Rameshwaram Cafe: ಹೈದರಾಬಾದ್​ನಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆ ಹವಾ; ಸ್ಯಾಂಪಲ್ ತಿನಿಸಿಗೆ ಉಘೇ ಎಂದ ಜನರು; ಇಂದು ಅಧಿಕೃತ ಆರಂಭ

Bengaluru's popular eatery in Hyderabad: ಬೆಂಗಳೂರಿನಲ್ಲಿ ನಾಲ್ಕು ಔಟ್​ಲೆಟ್ ಹೊಂದಿರುವ ರಾಮೇಶ್ವರಂ ಕೆಫೆ ಈಗ (ಜ. 19) ಹೈದರಾಬಾದ್​ನಲ್ಲೂ ಆರಂಭವಾಗಿದೆ. ಜನವರಿ 14ರಿಂದ 16ರವರೆಗೆ ಕೆಫೆ ಉಚಿತವಾಗಿ ಆಹಾರಗಳ ಟ್ರಯಲ್ ನೀಡಿದ್ದು ಉತ್ತಮ ಸ್ಪಂದನೆ ಸಿಕ್ಕಿತ್ತು. ದಿವ್ಯಾ ಮತ್ತು ರಾಘವೇಂದ್ರ ರಾವ್ ಎಂಬ ಯುವ ದಂಪತಿ 2021ರಲ್ಲಿ ಬೆಂಗಳೂರಿನಲ್ಲಿ ಈ ಕೆಫೆ ಆರಂಭಿಸಿದ್ದರು.

Rameshwaram Cafe: ಹೈದರಾಬಾದ್​ನಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆ ಹವಾ; ಸ್ಯಾಂಪಲ್ ತಿನಿಸಿಗೆ ಉಘೇ ಎಂದ ಜನರು; ಇಂದು ಅಧಿಕೃತ ಆರಂಭ
ರಾಮೇಶ್ವರಂ ಕೆಫೆ
Follow us
|

Updated on:Jan 19, 2024 | 3:05 PM

ಬೆಂಗಳೂರು, ಜನವರಿ 19: ಎರಡೇ ವರ್ಷದಲ್ಲಿ ಸಿಲಿಕಾನ್ ಸಿಟಿಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ರಾಮೇಶ್ವರಂ ಕೆಫೆ (Rameshwaram Cafe) ಹೋಟೆಲ್ ಇದೀಗ ಹೈದರಾಬಾದ್​ನಲ್ಲೂ ಆರಂಭವಾಗಿದೆ. ಈ ಹೋಟೆಲ್​ನ ಇಡ್ಲಿ, ವಡೆ, ದೋಸೆ, ಕಾಫಿಯ ರುಚಿ ಹೈದರಾಬಾದಿಗರನ್ನು ಸೆಳೆಯುತ್ತಿದೆ. ಬೆಂಗಳೂರಿನಲ್ಲಿ ಹಾಸುಹೊಕ್ಕಾಗಿರುವ ಕೆಫೆ ಸಂಸ್ಕೃತಿ ಈಗ ಹೈದರಾಬಾದ್​ನಲ್ಲಿ ಬೇರೂರುತ್ತಿದ್ದು ಅದರ ಒಂದು ಮೈಲಿಗಲ್ಲಾಗಿ ರಾಮೇಶ್ವರಂ ಕೆಫೆಯ ಒಂದು ಘಟಕ ಹೈದರಾಬಾದ್​ನ ಮಾಧಾಪುರ್​ನಲ್ಲಿ ಶುರುವಾಗಿದೆ.

ಸ್ಯಾಂಪಲ್ ಆಹಾರಕ್ಕೆ ಮುಗಿಬಿದ್ದ ಹೈದರಾಬಾದಿಗರು

ರಾಮೇಶ್ವರಂ ಕೆಫೆ ಹೈದರಾಬಾದ್​ನಲ್ಲಿ ಉದ್ಘಾಟನೆ ಆಗುವುದಕ್ಕೂ ಮುನ್ನ ಜನವರಿ 14ರಿಂದ 16ರವರೆಗೆ ರಾಮೇಶ್ವರಂ ಕೆಫೆ ಉಚಿತ ಸ್ಯಾಂಪಲ್ ಟ್ರಯಲ್ ನಡೆಸಿತ್ತು. ನೂರಾರು ಜನರು ಹಾಗೂ ಫುಡ್ ಬ್ಲಾಗರ್​ಗಳು ಕೆಫೆಗೆ ಮುಗಿಬಿದ್ದಿದ್ದರು. ತುಪ್ಪದ ಪುಡಿ ಇಡ್ಲಿ, ತುಪ್ಪದ ಮಸಾಲ ದೋಸೆ, ಅನ್ನ ಸಾಂಬಾರ್ ಇತ್ಯಾದಿ ಆಹಾರಗಳಿಗೆ ಅಲ್ಲಿನ ಜನರು ಫಿದಾ ಆಗಿದ್ದು ವಿಶೇಷ.

ಇದನ್ನೂ ಓದಿ: Inspiring: ರೋಲೆಕ್ಸ್ ವಾಚ್ ಗೊತ್ತೆ? ಇದನ್ನು ಸ್ಥಾಪಿಸಿದವ ಕಡುಬಡವ, ನಿರ್ಗತಿಕ; ಇದು ವ್ಯವಹಾರ ಜಗತ್ತಿನ ಕೌತುಕ

2021ರಲ್ಲಿ ರಾಮೇಶ್ವರಂ ಕೆಫೆ ಬೆಂಗಳೂರಿನ ಎರಡು ಕಡೆ ಮೊದಲು ಸ್ಥಾಪನೆ ಆಯಿತು. ನೋಡನೋಡುತ್ತಿದ್ದಂತೆಯೇ ಕೆಫೆ ಬಹಳ ಜನಪ್ರಿಯವಾಗಿತ್ತು. ಜೆಪಿ ನಗರ, ಇಂದಿರಾ ನಗರ, ಬ್ರೂಕ್​ಫೀಲ್ಡ್ ಮತ್ತು ರಾಜಾಜಿನಗರದಲ್ಲಿ ಹೀಗೆ ರಾಮೇಶ್ವರಂ ಕೆಫೆಯ ನಾಲ್ಕು ಬ್ರ್ಯಾಂಚ್​ಗಳಿವೆ.

ಕರ್ನಾಟಕದವರು ಒಪ್ಪಿದರೆ ಎಲ್ಲರೂ ಒಪ್ಪಿದಂತೆ ಎನ್ನುವ ಮಾಲೀಕರು

ರಾಮೇಶ್ವರಂ ಕೆಫೆಯನ್ನು ಸ್ಥಾಪಿಸಿದವರು ದಿವ್ಯಾ ಮತ್ತು ರಾಘವೇಂದ್ರ ರಾವ್ ಎಂಬ ಯುವ ದಂಪತಿ. ದಿವ್ಯಾ ರಾಘವೇಂದ್ರ ರಾವ್ ಅವರು ಐಐಎಂ ಪದವೀಧರೆ, ಹಾಗು ಚಾರ್ಟರ್ಟ್ ಅಕೌಂಟೆಂಟ್ ಕೂಡ ಹೌದು. ಮನಿಕಂಟ್ರೋಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ದಿವ್ಯಾ ರಾಘವೇಂದ್ರ ಅವರು, ಉತ್ತಮ ಗುಣಮಟ್ಟದ ಆಹಾರ ಮತ್ತು ಸರಿಯಾದ ಸ್ಥಳ ಇದ್ದರೆ ಹೋಟೆಲ್​ಗಳು ಯಶಸ್ವಿಯಾಗಬಹುದು ಎಂದು ಹೇಳುತ್ತಾರೆ.

ಇದನ್ನೂ ಓದಿ: 30 ಸಾವಿರ ಹೊಸ ಬೆಡ್ ಸೇರಿಸುತ್ತಿವೆ ಖಾಸಗಿ ಆಸ್ಪತ್ರೆಗಳು; ಕಾರಣ ಕೊರೋನಾ ಅಲ್ಲ; ಏಳಿ ಎದ್ದೇಳಿ, ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯಿರಿ ಎನ್ನುತ್ತಿದ್ದಾರೆ ಈ ವೈದ್ಯ

‘ಕರ್ನಾಟಕದಲ್ಲಿ ನೀವು ಯಶಸ್ವಿಯಾದರೆ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಜಯಿಸಬಹುದು. ನಾವು ಬೆಂಗಳೂರಿನವರೇ ಆದ್ದರಿಂದ ಅಲ್ಲಿಯೇ ನಮ್ಮ ಬಿಸಿನೆಸ್ ಆರಂಭಕ್ಕೆ ಸೂಕ್ತ ಸ್ಥಳವಾಗಿತ್ತು. ನಮಗೆ ಈ ನಗರದ ವಾತಾವರಣ, ಸಂಸ್ಕೃತಿ ಎಲ್ಲವೂ ಚೆನ್ನಾಗಿ ತಿಳಿದಿತ್ತು. ಆದರೆ, ಉತ್ತಮ ಆರಂಭ ಪಡೆಯುವ ನಂಬಿಕೆ ಮಾತ್ರ ಬೇಕಿತ್ತು,’ ಎಂದು ದಿವ್ಯಾ ರಾಘವೇಂದ್ರ ರಾವ್ ಹೇಳುತ್ತಾರೆ.

ಅಂದಹಾಗೆ, ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯನ್ನು ದಿವ್ಯಾ ಮತ್ತು ರಾಘವೇಂದ್ರ ರಾವ್ ಆರಂಭಿಸಿದ್ದು ದಿಢೀರ್ ನಿರ್ಧಾರವಲ್ಲ. ದಶಕದ ಹಿಂದಿನಿಂದಲೂ ಅದಕ್ಕಾಗಿ ಪ್ಲಾನಿಂಗ್ ನಡೆದಿತ್ತಂತೆ. ಬಹಳ ವ್ಯವಸ್ಥಿತವಾಗಿ ತಿಂಡಿಗಳ ಆಯ್ಕೆ ಮಾಡಿದ್ದಾರೆ. ಬೆಂಗಳೂರಿನಲ್ಲಿರುವ ಎಲ್ಲಾ ನಾಲ್ಕು ರಾಮೇಶ್ವರಂ ಕೆಫೆ ಹೋಟೆಲ್​ಗಳಲ್ಲಿ ನಿತ್ಯವೂ ಮೂರರಿಂದ ನಾಲ್ಕು ಸಾವಿರ ಗ್ರಾಹಕರು ಬರುತ್ತಾರಂತೆ. ಈಗ ಹೈದರಾಬಾದ್​ನಲ್ಲೂ ಈ ಫಾಸ್ಟ್​ಫುಡ್ ಹೋಟೆಲ್ ಯಶಸ್ವಿಯಾಗುತ್ತದಾ ನೋಡಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Fri, 19 January 24

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?