
Champions Trophy
Champions Trophy: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಆಯೋಜಿಸುವ ಪ್ರಮುಖ ಟೂರ್ನಿಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಕೂಡ ಒಂದು. 1998 ರಲ್ಲಿ ಶುರುವಾದ ಈ ಟೂರ್ನಿಯ ಚೊಚ್ಚಲ ಪಂದ್ಯಾವಳಿಗೆ ಬಾಂಗ್ಲಾದೇಶ್ ಆತಿಥ್ಯವಹಿಸಿತ್ತು. ಈವರೆಗೆ 8 ಆವೃತ್ತಿಗಳನ್ನು ಆಯೋಜಿಸಲಾಗಿದ್ದು, ಈ ವೇಳೆ ಸೌತ್ ಆಫ್ರಿಕಾ (1998), ನ್ಯೂಝಿಲೆಂಡ್ (2000), ಭಾರತ/ಶ್ರೀಲಂಕಾ (2002), ವೆಸ್ಟ್ ಇಂಡೀಸ್ (2004), ಆಸ್ಟ್ರೇಲಿಯಾ (2006), ಆಸ್ಟ್ರೇಲಿಯಾ (2009), ಭಾರತ (2013) ಮತ್ತು ಪಾಕಿಸ್ತಾನ್ (2017) ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಏಕದಿನ ಸ್ವರೂಪದಲ್ಲಿ ಆಡಲಾಗುವ ಈ ಟೂರ್ನಿಯ 9ನೇ ಆವೃತ್ತಿಗೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆತಿಥ್ಯವಹಿಸಲಿದ್ದು, ಅದರಂತೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ನಡುವೆ 8 ತಂಡಗಳ ನಡುವಣ ಚಾಂಪಿಯನ್ಸ್ ಟ್ರೋಫಿ 2025 ಜರುಗಲಿದೆ
BCCI: ಬಿಸಿಸಿಐ ನೀಡಿರುವ 58 ಕೋಟಿ ಬಹುಮಾನದಲ್ಲಿ ಯಾರಿಗೆ ಎಷ್ಟೆಷ್ಟು?
58 Crore Prize for India's Champions Trophy Win: ಭಾರತ ತಂಡವು 2025ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದಕ್ಕಾಗಿ ಬಿಸಿಸಿಐ 58 ಕೋಟಿ ರೂಪಾಯಿಗಳ ಬಹುಮಾನವನ್ನು ಘೋಷಿಸಿದೆ. ಪ್ರತಿ ಆಟಗಾರನಿಗೆ 3 ಕೋಟಿ ರೂಪಾಯಿಗಳು, ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೂ 3 ಕೋಟಿ ರೂಪಾಯಿಗಳು ಮತ್ತು ಇತರ ಸಿಬ್ಬಂದಿಗೆ ವಿಭಿನ್ನ ಮೊತ್ತವನ್ನು ನೀಡಲಾಗುವುದು. ಐಸಿಸಿಯಿಂದ ಬರುವ 20 ಕೋಟಿ ರೂಪಾಯಿಗಳ ಬಹುಮಾನವನ್ನು ಆಟಗಾರರಿಗೆ ಮಾತ್ರ ಹಂಚಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
- pruthvi Shankar
- Updated on: Mar 20, 2025
- 7:04 pm
Champions Trophy BCCI Reward: ಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಮ್ ಇಂಡಿಯಾಗೆ ರೂ. 58 ಕೋಟಿ ಘೋಷಿಸಿದ ಬಿಸಿಸಿಐ
BCCI Cash Prize for Team India: ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸಿದ್ದ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಟೀಮ್ ಇಂಡಿಯಾ. ಭಾರತ ತಂಡದ ಈ ಐತಿಹಾಸಿಕ ಸಾಧನೆಗೆ ಇದೀಗ ಬಿಸಿಸಿಐ ಭರ್ಜರಿ ಉಡುಗೊರೆ ನೀಡಿದೆ. ಅದು ಕೂಡ ಬರೋಬ್ಬರಿ 58 ಕೋಟಿ ರೂ. ಬಹುಮಾನ ಮೊತ್ತ ಘೋಷಿಸುವ ಮೂಲಕ ಎಂಬುದು ವಿಶೇಷ.
- Zahir Yusuf
- Updated on: Mar 20, 2025
- 3:20 pm
Fact Check: ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ರೋಹಿತ್ ಶರ್ಮಾಗೆ ನೀತಾ ಅಂಬಾನಿ ಬುಗಾಟಿ ಕಾರು ನೀಡಿದ್ದು ನಿಜವೇ?
ಸಾಮಾಜಿಕ ಮಾಧ್ಯಮದಲ್ಲಿ ನೀತಾ ಅಂಬಾನಿ ಮತ್ತು ರೋಹಿತ್ ಶರ್ಮಾ ಒಟ್ಟಿಗೆ ಇರುವ ಎರಡು ಚಿತ್ರಗಳು ವೈರಲ್ ಆಗುತ್ತಿದೆ. ಇದರಲ್ಲಿ ನೀತಾ ಅಂಬಾನಿ ಅವರು ಕಾರಿನ ಕೀಲಿಯನ್ನು ರೋಹಿತ್ ಶರ್ಮಾಗೆ ನೀಡುತ್ತಿರುವುದು ಕಂಡುಬರುತ್ತದೆ. ಈ ಚಿತ್ರವನ್ನು ಹಂಚಿಕೊಂಡ ಬಳಕೆದಾರರು, ಟ್ರೋಫಿ ಗೆದ್ದ ಸಂಭ್ರಮಕ್ಕಾಗಿ ನೀತಾ ಅಂಬಾನಿ ಅವರು ರೋಹಿತ್ ಶರ್ಮಾ ಅವರಿಗೆ ಬುಗಾಟಿಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
- Preethi Bhat Gunavante
- Updated on: Mar 18, 2025
- 4:14 pm
ಭಾರತದ ವಿರುದ್ಧ ಜಿದ್ದಿಗೆ ಬಿದ್ದು ಚಾಂಪಿಯನ್ಸ್ ಟ್ರೋಫಿ ಆಯೋಜಿಸಿದ್ದ ಪಾಕಿಸ್ತಾನಕ್ಕೆ 2383 ಕೋಟಿ ನಷ್ಟ..!
Pakistan Cricket's Massive Champions Trophy Loss: 2025ರ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿದ ಪಾಕಿಸ್ತಾನಕ್ಕೆ ಭಾರಿ ಆರ್ಥಿಕ ಹೊಡೆತ ಬಿದ್ದಿದೆ. ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಪಿಸಿಬಿ ಸುಮಾರು 85 ಮಿಲಿಯನ್ ಡಾಲರ್ ನಷ್ಟ ಅನುಭವಿಸಿದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಿದ್ಧತೆಗಳಿಗೆ ಭಾರಿ ಹಣ ಖರ್ಚಾಗಿದೆ. ಆದರೆ ಈ ಟೂರ್ನಿ ಆಯೋಜನೆಯಿಂದ ಪಾಕ್ ತಂಡಕ್ಕೆ ಸಿಕ್ಕ ಆದಾಯದಲ್ಲಿ ಭಾರಿ ಕುಸಿತ ಕಂಡುಬಂದಿದೆ.
- pruthvi Shankar
- Updated on: Mar 17, 2025
- 6:23 pm
ಸೋಲಿನ ಬೆನ್ನಲ್ಲೇ ಬೆದರಿಕೆಗಳು ಬಂದವು, ಬೈಕ್ನಲ್ಲಿ ನನ್ನನ್ನು ಬೆನ್ನಟ್ಟಿದ್ದರು..!
Varun chakravarthy: ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಲ್ಲಿ ವರುಣ್ ಚಕ್ರವರ್ತಿ ಕೂಡ ಒಬ್ಬರು. ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ವರುಣ್ ಒಟ್ಟು 9 ವಿಕೆಟ್ ಕಬಳಿಸಿ ಭಾರತ ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಇದೇ ವರುಣ್ ಅವರು 2021ರ ಟಿ20 ವಿಶ್ವಕಪ್ ವೇಳೆ ಅಭಿಮಾನಿಗಳಿಗೆ ಕೆಂಗಣ್ಣಿಗೆ ಗುರಿಯಾಗಿದ್ದರು ಎಂಬುದೇ ಅಚ್ಚರಿ.
- Zahir Yusuf
- Updated on: Mar 15, 2025
- 9:53 am
ಟೀಮ್ ಇಂಡಿಯಾವೇ ಚಾಂಪಿಯನ್… ಟೀಕಾಕಾರರ ಬಾಯಿ ಮುಚ್ಚಿಸಿದ ವಾಸಿಂ ಅಕ್ರಮ್
Champions Trophy 2025: ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ಎಲ್ಲಾ ಪಂದ್ಯಗಳನ್ನು ಟೀಮ್ ಇಂಡಿಯಾ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಆಡಿತ್ತು. ಇದರಿಂದ ಭಾರತ ತಂಡಕ್ಕೆ ಹೆಚ್ಚಿನ ಪ್ರಯೋಜನಗಳಾಗಿವೆ ಎಂದು ಅನೇಕ ಮಾಜಿ ಆಟಗಾರರು ದೂರಿದ್ದರು. ಆದರೆ ಪಾಕಿಸ್ತಾನ್ ತಂಡದ ಮಾಜಿ ವೇಗಿ ವಾಸಿಂ ಅಕ್ರಮ್ ಟೀಮ್ ಇಂಡಿಯಾ ಪರ ಹೇಳಿಕೆ ನೀಡಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
- Zahir Yusuf
- Updated on: Mar 15, 2025
- 8:31 am
ಯುಜ್ವೇಂದ್ರ ಚಹಲ್-ಮಹ್ವಾಶ್ ವಿಡಿಯೋ ವೈರಲ್: ಇದರ ಅಸಲಿಯತ್ತೇನು?
Yuzvendra Chahal-RJ Mahvash: ಭಾರತ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು. ಅದು ಸಹ ಚೆಂದುಳ್ಳಿ ಚೆಲುವೆ ಮಹ್ವಾಶ್ ಅವರೊಂದಿಗೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಇಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
- Zahir Yusuf
- Updated on: Mar 13, 2025
- 1:55 pm
ಪಾಕಿಸ್ತಾನ್ ಆಟಗಾರರ ವೇತನ ಶೇ. 75 ರಷ್ಟು ಕಡಿತ..!
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ್ ತಂಡ ಎಲ್ಲಾ ಪಂದ್ಯಗಳಲ್ಲೂ ಸೋತು ಭಾರೀ ಮುಖಭಂಗಕ್ಕೆ ಒಳಗಾಗಿತ್ತು. ಈ ಹೀನಾಯ ಸೋಲಿನ ಬೆನ್ನಲ್ಲೇ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ದೇಶೀಯ ಟೂರ್ನಿ ಆಡುವ ಆಟಗಾರರ ವೇತನ ಕಡಿತಗೊಳಿಸಿ ನಗೆಪಾಟಲಿಗೀಡಾಗಿದ್ದಾರೆ. ಅಂದರೆ ಸೋತಿದ್ದು ಪಾಕಿಸ್ತಾನ್ ರಾಷ್ಟ್ರೀಯ ತಂಡ. ಕ್ರಮ ಜರುಗಿದ್ದು ದೇಶೀಯ ಆಟಗಾರರ ಮೇಲೆ..!
- Zahir Yusuf
- Updated on: Mar 13, 2025
- 1:23 pm
ಐಸಿಸಿ ಅಂದ್ರೆ ಇಂಡಿಯನ್ ಕ್ರಿಕೆಟ್ ಬೋರ್ಡ್ ಆಗಿಬಿಟ್ಟಿದೆ: ಮಾಜಿ ಕ್ರಿಕೆಟಿಗ ತರಾಟೆ
Team India: ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದ ಬೆನ್ನಲ್ಲೇ ವೆಸ್ಟ್ ಇಂಡೀಸ್ನ ಮಾಜಿ ಕ್ರಿಕೆಟಿಗ ಆಂಡಿ ರಾಬರ್ಟ್ಸ್ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದು ಸಹ ಐಸಿಸಿ ಟೀಮ್ ಇಂಡಿಯಾಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಆರೋಪಿಸುವ ಮೂಲಕ ಎಂಬುದು ವಿಶೇಷ.
- Zahir Yusuf
- Updated on: Mar 13, 2025
- 8:30 am
ನಮ್ಮ ಜೊತೆ 10 ಪಂದ್ಯಗಳನ್ನಾಡಿ ನೋಡಿ: ಟೀಮ್ ಇಂಡಿಯಾಗೆ ಪಾಕ್ ಕ್ರಿಕೆಟಿಗನ ಸವಾಲು
India vs Pakistan: ಭಾರತ ಮತ್ತು ಪಾಕಿಸ್ತಾನ್ ಈವರೆಗೆ ಒಟ್ಟು 208 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಪಾಕಿಸ್ತಾನ್ ತಂಡ 88 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ, ಭಾರತ ತಂಡ 76 ಪಂದ್ಯಗಳನ್ನು ಗೆದ್ದುಕೊಂಡಿದೆ. ಆದರೆ ಕಳೆದೊಂದು ದಶಕದಿಂದ ಪಾಕಿಸ್ತಾನ್ ವಿರುದ್ಧ ಟೀಮ್ ಇಂಡಿಯಾ ಪಾರುಪತ್ಯ ಮರೆಯುತ್ತಾ ಬರುತ್ತಿದೆ. ಹೀಗಾಗಿಯೇ ಉಭಯ ತಂಡಗಳ ನಡುವಣ ದ್ವಿಪಕ್ಷೀಯ ಸರಣಿ ಮೂಲಕ ಯಾರು ಬಲಿಷ್ಠ ಎಂಬುದು ನಿರ್ಧಾರವಾಗಲಿ ಎಂದು ಸಕ್ಲೇನ್ ಮುಷ್ತಾಕ್ ಆಗ್ರಹಿಸಿದ್ದಾರೆ.
- Zahir Yusuf
- Updated on: Mar 12, 2025
- 10:33 am