AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Economy: ಜಾಗತಿಕ ಅನಿಶ್ಚಿತತೆ ಮಧ್ಯೆಯೂ ಭಾರತದ ಆರ್ಥಿಕತೆ ಅತ್ಯುತ್ತಮ ಬೆಳವಣಿಗೆ: ಆರ್​ಬಿಐ ಅಂದಾಜು

Indian economic growth projection: ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತ ಈ ವರ್ಷವೂ ಅತಿವೇಗದ ಬೆಳವಣಿಗೆ ದಾಖಲಿಸಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಜಾಗತಿಕ ಅನಿಶ್ಚಿತ ಪರಿಸ್ಥಿತಿ ನಡುವೆಯೂ ಭಾರತದ ಆರ್ಥಿಕತೆಯು ಇತರ ದೇಶಗಳಿಗಿಂತ ಉತ್ತಮವಾಗಿ ಸಾಗಲಿದೆ ಎಂದು ಆರ್​ಬಿಐ ಹೇಳಿದೆ. ನ್ಯಾಷನಲ್ ಮ್ಯಾನುಫ್ಯಾಕ್ಚರಿಂಗ್ ಮಿಷನ್, ಅನುಭೋಗ ಹೆಚ್ಚಳ, ಬಂಡವಾಳ ವೆಚ್ಚ ಹೆಚ್ಚಳ ಇತ್ಯಾದಿ ಅಂಶಗಳು ಭಾರತದ ಆರ್ಥಿಕತೆಗೆ ಸಹಕಾರಿಯಾಗಲಿವೆ ಎಂದೆನ್ನಲಾಗಿದೆ.

Indian Economy: ಜಾಗತಿಕ ಅನಿಶ್ಚಿತತೆ ಮಧ್ಯೆಯೂ ಭಾರತದ ಆರ್ಥಿಕತೆ ಅತ್ಯುತ್ತಮ ಬೆಳವಣಿಗೆ: ಆರ್​ಬಿಐ ಅಂದಾಜು
ಆರ್ಥಿಕತೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 29, 2025 | 2:05 PM

Share

ನವದೆಹಲಿ, ಮೇ 29: ಕಳೆದ ಕೆಲ ವರ್ಷಗಳಿಂದ ವಿಶ್ವದ ದೊಡ್ಡ ಆರ್ಥಿಕತೆಗಳ ಪೈಕಿ ಭಾರತ ಅತಿ ವೇಗದ ಬೆಳಣಿಗೆ ದಾಖಲಿಸುತ್ತಾ ಬಂದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲೂ (2025-26) ಈ ಓಟ ಮುಂದುವರಿಯಲಿದೆ ಎಂದು ಬಹಳಷ್ಟು ತಜ್ಞರು ಹೇಳುತ್ತಿದ್ದಾರೆ. ಆರ್ಥಿಕ ಅನಿಶ್ಚಿತ ಸ್ಥಿತಿ ಸೇರಿದಂತೆ ಕೆಲ ಜಾಗತಿಕ ವಿದ್ಯಮಾನಗಳಿಂದಾಗಿ ಈ ವರ್ಷ ಜಾಗತಿಕವಾಗಿ ಆರ್ಥಿಕತೆಯ ಬೆಳವಣಿಗೆ ವೇಗ (GDP growth rate) ಕಡಿಮೆ ಆಗುತ್ತಿದೆ. ಈ ಮಧ್ಯೆಯೂ ಭಾರತದ ಅತಿವೇಗದ ಬೆಳವಣಿಗೆಯ ಸ್ಥಾನ ಕುಂದದು ಎಂದು ಆರ್​​ಬಿಐ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.

ಕಳೆದ ವರ್ಷ (2024-25) ಭಾರತದ ಜಿಡಿಪಿ ಶೇ. 6.3ರಿಂದ ಶೇ. 6.5ರಷ್ಟು ಹೆಚ್ಚಳ ಕಂಡಿರಬಹುದು ಎನ್ನುವ ಅಂದಾಜಿದೆ. ಇದು ಸಾಧಾರಣ ಎನಿಸಿದರೂ ಇತರ ದೊಡ್ಡ ಆರ್ಥಿಕತೆಗಳಿಗೆ ಹೋಲಿಸಿದರೆ ಹೆಚ್ಚಿದೆ. ನಾಳೆ, ಶುಕ್ರವಾರ ಸರ್ಕಾರದಿಂದ ಕೊನೆಯ ಕ್ವಾರ್ಟರ್​​ನ ಜಿಡಿಪಿ ದತ್ತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ಬೌದ್ಧ ದೇಶಗಳಿಗೆ ರಫ್ತಾಗಲಿದೆ ಕಾಲಾನಮಕ್ ಅಕ್ಕಿ; ಬುದ್ಧನಿಗೆ ಸಂಬಂಧಿಸಿದ ಈ ಕಪ್ಪು ಅಕ್ಕಿಯ ವಿಶೇಷತೆ ಏನು ಗೊತ್ತಾ?

ಇದನ್ನೂ ಓದಿ
Image
ರಫ್ತಿಗೆ ಸಿದ್ಧವಾಗುತ್ತಿರುವ ಬುದ್ಧ ಅಕ್ಕಿ; ಏನಿದರ ವಿಶೇಷತೆ?
Image
15,441 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ: 5,277 ಉದ್ಯೋಗ ಸೃಷ್ಟಿ
Image
ಏಪ್ರಿಲ್​​ನಲ್ಲಿ ಔದ್ಯಮಿಕ ಉತ್ಪಾದನೆ ಸೂಚ್ಯಂಕ ಶೇ. 2.7 ಹೆಚ್ಚಳ
Image
ಈ ವರ್ಷ ಹೊಸ ಮೈಲಿಗಲ್ಲು ಮುಟ್ಟುತ್ತಾ ಭಾರತದ ರಫ್ತು?

ಐಸಿಐಸಿಐ ಬ್ಯಾಂಕ್​ನ ಆರ್ಥಿಕತ ತಜ್ಞರು ಮಾಡಿದ ಅಂದಾಜು ಪ್ರಕಾರ ಜನವರಿಯಿಂದ ಏಪ್ರಿಲ್​​ ವರೆಗಿನ ಕ್ವಾರ್ಟರ್​​ನ್ಲಲಿ ಭಾರತದ ಜಿಡಿಪಿ ಶೇ. 7ರಷ್ಟು ಹೆಚ್ಚಾಗಿರಬಹುದು. 2024-25ರಲ್ಲಿ ಒಟ್ಟಾರೆ ಆರ್ಥಿಕತೆಯು ಶೇ. 6.3ರಷ್ಟು ಹೆಚ್ಚಬಹುದು ಎಂದು ಈ ವರದಿಯಲ್ಲಿ ನಿರೀಕ್ಷಿಸಲಾಗಿದೆ.

2025-26ರಲ್ಲಿ ಭಾರತದ ಆರ್ಥಿಕತೆ ಬೆಳವಣಿಗೆ ಇನ್ನಷ್ಟು ವೇಗ?

ಆರ್​​ಬಿಐನ ವಾರ್ಷಿಕ ವರದಿಯು 2025-26ರ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಹೆಚ್ಚು ಆಶಾದಾಯಕವಾಗಿದೆ. ಅನುಭೋಗ ಬೇಡಿಕೆ (consumption demand) ಮತ್ತೆ ಕುದುರಿರುವುದು, ಅಂದರೆ, ಜನರು ಮಾಡುತ್ತಿರುವ ವೆಚ್ಚವು ಹೆಚ್ಚಾಗಿರುವುದು, ಸರ್ಕಾರದಿಂದಲೂ ಬಂಡವಾಳ ವೆಚ್ಚ (capital expenditure) ಹೆಚ್ಚಾಗಲಿರುವುದು ಭಾರತದ ಆರ್ಥಿಕತೆಯನ್ನು ಈ ವರ್ಷ ಬಲಪಡಿಸಬಹುದು ಎಂದು ಈ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ನ್ಯಾಷನಲ್ ಮ್ಯಾನುಫ್ಯಾಕ್ಚರಿಂಗ್ ಮಿಷನ್​​ನಿಂದ ಮತ್ತಷ್ಟು ಬಲ

2025-26ರ ಬಜೆಟ್​​ನಲ್ಲಿ ಘೋಷಿಸಲಾಗಿದ್ದ ನ್ಯಾಷನಲ್ ಮ್ಯಾನುಫ್ಯಾಕ್ಚರಿಂಗ್ ಮಿಷನ್ ಭಾರತದ ತಯಾರಿಕಾ ಕ್ಷೇತ್ರಕ್ಕೆ ದೊಡ್ಡ ಶಕ್ತಿ ಸಿಗಲಿದ್ದು, ಉದ್ಯೋಗಾವಕಾಶಗಳೂ ಹೆಚ್ಚಲಿವೆ ಎಂದು ಹೇಳಿರುವ ಆರ್​​ಬಿಐ ವರದಿಯು, ಭಾರತ ವಿವಿಧ ದೇಶಗಳೊಂದಿಗೆ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದವನ್ನೂ ಸ್ವಾಗತಿಸಿದೆ.

ಇದನ್ನೂ ಓದಿ: ಏಪ್ರಿಲ್​​ನಲ್ಲಿ ಐಐಪಿ ಶೇ. 2.7 ಹೆಚ್ಚಳ; ನಿರೀಕ್ಷೆಗಿಂತಲೂ ಹೆಚ್ಚು ಏರಿಕೆ ಕಂಡ ಔದ್ಯಮಿಕ ಉತ್ಪಾದನೆ

‘ಭಾರತವು ವಿವಿಧ ದೇಶಗಳೊಂದಿಗೆ 14 ಮುಕ್ತ ವ್ಯಾಪಾರ ಒಪ್ಪಂದ ಹಾಗೂ 6 ಆದ್ಯತಾ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಇನ್ನೂ ಕೆಲ ದೇಶಗಳೊಂದಿಗೆ ಹೊಸ ವ್ಯಾಪಾರ ಒಪ್ಪಂದಗಳನ್ನು ಅಂತಿಮಗೊಳಿಸಲು ಮಾತುಕತೆ ನಡೆಯುತ್ತಿದೆ. ಇವೆಲ್ಲವೂ ಕೂಡ ಭಾರತದ ವ್ಯಾಪಾರ ವಹಿವಾಟು ಚಟುವಟಿಕೆಯನ್ನು ತೀವ್ರಗೊಳಿಸಲಿದೆ’ ಎಂದು ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!