AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Investors Wealth: ಕರ್ನಾಟಕ ಬಜೆಟ್​ನ 3 ವರ್ಷದ ಮೊತ್ತ ಷೇರುಪೇಟೆಯಲ್ಲಿ ಒಂದೇ ದಿನದಲ್ಲಿ ಕಳ್ಕೊಂಡ ಹೂಡಿಕೆದಾರರು

ಹೂಡಿಕೆದಾರರ ಸಂಪತ್ತು ಷೇರು ಮಾರುಕಟ್ಟೆಯಲ್ಲಿ ನವೆಂಬರ್ 22, 2021ರಂದು 8.22 ಲಕ್ಷ ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದ್ದಾರೆ.

Investors Wealth: ಕರ್ನಾಟಕ ಬಜೆಟ್​ನ 3 ವರ್ಷದ ಮೊತ್ತ ಷೇರುಪೇಟೆಯಲ್ಲಿ ಒಂದೇ ದಿನದಲ್ಲಿ ಕಳ್ಕೊಂಡ ಹೂಡಿಕೆದಾರರು
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Nov 22, 2021 | 11:02 PM

Share

ಭಾರತದ ಷೇರು ಮಾರುಕಟ್ಟೆಯಲ್ಲಿನ 8,21,666.77 ಕೋಟಿ ರೂಪಾಯಿ, ಅಂದರೆ 8.22 ಲಕ್ಷ ಕೋಟಿ ರೂಪಾಯಿ ಹೂಡಿಕೆದಾರರ ಹಣ ನವೆಂಬರ್ 22ನೇ ತಾರೀಕಿನ ಸೋಮವಾರದ ಒಂದೇ ದಿನ ಕೊಚ್ಚಿಕೊಂಡು ಹೋಗಿದೆ. ಕಳೆದ ಹಲವು ತಿಂಗಳಲ್ಲೇ ಕಂಡರಿಯದ ಪ್ರಮಾಣದಲ್ಲಿ ಮಾರಾಟದ ಒತ್ತಡ ಬಿದ್ದಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಸೋಮವಾರ ಒಂದು ದಿನ ಕಳೆದುಕೊಂಡ ಈ ಮೊತ್ತವಿದೆಯಲ್ಲಾ, ಕರ್ನಾಟಕ ಬಜೆಟ್​ಗಿಂತ (2021- 22ರಲ್ಲಿ 2.46 ಲಕ್ಷ ಕೋಟಿ ರೂಪಾಯಿ) ಮೂರು ಪಟ್ಟಿಗೂ ಅಧಿಕವಾಗುತ್ತದೆ. ಬಿಎಸ್​ಇ ಸೆನ್ಸೆಕ್ಸ್​ 1,170.12 ಪಾಯಿಂಟ್ಸ್ ಅಥವಾ ಶೇ 1.96ರಷ್ಟು ಕುಸಿದು, 58,465.89 ಪಾಯಿಂಟ್ಸ್ ಮುಟ್ಟಿತು. ಕಳೆದ ಏಳು ತಿಂಗಳ ಅವಧಿಯಲ್ಲಿ ಒಂದೇ ದಿನದಲ್ಲಿ ಷೇರು ಮಾರುಕಟ್ಟೆಯು ಕಂಡ ಅತಿದೊಡ್ಡ ಕುಸಿತ ಇದು. ಮತ್ತು ಸತತ ನಾಲ್ಕನೇ ಸೆಷನ್​ ಸೆನ್ಸೆಕ್ಸ್ ಇಳಿಕೆ ದಾಖಲಿಸಿದೆ. ಒಂದು ಹಂತದಲ್ಲಿ ಸೆನ್ಸೆಕ್ಸ್ 1624.09 ಪಾಯಿಂಟ್ಸ್ ನೆಲ ಕಚ್ಚಿತ್ತು. ಬಿಎಸ್​ಇ ಲಿಸ್ಟೆಡ್​ ಕಂಪೆನಿಗಳು 8,21,666.77 ಕೋಟಿ ರೂಪಾಯಿ ಕಡಿಮೆ ಆಗಿ, 2,60,98,530.22 ಕೋಟಿ ರೂಪಾಯಿ ತಲುಪಿತು.

“ಸ್ಥಿರವಾದ ಜಾಗತಿಕ ಪ್ರಭಾವದ ಮಧ್ಯೆಯೂ ಇಂದಿನ ವಹಿವಾಟಿನ ಅವಧಿಯಲ್ಲಿ ಭಾರತೀಯ ಮಾರುಕಟ್ಟೆಯು ತೀಕ್ಷ್ಣವಾದ ಮಾರಾಟಕ್ಕೆ ಸಾಕ್ಷಿಯಾಗಿದೆ. ಕೃಷಿ ಕಾನೂನು ಮಸೂದೆಗಳನ್ನು ಹಿಂತೆಗೆದುಕೊಳ್ಳುವಾಗ ರಿಲಯನ್ಸ್ ಮಾರುಕಟ್ಟೆಯ ಮೇಲೆ ಒತ್ತಡವನ್ನು ಬೀರಿದೆ ಮತ್ತು ಪೇಟಿಎಂ ಐಪಿಒ ಕಳಪೆ ಪ್ರದರ್ಶನವು ಬಹುನಿರೀಕ್ಷಿತ ಇಳಿಕೆಗೆ ಕೆಲವು ನೆಪಗಳಾಗಿವೆ. ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಮಾರಾಟ ಮಾಡುತ್ತಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ನಿರಂತರವಾಗಿ ಮೌಲ್ಯಮಾಪನಗಳನ್ನು ವಿಸ್ತರಿಸಲಾಗಿದೆ ಎಂದು ಭಾವಿಸುತ್ತಿದ್ದಾರೆ. ಆದರೆ ಇನ್ನೂ ಭಾರತದ ಮೇಲೆ ದೀರ್ಘಾವಧಿಯ ಬುಲಿಶ್ ದೃಷ್ಟಿಕೋನವನ್ನು ಹೊಂದಿದ್ದಾರೆ,” ಎನ್ನುತ್ತಾರೆ ವಿಶ್ಲೇಷಕರು.

ಪೇಟಿಎಂನ ಮಾತೃ ಸಂಸ್ಥೆಯಾದ One97 ಕಮ್ಯುನಿಕೇಷನ್ಸ್, ಬಿಎಸ್​ಇನಲ್ಲಿ ಷೇರಿಗೆ ಶೇ 13ರಷ್ಟು ಕುಸಿದು, ರೂ. 1,360.30 ತಲುಪಿತು. “ರಿಲಯನ್ಸ್-ಅರಾಮ್ಕೋ ಒಪ್ಪಂದದ ರದ್ದತಿ, ಕೃಷಿ ಕಾಯ್ದೆಗಳ ಹಿಂಪಡೆಯುವಿಕೆ, ಎಫ್‌ಐಐಗಳ ನಿರಂತರ ಮಾರಾಟ ಮತ್ತು ಪೇಟಿಎಂ ಲಿಸ್ಟಿಂಗ್​ನಿಂದ ನಿರಾಶೆಗೀಡಾದ ಮಾರುಕಟ್ಟೆ ಭಾವನೆಗಳು ಮಾರುಕಟ್ಟೆಯಲ್ಲಿ ಮುಕ್ತ ಕುಸಿತಕ್ಕೆ ಕಾರಣವಾಯಿತು,” ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್‌ನ ಲಿಮಿಟೆಡ್ ರಿಟೇಲ್ ರೀಸರ್ಚ್ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ಹೇಳಿದ್ದಾರೆ.

ಇದನ್ನೂ ಓದಿ: Share Market News: ಷೇರು ಮಾರುಕಟ್ಟೆಯಲ್ಲಿ ‘ಕರಡಿ ಹಿಡಿತ’; 1500ಕ್ಕೂ ಹೆಚ್ಚು ಪಾಯಿಂಟ್ಸ್​ ಕುಸಿದ ಸೆನ್ಸೆಕ್ಸ್

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್