AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI: ಎಸ್​ಬಿಐನಿಂದ 6,000 ಕೋಟಿ ರೂ ಮೊತ್ತದ ಬಾಂಡ್​ಗಳ ವಿತರಣೆ; ಯಾವಾಗ, ಎಲ್ಲಿ? ವಿವರ ನೋಡಿ

750 Million USD SBI Bonds: ಸುಮಾರು 6,000 ಕೋಟಿ ರೂ ಬಂಡವಾಳ ಸಂಗ್ರಹಿಸುವ ಸಲುವಾಗಿ ಎಸ್​ಬಿಐ ಬಾಂಡ್​ಗಳನ್ನು ವಿತರಿಸುತ್ತಿದೆ. ಮೇ 5ರಂದು ಸಿಂಗಾಪುರ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಇವು ಲಿಸ್ಟ್ ಆಗಲಿವೆ. ಇದೇ ವೇಳೆ ಎಸ್​ಬಿಐನ ಷೇರು ಬೆಲೆ ಮುಂದಿನ ದಿನಗಳಲ್ಲಿ ಭರ್ಜರಿ ಲಾಭ ತಂದುಕೊಡಬಲ್ಲುವಾಗಿವೆ.

SBI: ಎಸ್​ಬಿಐನಿಂದ 6,000 ಕೋಟಿ ರೂ ಮೊತ್ತದ ಬಾಂಡ್​ಗಳ ವಿತರಣೆ; ಯಾವಾಗ, ಎಲ್ಲಿ? ವಿವರ ನೋಡಿ
ಎಸ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 28, 2023 | 2:36 PM

Share

ಮುಂಬೈ: ಭಾರತದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇದೀಗ ಬಾಂಡ್​ಗಳ ಮೂಲಕ ಸಾವಿರಾರು ಕೋಟಿ ರೂ ಬಂಡವಾಳ ಸಂಗ್ರಹಿಸಲು ಮುಂದಾಗಿದೆ. ಎಸ್​ಬಿಐ ಸುಮಾರು 750 ಮಿಲಿಯನ್ ಡಾಲರ್ ಮೊತ್ತದ ಬಾಂಡ್​ಗಳನ್ನು (SBI Bonds) ವಿತರಿಸುತ್ತಿದೆ. ಅಂದರೆ ಈ ಬಾಂಡ್​ಗಳ ಮಾರಾಟದಿಂದ ಎಸ್​ಬಿಐಗೆ 6,000 ಕೋಟಿ ರೂ ಬಂಡವಾಳ ಹರಿದುಬರಲಿದೆ. ಈ ಐದು ವರ್ಷ ಅವಧಿಯ ಬಾಂಡ್​ಗಳ ಕೂಪನ್ ರೇಟ್ ಶೇ. 4.875ಕ್ಕೆ ನಿಗದಿ ಮಾಡಲಾಗಿದೆ. ಅಂದರೆ, ಎಸ್​ಬಿಐನ ಈ ಬಾಂಡ್​ಗಳನ್ನು ಖರೀದಿಸುವ ಹೂಡಿಕೆದಾರರಿಗೆ ಒಂದು ವರ್ಷಕ್ಕೆ ಬಡ್ಡಿ ಶೇ 4.875 ಸಿಗಬಹುದು ಎಂದು ನಿರೀಕ್ಷಿಸಬಹುದು. ವರದಿಗಳ ಪ್ರಕಾರ ಎಸ್​ಬಿಐನ ಈ ಬಾಂಡ್​ಗಳಿಗೆ ಒಳ್ಳೆಯ ಬೇಡಿಕೆ ಕುದುರಿದೆಯಂತೆ. ಈ ಬಾಂಡ್​ಗಳಿಗೆ ಬೇಡಿಕೆ ಹೆಚ್ಚಿದಷ್ಟೂ ಅದರ ಯೀಲ್ಡ್ ಅಥವಾ ರಿಟರ್ನ್ ಕಡಿಮೆ ಆಗುತ್ತಾ ಹೋಗುತ್ತದೆ.

2023 ಮೇ 5ರಂದು ನಮ್ಮ ಲಂಡನ್ ಶಾಖಾ ಕಚೇರಿಯಿಂದ ಬಾಂಡ್​ಗಳನ್ನು ನೀಡಲಾಗುವುದು. ಇವು ಸಿಂಗಾಪುರ್ ಸ್ಟಾಕ್ ಎಕ್ಸ್​ಚೇಂಜ್ ಹಾಗೂ ಇಂಡಿಯಾ ಇಂಟರ್​ನ್ಯಾಷನಲ್ ಎಕ್ಸ್​ಚೇಂಜ್​ನಲ್ಲಿ ಲಿಸ್ಟ್ ಆಗಲಿವೆ’ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಏಪ್ರಿಲ್ 27ರಂದು ಸಲ್ಲಿಸಿದ ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ತಿಳಿಸಿದೆ.

ಎಸ್​ಬಿಐ ಬಾಂಡ್​ಗಳ ಮಾರಾಟ ಮತ್ತು ನಿರ್ವಹಣೆಗೆ ಎಚ್​ಎಸ್​ಬಿಸಿ, ಸಿಟಿಗ್ರೂಪ್, ಜೆಪಿ ಮಾರ್ಗನ್, ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಎಂಯುಎಫ್​ಜಿ, ಎಮಿರೇಟ್ಸ್ ಎನ್​ಬಿಡಿ ಸಂಸ್ಥೆಗಳನ್ನು ಗ್ಲೋಬಲ್ ಕೋ ಆರ್ಡಿನೇಟರ್​ಗಳಾಗಿ ವಹಿಸಲಾಗಿದೆ.

ಇದನ್ನೂ ಓದಿAxis Bank: ಆ್ಯಕ್ಸಿಸ್​ಗೆ ಮುಳುವಾದ ಸಿಟಿ ಡೀಲ್; ದಾಖಲೆ ಲಾಭ ಕಾಣಬೇಕಿದ್ದ ಬ್ಯಾಂಕ್​ಗೆ ಬರೋಬ್ಬರಿ 5,728.4 ಕೋಟಿ ರೂ ನಷ್ಟ

ವಿದೇಶೀ ಮಾರುಕಟ್ಟೆಯಲ್ಲಿ ಎಸ್​ಬಿಐಗೆ ಒಳ್ಳೆಯ ಬೆಲೆ ಇದೆ. ಬಹಳಷ್ಟು ಹೂಡಿಕೆದಾರರು ಎಸ್​ಬಿಐ ಬಗ್ಗೆ ಒಲವು ಹೊಂದಿರುವವರೇ ಹೆಚ್ಚು. ಇವತ್ತಿನ ಅನಿಶ್ಚಿತ ಸ್ಥಿತಿಯಲ್ಲಿ ಎಸ್​ಬಿಐಗೆ ಬಂಡವಾಳ ಸಂಗ್ರಹಿಸುವ ಗುರಿ ಈಡೇರಬಹುದು. ವಿಶ್ವದ ಪ್ರಮುಖ ನಿಶ್ಚಿತ ಆದಾಯ ಹೂಡಿಕೆದಾರರು ಎಸ್​ಬಿಐ ಪರ ನಿಲ್ಲಬಹುದು ಎಂದು ಎಸ್​ಬಿಐ ಛೇರ್ಮನ್ ದಿನೇಶ್ ಖರ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಸ್​ಬಿಐನ ನಿರ್ದೇಶಕರ ಮಂಡಳಿ ಕೆಲ ವಾರಗಳ ಹಿಂದಷ್ಟೇ ಈ ಹಣಕಾಸು ವರ್ಷದಲ್ಲಿ 2 ಬಿಲಿಯನ್ ಡಾಲರ್​ವರೆಗೂ (ಸುಮಾರು 16,000 ಕೋಟಿ ರೂ) ಬಂಡವಾಳ ಸಂಗ್ರಹಿಸುವ ದೀರ್ಘಾವಧಿ ಯೋಜನೆಗೆ ಅನುಮೋದನೆ ನೀಡಿತ್ತು. ಇದೀಗ ಬಾಂಡ್​ಗಳನ್ನು ವಿತರಿಸಿರುವ ಮಾರ್ಗದಿಂದಲೇ ಅಗತ್ಯ ಬಿದ್ದರೆ ಈ ಹೂಡಿಕೆ ಪಡೆಯಬಹುದು.

ಎಸ್​ಬಿಐ ಷೇರುಗಳಿಗೆ ಹೆಚ್ಚಲಿದೆಯಾ ಬೇಡಿಕೆ?

ಸ್ಟೇಟ್ ಬ್ಯಾಂಕ್ ಇಂಡಿಯಾ ಸಂಸ್ಥೆಯ ಆರ್ಥಿಕ ಸ್ಥಿತಿ ಚೆನ್ನಾಗಿದೆ. ಅದರ ಕೆಟ್ಟ ಸಾಲಗಳ ಅಥವಾ ಎನ್​ಪಿಎ ಪ್ರಮಾಣ ಬಹಳ ಕಡಿಮೆ ಇದೆ. ಅದರ ಬಡ್ಡಿ ಆದಾಯ, ಬಡ್ಡಿಯ ಲಾಭ ಅಂತರ ಇವೆಲ್ಲವೂ ಉತ್ತಮ ಎನ್ನಬಹುದಾದ ಪ್ರಮಾಣದಲ್ಲಿವೆ. ಹೀಗಾಗಿ, ಎಸ್​ಬಿಐ ಷೇರುಗಳ ಮೇಲೆ ಬಹಳ ಮಂದಿ ಕಣ್ಣು ಬಿದ್ದಿದೆ.

ಇದನ್ನೂ ಓದಿHigher Pension: ಅಧಿಕ ಇಪಿಎಫ್ ಪಿಂಚಣಿ; ಗಡುವು, ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ, ಬಡ್ಡಿ ದರ ಇತ್ಯಾದಿ ಮಾಹಿತಿ

ಷೇರು ಮಾರುಕಟ್ಟೆಯಲ್ಲಿ ಎಸ್​ಬಿಐನ ಷೇರು ಸಂಪತ್ತು 5 ಲಕ್ಷ ಕೋಟಿ ರೂಗಿಂತ ಹೆಚ್ಚಿದೆ. ಸದ್ಯ ಇದರ ಷೇರು ಬೆಲೆ 570 ರೂ ಇದೆ. ಬ್ರೋಕರೇಜ್ ಕಂಪನಿಗಳ ಅಂದಾಜಿನ ಪ್ರಕಾರ ಎಸ್​ಬಿಐ ಷೇರು ಬೆಲೆ 700ರೂಗೂ ಹೆಚ್ಚು ಮೊತ್ತಕ್ಕೆ ಏರಬಹುದು. ಈ ನಿರೀಕ್ಷೆಗೂ ಒಂದಿಷ್ಟು ಕಾರಣಗಳಿವೆ. ಅವೇನು ಎಂದು ನೋಡುವುದಾದರೆ

  1. ಎಸ್​ಬಿಐ ಮುಂದಿನ ದಿನಗಳಲ್ಲಿ ಸಾರ್ವಜನಿಕವಾಗಿ ಹಾಗೂ ಖಾಸಗಿಯಾಗಿ ಬಂಡವಾಳ ಸಂಗ್ರಹಿಸುವ ಸಾಧ್ಯತೆ ಕಡಿಮೆ ಇರುತ್ತದೆ. ಅದರ ಬೆಳವಣಿಗೆಗೆ ಬೇಕಾದ ಬಂಡವಾಳವನ್ನು ಅದರ ಆದಾಯಗಳ ಮೂಲಕವೇ ಪಡೆದುಕೊಳ್ಳುವ ಸಾಮರ್ಥ್ಯ ಎಸ್​ಬಿಐಗೆ ಇದೆ ಎಂಬುದು ಮೋತಿಲಾಲ್ ಓಸ್ವಾಲ್ ಎಂಬ ಬ್ರೋಕರೇಜ್ ಕಂಪನಿ ಕೊಟ್ಟಿರುವ ಒಂದು ಪ್ರಬಲ ಕಾರಣ.
  2. ಎಸ್​ಬಿಐ ಷೇರು ವೃದ್ಧಿ ಸಾಧ್ಯತೆಗೆ ಇನ್ನೊಂದು ಪ್ರಮುಖ ಕಾರಣವೆಂದರೆ ಅದರ ಸಾಲದ ಪ್ರಮಾಣ ಹೆಚ್ಚುತ್ತಿರುವುದು. ಅಧಿಕ ಬಡ್ಡಿದರ ಇದ್ದರೂ ಎಸ್​ಬಿಐನಲ್ಲಿ ಸಾಲ ಪಡೆಯಲು ಜನರು ಮುಗಿಬೀಳುತ್ತಿದ್ದಾರೆ. ಇವು ಕೆಟ್ಟ ಸಾಲಗಳಾಗದಂತೆ ಎಚ್ಚರ ವಹಿಸಿದರೆ ಎಸ್​ಬಿಐಗೆ ಮುಂಬರುವ ದಿನಗಳು ಇನ್ನೂ ಭರ್ಜರಿ ಲಾಭ ತರಬಹುದು.
  3. ಹಾಗೆಯೇ, ರೀಟೇಲ್ ಸೆಗ್ಮೆಂಟ್​ನಲ್ಲಿ ಎಸ್​ಬಿಐನ ಎನ್​ಪಿಎ ಅಥವಾ ಕೆಟ್ಟ ಸಾಲಗಳ ಅನುಪಾತ ಕೇವಲ 0.67 ಮಾತ್ರ ಇದೆ. ಅಂದರೆ ಒಟ್ಟಾರೆ ಸಾಲಗಳ ಪೈಕಿ ಎನ್​ಪಿಎ ಪ್ರಮಾಣ 1 ಪ್ರತಿಶತಕ್ಕಿಂತ ಕಡಿಮೆಯೇ ಇದೆ. ಇದೂ ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆರೋಗ್ಯದ ಸಂಕೇತಗಳಾಗಿವೆ. ಇವುಗಳ ಪರಿಣಾಮವಾಗಿ ಷೇರುಪೇಟೆಯಲ್ಲೂ ಅದರ ಷೇರಿಗೆ ಬೇಡಿಕೆ ಸಿಗುವುದು ನಿಶ್ಚಿತ ಎನ್ನಲಾಗುತ್ತಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ