PM Kisan 21st Installment: ಪಿಎಂ ಕಿಸಾನ್ ಹೊಸ ಕಂತಿನ ಹಣ ಬಿಡುಗಡೆ ಸದ್ಯದಲ್ಲೇ

PM Kisan scheme 21st Installment Date and Time: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 21ನೇ ಕಂತಿನ ಹಣ ನ. 19, ಬುಧವಾರ ಬಿಡುಗಡೆ ಆಗಲಿದೆ. ಇದಕ್ಕೆ ಮುನ್ನ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಅಪ್​ಡೇಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ. ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ.

PM Kisan 21st Installment: ಪಿಎಂ ಕಿಸಾನ್ ಹೊಸ ಕಂತಿನ ಹಣ ಬಿಡುಗಡೆ ಸದ್ಯದಲ್ಲೇ
ರೈತ

Updated on: Nov 18, 2025 | 3:46 PM

ನವದೆಹಲಿ, ನವೆಂಬರ್ 17: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan scheme) 21ನೇ ಕಂತಿನ ಹಣವನ್ನು ಸರ್ಕಾರ ಇನ್ನೆರಡು ದಿನಗಳಲ್ಲಿ ಬಿಡುಗಡೆ ಮಾಡಲಿದೆ. ವರದಿಗಳ ಪ್ರಕಾರ 2025ರ ನವೆಂಬರ್ 19, ಬುಧವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 10 ಕೋಟಿ ರೈತರ (farmers) ಬ್ಯಾಂಕ್ ಖಾತೆಗಳಿಗೆ ತಲಾ 2,000 ರೂ ಹಣ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಕೊಡಲಿದ್ದಾರೆ. ಹಿಂದಿನ ಕಂತಿನ ಹಣವನ್ನು ವಾರಾಣಸಿಯಿಂದ ಪ್ರಧಾನಿಗಳು ಆ. 2ರಂದು ಬಿಡುಗಡೆ ಮಾಡಿದ್ದರು.

ಏನಿದು ಪಿಎಂ ಕಿಸಾನ್ ಯೋಜನೆ?

ಕೃಷಿ ಕಾಯಕದಲ್ಲಿ ನಿರತರಾಗಿರುವ ರೈತರಿಗೆ ಧನ ಸಹಾಯ ನೀಡುವ ಯೋಜನೆ ಪಿಎಂ ಕಿಸಾನ್. 2019ರಲ್ಲಿ ಆರಂಭವಾದ ಈ ಸ್ಕೀಮ್ ಅಡಿಯಲ್ಲಿ ಅರ್ಹ ರೈತರಿಗೆ ವರ್ಷದಲ್ಲಿ 2,000 ರೂಗಳ 3 ಕಂತುಗಳಲ್ಲಿ, ವರ್ಷಕ್ಕೆ ಒಟ್ಟು 6,000 ರೂ ಹಣ ನೀಡಲಾಗುತ್ತದೆ. ಪ್ರತೀ ಬೆಳೆ ಸೀಸನ್​ಗೆ ಮುಂಚೆ ರೈತರಿಗೆ ಸರ್ಕಾರ ನೀಡುವ ನೆರವಿನ ಹಣ ಇದು. ಬೀಜ, ರಸಗೊಬ್ಬರ ಮತ್ತಿತರ ವೆಚ್ಚಗಳಿಗೆ ನೆರವಾಗಲೆಂದು ಈ ಸ್ಕೀಮ್ ಇದೆ.

ಇದನ್ನೂ ಓದಿ: ಪಿಎಂ ಕಿಸಾನ್: ಈ ಬಾರಿ ಕೆಲ ರೈತರಿಗೆ 2,000 ಬದಲು 4,000 ರೂ ಸಿಗುತ್ತಾ? ಇಲ್ಲಿದೆ ಕಾರಣ

ಪಿಎಂ ಕಿಸಾನ್ ಯೋಜನೆಯಲ್ಲಿ ನೊಂದಾಯಿಸಿದ್ದರೆ ಈ ಕೆಲಸ ಮಾಡಿ…

ನೀವು ಪಿಎಂ ಕಿಸಾನ್ ಯೋಜನೆಯಲ್ಲಿ ಇತ್ತೀಚೆಗೆ ನೊಂದಾಯಿಸಿದ್ದು, ಮೊದಲ ಕಂತಿನ ನಿರೀಕ್ಷೆಯಲ್ಲಿದ್ದರೆ ಮೊದಲು ಪಿಎಂ ಕಿಸಾನ್ ವೆಬ್​ಸೈಟ್​ನಲ್ಲಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ.

ಪಿಎಂ ಕಿಸಾನ್ ವೆಬ್​ಸೈಟ್ ವಿಳಾಸ ಇಂತಿದೆ: pmkisan.gov.in/

  • ಇಲ್ಲಿ ಮುಖ್ಯಪುಟ ತುಸು ಕೆಳಗೆ ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಸೆಕ್ಷನ್ ಸಿಗುತ್ತದೆ. ಅಲ್ಲಿ ಬೆನಿಫಿಶಿಯರಿ ಲಿಸ್ಟ್ ಎಂಬುದನ್ನು ಕ್ಲಿಕ್ ಮಾಡಿ.
  • ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ಹೆಸರು ಆಯ್ಕೆ ಮಾಡಿಕೊಳ್ಳಿ.
  • ಈ ಗ್ರಾಮದಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿ ಸಿಗುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ.

ನಿಮಗೆ ಈ 21ನೇ ಕಂತಿನ ಹಣ ಬಿಡುಗಡೆಗೆ ಅನುಮೋದನೆ ಸಿಕ್ಕಿದೆಯಾ ಇಲ್ಲವಾ ಎಂಬುದನ್ನೂ ಪರಿಶೀಲಿಸಬಹುದು. ಅದಕ್ಕೆ ಇದೇ ಫಾರ್ಮರ್ಸ್ ಕಾರ್ನರ್​ನಲ್ಲಿ ‘ನೋ ಯುವರ್ ಸ್ಟೇಟಸ್’ ಅನ್ನು ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಆಧಾರ್ ನಂಬರ್, ಮೊಬೈಲ್ ನಂಬರ್ ಅಥವಾ ರಿಜಿಸ್ಟ್ರೇಶನ್ ಐಡಿಯನ್ನು ನಮೂದಿಸಿ. ಇಲ್ಲಿ ನಿಮ್ಮ ಕಂತಿನ ಹಣ ಬಿಡುಗಡೆಗೆ ಅನುಮೋದನೆ ಕೊಡಲಾಗಿದೆಯಾ, ಪೆಂಡಿಂಗ್​ನಲ್ಲಿದೆಯಾ ಅಥವಾ ತಡೆ ಹಿಡಿಯಲಾಗಿದೆಯಾ ಎಂಬ ಮಾಹಿತಿ ಸಿಗುತ್ತದೆ.

ಇದನ್ನೂ ಓದಿ: ಕೋಟಿ ರೂ ಸಂಬಳ ಕೊಡ್ತೀನಂದ್ರೂ ಅಮೆರಿಕದಲ್ಲಿ ಸಿಗುತ್ತಿಲ್ಲ ಕೆಲಸಗಾರರು; ಮೆಕ್ಯಾನಿಕ್ಸ್ ಇತ್ಯಾದಿ ಕಾರ್ಮಿಕರಿಗೆ ಸಖತ್ ಬೇಡಿಕೆ

ನೊಂದಾಯಿಸಿದ್ದರೂ ಫಲಾನುಭವಿಗಳ ಪಟ್ಟಿಯಲ್ಲಿ ಯಾಕಿಲ್ಲ?

  • ಭೂ ದಾಖಲೆಗಳಲ್ಲಿರುವ ಹೆಸರು ಮತ್ತು ಆಧಾರ್​ನಲ್ಲಿರುವ ಹೆಸರು ಹೊಂದಿಕೆಯಾಗದೇ ಇರುವುಉದ
  • ತಪ್ಪಾದ ಬ್ಯಾಂಕ್ ಅಕೌಂಟ್
  • ಇಕೆವೈಸಿ ಮಾಡದೇ ಇರುವುದು
  • ರಾಜ್ಯ ಆಡಳಿತದಿಂದ ಭೂ ದಾಖಲೆಗಳು ಅಪ್​ಡೇಟ್ ಆಗದೇ ಇರುವುದು
  • ಯೋಜನೆಗೆ ಅನರ್ಹರಾಗದೇ ಇರುವುದು

ಈ ಮೇಲಿನ ಕಾರಣಗಳಿಂದ ನಿಮ್ಮ ಹೆಸರು ಪಟ್ಟಿಯಲ್ಲಿ ಇಲ್ಲದೇ ಇರಬಹುದು. ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಎಲ್ಲಾ ಮಾಹಿತಿ ಅಪ್​ಡೇಟ್ ಮಾಡಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:56 pm, Mon, 17 November 25