Ram Temple Inauguration: ರಾಮಲಲ್ಲಾ ಪ್ರಾಣ ಪ್ರತಿಷ್ಠಾ ದಿನವಾದ ಜ. 22ರಂದು ಷೇರು ಮಾರುಕಟ್ಟೆಗೆ ಇದೆಯಾ ರಜೆ?

Stock Market Holiday: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಇದ್ದು ಕೇಂದ್ರದ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಇದೆ. ಅಂದು ಷೇರು ಮಾರುಕಟ್ಟೆಗೆ ರಜೆ ಇದೆ ಎನ್ನುವ ಸುದ್ದಿ ತಪ್ಪು. ಸೋಮವಾರ ಯಥಾ ಪ್ರಕಾರ ಬಿಸಿನೆಸ್ ಇರುತ್ತದೆ. ಶನಿವಾರ ಷೇರುಪೇಟೆಗೆ ರಜೆಯಾದರೂ ಜನವರಿ 20ರಂದು ಎರಡು ಲೈವ್ ಟ್ರೇಡಿಂಗ್ ಸೆಷನ್​ಗಳು ಬೇರೆ ಕಾರಣಕ್ಕ ನಡೆಯುತ್ತಿವೆ.

Ram Temple Inauguration: ರಾಮಲಲ್ಲಾ ಪ್ರಾಣ ಪ್ರತಿಷ್ಠಾ ದಿನವಾದ ಜ. 22ರಂದು ಷೇರು ಮಾರುಕಟ್ಟೆಗೆ ಇದೆಯಾ ರಜೆ?
ಷೇರು ಮಾರುಕಟ್ಟೆ
Follow us
|

Updated on: Jan 19, 2024 | 9:00 AM

ನವದೆಹಲಿ, ಜನವರಿ 19: ಅಯೋಧ್ಯೆಯ ರಾಮಜನ್ಮಭೂಮಿ ಎನ್ನಲಾದ ಸ್ಥಳದಲ್ಲಿ ನಿರ್ಮಿಸಲಾಗುತ್ತಿರುವ ಬೃಹತ್ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾ (Ram Lalla Pran Pratishta) ಕಾರ್ಯಕ್ರಮ ಜನವರಿ 22ರಂದು ನೆರವೇರುತ್ತಿದೆ. ಅಂದು ಕೇಂದ್ರ ಸರ್ಕಾರದ ಎಲ್ಲಾ ಕಚೇರಿಗಳಿಗೆ ಅರ್ಧದಿನ ರಜೆ ನೀಡಲಾಗಿದೆ. ಮಧ್ಯಾಹ್ನ 2:30ರವರೆಗೂ ಕಚೇರಿಗಳು ಬಂದ್ ಆಗಿರುತ್ತವೆ. ಉತ್ತರಪ್ರದೇಶ ಸರ್ಕಾರ ಅಂದು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ರಜೆ ಘೋಷಿಸಿದೆ. ಆದರೆ, ಷೇರು ವಿನಿಮಯ ಮಾರುಕಟ್ಟೆಗಳಾದ ಬಿಎಸ್​ಇ ಮತ್ತು ಎನ್​ಎಸ್​ಇ (stock markets) ಜನವರಿ 22ರಂದು ಕಾರ್ಯನಿರ್ವಹಿಸುತ್ತವಾ ಎಂಬ ಗೊಂದಲ ಬಹಳ ಮಂದಿಗೆ ಇದೆ. ಆದರೆ, ಜನವರಿ 22ರಂದು ಷೇರುಪೇಟೆಗೆ ರಜೆ ಇರುವುದಿಲ್ಲ. ಸೋಮವಾರ ಆಗಿರುವ ಅಂದು ಷೇರು ಮಾರುಕಟ್ಟೆಯಲ್ಲಿ ಯಥಾ ಪ್ರಕಾರ ಬಿಸಿನೆಸ್ ನಡೆಯುತ್ತದೆ.

ಜನವರಿ 20, ಶನಿವಾರದಂದು ಷೇರುಪೇಟೆಗೆ ರಜೆ ಇಲ್ಲವಾ?

ಷೇರು ಮಾರುಕಟ್ಟೆ ವಾರದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ತೆರೆದಿರುತ್ತದೆ. ಶನಿವಾರ ಮತ್ತು ಭಾನುವಾರ ರಜೆ. ಆದರೆ, ಈ ಶನಿವಾರ, ಅಂದರೆ ನಾಳೆ (ಜ. 20) ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಮತ್ತು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಎರಡು ಸ್ಪೆಷಲ್ ಲೈವ್ ಟ್ರೇಡಿಂಗ್ ಸೆಷನ್ಸ್ ನಡೆಸುತ್ತಿವೆ. ಈ ಲೈವ್ ಸೆಷನ್ಸ್ ಮೂಲಕ ಡಿಆರ್ ಸೈಟ್​ಗೆ ವರ್ಗಾಯಿಸುವ ಉದ್ದೇಶ ಇದೆ.

ಮೊದಲ ಸೆಷನ್ ಬೆಳಗ್ಗೆ 9:15ಕ್ಕೆ ಆರಂಭವಾಗಿ 10 ಗಂಟೆಗೆ ಮುಗಿಯುತ್ತದೆ. ಎರಡನೇ ಸೆಷನನ್ 11:30ರಿಂದ 12:30ರವರೆಗೂ ಇರುತ್ತದೆ.

ಇದನ್ನೂ ಓದಿ: 10 Years of India: ಕಳೆದ 10 ವರ್ಷದಲ್ಲಿ ದೇಶದ ಆರ್ಥಿಕ, ಹಣಕಾಸು ವ್ಯವಸ್ಥೆಯಲ್ಲಿ ಆದ ಮಹತ್ವದ ಪರಿವರ್ತನೆಗಳಿವು…

2024ರಲ್ಲಿ ಷೇರು ಮಾರುಕಟ್ಟೆಗೆ ಇರುವ ರಜಾ ದಿನಗಳು

ಶನಿವಾರ ಮತ್ತು ಭಾನುವಾರ ಷೇರು ಮಾರುಕಟ್ಟೆಗೆ ನಿಯಮಿತವಾಗಿ ರಜೆ ಇರುತ್ತದೆ. ಅದು ಬಿಟ್ಟು ಈ ವರ್ಷ ಇನ್ನೂ ಹಲವು ರಜೆಗಳಿವೆ. ಅವುಗಳ ಪಟ್ಟಿ ಇಲ್ಲಿದೆ:

  1. ಜನವರಿ 26: ಗಣರಾಜ್ಯೋತ್ಸವ
  2. ಮಾರ್ಚ್ 8: ಮಹಾಶಿವರಾತ್ರಿ
  3. ಮಾರ್ಚ್ 25: ಹೋಳಿ ಹಬ್ಬ
  4. ಮಾರ್ಚ್ 29: ಗುಡ್ ಫ್ರೈಡೇ
  5. ಏಪ್ರಿಲ್ 11: ಈದ್ ಉಲ್ ಫಿತರ್ ಹಬ್ಬ
  6. ಏಪ್ರಿಲ್ 17: ರಾಮ ನವಮಿ
  7. ಮೇ 1: ಕಾರ್ಮಿಕರ ದಿನ
  8. ಜೂನ್ 17: ಬಕ್ರೀದ್
  9. ಜುಲೈ 17: ಮೊಹರಂ
  10. ಆಗಸ್ಟ್ 15: ಸ್ವಾತಂತ್ರ್ಯ ದಿನ
  11. ಅಕ್ಟೋಬರ್ 2: ಗಾಂಧಿ ಜಯಂತಿ
  12. ನವೆಂಬರ್ 1: ದೀಪಾವಳಿ ಹಬ್ಬ
  13. ನವೆಂಬರ್ 15: ಗುರುನಾನಕ್ ಜಯಂತಿ
  14. ಡಿಸೆಂಬರ್ 25: ಕ್ರಿಸ್ಮಸ್ ಹಬ್ಬ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ