AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SpiceJet: ಪೈಲಟ್​ಗಳ ಮಾಸಿಕ ವೇತನ ಹೆಚ್ಚಿಸಿದ ಸ್ಪೈಸ್​ಜೆಟ್​

ಸ್ಪೈಸ್‌ಜೆಟ್‌ ಏರ್‌ಲೈನ್ಸ್ ಮಂಗಳವಾರ ತನ್ನ ಪೈಲಟ್‌ಗಳ ಮಾಸಿಕ ವೇತನವನ್ನು 75 ಗಂಟೆಗಳ ಹಾರಾಟಕ್ಕೆ 7.5 ಲಕ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿದೆ. ಹೆಚ್ಚುವರಿಯಾಗಿ ಏರ್​ಲೈನ್​ ತನ್ನ ಕ್ಯಾಪ್ಟನ್​ಗಳಿಗೆ ತಿಂಗಳಿಗೆ 1 ಲಕ್ಷ ರೂ.ವರೆಗಿನ ಅವಧಿ-ಸಂಬಂಧಿತ ಮಾಸಿಕ ಲಾಯಲ್ಟಿ ಬಹುಮಾನವನ್ನು ಘೋಷಿಸಿದೆ.

SpiceJet: ಪೈಲಟ್​ಗಳ ಮಾಸಿಕ ವೇತನ ಹೆಚ್ಚಿಸಿದ ಸ್ಪೈಸ್​ಜೆಟ್​
ಸ್ಪೈಸ್​ಜೆಟ್
ನಯನಾ ರಾಜೀವ್
|

Updated on: May 24, 2023 | 8:18 AM

Share

ಸ್ಪೈಸ್‌ಜೆಟ್‌(SpiceJet) ಏರ್‌ಲೈನ್ಸ್ ಮಂಗಳವಾರ ತನ್ನ ಪೈಲಟ್‌ಗಳ ಮಾಸಿಕ ವೇತನವನ್ನು 75 ಗಂಟೆಗಳ ಹಾರಾಟಕ್ಕೆ 7.5 ಲಕ್ಷಕ್ಕೆ ಹೆಚ್ಚಿಸುವುದಾಗಿ ಘೋಷಿಸಿದೆ. ಹೆಚ್ಚುವರಿಯಾಗಿ ಏರ್​ಲೈನ್​ ತನ್ನ ಕ್ಯಾಪ್ಟನ್​ಗಳಿಗೆ ತಿಂಗಳಿಗೆ 1 ಲಕ್ಷ ರೂ.ವರೆಗಿನ ಅವಧಿ-ಸಂಬಂಧಿತ ಮಾಸಿಕ ಲಾಯಲ್ಟಿ ಬಹುಮಾನವನ್ನು ಘೋಷಿಸಿದೆ. ಅದು ಅವರ ಮಾಸಿಕ ಸಂಭಾವನೆಗಿಂತ ಅಧಿಕವಾಗಿರುತ್ತದೆ. ಇದರ ಜೊತೆಗೆ, ವಿಮಾನಯಾನ ಸಂಸ್ಥೆಯು ತನ್ನ ಪೈಲಟ್‌ಗಳಿಗೆ ಅವರ ಸಂಬಳಕ್ಕಿಂತ ಹೆಚ್ಚಿನ ಮಾಸಿಕ 1 ಲಕ್ಷ ರೂ. ವರೆಗೆ ಮಾಸಿಕ ಲಾಯಲ್ಟಿ ಬಹುಮಾನವನ್ನು ಘೋಷಿಸಿದೆ. ಸ್ಪೈಸ್‌ಜೆಟ್ ತನ್ನ 18 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದು, ಹೆಚ್ಚಳವು ಮೇ 16, 2023 ರಿಂದ ಅನ್ವಯವಾಗಲಿದೆ ಎಂದು ಹೇಳಿದೆ.

ಈ ಹಿಂದೆ ನವೆಂಬರ್ 2022 ರಲ್ಲಿ, ಏರ್‌ಲೈನ್ ತನ್ನ ಪೈಲಟ್‌ಗಳ ವೇತನವನ್ನು ಪರಿಷ್ಕರಿಸಿತ್ತು, ಇದರಲ್ಲಿ 80 ಗಂಟೆಗಳ ಹಾರಾಟಕ್ಕೆ ತಿಂಗಳಿಗೆ 7 ಲಕ್ಷ ರೂಪಾಯಿಗಳಿಗೆ ಸಂಬಳವನ್ನು ಹೆಚ್ಚಿಸಲಾಯಿತು.

ಸ್ಪೈಸ್‌ಜೆಟ್ ಸುಮಾರು 250 ದೈನಂದಿನ ವಿಮಾನಗಳನ್ನು (ಭಾರತ ಮತ್ತು ಅಂತಾರಾಷ್ಟ್ರೀಯ) 48 ಸ್ಥಳಗಳಿಗೆ ನಿರ್ವಹಿಸುತ್ತದೆ. ಪೈಲಟ್‌ಗಳ ಹೊರತಾಗಿ, ತರಬೇತುದಾರರು (ಡಿಇ, ಟಿಆರ್‌ಐ) ಮತ್ತು ಫಸ್ಟ್ ಆಫೀಸರ್‌ಗಳ ವೇತನವನ್ನೂ ಅದೇ ಅನುಪಾತದಲ್ಲಿ ಹೆಚ್ಚಿಸಲಾಗಿದೆ ಎಂದು ಸ್ಪೈಸ್‌ಜೆಟ್ ಮಾಹಿತಿ ನೀಡಿದೆ.

ಮತ್ತಷ್ಟು ಓದಿ: SpiceJet flight ಜೆದ್ದಾದಿಂದ ಹೊರಟ ಸ್ಪೈಸ್‌ಜೆಟ್ ವಿಮಾನ ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಶ

ಸ್ಪೈಸ್‌ಜೆಟ್‌ನ ಎಂ-ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಪ್ರಯಾಣಿಕರು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು.

2023 ರಲ್ಲಿ 18 ವರ್ಷ ತುಂಬಿದ ಅಥವಾ ಆಗಲಿರುವ ಪ್ರಯಾಣಿಕರಿಗೆ ಸ್ಪೈಸ್‌ಜೆಟ್ ರೂ 3000 ವರೆಗಿನ ಉಚಿತ ಫ್ಲೈಟ್ ವೋಚರ್‌ಗಳನ್ನು ನೀಡುತ್ತಿದೆ. ಈ ಮಾರಾಟದ ಕೊಡುಗೆಯಲ್ಲಿ, ಪ್ರಯಾಣಿಕರು ತಮ್ಮ ನೆಚ್ಚಿನ ಸೀಟುಗಳನ್ನು ಫ್ಲಾಟ್ 18 ರೂ. ನಲ್ಲಿ ಬುಕ್ ಮಾಡಬಹುದು ಮತ್ತು SpiceMax ನಲ್ಲಿ  ಶೇ. 50 ರಿಯಾಯಿತಿ ಪಡೆಯಬಹುದು.

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ