AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Higher Pension: ಅಧಿಕ ಇಪಿಎಫ್ ಪಿಂಚಣಿ; ಗಡುವು, ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ, ಬಡ್ಡಿ ದರ ಇತ್ಯಾದಿ ಮಾಹಿತಿ

EPS Eligibility and Other Details: ಮೇ 3ರೊಳಗೆ ಹೆಚ್ಚುವರಿ ಪಿಂಚಣಿಗೆ ಸಲ್ಲಿಸಲಾಗಿರುವ ಅರ್ಜಿಯನ್ನು ಫೀಲ್ಡ್ ಆಫೀಸ್​ನಿಂದ ಪರಿಶೀಲನೆ ಮಾಡಲಾಗುತ್ತದೆ. ಉದ್ಯೋಗದಾತರು ಸಲ್ಲಿಸಿದ ವೇತನ ವಿವರ ಇತ್ಯಾದಿ ಮಾಹಿತಿಯನ್ನು ಫೀಲ್ಡ್ ಆಫೀಸ್​ನಲ್ಲಿರುವ ದತ್ತಾಂಶದ ಜೊತೆ ಹೋಲಿಕೆ ಮಾಡಿ ಈ ಪರಿಶೀಲನೆ ಕಾರ್ಯ ನಡೆಯಲಿದೆ.

Higher Pension: ಅಧಿಕ ಇಪಿಎಫ್ ಪಿಂಚಣಿ; ಗಡುವು, ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ, ಬಡ್ಡಿ ದರ ಇತ್ಯಾದಿ ಮಾಹಿತಿ
ಇಪಿಎಫ್​ಒ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 28, 2023 | 12:07 PM

Share

ನವದೆಹಲಿ: ಉದ್ಯೋಗಿಗಳ ಪಿಂಚಣಿ ಯೋಜನೆ (EPS- Employees Pension Scheme) ಅಡಿಯಲ್ಲಿ ನಿಗದಿಗಿಂತ ಹೆಚ್ಚು ಪಿಂಚಣಿಗೆ ಅರ್ಜಿ ಸಲ್ಲಿಸಲು ಕೆಲವೇ ದಿನ ಬಾಕಿ ಇದೆ. ಮೇ 3ರವರೆಗೆ ಮಾತ್ರ ಗಡುವು ಇದ್ದು, ಹಲವು ಉದ್ಯೋಗಿಗಳಲ್ಲಿ ಈಗಲೂ ಕೆಲ ಗೊಂದಲಗಳು ಮನೆ ಮಾಡಿವೆ. ಈ ಮಧ್ಯೆ ಅಧಿಕ ಪಿಂಚಣಿಗೆ (Higer Pension) ಉದ್ಯೋಗಿಗಳು ಹಾಗೂ ಅವರು ಕೆಲಸ ಮಾಡುವ ಸಂಸ್ಥೆಗಳು ಸಲ್ಲಿಸಿರುವ ವೇತನ ವಿವರ ಮತ್ತಿತರ ಮಾಹಿತಿಯನ್ನು ಪರಿಶೀಲಿಸುವ ಸಂಬಂಧ ಇಪಿಎಫ್​ಒ ಹೊಸ ವಿಧಾನವನ್ನು ಕೆಲ ದಿನಗಳ ಹಿಂದೆ ಪ್ರಕಟಿಸಿದೆ. ಅದರಂತೆ, ಹೆಚ್ಚುವರಿ ಪಿಂಚಣಿಗೆ ಸಲ್ಲಿಸಲಾಗಿರುವ ಅರ್ಜಿಯನ್ನು ಫೀಲ್ಡ್ ಆಫೀಸ್​ನಿಂದ ಪರಿಶೀಲನೆ ಆಗಲಿದೆ. ಉದ್ಯೋಗದಾತರು (Employer) ಸಲ್ಲಿಸಿದ ವೇತನ ವಿವರ ಇತ್ಯಾದಿ ಮಾಹಿತಿಯನ್ನು ಫೀಲ್ಡ್ ಆಫೀಸ್​ನಲ್ಲಿರುವ ದತ್ತಾಂಶದ ಜೊತೆ ಹೋಲಿಕೆ ಮಾಡಿ ಈ ಪರಿಶೀಲನೆ ಕಾರ್ಯ ನಡೆಯಲಿದೆ.

ಇಪಿಎಸ್ ಸ್ಕೀಮ್ ಏನಿದು?

ಇಪಿಎಫ್ ಬೇರೆ ಮತ್ತು ಇಪಿಎಸ್ ಬೇರೆ. ಇಪಿಎಸ್ ಸ್ಕೀಮ್ ಪಡೆಯಬೇಕೆಂದರೆ ಇಪಿಎಫ್ ಸದಸ್ಯರಾಗಿರಬೇಕು. ಉದ್ಯೋಗಿಯ ಸಂಬಳದಲ್ಲಿ ನಿರ್ದಿಷ್ಟ ಹಣವನ್ನು (ಬೇಸಿಕ್ ಸಂಬಳದ ಶೇ. 12) ಪಿಎಫ್ ಖಾತೆಗೆ ಜಮೆ ಮಾಡಲಾಗುತ್ತದೆ. ಅಷ್ಟೇ ಮೊತ್ತದ ಹಣವನ್ನು ಕಂಪನಿಯೂ ಈ ಖಾತೆಗೆ ಹಾಕುತ್ತದೆ. ಆದರೆ, ಕಂಪನಿಯ ಕೊಡುಗೆಯಲ್ಲಿ ಒಂದಿಷ್ಟು ಭಾಗವು ಇಪಿಎಫ್ ಖಾತೆಗೆ ಹೋದರೆ, ಮಿಕ್ಕ ಭಾಗವು (ಶೇ. 8.33) ಆ ಉದ್ಯೋಗಿಯ ಪೆನ್ಷನ್ ಖಾತೆಗೆ (ಇಪಿಎಸ್) ಹೋಗುತ್ತದೆ.

ಇದನ್ನೂ ಓದಿEPF: ಇಪಿಎಫ್ ಪೋರ್ಟಲ್ ಈಗಲೂ ತೆರೆಯುತ್ತಿಲ್ಲವಾ? ನಿಮ್ಮ ಪಿಎಫ್ ಬ್ಯಾಲೆನ್ಸ್ ನೋಡಲು ಬೇರೆ ಸರಳ ಮಾರ್ಗಗಳೂ ಉಂಟು

ಸದ್ಯ ಇಪಿಎಸ್ ಖಾತೆಗೆ ಗರಿಷ್ಠ ಸಂಬಳ ಮಿತಿ 15,000 ರೂ ಎಂದು ನಿಗದಿ ಮಾಡಲಾಗಿದೆ. ಅಂದರೆ 25,000 ರೂ ಸಂಬಳ ಇದ್ದರೂ 15,000 ರೂ ಸಂಬಳವನ್ನು ಮಾತ್ರ ಇಪಿಎಸ್ ಕೊಡುಗೆಗೆ ಪರಿಗಣಿಸಲಾಗುತ್ತದೆ. ಅಂದರೆ ಪ್ರತೀ ತಿಂಗಳು ಇಪಿಎಸ್ ಖಾತೆಗೆ ಗರಿಷ್ಠ 1,250ರವರೆಗೂ ಹಣ ಜಮೆ ಆಗುತ್ತದೆ. ಇಪಿಎಸ್ ಸ್ಕೀಮ್ ಅನ್ನು ಉದ್ಯೋಗಿಯ ನಿವೃತ್ತಿ ನಂತರ ಪಿಂಚಣಿಗೆಂದು ಮಾಡಿಸಲಾಗಿರುವ ಯೋಜನೆ.

ಹೆಚ್ಚುವರಿ ಪಿಂಚಣಿಗೆ ಯಾರು ಅರ್ಹರು? ಈಗಿರುವ ಗೊಂದಲವೇನು?

ಈಗ 15,000 ರೂಗಿಂತ ಹೆಚ್ಚು ಮೂಲವೇತನ ಇರುವ ಉದ್ಯೋಗಿಯ ಇಪಿಎಸ್ ಖಾತೆಗೆ ಎಷ್ಟು ಹೆಚ್ಚುವರಿ ಹಣ ಹಾಕಬಹುದು ಎಂಬ ವಿಚಾರದ ಬಗ್ಗೆ ಗೊಂದಲ ಇದೆ. 20,000 ಸಂಬಳ ಇರುವ ಜನರಿಗೆ ಈಗ 15,000 ರೂ ಸಂಬಳದ ಲೆಕ್ಕದಲ್ಲಿ ಪಿಂಚಣಿ ಕೊಡುಗೆ ನೀಡಲಾಗುತ್ತಿದೆ. ಹೆಚ್ಚುವರಿ 5,000 ರೂಗೆ ಯಾವ ರೀತಿಯ ಗಣಿಸುವುದು ಎಂಬ ಗೊಂದಲ ಇದೆ. ಈ ಬಗ್ಗೆ ಇಪಿಎಫ್​ಒದಿಂದ ಸ್ಪಷ್ಟ ನೀತಿ ಪ್ರಕಟವಾಗಿಲ್ಲ.

ಇನ್ನು, ಹೆಚ್ಚುವರಿ ಪಿಂಚಣಿ ಯೋಜನೆಗೆ ಎಲ್ಲಾ ಉದ್ಯೋಗಿಗಳೂ ಅರ್ಹರಲ್ಲ ಎಂಬುದನ್ನು ಮೊದಲು ನೆನಪಿನಲ್ಲಿಡಿ. 2014 ಸೆಪ್ಟೆಂಬರ್ 1ಕ್ಕೆ ಮುಂಚಿನಿಂದಲೇ ಇಪಿಎಫ್ ಖಾತೆಯನ್ನು ಹೊಂದಿರುವ ಉದ್ಯೋಗಿಗಳು ಮಾತ್ರ ಅಧಿಕ ಪಿಂಚಣಿ ಯೋಜನೆಗೆ ಅರ್ಹರಾಗಿರುತ್ತಾರೆ. 2014 ಸೆಪ್ಟೆಂಬರ್ 1ರ ಬಳಿಕ ಹೊಸದಾಗಿ ಕೆಲಸಕ್ಕೆ ಸೇರಿಕೊಂಡವರು ಅಥವಾ ಅದೇ ಮೊದಲ ಬಾರಿಗೆ ಇಪಿಎಫ್ ಯೋಜನೆಗೆ ಬಂದವರು ಹೆಚ್ಚುವರಿ ಇಪಿಎಸ್​ಗೆ ಅರ್ಹರಿರುವುದಿಲ್ಲ.

ಇದನ್ನೂ ಓದಿEPF vs VPF: ವಾಲಂಟ್ರಿ ಪಿಎಫ್ ಎಂದರೇನು? ಇಪಿಎಫ್​ಗೂ ವಿಪಿಎಫ್​ಗೂ ಏನು ವ್ಯತ್ಯಾಸ? ಇದರ ಅನುಕೂಲಗಳೇನು? ವಿವರ ತಿಳಿದಿರಿ

ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಮೇಲೆ ಹೇಳಿದ ಅರ್ಹತಾ ಮಾನದಂಡಕ್ಕೆ ತಾಳೆಯಾಗುವ ಉದ್ಯೋಗಿಗಳೆಲ್ಲರೂ ಇಪಿಎಫ್​ಒ ಪೋರ್ಟಲ್​ಗೆ ಹೋಗಿ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಬಹುದು. ಇದರ ಲಿಂಕ್ ಇಲ್ಲಿದೆ:

ಅರ್ಜಿ ಸಲ್ಲಿಸಿದ ಬಳಿಕ ಇಪಿಎಫ್​ಒ ಅಧಿಕಾರಿಯಿಂದ ವೆರಿಫಿಕೇಶನ್ ಕಾರ್ಯ ಆಗುತ್ತದೆ. ಎಲ್ಲಾ ವಿವರ ಸರಿ ಇದ್ದರೆ ಅಧಿಕ ಪಿಂಚಣಿಗೆ ಎಷ್ಟು ಕೊಡುಗೆ ಬಾಕಿ ಇದೆ ಎಂಬುದನ್ನು ಲೆಕ್ಕ ಹಾಕಲಾಗುತ್ತದೆ. ನಂತರ ಈ ಬಾಕಿ ಹಣ ವರ್ಗಾವಣೆಗೆ ಆದೇಶ ಹೊರಡಿಸಲಾಗುತ್ತದೆ. ಮಾಹಿತಿಯಲ್ಲಿ ವ್ಯತ್ಯಾಸ ಇದ್ದರೆ ಉದ್ಯೋಗಿ ಹಾಗೂ ಸಂಸ್ಥೆಗೆ ಇದನ್ನು ಸರಿಪಡಿಸಲು ಒಂದು ತಿಂಗಳು ಗಡುವು ಕೊಡಲಾಗುತ್ತದೆ. ಈಗ ಅಧಿಕ ಪಿಂಚಣಿಗೆ ಎಷ್ಟು ಪ್ರತಿಶತದಷ್ಟು ಕೊಡುಗೆ ಇರಬೇಕು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ಮೇ 3ರೊಳಗೆ ಅರ್ಜಿ ಸಲ್ಲಿಸುವ ಕೆಲಸ ಮುಗಿಯಬೇಕು.

ಸರ್ಕಾರದ ಸೇವಿಂಗ್ ಸ್ಕೀಮ್​ಗಳ ಪೈಕಿ ಇಪಿಎಫ್​ಗೆಯೇ ಅಧಿಕ ಬಡ್ಡಿ

ಸರ್ಕಾರಿಂದ ವಿವಿಧ ರೀತಿಯ ಉಳಿತಾಯ ಯೋಜನೆಗಳನ್ನು ನೋಡಬಹುದು. ಸುಕನ್ಯ ಸಮೃದ್ಧಿ ಯೋಜನೆ, ಕಿಸಾನ್ ವಿಕಾಸ್ ಪತ್ರ ಇತ್ಯಾದಿ ಹಲವು ಸ್ಕೀಮ್​ಗಳಿವೆ. ಆದರೆ, ಉದ್ಯೋಗಿ ಭವಿಷ್ಯ ನಿಧಿ (ಇಪಿಎಫ್) ಯೋಜನೆಗೆ ಅತ್ಯಧಿಕ ಬಡ್ಡಿ ನೀಡಲಾಗುತ್ತಿದೆ. ಪ್ರತಿಯೊಬ್ಬ ಉದ್ಯೋಗಿಯ ಇಪಿಎಫ್ ಖಾತೆಯಲ್ಲಿರುವ ಹಣಕ್ಕೆ ಸರ್ಕಾರ ಪ್ರತೀ ವರ್ಷ ಶೇ. 8.15ರಷ್ಟು ಬಡ್ಡಿ ಹಣವನ್ನು ತುಂಬುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:07 pm, Fri, 28 April 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ