AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಬಸ್​ ಚಲಾಯಿಸಲು ಪರದಾಡಿದ ಚಾಲಕ

ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಬಸ್​ ಚಲಾಯಿಸಲು ಪರದಾಡಿದ ಚಾಲಕ

ಕಿರಣ್​ ಹನಿಯಡ್ಕ
| Updated By: ರಮೇಶ್ ಬಿ. ಜವಳಗೇರಾ

Updated on: Mar 12, 2025 | 10:19 PM

ಹಾಸನ ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಹಾಸನ, ಚನ್ನರಾಯಪಟ್ಟಣ, ಆಲೂರು, ಸಕಲೇಶಪುರ ಭಾಗಗಳಲ್ಲಿ ಮಳೆಯಾಗಿದ್ದು, ಬೇಸಿಗೆ ಬಿಸಿಲಿಗೆ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಇನ್ನು ಈ ವರ್ಷದ ಮೊದಲ ಮಳೆಗೆ ಜನರು ಸಹ ಫುಲ್ ಖುಷ್ ಆಗಿದ್ದಾರೆ. ಮತ್ತೊಂದೆಡೆ ಮಳೆ ನಡುವೆ ಸಾರಿಗೆ ಬಸ್‌ನಲ್ಲಿ ವೈಪರ್ ಇಲ್ಲದೆ ಚಾಲಕ ಪರದಾಡಿರುವ ಘಟನೆ ನಡೆದಿದೆ.

ಹಾಸನ, (ಮಾರ್ಚ್​ 12): ಹಾಸನದಲ್ಲಿಂದು ಸಂಜೆ ಭಾರೀ ಮಳೆಯಾಗಿದೆ. ಹಾಸನ, ಚನ್ನರಾಯಪಟ್ಟಣ, ಆಲೂರು, ಸಕಲೇಶಪುರ ಭಾಗದಲ್ಲಿ ಬಿರುಗಾಳಿ ಸಮೇತ ಮಳೆಯಾಗಿದೆ. ವರ್ಷದ ಮಳೆಗೆ ಜನರು ಫುಲ್ ಖುಷ್ ಆಗಿದ್ದರೆ, ಇನ್ನೊಂದೆಡೆ ಸಾರಿಗೆ ಬಸ್ ಚಾಲಕ  ಡ್ರೈವಿಂಗ್​ ಮಾಡಲು ಪರದಾಡಿರುವ ಘಟನೆ ನಡೆದಿದೆ. ಹಾಸನದಿಂದ ಬೆಂಗಳೂರಿಗೆ ತೆರಳುತ್ತಿರುವ ಸಾರಿಗೆ ಬಸ್​ನ ವೈಪರ್ ಇಲ್ಲದೇ ಚಾಲಕ ಮಳೆಯಲ್ಲಿ ಡ್ರೈವ್​ ಮಾಡಲು ಪರದಾಡಿದ್ದಾರೆ.

KA-18-F-0913 ನಂಬರ್‌ನ ಕೆಎಸ್‌ಆರ್‌ಟಿಸಿ ಬಸ್​ನಲ್ಲಿ ವೈಪರ್ ಆನ್​ ಆಗದಿದ್ದರಿಂದ ಡ್ರೈವರ್​ ಮಳೆಯಲ್ಲಿಯೇ ಕಷ್ಟಪಟ್ಟು ಚಲಾಯಿಸಿದ್ದಾರೆ. ರಸ್ತೆ ಕಾಣದಂತೆ ಮಳೆ ರಭಸವಾಗಿ ಬರುತ್ತಿದೆ. ಇದರಿಂದಬಸ್​ನೊಳಗಿದ್ದ ಪ್ರಯಾಣಿಕರು ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಮಳೆಯಲ್ಲಿ ವೈಪರ್ ಇಲ್ಲದೇ ಬಸ್​ ಚಲಾಯಿಸುವ ವೇಳೆ ಏನಾದರೂ ಹೆಚ್ಚುಕಮ್ಮಿಯಾದರೆ ಯಾರು ಹೊಣೆ. ನಮ್ಮ ಟಿಕೆಟ್ ಹಣ ವಾಪಾಸ್ ಕೊಡಿ ಎಂದು ಪ್ರಯಾಣಿಕರು ಗಲಾಟೆ ಮಾಡಿದ್ದಾರೆ.