Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು, ಹೈದರಾಬಾದ್ ಮಧ್ಯೆ ಜೀವ ವಿಜ್ಞಾನ ಕಾರಿಡಾರ್: ತೆಲಂಗಾಣ ಸಚಿವ ಕೆಟಿಆರ್ ಪ್ರಸ್ತಾಪ

KT Rama Rao Speaks: ಹೈದರಾಬಾದ್ ಮತ್ತು ಬೆಂಗಳೂರು ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರತಿಸ್ಪರ್ಧಿಗಳಾಗಿವೆ. ನನಗೆ ಹೈದರಾಬಾದ್​ನಷ್ಟೇ ಬೆಂಗಳೂರೂ ಇಷ್ಟ. ನಾವು ಸಹಭಾಗಿತ್ವ ಸಾಧಿಸಿ ಒಗ್ಗೂಡಿದರೆ ಒಟ್ಟಿಗೆ ಬೆಳೆದು ದೇಶದ ಉನ್ನತಿಗೆ ಕಾರಣವಾಗಬಹುದು ಎಂದು ಕೆಟಿ ರಾಮರಾವ್ ಹೇಳಿದ್ದಾರೆ. ಬಯೋಲಜಿ ಮತ್ತು ಟೆಕ್ನಾಲಜಿ ಕ್ಷೇತ್ರದಲ್ಲಿ ಮುಂದಿರುವ ಈ ಎರಡು ನಗರಗಳ ಮಧ್ಯೆ ಜೀವ ವಿಜ್ಞಾನ ತಂತ್ರಜ್ಞಾನದ ಕಾರಿಡಾರ್ ಆದರೆ ಉತ್ತಮ ಎಂದೂ ಅವರು ಸಲಹೆ ನೀಡಿದ್ದಾರೆ.

ಬೆಂಗಳೂರು, ಹೈದರಾಬಾದ್ ಮಧ್ಯೆ ಜೀವ ವಿಜ್ಞಾನ ಕಾರಿಡಾರ್: ತೆಲಂಗಾಣ ಸಚಿವ ಕೆಟಿಆರ್ ಪ್ರಸ್ತಾಪ
ಕೆಟಿ ರಾಮರಾವ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 14, 2023 | 6:53 PM

ಹೈದರಾಬಾದ್, ಸೆಪ್ಟೆಂಬರ್ 14: ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ಮಧ್ಯೆ ಲೈಫ್ ಸೈನ್ಸಸ್ ತಂತ್ರಜ್ಞಾನ ಕಾರಿಡಾರ್ (Life Sciences Technology Corridor) ನಿರ್ಮಿಸುವ ಪ್ರಸ್ತಾಪವನ್ನು ತೆಲಂಗಾಣ ಸಚಿವ ಕೆಟಿ ರಾಮರಾವ್ ಮುಂದಿಟ್ಟಿದ್ದಾರೆ. ಇಲ್ಲಿಯ ಜಿನೋಮ್ ವ್ಯಾಲಿಯಲ್ಲಿ ನಡೆದ ಸಿನ್​ಜೀನ್ ಸೈಂಟಿಫಿಕ್ ಸಲ್ಯೂಶನ್ಸ್ ರಿಸರ್ಚ್ ಲ್ಯಾಬ್​ನ (Syngene Scientific Solutions Research Lab) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ತೆಲಂಗಾಣ ಉದ್ಯಮ ಸಚಿವ ಕೆಟಿಆರ್, ಜೀವಶಾಸ್ತ್ರ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಬೆಂಗಳೂರು ಮತ್ತು ಹೈದರಾಬಾದ್ ಮಧ್ಯೆ ಜೀವ ವಿಜ್ಞಾನ ತಂತ್ರಜ್ಞಾನದ ಕಾರಿಡಾರ್ ಸ್ಥಾಪನೆಯಾದರೆ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

ಹೈದರಾಬಾದ್ ಮತ್ತು ಬೆಂಗಳೂರು ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರತಿಸ್ಪರ್ಧಿಗಳಾಗಿವೆ. ನನಗೆ ಹೈದರಾಬಾದ್​ನಷ್ಟೇ ಬೆಂಗಳೂರೂ ಇಷ್ಟ. ನಾವು ಸಹಭಾಗಿತ್ವ ಸಾಧಿಸಿ ಒಗ್ಗೂಡಿದರೆ ಒಟ್ಟಿಗೆ ಬೆಳೆದು ದೇಶದ ಉನ್ನತಿಗೆ ಕಾರಣವಾಗಬಹುದು ಎಂದು ಕೆಟಿ ರಾಮರಾವ್ ಹೇಳಿದ್ದಾರೆ.

ಇದನ್ನೂ ಓದಿ: ಇಟಲಿಗೆ ಅಡಿ ಇಟ್ಟ ಅಂಬಾನಿ ಮಾಲಕತ್ವದ ಹ್ಯಾಮ್ಲೀಸ್; ಜಿಯೋಚಿ ಪ್ರೆಜಿಯೋಸಿ ಜೊತೆ ರಿಲಾಯನ್ಸ್ ಒಪ್ಪಂದ

ಕಳೆದ ಎರಡು ವರ್ಷದಲ್ಲೇ ತೆಲಂಗಾಣದಲ್ಲಿ ಲೈಫ್ ಸೈನ್ಸಸ್ ವಲಯ ಶೇ. 23ರಷ್ಟು ಬೆಳೆದಿದದೆ. ಈ ಅವಧಿಯಲ್ಲಿ ಶೇ. 14ರಷ್ಟಿರುವ ರಾಷ್ಟ್ರೀಯ ಸರಾಸರಿಗಿಂತ ತೆಲಂಗಾಣ ಉತ್ತಮ ಬೆಳವಣಿಗೆ ಕಂಡಿದೆ. ತೆಲಂಗಾಣ ರಾಜ್ಯ ನಿರ್ಮಾಣವಾದ ಬಳಿಕ ಐದು ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಈ ಇಕೋಸಿಸ್ಟಂ ಅನ್ನು ಇನ್ನಷ್ಟು ಹೆಚ್ಚಿಸಿ, 2030ರಷ್ಟರಲ್ಲಿ ಹೈದರಾಬಾದ್ 250 ಬಿಲಿಯನ್ ಡಾಲರ್ ಮೊತ್ತದ ಉದ್ಯಮ ಹೊಂದುವಂತೆ ಮಾಡುವ ಗುರಿ ನಮ್ಮದಾಗಿದೆ ಎಂದು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಮಗ ಕೂಡ ಆಗಿರುವ ಕೆಟಿಆರ್ ತಿಳಿಸಿದ್ದಾರೆ.

ಬೆಂಗಳೂರಿನ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಮ್ದಾರ್ ಷಾ ಅವರನ್ನು ಇದೇ ವೇಳೆ ಕೆಟಿಆರ್ ಶ್ಲಾಘಿಸಿದ್ದಾರೆ. ‘ಅವರನ್ನು ಭೇಟಿಯಾಗಿ ಮಾತನಾಡುವಾಗೆಲ್ಲಾ ನನಗೆ ಉತ್ಸಾಹ ಮೂಡುತ್ತದೆ. ಯುವಕ ಮತ್ತು ಯುವತಿಯರಿಗೆ ಅವರು ಮಾದರಿಯಾಗಿದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಾರತದ ಐಎಂಇಇಸಿ ಕಾರಿಡಾರ್ ಅದೆಷ್ಟು ಐತಿಹಾಸಿಕ ಗೊತ್ತಾ? ಇತಿಹಾಸಕಾರ ವಿಲಿಯಂ ಹೇಳೋದಿದು

ಇನ್ನು ಚುನಾವಣಾ ರಾಜಕೀಯದ ಬಗ್ಗೆ ಮಾತನಾಡಿದ ಕೆಟಿ ರಾಮರಾವ್, ಒಂದು ಚುನಾವಣೆಗೆ ಹಿಂದಿನ 6 ತಿಂಗಳು ರಾಜಕೀಯ ನಡೆಯಬಹುದು. ಅದರೆ, ಉಳಿದ ನಾಲ್ಕೂವರೆ ವರ್ಷ ಉತ್ತಮ ಆರ್ಥಿಕ ನಿರ್ವಹಣೆಯೇ ಉತ್ತಮ ರಾಜಕಾರಣ ಆಗಿರುತ್ತದೆ ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
Video:ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ, ಪೊಲೀಸರ ಮೇಲೆ ಕಲ್ಲು ತೂರಾಟ
Video:ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ, ಪೊಲೀಸರ ಮೇಲೆ ಕಲ್ಲು ತೂರಾಟ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ