Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಹಸ್ರ ಸಾಧನೆ; ಸೆಮಿಕಂಡಕ್ಟರ್ ಮೆಮೊರಿ ಚಿಪ್ ತಯಾರಿಸಿದ ಮೊದಲ ಭಾರತೀಯ ಕಂಪನಿ ಎಂಬ ದಾಖಲೆ

Sahasra Semiconductors: ರಾಜಸ್ಥಾನ ಮೂಲದ ಸಹಸ್ರ ಸೆಮಿಕಂಡಕ್ಟರ್ಸ್ ಕಂಪನಿ ಇತಿಹಾಸ ಸೃಷ್ಟಿಸಿದೆ. ಅಮೆರಿಕದ ಸೆಮಿಕಂಡಕ್ಟರ್ ದೈತ್ಯ ಮೈಕ್ರೋನ್​ಗಿಂತ ಮುಂಚೆ ಭಾರತದಲ್ಲಿ ಮೆಮೊರಿ ಚಿಪ್ ಉತ್ಪಾದನೆ ಮಾಡಿ ಸೈ ಎನಿಸಿದೆ. ರಾಜಸ್ಥಾನದ ಭಿವಾಡಿಯಲ್ಲಿ ಅಕ್ಟೋಬರ್ ಮೊದಲ ವಾರದಲ್ಲಿ ಅದರ ಹೊಸ ಸೆಮಿಕಂಡಕ್ಟರ್ ಉತ್ಪಾದನಾ ಘಟಕದಲ್ಲಿ ಚಿಪ್​ಗಳನ್ನು ತಯಾರಿಸುವ ಕೆಲಸ ಆರಂಭವಾಗಿತ್ತು. ಈಗಾಗಲೇ ಮೈಕ್ರೋ ಎಸ್​ಡಿ ಕಾರ್ಡ್​ಗಳನ್ನು ವಿವಿದ ಇ ಕಾಮರ್ಸ್ ಪ್ಲಾಟ್​ಫಾರ್ಮ್​ಗಳಿಗೆ ಸರಬರಾಜು ಮಾಡಲಾಗಿದೆ.

ಸಹಸ್ರ ಸಾಧನೆ; ಸೆಮಿಕಂಡಕ್ಟರ್ ಮೆಮೊರಿ ಚಿಪ್ ತಯಾರಿಸಿದ ಮೊದಲ ಭಾರತೀಯ ಕಂಪನಿ ಎಂಬ ದಾಖಲೆ
ಮೆಮೊರಿ ಚಿಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 29, 2023 | 11:36 AM

ಜೈಪುರ್, ಅಕ್ಟೋಬರ್ 29: ರಾಜಸ್ಥಾನ ಮೂಲದ ಸಹಸ್ರ ಸೆಮಿಕಂಡಕ್ಟರ್ಸ್ ಕಂಪನಿ ಇತಿಹಾಸ ಸೃಷ್ಟಿಸಿದೆ. ಸೆಮಿಕಂಡಕ್ಟರ್ ಮೆಮೋರಿ ಚಿಪ್ (Memory Chip) ಉತ್ಪಾದನೆ ಮಾಡಿದ ಮಾರುಕಟ್ಟೆಗೆ ಸಾಗಿಸಿದ ಮೊದಲ ಭಾರತೀಯ ಕಂಪನಿ ಎಂಬ ದಾಖಲೆಗೆ ಅದು ಬಾಜನವಾಗಿದೆ. ಅಮೆರಿಕದ ಸೆಮಿಕಂಡಕ್ಟರ್ ದೈತ್ಯ ಮೈಕ್ರೋನ್​ಗಿಂತ ಮುಂಚೆ ಭಾರತದಲ್ಲಿ ಇದು ಉತ್ಪಾದನೆ ಮಾಡಿ ಸೈ ಎನಿಸಿದೆ. ರಾಜಸ್ಥಾನದ ಭಿವಾಡಿಯಲ್ಲಿ (Bhiwadi) ಅಕ್ಟೋಬರ್ ಮೊದಲ ವಾರದಲ್ಲಿ ಅದರ ಹೊಸ ಸೆಮಿಕಂಡಕ್ಟರ್ ಉತ್ಪಾದನಾ ಘಟಕದಲ್ಲಿ ಚಿಪ್​ಗಳನ್ನು ತಯಾರಿಸುವ ಕೆಲಸ ಆರಂಭವಾಗಿತ್ತು. ಈಗಾಗಲೇ ಮೈಕ್ರೋ ಎಸ್​ಡಿ ಕಾರ್ಡ್​ಗಳನ್ನು (Micro SD) ವಿವಿದ ಇ ಕಾಮರ್ಸ್ ಪ್ಲಾಟ್​ಫಾರ್ಮ್​ಗಳಿಗೆ ಸರಬರಾಜು ಮಾಡಲಾಗಿದೆ.

‘ಮೇಡ್ ಇನ್ ಇಂಡಿಯಾ ಮೈಕ್ರೋ ಎಸ್​ಡಿ ಕಾರ್ಡ್​ಗಳನ್ನು ಮಾರಿದ ಮೊದಲ ಕಂಪನಿ ಎನಿಸಿದ್ದೇವೆ. ಇಕಾಮರ್ಸ್ ಪ್ಲಾಟ್​​ಫಾರ್ಮ್​ಗಳಲ್ಲಿ ನಮಗೆ ಸಿಕ್ಕಿದ ಸ್ಪಂದನೆ ಅದ್ವಿತೀಯವಾದುದು,’ ಎಂದು ಸಹಸ್ರ ಗ್ರೂಪ್​ನ ಮ್ಯಾನೇಜಿಂಗ್ ಡೈರೆಕ್ಟರ್ ಅಮೃತ್ ಮನ್ವಾನಿ ಹೇಳಿದ್ದಾರೆ.

ಭಿವಾಡಿಯಲ್ಲಿ ಇರುವ ಸಹಸ್ರ ಸೆಮಿಕಂಡಕ್ಟರ್ ಘಟಕದಲ್ಲಿ ಸದ್ಯ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿಲ್ಲ. ಇನ್ನೆರಡು ತಿಂಗಳಲ್ಲಿ ಶೇ. 30ರಷ್ಟು ಸಾಮರ್ಥ್ಯದಲ್ಲಿ ಉತ್ಪಾದನೆ ನಡೆಯುವ ನಿರೀಕ್ಷೆ ಇದೆ. ಮುಂದಿನ ಆರೇಳು ತಿಂಗಳಲ್ಲಿ ಪೂರ್ಣ ಸಾಮರ್ಥ್ಯದಲ್ಲಿ ಉತ್ಪಾದನೆ ನಡೆಸಲು ಗುರಿ ಇಡಲಾಗಿದೆ.

ಇದನ್ನೂ ಓದಿ: ವಿಸ್ಟ್ರಾನ್ ಘಟಕದಲ್ಲಿ ಟಾಟಾ ಕಾರ್ಯಾಚರಣೆ ಅಧಿಕೃತ; ಮೊದಲ ಬಾರಿಗೆ ಭಾರತೀಯ ಕಂಪನಿಯಿಂದ ಆ್ಯಪಲ್ ಐಫೋನ್ ತಯಾರಿಕೆ

ಮೊದಲ ಹಂತದಲ್ಲಿ ಮೈಕ್ರೋ ಎಸ್​ಡಿ ಕಾರ್ಡ್​ಗಳನ್ನು ತಯಾರಿಸಲಾಗುತ್ತದೆ. ಎರಡನೇ ಹಂತದಲ್ಲಿ ಇಂಟರ್ನಲ್ ಮೆಮೊರಿ ಚಿಪ್​ನಂತರ ಅಡ್ವಾನ್ಸ್ಡ್ ಪ್ಯಾಕೇಜಿಂಗ್ ನಡೆಯಲಿದೆ.

ಗುಜರಾತ್​ನಲ್ಲಿ ಮೈಕ್ರೋನ್ ಘಟಕ

ಅಮೆರಿಕದ ಮೈಕ್ರೋನಾನ್ ಸಂಸ್ಥೆ ಗುಜರಾತ್​ನಲ್ಲಿ ಹೊಸ ಚಿಪ್ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದೆ. ಅದಕ್ಕಾಗಿ 825 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಇಲ್ಲಿ DRAM and NAND ಚಿಪ್​ಗಳನ್ನು ತಯಾರಿಸಲಾಗುತ್ತದೆ. 2024ರ ಅಂತ್ಯದೊಳಗೆ ಉತ್ಪಾದನೆ ಶುರುವಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಅಪ್ಲೈಡ್ ಮೆಟೀರಿಯಲ್ಸ್​ನಿಂದ ಹೊಸ ಎಂಜಿನಿಯರಿಂಗ್ ಸೆಂಟರ್…

ಅಮೆರಿಕದ ಸೆಮಿಕಂಡಕ್ಟರ್ ಕಂಪನಿ ಅಪ್ಲೈಡ್ ಮೆಟೀರಿಯಲ್ಸ್ ಮುಂದಿನ ನಾಲ್ಕು ವರ್ಷಾದ್ಯಂತ ಭಾರತದಲ್ಲಿ ಒಟ್ಟು 400 ಮಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡಲಿದೆ. ಬೆಂಗಳೂರಿನಲ್ಲಿ ಹೊಸ ಎಂಜಿನಿಯರಿಂಗ್ ಸೆಂಟರ್ ತೆರೆಯಲಿದೆ.

ಇದನ್ನೂ ಓದಿ: ಭಾರತದಲ್ಲಿ ಎಎಂಡಿಯಿಂದ 400 ಮಿಲಿಯನ್ ಡಾಲರ್ ಹೂಡಿಕೆ; ಬೆಂಗಳೂರಿನಲ್ಲಿ ಅತಿದೊಡ್ಡ ಚಿಪ್ ಡಿಸೈನ್ ಸೆಂಟರ್: ಸಚಿವ ಎ ವೈಷ್ಣವ್ ಘೋಷಣೆ

ಗೂಗಲ್​ನ ಮೇಡ್ ಇನ್ ಇಂಡಿಯಾ ಟೆನ್ಸಾರ್ ಚಿಪ್

ಗೂಗಲ್​ನ ಪಿಕ್ಸೆಲ್ ಸ್ಮಾರ್ಟ್​ಫೋನ್​ಗಳಿಗೆ ಮುಂದಿನ ದಿನಗಳಲ್ಲಿ ಮೇಡ್ ಇನ್ ಇಂಡಿಯಾ ಟೆನ್ಸಾರ್ ಚಿಪ್​ಗಳ (tensor chip) ಅಳವಡಿಕೆ ಆಗಲಿದೆ. ಭಾರತದಲ್ಲಿ ಡಿಸೈನ್ ಮಾಡಲಾದ ಟೆನ್ಸಾರ್ ಚಿಪ್​ಗಳ ಹೊಸ ಆವೃತ್ತಿಯನ್ನು ಗೂಗಲ್ ಇತ್ತೀಚೆಗೆ ಬಿಡುಗಡೆ ಮಾಡಿತ್ತು.

ಇನ್ನು, ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ (ಎಎಂಡಿ) ಐದು ವರ್ಷದಲ್ಲಿ 400 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಬೆಂಗಳೂರಿನಲ್ಲಿ ಎಎಂಡಿಯ ಅತಿದೊಡ್ಡ ಡಿಸೈನ್ ಘಟಕ ಸಿದ್ಧವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ