Whatsapp: ಈ ಬಿಲ್ ಬಂದರೆ ವಾಟ್ಸಾಪ್ ಸರ್ವಿಸ್ ನಿಲ್ಲಿಸಬೇಕಾಗುತ್ತೇನೋ..! ಬ್ರಿಟನ್ ವಿದ್ಯಮಾನಕ್ಕೆ ಮೆಟಾ ಕಂಗಾಲು

UK Online Safety Bill: ಬ್ರಿಟನ್ ದೇಶದ ಸಂಸತ್ತು ಆನ್​ಲೈನ್ ಸೇಫ್ಟಿ ಕಾನೂನಿನ ಕರಡು ಮಸೂದೆಗೆ ಅನುಮೋದನೆ ಕೊಟ್ಟಿದೆ. ಈ ಬೆಳವಣಿಗೆಯಿಂದ ವಾಟ್ಸಾಪ್ ಸೇರಿದಂತೆ ಎಲ್ಲಾ ಮೆಸೇಜಿಂಗ್ ಪ್ಲಾಟ್​ಫಾರ್ಮ್​ಗಳು ಆತಂಕಗೊಂಡಿವೆ. ಅಂಥದ್ದೇನಿದೆ ಈ ಬಿಲ್​ನಲ್ಲಿ...? ವಿವರ ಓದಿ...

Whatsapp: ಈ ಬಿಲ್ ಬಂದರೆ ವಾಟ್ಸಾಪ್ ಸರ್ವಿಸ್ ನಿಲ್ಲಿಸಬೇಕಾಗುತ್ತೇನೋ..! ಬ್ರಿಟನ್ ವಿದ್ಯಮಾನಕ್ಕೆ ಮೆಟಾ ಕಂಗಾಲು
ವಾಟ್ಸಾಪ್
Follow us
|

Updated on:Mar 10, 2023 | 1:11 PM

ಲಂಡನ್: ವಿಶ್ವದ ಅತಿದೊಡ್ಡ ಮೆಸೇಜಿಂಗ್ ಪ್ಲಾಟ್​ಫಾರ್ಮ್ ಎನಿಸಿರುವ ವಾಟ್ಸಾಪ್ (Whatsapp Messaging Platform) ಇದೀಗ ಬ್ರಿಟನ್ ದೇಶದಲ್ಲಿ ಆಗುತ್ತಿರುವ ವಿದ್ಯಮಾನಗಳಿಂದ ತಲೆಕೆಡಿಸಿಕೊಂಡಂತಿದೆ. ಅಲ್ಲಿನ ಸಂಸತ್ತಿನಲ್ಲಿ ಆನ್​ಲೈನ್ ಸೇಫ್ಟಿಯ ಕರಡು ಮಸೂದೆಗೆ (Online Safety Draft Bill) ಅನುಮೋದನೆ ಸಿಕ್ಕಿರುವುದು ವಾಟ್ಸಾಪ್​ಗೆ ಚಿಂತೆಗೀಡು ಮಾಡಿದೆ. ಯುಕೆಯಲ್ಲಿ ಈ ಕಾನೂನು ಜಾರಿಗೆ ಬಂದರೆ ವಾಟ್ಸಾಪ್ ಸೇವೆಯನ್ನೇ ನಿಲ್ಲಿಸಬೇಕಾದೀತು ಎಂದು ಮೆಟಾ ಸಂಸ್ಥೆ (Meta Platforms) ಹೇಳಿದೆ. ಮಾರ್ಚ್ 9ರಂದು ಲಂಡನ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮೆಟಾ ಮಾಲಕತ್ವದ ವಾಟ್ಸಾಪ್​ನ ಮುಖ್ಯಸ್ಥ ವಿಲ್ ಕ್ಯಾತ್​ಕಾರ್ಟ್, ಈ ದೇಶದಲ್ಲಿ ಸೇಫ್ಟಿ ಬಿಲ್ ಜಾರಿಗೆ ಬಂದರೆ ವಾಟ್ಸಾಪ್​ನ ಪ್ರೈವಸಿ ಫೀಚರ್​ಗಳು ಅಕ್ರಮ ಎನಿಸುತ್ತವೆ ಎಂದು ವಿವರಿಸಿದ್ದಾರೆ.

ಏನಿದೆ ಬಿಲ್​ನಲ್ಲಿ?

ಬೋರಿಸ್ ಜಾನ್ಸನ್ ಪ್ರಧಾನಿಯಾಗಿದ್ದಾಗ ಆನ್​ಲೈನ್ ಸೇಫ್ಟಿ ಮಸೂದೆ ರೂಪಿಸಿದ್ದರು. ಮಕ್ಕಳ ಲೈಂಗಿಕ ದುರ್ಬಳಕೆ, ಭಯೋತ್ಪಾದನೆ, ಆತ್ಮಹತ್ಯೆ ಪ್ರಚೋದನೆ ಇತ್ಯಾದಿ ಅನೈತಿಕ ಮತ್ತು ಕಾನೂನುಬಾಹಿರವೆನಿಸುವ ಕಂಟೆಂಟ್​ಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಆಗದಂತೆ ವ್ಯವಸ್ಥೆ ಮಾಡಬೇಕು. ಒಂದು ವೇಳೆ ಇವು ಪೋಸ್ಟ್ ಆದರೂ, ಗಮನಕ್ಕೆ ಬಂದ ತತ್​ಕ್ಷಣದಲ್ಲಿ ತೆಗೆದುಹಾಕಬೇಕು ಎಂದು ಈ ಬಿಲ್ ತಾಕೀತುಪಡಿಸುತ್ತದೆ. ಒಂದು ವೇಳೆ ಸರ್ಕಾರದ ಫರ್ಮಾನು ಪಾಲಿಸದಿದ್ದರೆ ಕಂಪನಿ ತನ್ನ ಜಾಗತಿಕ ಆದಾಯದಲ್ಲಿ ಶೇ. 10ರಷ್ಟು ಮೊತ್ತವನ್ನು ದಂಡವಾಗಿ ಕಟ್ಟಬೇಕು ಎಂದು ಹೇಳುತ್ತದೆ ಆ ಕಾನೂನು. ಈಗ ಈ ಮಸೂದೆಗೆ ಮರುಜೀವ ಬಂದಿದ್ದು, ಸಂಸತ್​ನಲ್ಲೂ ಅನುಮೋದನೆ ಪಡೆದಿದೆ. ಈಗ ಕಾನೂನು ಜಾರಿಯಷ್ಟೇ ಬಾಕಿ ಉಳಿದಿದೆ.

ವಾಟ್ಸಾಪ್ ಯಾಕೆ ಹಿಂದೇಟು?

ಮಕ್ಕಳ ಲೈಂಗಿಕ ಶೋಷಣೆಯಂತಹ ಅಪರಾಧ ವಿಡಿಯೋ ಮತ್ತು ಪೋಸ್ಟ್​​ಗಳನ್ನು ಪ್ಲಾಟ್​ಫಾರ್ಮ್​ನಿಂದ ತೆಗೆದುಹಾಕಲು ವಾಟ್ಸಾಪ್ ಯಾಕೆ ಹಿಂದೇಟು ಹಾಕುತ್ತಿದೆ ಎಂದು ಅನಿಸಬಹುದು. ಆದರೆ, ವಾಟ್ಸಾಪ್​ನ ಮುಖ್ಯ ಫೀಚರ್​ಗಳಲ್ಲಿ ಅದರ ಪ್ರೈವಸಿ ಅಂಶ ಒಂದು. ಮೇಲಾಗಿ ವಾಟ್ಸಾಪ್ ಒಂದು ಜಾಗತಿಕ ಉತ್ಪನ್ನವಾಗಿದ್ದು ಬ್ರಿಟನ್ ದೇಶಕ್ಕೆ ಮಾತ್ರ ಫೀಚರ್ ಬದಲಿಸಲು ಆಗಲ್ಲ. ಈ ದೇಶದಿಂದ ನಿರ್ಗಮಿಸುವುದು ಬಿಟ್ಟರೆ ಬೇರೆ ದಾರಿ ಇಲ್ಲ ಎಂದು ವಾಟ್ಸಾಪ್ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿFoxconn: ಮಹಿಳೆಯರಿಗೆ ರಾತ್ರಿಪಾಳಿ, 12ಗಂಟೆ ಶಿಫ್ಟ್; ಆ್ಯಪಲ್, ಫಾಕ್ಸ್​ಕಾನ್ ಬೇಡಿಕೆಗೆ ಮಣಿಯಿತಾ ಕರ್ನಾಟಕ? ಕಾನೂನು ತಿದ್ದಿದ ಸರ್ಕಾರ

ಇತ್ತೀಚೆಗೆ ಇರಾನ್​ನಲ್ಲಿ ನಮ್ಮ ಸೇವೆಯನ್ನು ಬ್ಲಾಕ್ ಮಾಡಲಾಗಿದೆ. ಆದರೆ, ಉದಾರಿ ಪ್ರಜಾಪ್ರಭುತ್ವ ದೇಶದಿಂದ ಈ ರೀತಿ ಆಗುತ್ತದೆ ಎಂದು ನಾವು ಎಣಿಸಿಲ್ಲ. ನಾವು ಬ್ರಿಟನ್​ನಲ್ಲಿ ವಾಪ್ಸಪ್ ಸೇವೆಯನ್ನೇ ನಿಲ್ಲಿಸಬೇಕಾದೀತು ಎಂದು ವಿಲ್ ಕ್ಯಾತ್​ಕಾರ್ಟ್ ಹೇಳಿದ್ದಾರೆ.

ವಾಟ್ಸಾಪ್ ಮಾತ್ರವಲ್ಲ, ಅಂಥದ್ದೇ ರೀತಿಯ ಮತ್ತೊಂದು ಮೆಸೇಜಿಂಗ್ ಕಂಪನಿ ಸಿಗ್ನಲ್ ಫೌಂಡೇಶನ್ ಕೂಡ ಬ್ರಿಟನ್​ನಲ್ಲಿ ಸೇವೆ ನಿಲ್ಲಿಸುವ ಆಲೋಚನೆ ಮಾಡುತ್ತಿದೆ.

ಈ ಮೆಸೇಜಿಂಗ್ ಪ್ಲಾಟ್​ಫಾರ್ಮ್​ಗಳು ಎನ್​ಕ್ರಿಪ್ಟೆಡ್ ಮೆಸೇಜಿಂಗ್ ಫೀಚರ್ ಹೊಂದಿವೆ. ಅಂದರೆ, ಒಬ್ಬರು ಇನ್ನೊಬ್ಬರಿಗೆ ಕಳುಹಿಸಿದ ಸಂದೇಶವನ್ನು ಇತರರು ಕದ್ದುನೋಡಲು ಸಾಧ್ಯವಾಗುವುದಿಲ್ಲ. ಇದು ಗ್ರಾಹಕರ ಖಾಸಗಿತನ ರಕ್ಷಣೆಗೆಂದು ಮಾಡಲಾದ ಫೀಚರ್. ವಾಟ್ಸಾಪ್ ಮುಖ್ಯಸ್ಥರು ಹೇಳುವ ಪ್ರಕಾರ, ಈ ಪ್ರೇವಸಿ ಫೀಚರ್ ಇರುವವರೆಗೂ ಜನರ ಸಂದೇಶಗಳ ಮೇಲೆ ಕಂಪನಿಯಿಂದಲೇ ಕಣ್ಣಿಡಲು ಸಾಧ್ಯವಿಲ್ಲವಂತೆ. ಈ ಪ್ರೈವಸಿ ಫೀಚರ್ ಅನ್ನು ತೆಗೆದುಹಾಕಿದರೆ ವ್ಯಕ್ತಿಗತ ಗೌಪ್ಯತೆಗೆ ಧಕ್ಕೆ ತಂದಂತಾಗುತ್ತದೆ ಎಂಬುದು ಇವರ ವಾದ.

ಬ್ರಿಟನ್ ಮಾತ್ರವಲ್ಲ ಬಹುತೇಕ ಎಲ್ಲಾ ದೇಶಗಳು ಸೋಷಿಯಲ್ ಮೀಡಿಯಾ ಕಂಪನಿಗಳಿಗೆ ವಿವಿಧ ಮಟ್ಟಗಳಲ್ಲಿ ನಿರ್ಬಂಧಗಳನ್ನು ಹಾಕುತ್ತವೆ. ಸರ್ಕಾರದ ವಿರುದ್ಧ ಬರುವ ಪೋಸ್ಟ್​​ಗಳು, ಲೈಂಗಿಕ ಶೋಷಣೆಯ ಪೋಸ್ಟ್​ಗಳು, ದೇಶವಿರೋಧಿ ಪೋಸ್ಟ್​ಗಳನ್ನು ತೆಗೆದುಹಾಕುವಂತೆ ಸೋಷಿಯಲ್ ಮೀಡಿಯಾ ಕಂಪನಿಗಳಿಗೆ ವಿವಿಧ ಸರ್ಕಾರಗಳು ಪಟ್ಟಿ ಕೊಡುತ್ತಿರುತ್ತವೆ. ಆದರೆ, ಈ ಬಗ್ಗೆ ಕಠಿಣ ಕಾನೂನು ರೂಪಿಸುತ್ತಿರುವುದು ಬ್ರಿಟನ್ ಮೊದಲ ದೇಶ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.

Published On - 1:11 pm, Fri, 10 March 23

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ