AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳೆದ ಮೂರು ತಿಂಗಳಲ್ಲಿ ಭಾರತದಲ್ಲಿ ಮಾರಾಟವಾದ ಸ್ಮಾರ್ಟ್​ಫೋನ್​ಗಳ ಸಂಖ್ಯೆ 5 ಕೋಟಿ ಸಮೀಪ

Smartphone shipments rose on 2nd quarter: ಜುಲೈನಿಂದ ಸೆಪ್ಟೆಂಬರ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಿರುವ ಸ್ಮಾರ್ಟ್​ಫೋನ್ ಸಂಖ್ಯೆ 4.71 ಕೋಟಿ ಆಗಿದೆ. ಕೆನಲಿಸ್ ವರದಿ ಪ್ರಕಾರ ಶಿಪ್ಪಿಂಗ್ ಆದ ಸ್ಮಾರ್ಟ್​ಫೋನ್​ನಲ್ಲಿ ಶೇ. 9ರಷ್ಟು ಹೆಚ್ಚಳವಾಗಿದೆ. ವಿವೋ ಭಾರತದಲ್ಲಿ ಮೊದಲ ಬಾರಿಗೆ ವಿವೋ ಮೊದಲ ಸ್ಥಾನ ಪಡೆದಿದೆ. ಶಿಯೋಮಿ, ಸ್ಯಾಮ್ಸುಂಗ್, ಓಪ್ಪೋ ಮತ್ತು ರಿಯಲ್ಮಿ ಕಂಪನಿಗಳು ಟಾಪ್-5ನಲ್ಲಿವೆ.

ಕಳೆದ ಮೂರು ತಿಂಗಳಲ್ಲಿ ಭಾರತದಲ್ಲಿ ಮಾರಾಟವಾದ ಸ್ಮಾರ್ಟ್​ಫೋನ್​ಗಳ ಸಂಖ್ಯೆ 5 ಕೋಟಿ ಸಮೀಪ
ಸ್ಮಾರ್ಟ್​ಫೋನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 20, 2024 | 5:27 PM

Share

ನವದೆಹಲಿ, ಅಕ್ಟೋಬರ್ 20: ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ ಆದ ಜುಲೈನಿಂದ ಸೆಪ್ಟೆಂಬರ್​ವರೆಗಿನ ಅವಧಿಯಲ್ಲಿ ಭಾರತದಲ್ಲಿ ಸ್ಮಾರ್ಟ್​ಫೋನ್ ಮಾರಾಟದಲ್ಲಿ ಭರ್ಜರಿ ಹೆಚ್ಚಳವಾಗಿದೆ. ಕೆನಲಿಸ್ ಎನ್ನುವ ಮಾರ್ಕೆಟ್ ರಿಸರ್ಚ್ ಕಂಪನಿ ನಿನ್ನೆ ಬಿಡುಗಡೆ ಮಾಡಿದ ವರದಿ ಪ್ರಕಾರ ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕ ಅವಧಿಯಲ್ಲಿ ಭಾರತದಲ್ಲಿ ಬಿಕರಿಯಾದ ಸ್ಮಾರ್ಟ್​ಫೋನ್​ಗಳ ಸಂಖ್ಯೆ 47.1 ಮಿಲಿಯನ್ (4.71 ಕೋಟಿ). ಕಳೆದ ವರ್ಷದ ಇದೇ ಕ್ವಾರ್ಟರ್​ಗೆ ಹೋಲಿಸಿದರೆ ಸ್ಮಾರ್ಟ್​ಫೋನ್ ಮಾರಾಟದಲ್ಲಿ ಶೇ. 9ರಷ್ಟು ಏರಿಕೆ ಆಗಿದೆ.

ವಿವೋ ನಂಬರ್ ಒನ್

ಚೀನಾ ಮೂಲದ ಕಂಪನಿಗಳೇ ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮುಂದುವರಿಸಿವೆ. ವಿವೋ ಕಂಪನಿ ಈಗ ಮೊದಲ ಬಾರಿಗೆ ಅಗ್ರಪಟ್ಟ ಗಿಟ್ಟಿಸಿದೆ. ಸ್ಮಾರ್ಟ್​ಫೋನ್ ಮಾರಾಟದಲ್ಲಿ ಶಿಯೋಮಿಯನ್ನು ವಿವೋ ಹಿಂದಿಕ್ಕಿದೆ. ಕೆನಲಿಸ್ ವರದಿ ಪ್ರಕಾರ ವಿವೋದ 91 ಲಕ್ಷ ಯೂನಿಟ್​​ಗಳು ಈ ಮೂರು ತಿಂಗಳಲ್ಲಿ ಬಿಕರಿಯಾಗಿವೆ. ಒಟ್ಟಾರೆ ಮಾರುಕಟ್ಟೆಯಲ್ಲಿ ಅದು ಶೇ. 19ರಷ್ಟು ಪಾಲು ಹೊಂದಿದೆ.

ಇದನ್ನೂ ಓದಿ: ಭಾರತದಲ್ಲಿ ಸ್ಟಾರ್ಟಪ್​ಗಳಿಗೆ ಮತ್ತೆ ಫಂಡಿಂಗ್ ಸುಗ್ಗಿ; ಒಂದೇ ವಾರದಲ್ಲಿ ಮೂರು ಪಟ್ಟು ಬಂಡವಾಳ ಹೆಚ್ಚಳ

ವಿವೋ, ಶಿಯೋಮಿ, ಸ್ಯಾಮ್ಸುಂಗ್, ಓಪ್ಪೋ ಮತ್ತು ರಿಯಲ್ಮಿ ಕಂಪನಿಗಳು ಸ್ಮಾರ್ಟ್​ಫೋನ್ ಮಾರಾಟದಲ್ಲಿ ಕ್ರಮವಾಗಿ ಒಂದರಿಂದ ಐದು ಸ್ಥಾನಗಳನ್ನು ಪಡೆದಿವೆ. ಆ್ಯಪಲ್ ಕಂಪನಿಯ ಐಫೋನ್15 ಸ್ಮಾರ್ಟ್​ಫೋನ್​ಗೆ ಒಳ್ಳೆಯ ಬೇಡಿಕೆ ಇದೆ. ಸಣ್ಣ ನಗರಗಳಿಂದಲೂ ಈ ಹೊಸ ಐಫೋನ್ ಮಾಡಲ್​ಗೆ ಬೇಡಿಕೆ ಇದೆ. ಮೊಟರೋಲ, ಗೂಗಲ್, ನಥಿಂಗ್ ಇತ್ಯಾದಿ ಬ್ರ್ಯಾಂಡ್​ಗಳ ಸ್ಮಾರ್ಟ್​ಫೋನ್​ಗಳ ಮಾರಾಟವೂ ಹೆಚ್ಚಳ ಕಂಡಿದೆ.

ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಟಾಪ್-5 ಕಂಪನಿಗಳು ಮತ್ತು ಮಾರಾಟ ಪ್ರಮಾಣ

ಬಿಕರಿಯಾದ ಒಟ್ಟು ಸ್ಮಾರ್ಟ್​ಫೋನ್​ಗಳು: 4.71 ಕೋಟಿ

  1. ವಿವೋ: 91 ಲಕ್ಷ ಯೂನಿಟ್
  2. ಶಿಯೋಮಿ: 78 ಲಕ್ಷ ಯೂನಿಟ್
  3. ಸ್ಯಾಮ್ಸುಂಗ್: 75 ಲಕ್ಷ ಯೂನಿಟ್
  4. ಓಪ್ಪೋ: 63 ಲಕ್ಷ ಯೂನಿಟ್
  5. ರಿಯಲ್ಮಿ: 53 ಲಕ್ಷ ಯೂನಿಟ್

ಇಲ್ಲಿ ಓಪ್ಪೋ ಸ್ಮಾರ್ಟ್​ಫೋನ್ ಮಾರಾಟದಲ್ಲಿ ಒನ್​ಪ್ಲಸ್ ಫೋನ್​ಗಳನ್ನು ಒಳಗೊಳ್ಳಲಾಗಿಲ್ಲ.

ಇದನ್ನೂ ಓದಿ: ಅಂಬಾನಿ ವರ್ಸಸ್ ಮಸ್ಕ್; ಭಾರತೀಯ ಸೆಟಿಲೈಟ್ ಇಂಟರ್ನೆಟ್ ಯುದ್ಧದಲ್ಲಿ ಗೆಲ್ಲೋದ್ಯಾರು?

ಸ್ಮಾರ್ಟ್​ಫೋನ್ ಮಾರಾಟ ಹೆಚ್ಚಳವಾದರೂ ಕಂಪನಿಗಳು ನಿರೀಕ್ಷಿಸಿದಷ್ಟಿಲ್ಲ…

ಈ ಬಾರಿ ಹಬ್ಬದ ಸೀಸನ್​ಗೆ ವಿವಿಧ ಸ್ಮಾರ್ಟ್​ಫೋನ್ ಕಂಪನಿಗಳು ಭರ್ಜರಿ ಡಿಸ್ಕೌಂಟ್ ಸೇಲ್ ಕೈಗೊಂಡಿದ್ದವು. ಸಾಕಷ್ಟು ಸ್ಮಾರ್ಟ್​ಫೋನ್​ಗಳ ದಾಸ್ತಾನು ಉಳಿದಿದ್ದು ಅವನ್ನು ಖಾಲಿ ಮಾಡುವ ಉಮೇದಿನಲ್ಲಿ ಆನ್ಲೈನ್ ಸೇಲ್​ನಲ್ಲಿ ಒಳ್ಳೆಯ ಡಿಸ್ಕೌಂಟ್ ನೀಡಲಾಗಿತ್ತು. ಎಲ್ಲಾ ದಾಸ್ತಾನು ಖಾಲಿ ಮಾಡುವ ನಿರೀಕ್ಷೆಯಲ್ಲಿದ್ದ ಕಂಪನಿಗಳಿಗೆ, ನಿರೀಕ್ಷಿಸಿದಷ್ಟು ಮಾರಾಟ ಆಗದೇ ನಿರಾಸೆಯಾಗಿದೆ. ಇನ್ನೂ ಬಹಳಷ್ಟು ಸ್ಟಾಕ್​ಗಳಿದ್ದು, ಇಯರ್ ಎಂಡ್ ಸೇಲ್​ನಲ್ಲಿ ಅವನ್ನು ಮಾರಿ ಮುಗಿಸುವ ಆಲೋಚನೆಯಲ್ಲಿವೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್​ವರೆಗೂ ವಿವಿಧ ಸ್ಮಾರ್ಟ್​ಫೋನ್​ಗಳನ್ನು ಭರ್ಜರಿ ಡಿಸ್ಕೌಂಟ್ ದರದಲ್ಲಿ ಖರೀದಿಸುವ ಅವಕಾಶ ಸಿಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ