AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಗ್ಯುಲರ್ ಬ್ಯಾಂಕಿಂಗ್ ಲೈಸೆನ್ಸ್ ಪಡೆಯಲು ಅರ್ಹ ಸ್ಮಾಲ್ ಫೈನಾನ್ಸ್ ಬ್ಯಾಂಕ್​ಗಳಿಗೆ ಆರ್​ಬಿಐ ಆಹ್ವಾನ

Small Finance Banks can become regular banks if meet certain criterias: ರೆಗ್ಯುಲರ್ ಬ್ಯಾಂಕ್ ಆಗಬಯಸುವ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಿಂದ ಆರ್​ಬಿಐ ಅರ್ಜಿ ಆಹ್ವಾನಿಸಿದೆ. 2019ರ ಡಿಸೆಂಬರ್​ನಲ್ಲಿ ಈ ಸಣ್ಣ ಬ್ಯಾಂಕುಗಳಿಗೆ ರೆಗ್ಯುಲರ್ ಬ್ಯಾಂಕ್ ಆಗಿ ಪರಿವರ್ತಿಸುವ ಅವಕಾಶವನ್ನು ಆರ್​ಬಿಐ ಒದಗಿಸಿತ್ತು. ಅದಕ್ಕೆ ಬೇಕಾದ ಮಾನದಂಡಗಳಿಗೆ ಬದ್ಧವಾಗಲು ಈ ಸಣ್ಣ ಬ್ಯಾಂಕುಗಳಿಗೆ ನಾಲ್ಕೈದು ವರ್ಷ ಕಾಲಾವಕಾಶವೂ ಇತ್ತು. ಈಗ ಅರ್ಜಿ ಹಾಕಬಹುದಾಗಿದೆ. ಕನಿಷ್ಠ ನಿವ್ವಳ ಮೌಲ್ಯ 1,000 ಕೋಟಿ ರೂ ಇರಬೇಕು ಎಂಬುದೂ ಸೇರಿದಂತೆ ನಾಲ್ಕೈ ದು ಪ್ರಮುಖ ಷರತ್ತುಗಳನ್ನು ಆರ್​ಬಿಐ ವಿಧಿಸಿದೆ.

ರೆಗ್ಯುಲರ್ ಬ್ಯಾಂಕಿಂಗ್ ಲೈಸೆನ್ಸ್ ಪಡೆಯಲು ಅರ್ಹ ಸ್ಮಾಲ್ ಫೈನಾನ್ಸ್ ಬ್ಯಾಂಕ್​ಗಳಿಗೆ ಆರ್​ಬಿಐ ಆಹ್ವಾನ
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 28, 2024 | 12:31 PM

Share

ನವದೆಹಲಿ, ಏಪ್ರಿಲ್ 28: ರೆಗ್ಯುಲರ್ ಬ್ಯಾಂಕ್ ಅಥವಾ ಸಾರ್ವತ್ರಿಕ ಬ್ಯಾಂಕ್ ಆಗಿ ಬದಲಾಗಲು ಸ್ಮಾಲ್ ಫೈನಾನ್ಸ್ ಬ್ಯಾಂಕ್​ಗಳಿಂದ (small finance bank) ಆರ್​ಬಿಐ ಅರ್ಜಿ ಆಹ್ವಾನಿಸಿದೆ. ಒಂದಷ್ಟು ಮಾನದಂಡಗಳಿಗೆ ತಾಳೆಯಾದರೆ ಈ ಸಣ್ಣ ಬ್ಯಾಂಕುಗಳು ರೆಗ್ಯುಲರ್ ಬ್ಯಾಂಕಿಂಗ್ ಲೈಸೆನ್ಸ್ ಪಡೆಯಬಹುದು. ನಿವ್ವಳ ಮೌಲ್ಯ ಕನಿಷ್ಠ ಒಂದು ಸಾವಿರ ಕೋಟಿ ರೂ ಇರುವುದು ಈ ಪ್ರಮುಖ ಮಾನದಂಡಗಳಲ್ಲಿ ಒಂದು. ಭಾರತದಲ್ಲಿ 10ಕ್ಕೂ ಹೆಚ್ಚು ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಿವೆ. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮೊದಲಾದವು ಇವೆ.

ರೆಗ್ಯುಲರ್ ಬ್ಯಾಂಕ್ ಆಗಲು ಸ್ಮಾಲ್ ಫೈನಾನ್ಸ್ ಬ್ಯಾಂಕ್​ಗಳಿಗೆ ನಿಗದಿ ಮಾಡಲಾಗಿರುವ ಪ್ರಮುಖ ಮಾನದಂಡಗಳಿವು…

  • ಸ್ಮಾಲ್ ಫೈನಾನ್ಸ್ ಬ್ಯಾಂಕು ಅಧಿಕೃತ ಷೇರು ವಿನಿಮಯ ಕೇಂದ್ರ ಅಥವಾ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಲಿಸ್ಟ್ ಆಗಿರಬೇಕು. ಅಂದರೆ ಬಿಎಸ್​ಇ ಅಥವಾ ಎನ್​ಎಸ್​ಇಯಲ್ಲಿ ಲಿಸ್ಟ್ ಆಗಿರಬೇಕು
  • ಹಿಂದಿನ ತ್ರೈಮಾಸಿಕ ಅವಧಿಯಲ್ಲಿ ಅದರ ನಿವ್ವಳ ಮೌಲ್ಯ 1,000 ಕೋಟಿ ರೂನಷ್ಟಾದರೂ ಇರಬೇಕು.
  • ಕಳೆದ ಎರಡು ಹಣಕಾಸು ವರ್ಷದಲ್ಲಿ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಒಟ್ಟು ಅನುತ್ಪಾದಕ ಆಸ್ತಿ ಅಥವಾ ಜಿಎನ್​ಪಿಎ ಶೇ. 3 ಮೀರಿರಬಾರದು. ನಿವ್ವಳ ಎನ್​ಪಿಎ ಶೇ. 1ಕ್ಕಿಂತ ಕಡಿಮೆ ಇರಬೇಕು.
  • ಕನಿಷ್ಠ ಐದು ವರ್ಷವಾದರೂ ಸಮಾಧಾನಕರ ಸಾಧನೆ ಹೊಂದಿರಬೇಕು.
  • ನಷ್ಟ ಭರಿಸುವಷ್ಟು ಸಾಮರ್ಥ್ಯವನ್ನು ಬಿಂಬಿಸುವಂತಹ ಸಿಆರ್​ಎಆರ್ ಅಥವಾ ಸಿಎಆರ್ (ಕ್ಯಾಪಿಟಲ್ ಅಡಿಕ್ವೆಸಿ ರೇಶಿಯೋ) ಸಮರ್ಪಕವಾಗಿರಬೇಕು.

ಇದನ್ನೂ ಓದಿ: ಭಾರತದಲ್ಲಿ ಗೃಹಸಾಲ ದುಂದು ವೆಚ್ಚವಾಗುತ್ತಿದೆ, ನಿಯಂತ್ರಣ ಮಾಡಲು ಬ್ಯಾಂಕ್​​ಗಳಿಗೆ ಆರ್​​ಬಿಐ ಎಚ್ಚರಿಕೆ

ಇನ್ನು, ಷೇರುಪಾಲುದಾರಿಕೆಯ ವಿಧಾನದ ಬಗ್ಗೆ ಆರ್​ಬಿಐನಲ್ಲಿ ಒಂದು ನಿಯಮ ಇದೆ. ಸ್ಮಾಲ್ ಫೈನಾನ್ಸ್ ಬ್ಯಾಂಕ್​ವೊಂದು ರೆಗ್ಯುಲರ್ ಬ್ಯಾಂಕ್ ಆಗಿ ಪರಿವರ್ತನೆ ಆಗುವಾಗ ಅದಕ್ಕೆ ಹೊಸ ಪ್ರೊಮೋಟರ್ಸ್ ಸೇರ್ಪಡೆಯಾಗುವಂತಿಲ್ಲ. ಅಥವಾ ಇರುವ ಪ್ರೊಮೋಟರ್ಸ್​ನಲ್ಲಿ ಬದಲಾವಣೆ ಮಾಡುವಂತಿಲ್ಲ.

ಇಲ್ಲಿ ಪ್ರೊಮೋಟರ್ಸ್ ಎಂದರೆ ಕಂಪನಿಯ ಸಂಸ್ಥಾಪಕ ವರ್ಗಕ್ಕೆ ಸೇರಿದವರು. ಅಂದರೆ ಮಾಲೀಕರಾಗಿರಬಹುದು. ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ನಿರ್ದಿಷ್ಟ ಪ್ರೊಮೋಟರ್ಸ್ ಇರಲೇಬೇಕೆಂದು ಕಡ್ಡಾಯ ಏನಿರುವುದಿಲ್ಲ.

2019ರಲ್ಲೇ ಸ್ಮಾಲ್ ಫೈನಾನ್ಸ್ ಬ್ಯಾಂಕ್​ಗಳಿಗೆ ಯೂನಿವರ್ಸಲ್ ಬ್ಯಾಂಕ್ ಆಗಿ ಪರಿವರ್ತನೆಯಾಗಲು ದಾರಿ ತೆರೆಯಲಾಗಿತ್ತು. ಅದಕ್ಕೆ ಬೇಕಾದ ಮಾನದಂಡಗಳಿಗೆ ಬದ್ಧವಾಗಲು ಕಾಲಾವಕಾಶವನ್ನೂ ಕೊಡಲಾಗಿದೆ. ಈಗ ಅರ್ಹ ಎಸ್​ಎಫ್​ಬಿಗಳು ರೆಗ್ಯುಲರ್ ಬ್ಯಾಂಕ್ ಆಗಿ ಅರ್ಜಿ ಹಾಕಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ