AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vedanta: ಡಿಸ್​ಪ್ಲೇ ಫ್ಯಾಬ್ ಘಟಕ ಸ್ಥಾಪನೆಗೆ ವೇದಾಂತ ಮತ್ತು ತೈವಾನ್​ನ ಇನ್ನೋಲುಕ್ಸ್ ನಡುವೆ ನಡೆದಿದೆ ಮಾತುಕತೆ

Display Fab Unit Proposal: ಟಿಎಫ್​ಡಿ ಎಲ್​ಸಿಡಿ ತಯಾರಿಸುವ ತೈವಾನ್​ನ ಇನ್ನೋಲುಕ್ಸ್ ಕಾರ್ಪೊರೇಶನ್ ಸಂಸ್ಥೆ ಜೊತೆ ವೇದಾಂತ ಗ್ರೂಪ್ ಮಾತುಕತೆ ನಡೆಸುತ್ತಿದೆ. ಈ ಎರಡೂ ಕಂಪನಿಗಳ ಉನ್ನತ ಅಧಿಕಾರಿಗಳು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಮಾತನಾಡಿರುವುದು ತಿಳಿದುಬಂದಿದೆ. ಈ ಮಾತುಕತೆ ಫಲಪ್ರದವಾದರೆ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಒಂದು ಪುಷ್ಟಿ ಸಿಕ್ಕಂತಾಗುತ್ತದೆ.

Vedanta: ಡಿಸ್​ಪ್ಲೇ ಫ್ಯಾಬ್ ಘಟಕ ಸ್ಥಾಪನೆಗೆ ವೇದಾಂತ ಮತ್ತು ತೈವಾನ್​ನ ಇನ್ನೋಲುಕ್ಸ್ ನಡುವೆ ನಡೆದಿದೆ ಮಾತುಕತೆ
ವೇದಾಂತ ಗ್ರೂಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 09, 2023 | 3:00 PM

Share

ನವದೆಹಲಿ, ನವೆಂಬರ್ 9: ಭಾರತದಲ್ಲಿ ಸೆಮಿಕಂಡ್ಟರ್ ಉದ್ದಿಮೆ (semiconductor manufacturing) ಶುರು ಮಾಡಲು ಪ್ರಯತ್ನಿಸುತ್ತಿರುವ ವೇದಾಂತ ಸಂಸ್ಥೆ ಇದೀಗ ಡಿಸ್​ಪ್ಲೇ ಫ್ಯಾಬ್ರಿಕೇಶನ್ ಘಟಕದ (display fab unit) ಸ್ಥಾಪನೆಗೆ ತೈವಾನ್ ಕಂಪನಿಯೊಂದರೊಂದಿಗೆ ಕೈಜೋಡಿಸಲು ಯತ್ನಿಸುತ್ತಿದೆ. ಟಿಎಫ್​ಡಿ ಎಲ್​ಸಿಡಿ ತಯಾರಿಸುವ ತೈವಾನ್​ನ ಇನ್ನೋಲುಕ್ಸ್ ಕಾರ್ಪೊರೇಶನ್ ಸಂಸ್ಥೆ ಜೊತೆ ವೇದಾಂತ ಗ್ರೂಪ್ ಮಾತುಕತೆ ನಡೆಸುತ್ತಿದೆ. ಈ ಎರಡೂ ಕಂಪನಿಗಳ ಉನ್ನತ ಅಧಿಕಾರಿಗಳು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಮಾತನಾಡಿರುವುದು ತಿಳಿದುಬಂದಿದೆ.

‘ವೇದಾಂತ ಡಿಸ್​ಪ್ಲೇಸ್ ಲಿ ಸಂಸ್ಥೆಯ ಸಿಇಒ ವೈ.ಜೆ. ಚೆನ್, ವೇದಾಂತ ಗ್ರೂಪ್​ನ ಸ್ಟ್ರಾಟಿಜಿ ಮತ್ತು ಪಾಲಿಸಿ ವಿಭಾಗದ ಛೇರ್ಮನ್ ಸುನೀಲ್ ದುಗ್ಗಲ್, ಇನ್ನೋಲುಕ್ಸ್​ನ ಡೈರೆಕ್ಟರ್ ಜೈಹ ಚೌ ವ್ಯಾಂಗ್ ಅವರು ನನ್ನ ಕಚೇರಿಗೆ ಬಂದಿದ್ದರು. ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ದೇಶೀಯವಾಗಿ ಡಿಸ್​ಪ್ಲೇ ತಯಾರಿಸುವ ವಿಚಾರದ ಬಗ್ಗೆ ನಾವು ಚರ್ಚೆ ಮಾಡಿದೆವು,’ ಎಂದು ರಾಜೀವ್ ಚಂದ್ರಶೇಖರ್ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಎಲ್ ಅಂಡ್ ಟಿಯಿಂದ ಫ್ಯಾಬ್ಲೆಸ್ ಸೆಮಿಕಂಡಕ್ಟರ್ ಡಿಸೈನ್ ಘಟಕ; ಪ್ರತ್ಯೇಕ ಉಪಸಂಸ್ಥೆ ರಚನೆಗೆ ಅನುಮೋದನೆ

ಇದರೊಂದಿಗೆ, ತೈವಾನ್​ನ ಇನ್ನೋಲುಕ್ಸ್ ಕಂಪನಿ ಜೊತೆ ವೇದಾಂತ ಮಾತುಕತೆ ನಡೆಸುತ್ತಿರುವ ಸಂಗತಿ ದೃಢಪಟ್ಟಿದೆ. ವೇದಾಂತದ ಸೆಮಿಕಂಡಕ್ಟರ್ ಮತ್ತು ಡಿಸ್​ಪ್ಲೇ ವ್ಯವಹಾರ ವಿಭಾಗದ ವಕ್ತಾರರೊಬ್ಬರು ಈ ವಿಚಾರವನ್ನು ಖಚಿತಪಡಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ಕೂಡ ತಿಳಿಸಿದೆ.

‘ಸರ್ಕಾರದ ಸ್ವಾವಂಬನೆಯ ಭಾರತದ ಮಹೋದ್ದೇಶಕ್ಕೆ ನಾವು ಬೆಂಬಲ ನೀಡಲು ಕಟಿಬದ್ಧರಾಗಿದ್ದೇವೆ. ಡಿಸ್​ಪ್ಲೇ ಫ್ಯಾಬ್ ಯೂನಿಟ್ ಅನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ. ಈ ಮೂಲಕ ಹೈಟೆಕ್ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್​ನಲ್ಲಿ ಸ್ವಾವಲಂಬನೆ ಸಾಧ್ಯವಾಗಬಹುದು,’ ಎಂದು ಆ ವಕ್ತಾರರು ಖಚಿತಪಡಿಸಿದ್ದಾರೆ.

ತೈವಾನ್​ನ ಇನ್ನೋಲುಕ್ಸ್ ಕಾರ್ಪೊರೇಶನ್ ಸಂಸ್ಥೆ ಟಿಎಫ್​ಟಿ ಎಲ್​ಸಿಡಿ ಡಿಸ್​ಪ್ಲೇ ಅನ್ನು ತಯಾರಿಸುತ್ತದೆ. ಥಿನ್ ಫಿಲಂ ಟ್ರಾನ್ಸಿಸ್ಟರ್ ತಂತ್ರಜ್ಞಾನದ ಮೂಲಕ ಎಲ್​ಸಿಡಿ ಸ್ಕ್ರೀನ್​ಗಳು ಇವು. ಕಂಪ್ಯೂಟರ್, ಲ್ಯಾಪ್​ಟಾಪ್, ಸ್ಮಾರ್ಟ್​ಫೋನ್ ಇತ್ಯಾದಿ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಇದನ್ನು ಬಳಸಲಾಗುತ್ತದೆ. ಒಟ್ಟಾರೆ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಸರಪಳಿಯ ಒಂದು ಭಾಗವಾಗಿ ಡಿಸ್​ಪ್ಲೇ ಫ್ಯಾಬ್ ಯೂನಿಟ್ ಇರುತ್ತದೆ.

ಇದನ್ನೂ ಓದಿ: ಸಹಸ್ರ ಸಾಧನೆ; ಸೆಮಿಕಂಡಕ್ಟರ್ ಮೆಮೊರಿ ಚಿಪ್ ತಯಾರಿಸಿದ ಮೊದಲ ಭಾರತೀಯ ಕಂಪನಿ ಎಂಬ ದಾಖಲೆ

ವೇದಾಂತ ಸಂಸ್ಥೆ ಸೆಮಿಕಂಡಕ್ಟರ್ ಚಿಪ್ ಘಟಕಗಳ ನಿರ್ಮಾಣದ ಮುಖ್ಯ ಗುರಿ ಹೊಂದಿದೆ. ಈ ಹಿಂದೆ ತೈವಾನ್​ನ ಫಾಕ್ಸ್​ಕಾನ್ ಜೊತೆ ಅದು ಒಪ್ಪಂದ ಮಾಡಿಕೊಂಡಿತ್ತು. ಸೆಮಿಕಂಡಕ್ಟರ್ ವೇಫರ್ ಫ್ಯಾಬ್ರಿಕೇಶನ್ ಘಟಕ ಸ್ಥಾಪನೆಯ ಪ್ರಸ್ತಾಪ ಇತ್ತು. ಆದರೆ, ಈ ಜಂಟಿ ವ್ಯವಹಾರ ಕೆಲ ತಿಂಗಳ ಹಿಂದೆ ಮುರಿದುಬಿದ್ದಿತು. ಎರಡೂ ಕಂಪನಿಗಳು ಪ್ರತ್ಯೇಕವಾಗಿ ಸೆಮಿಕಂಡಕ್ಟರ್ ಉತ್ಪಾದನೆಯ ಹಾದಿ ಹಿಡಿಯಲು ನಿರ್ಧರಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್