಗಾದರೆ, ಈ ವರ್ಷ ನಿಮ್ಮ ಉಳಿತಾಯ ಹಣವನ್ನು ಎಲ್ಲಿ ಹೂಡಿಕೆ ಮಾಡುವುದು ಸೂಕ್ತ?

2024ರಲ್ಲಿ ನಿಮ್ಮ ಹೂಡಿಕೆ ಈ ರೀತಿ ಹಂಚಿರಬೇಕು…

ನಿಮ್ಮ ಹಣದಲ್ಲಿ ಹೆಚ್ಚಿನ ಮೊತ್ತವನ್ನು ಲಾರ್ಜ್ ಕ್ಯಾಪ್ ಷೇರುಗಳಲ್ಲಿ ಹಾಕಬಹುದು. ಅದಕ್ಕಾಗಿ ಉತ್ತಮವಾದ ಯಾವುದಾದರೂ ಲಾರ್ಜ್ ಕ್ಯಾಪ್ ಮ್ಯುಚುವಲ್ ಫಂಡ್ ಆಯ್ದುಕೊಳ್ಳಬಹುದು. ಉಳಿದ ಹಣವನ್ನು ಡೆಟ್ ಸಾಧನಗಳಲ್ಲಿ ಹಾಕಬಹುದು.

ಇದನ್ನೂ ಓದಿ: 40% EMI Rule: ನಿಮ್ಮ ಆದಾಯದಲ್ಲಿ ಸಾಲಕ್ಕೆ ಮಿತಿ ಎಷ್ಟಿರಬೇಕು? ನೆನಪಿರಲಿ 40 ಪರ್ಸೆಂಟ್ ರೂಲ್; ಈ ಗಡಿ ದಾಟದಿರಿ ಜೋಕೆ..!

ಇಲ್ಲಿ ಡೆಟ್ ಹೂಡಿಕೆಗಳಲ್ಲಿ ಫಿಕ್ಸೆಡ್ ಡೆಪಾಸಿಟ್, ಸರ್ಕಾರಿ ಬಾಂಡ್, ಎನ್​ಪಿಎಸ್ ಇತ್ಯಾದಿ ಇವೆ. ಹಾಗೆಯೇ, ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ, ಪೋಸ್ಟ್ ಆಫೀಸ್ ಠೇವಣಿ ಇತ್ಯಾದಿ ಸರ್ಕಾರಿ ಪ್ರಾಯೋಜಿತ ಸಣ್ಣ ಉಳಿತಾಯ ಯೋಜನೆಗಳೂ ಡೆಟ್ ಸೆಕ್ಯೂರಿಟೀಸ್​ನಲ್ಲಿ ಸೇರಿವೆ. ಇವುಗಳಲ್ಲಿ ಕೆಲ ಯೋಜನೆಗಳಲ್ಲಿ ನೀವು ಶೇ. 30ರಷ್ಟು ಹಣ ತೊಡಗಿಸಬಹುದು

ಉದಾಹರಣೆಗೆ, ನಿಮ್ಮ ಬಳಿ 5 ಲಕ್ಷ ರೂ ಇದೆ ಎಂದಿಟ್ಟುಕೊಳ್ಳಿ. ಇದರಲ್ಲಿ ಶೇ. 70ರಷ್ಟು ಹಣ, ಎಂದರೆ ಮೂರೂವರೆ ಲಕ್ಷ ರೂ ಹಣವನ್ನು ಲಾರ್ಜ್ ಕ್ಯಾಪ್ ಮ್ಯುಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಬಹುದು. ಉಳಿದ ಶೇ. 30ರಷ್ಟು ಅಂದರೆ ಒಂದೂವರೆ ಲಕ್ಷ ರೂನಷ್ಟು ಹಣವನ್ನು ಡೆಟ್ ಫಂಡ್​ಗಳಲ್ಲಿ ಹೂಡಿಕೆ ಮಾಡಬಹುದು. ಇಲ್ಲಿ ಈ ವರ್ಷ ಲಾರ್ಜ್ ಕ್ಯಾಪ್ ಯಾಕೆ ಬೇಕು ಎಂದರೆ 2023ರಲ್ಲಿ ದೊಡ್ಡ ಕಂಪನಿಗಳ ಷೇರುಗಳ ಬೆಲೆ ತೀರಾ ಹೆಚ್ಚೆನಿಸುವಷ್ಟು ಬೆಳೆದಿಲ್ಲ. ಅಂದರೆ ಓವರ್ ವ್ಯಾಲ್ಯೂಡ್ ಆಗಿಲ್ಲ. ಇವು ಇನ್ನಷ್ಟು ಬೆಳೆಯಲು ಅವಕಾಶ ಹೊಂದಿರುತ್ತವೆ.

ಇದನ್ನೂ ಓದಿ: SIP Magic: ದಿನಕ್ಕೆ 200 ರೂನಂತೆ ಎಸ್​ಐಪಿಯಲ್ಲಿ ಹೂಡಿಕೆ ಮಾಡಿದರೆ 25 ವರ್ಷಕ್ಕೆ ಎಷ್ಟು ಸಂಪಾದನೆ ಆಗಬಹುದು?

ಅಲ್ಪಾವಧಿ ಅಗತ್ಯಗಳಿಗೆ ಎಫ್​ಡಿ, ಆರ್​ಡಿ ಬಳಸಿ

ನಿಮಗೆ ಕಿರು ಅವಧಿಗೆ ಹಣದ ಅವಶ್ಯಕತೆ ಬೇಕಾಗುತ್ತದೆ ಎಂದಿದ್ದಾಗ ಫಿಕ್ಸೆಡ್ ಡೆಪಾಸಿಟ್ ಆಯ್ದುಕೊಳ್ಳಬಹುದು. ಅಥವಾ ಅಲ್ಪಾವಧಿ ಅಗತ್ಯಗಳಿಗೆ ಎಫ್​ಡಿಗಿಂತ ಪರ್ಯಾಯವಾಗಿ ರೆಕರಿಂಗ್ ಡೆಪಾಸಿಟ್ ಯೋಜನೆಗಳನ್ನೂ ಪಡೆಯಬಹುದು. ಬ್ಯಾಂಕ್​ನಲ್ಲಿ ನೀವು ಆರು ತಿಂಗಳಿಗೂ ಆರ್​ಡಿ ಪಡೆಯಬಹುದು. ತಿಂಗಳಿಗೆ ಇಂತಿಷ್ಟು ಹಣ ಉಳಿಸಿ ಆರ್​ಡಿಗೆ ಹೂಡಿಕೆ ಮಾಡಬಹುದು. ಹೀಗೆ ಮಾಡಿದಲ್ಲಿ ದೀರ್ಘಾವಧಿ ಹೂಡಿಕೆಗೆ ಹಣ ಮುಡಿಪಾಗಿಡಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ