AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI: 2,000 ರೂ ನೋಟು ಇನ್ನೂ ಇದೆಯಾ? ಆರ್​ಬಿಐ ಕಚೇರಿಗೆ ಹೋಗದೇ ಹಣ ವಿನಿಮಯ ಸಾಧ್ಯ; ಇಲ್ಲಿದೆ ಮಾರ್ಗ

How To Exchange Rs 2,000 Notes: ಸರ್ಕಾರ 2,000 ರೂ ನೋಟನ್ನು ಚಲಾವಣೆಯಿಂದ ಹಿಂಪಡೆದ ಬಳಿಕ ಹೆಚ್ಚಿನ ನೋಟುಗಳು ಮರಳಿವೆ. ಈಗಲೂ ಕೂಡ ಶೇ. 2ಕ್ಕಿಂತ ಹೆಚ್ಚು ನೋಟು ವಿನಿಮಯ ಆಗಬೇಕಿದೆ. ಆರ್​ಬಿಐ ಕಚೇರಿಗಳಲ್ಲಿ ಮಾತ್ರ ಸದ್ಯಕ್ಕೆ ನೋಟು ವಿನಿಮಯಕ್ಕೆ ಅವಕಾಶ ಇರುವುದು. ಅನೇಕ ಆರ್​ಬಿಐ ಕಚೇರಿಗಳಲ್ಲಿ ಇದಕ್ಕಾಗಿ ಉದ್ದುದ್ದ ಕ್ಯೂ ಇರುವುದು ಕಂಡುಬಂದಿದೆ. ಇದೇ ವೇಳೆ, ಅಂಚೆ ಕಚೇರಿ ಮೂಲಕ 2,000 ರೂ ನೋಟು ವಿನಿಮಯ ಮಾಡಿಕೊಳ್ಳುವ ಅವಕಾಶದ ಬಗ್ಗೆ ಹೆಚ್ಚಿನ ಜನಕ್ಕೆ ತಿಳಿದಿಲ್ಲ.

RBI: 2,000 ರೂ ನೋಟು ಇನ್ನೂ ಇದೆಯಾ? ಆರ್​ಬಿಐ ಕಚೇರಿಗೆ ಹೋಗದೇ ಹಣ ವಿನಿಮಯ ಸಾಧ್ಯ; ಇಲ್ಲಿದೆ ಮಾರ್ಗ
2,000 ರೂ ನೋಟು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 23, 2023 | 7:23 PM

Share

ಬೆಂಗಳೂರು, ನವೆಂಬರ್ 23: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಎರಡು ಸಾವಿರ ರೂ ಮುಖಬೆಲೆಯ ನೋಟನ್ನು (Rs 2,000 Note) ಚಲಾವಣೆಯಿಂದ ಹಿಂಪಡೆದಿತ್ತು. ಈ ನೋಟುಗಳ ವಿನಿಮಯಕ್ಕೆ ಕಾಲಾವಕಾಶ ವಿಸ್ತರಿಸಲಾಗುತ್ತಲೇ ಇದೆ. ಆದರೆ ಎಲ್ಲಾ ಬ್ಯಾಂಕುಗಳಲ್ಲಿ ನೋಟು ವಿನಿಮಯಕ್ಕೆ ಇದ್ದ ಅವಕಾಶ ಈಗ ತಪ್ಪಿದೆ. ಈಗ ಆರ್​ಬಿಐನ ವಿವಿಧ ಕಚೇರಿಗಳಲ್ಲಿ ಮಾತ್ರವೇ 2,000 ರೂ ನೋಟು ವಿನಿಮಯಕ್ಕೆ ಅವಕಾಶ ಇದೆ. ಚಲಾವಣೆಯಲ್ಲಿದ್ದ 2,000 ರೂ ನೋಟುಗಳ ಪೈಕಿ ಶೇ. 3ರಷ್ಟು ನೋಟು ಇನ್ನೂ ಹಿಂದಿರುಗಿಲ್ಲ. ಹೀಗಾಗಿ, ನೂರಾರು ಕೋಟಿ ರೂ ಮೊತ್ತದ ಈ ನೋಟುಗಳು ಬರಬೇಕಿದೆ. ಅವನ್ನು ಸಂಪೂರ್ಣವಾಗಿ ಮರಳಿ ಪಡೆಯಲು ಆರ್​ಬಿಐ ವಿವಿಧ ಮಾರ್ಗಗಳನ್ನು ಒದಗಿಸುತ್ತಿದೆ. ಇದೀಗ ಪೋಸ್ಟ್ ಆಫೀಸ್​ಗೆ ಹೋಗಿಯೂ ನೀವು ನೋಟು ವಿನಿಮಯ ಮಾಡಬಹುದು. ಅದರ ವಿವರ ಇಲ್ಲಿದೆ:

ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿ ಆರ್​ಬಿಐನ ಶಾಖಾ ಕಚೇರಿ ಇದೆ. ದೇಶಾದ್ಯಂತ ಈ ರೀತಿ 19 ನಗರಗಳಲ್ಲಿ ಆರ್​ಬಿಐ ಕಚೇರಿಗಳಿವೆ. ಅಲ್ಲಿಗೆ ಹೋಗಿ 2,000 ರೂ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಒಮ್ಮೆಗೆ 10 ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಅಂದರೆ 20,000 ರೂ ಮೊತ್ತದವರೆಗಿನ ನೋಟುಗಳನ್ನು ಎಕ್ಸ್​ಚೇಂಜ್ ಮಾಡಿಕೊಳ್ಳಬಹುದು. ಈ ರೀತಿ ಮಾಡಲು ಆಧಾರ್ ಕಾರ್ಡ್ ದಾಖಲೆ ಸಲ್ಲಿಸುವುದು ಕಡ್ಡಾಯವಾಗಿದೆ.

ಒಂದು ವೇಳೆ, ಆರ್​ಬಿಐ ಕಚೇರಿಗೆ ಹೋಗಲು ಸಾಧ್ಯವಾಗದವರು ತಮ್ಮ ಸಮೀಪದ ಅಂಚೆ ಕಚೇರಿಗೆ ಹೋಗಿ ಪೋಸ್ಟ್ ಮೂಲಕವೂ ನೋಟು ವಿನಿಮಯ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಡಿಸೆಂಬರ್​ನಲ್ಲಿ ಬ್ಯಾಂಕುಗಳಿಗೆ 18 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ರಜೆ? 6 ದಿನ ಬ್ಯಾಂಕ್ ಮುಷ್ಕರದ ಬರೆ

ಈ ಪಟ್ಟಿಯಲ್ಲಿ ಯಾವುದಾದರೂ ಒಂದು ದಾಖಲೆ ಬೇಕು

  • ಆಧಾರ್ ಕಾರ್ಡ್
  • ಡ್ರೈವಿಂಗ್ ಲೈಸೆನ್ಸ್
  • ವೋಟರ್ ಐಡಿ
  • ಪಾಸ್​ಪೋರ್ಟ್
  • ನರೇಗಾ ಕಾರ್ಡ್
  • ಪ್ಯಾನ್ ಕಾರ್ಡ್
  • ಸರ್ಕಾರ ಯಾವುದೇ ಇಲಾಖೆಯಿಂದ ಒದಗಿಸಿದ ಗುರುತಿನ ಕಾರ್ಡ್

ಈ ಮೇಲಿನ ಯಾವುದಾದರೂ ಒಂದು ದಾಖಲೆಯ ಜೊತೆಗೆ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್ ಅಥವಾ ಪಾಸ್​ಬುಕ್​ನ ಮೊದಲ ಪುಟದ ಪ್ರತಿ ಇಟ್ಟುಕೊಂಡಿರಿ.

ಇದನ್ನೂ ಓದಿ: ರೂ 2,000 ನೋಟು ಇನ್ನೂ ಇವೆಯಾ?; ಕೆಲವೇ ಕಡೆ ನೋಟು ವಿನಿಮಯಕ್ಕೆ ಇನ್ನೂ ಇದೆ ಅವಕಾಶ; ಇಲ್ಲಿದೆ ಡೀಟೇಲ್ಸ್

2,000 ರೂ ನೋಟು ವಿನಿಮಯಕ್ಕೆ ಆರ್​ಬಿಐ ಒಂದು ಪ್ರತ್ಯೇಕ ಫಾರ್ಮ್ ರೂಪಿಸಿದೆ. ಆ ಫಾರ್ಮ್ ಭರ್ತಿ ಮಾಡಿ, ಮೇಲೆ ತಿಳಿಸಿದ ದಾಖಲೆಗಳನ್ನು ಅದರ ಜೊತೆ ಲಗತ್ತಿಸಿ, ಆರ್​ಬಿಐನ 19 ಇಷ್ಯೂ ಆಫೀಸ್​ಗಳಲ್ಲಿ ಯಾವುದಾದರೂ ಒಂದಕ್ಕೆ ಪೋಸ್ಟ್ ಮೂಲಕ ಕಳುಹಿಸಬೇಕು. ಈ ಅರ್ಜಿಗಳನ್ನು ಆರ್​ಬಿಐ ಕಚೇರಿಯಲ್ಲಿ ಪರಿಶೀಲಿಸಲಾಗುತ್ತದೆ. ಬಳಿಕ ನಿಗದಿತ ಬ್ಯಾಂಕ್ ಖಾತೆಗೆ ಅಷ್ಟು ಹಣವನ್ನು ಜಮೆ ಮಾಡಲಾಗುತ್ತದೆ.

ಆರ್​ಬಿಐ ಕಚೇರಿಗಳಲ್ಲಿ ಈಗ 2,000 ರೂ ನೋಟುಗಳ ವಿನಿಮಯಕ್ಕೆ ಕ್ಯೂ ಹೆಚ್ಚಿರುವುದರಿಂದ ಅಂಚೆ ಕಚೇರಿ ಮಾರ್ಗದ ಅವಕಾಶವನ್ನು ಒದಗಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಚುನಾವಣಾ ಅಯೋಗದ ವಿರುದ್ಧ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ
ಚುನಾವಣಾ ಅಯೋಗದ ವಿರುದ್ಧ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ
ನಿಮ್ಮನ್ನೂ ದೇವೇಗೌಡ್ರು ಉಚ್ಛಾಟಿಸಿದ್ರು: ಸಿದ್ದರಾಮಯ್ಯಗೆ ಯತ್ನಾಳ್ ಚಮಕ್
ನಿಮ್ಮನ್ನೂ ದೇವೇಗೌಡ್ರು ಉಚ್ಛಾಟಿಸಿದ್ರು: ಸಿದ್ದರಾಮಯ್ಯಗೆ ಯತ್ನಾಳ್ ಚಮಕ್
ಸುಜಾತ ಭಟ್ ಗೆ ಮಹೇಶ್ ತಿಮರೋಡಿ ಕೆಲದಿನ ಆಶ್ರಯ ನೀಡಿದ್ದರು: ಜಯಂತ್
ಸುಜಾತ ಭಟ್ ಗೆ ಮಹೇಶ್ ತಿಮರೋಡಿ ಕೆಲದಿನ ಆಶ್ರಯ ನೀಡಿದ್ದರು: ಜಯಂತ್
ರಸ್ತೆ ಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಮೇಲೆ ಹತ್ತಿ ಎಳೆದುಕೊಂಡು ಹೋದ ಕಾರು!
ರಸ್ತೆ ಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಮೇಲೆ ಹತ್ತಿ ಎಳೆದುಕೊಂಡು ಹೋದ ಕಾರು!
ಕೆಎಸ್​ಸಿಎಗೆ ಪರವಾನಗಿ ಇರದಿದ್ದರೆ ಡಿಸಿಎಂ ಹೋಗಿದ್ದು ಯಾಕೆ? ಅಶೋಕ
ಕೆಎಸ್​ಸಿಎಗೆ ಪರವಾನಗಿ ಇರದಿದ್ದರೆ ಡಿಸಿಎಂ ಹೋಗಿದ್ದು ಯಾಕೆ? ಅಶೋಕ
ನಿಯಮಗಳನ್ನು ಉಲ್ಲಂಘಿಸಿ ತಿಮರೋಡಿಯವರನ್ನು ಬಂಧಿಸಲಾಗಿದೆ: ಮಟ್ಟಣ್ಣನವರ್
ನಿಯಮಗಳನ್ನು ಉಲ್ಲಂಘಿಸಿ ತಿಮರೋಡಿಯವರನ್ನು ಬಂಧಿಸಲಾಗಿದೆ: ಮಟ್ಟಣ್ಣನವರ್