Foxconn: ಮಹಿಳೆಯರಿಗೆ ರಾತ್ರಿಪಾಳಿ, 12ಗಂಟೆ ಶಿಫ್ಟ್; ಆ್ಯಪಲ್, ಫಾಕ್ಸ್​ಕಾನ್ ಬೇಡಿಕೆಗೆ ಮಣಿಯಿತಾ ಕರ್ನಾಟಕ? ಕಾನೂನು ತಿದ್ದಿದ ಸರ್ಕಾರ

Karnataka Govt Amends Labour Law: ಚೀನಾದಲ್ಲಿರುವಂತಹ ಕಾರ್ಮಿಕ ವ್ಯವಸ್ಥೆ ಬೇಕೆಂದು ಆ್ಯಪಲ್ ಮತ್ತು ಫಾಕ್ಸ್​ಕಾನ್ ಬೇಡಿಕೆ ಇಟ್ಟ ಕಾರಣ ಕರ್ನಾಟಕ ಸರ್ಕಾರ ಕಾರ್ಮಿಕರ ಕಾನೂನಿನಲ್ಲಿ ಬದಲಾವಣೆ ಮಾಡಿದೆ. ಶಿಫ್ಟ್ ಅವಧಿ ಗರಿಷ್ಠ 9 ಗಂಟೆ ಇದ್ದದ್ದು 12ಗಂಟೆಗೆ ಹೆಚ್ಚು ಮಾಡಲಾಗಿದೆ. ಮಹಿಳೆಯರಿಗೆ ರಾತ್ರಿಪಾಳಿ ಅವಕಾಶ ಕೊಡಲಾಗಿದೆ ಎಂದು ವರದಿಗಳು ಹೇಳುತ್ತಿವೆ.

Foxconn: ಮಹಿಳೆಯರಿಗೆ ರಾತ್ರಿಪಾಳಿ, 12ಗಂಟೆ ಶಿಫ್ಟ್; ಆ್ಯಪಲ್, ಫಾಕ್ಸ್​ಕಾನ್ ಬೇಡಿಕೆಗೆ ಮಣಿಯಿತಾ ಕರ್ನಾಟಕ? ಕಾನೂನು ತಿದ್ದಿದ ಸರ್ಕಾರ
ಐಫೋನ್ ಫ್ಯಾಕ್ಟರಿ
Follow us
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Mar 10, 2023 | 10:56 AM

ಬೆಂಗಳೂರು: ಕರ್ನಾಟಕ ರಾಜ್ಯದ ಕಾರ್ಮಿಕ ಕಾನೂನಿನಲ್ಲಿ (Karnataka Labour Laws) ಕೆಲ ಮಹತ್ವದ ತಿದ್ದುಪಡಿ ಮಾಡಲಾಗಿದೆ. ಕಂಪನಿಗಳು ಇನ್ಮುಂದೆ ತಮ್ಮ ನೌಕರರಿಗೆ 12 ಗಂಟೆ ಅವಧಿಯ ಶಿಫ್ಟ್​ನಲ್ಲಿ ಕೆಲಸ ಮಾಡಿಸಲು (12 Hour Shift) ಕಾನೂನು ಈಗ ಅನುಮತಿಸುತ್ತದೆ. ಹಾಗೆಯೇ, ಮಹಿಳಾ ಉದ್ಯೋಗಿಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ತಕರಾರು ಎತ್ತಲು ಸಾಧ್ಯವಾಗುವುದಿಲ್ಲ. ಫೈನಾನ್ಷಿಯಲ್ ಟೈಮ್ಸ್ ವರದಿ ಪ್ರಕಾರ ಸರ್ಕಾರದ ಈ ಮಹತ್ವದ ಕಾನೂನು ತಿದ್ದುಪಡಿಗೆ ಪ್ರಮುಖ ಕಾರಣವಾಗಿದ್ದು ಆ್ಯಪಲ್ ಮತ್ತು ಫಾಕ್ಸ್​ಕಾನ್. ಚೀನಾದಲ್ಲೂ ಇಂಥದ್ದೇ ರೀತಿಯ ಕಾರ್ಮಿಕ ಕಾನೂನುಗಳಿದ್ದು, ಇಲ್ಲಿಯೂ ಅಂಥ ವ್ಯವಸ್ಥೆ ಮಾಡಬೇಕೆಂದು ಫಾಕ್ಸ್​ಕಾನ್ ಮತ್ತು ಆ್ಯಪಲ್ ಬೇಡಿಕೆ ಇಟ್ಟಿದ್ದವು ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ಸದ್ದಿಲ್ಲದೇ ಕಾರ್ಮಿಕ ಕಾನೂನಿನಲ್ಲಿ ತಿದ್ದುಪಡಿ ತಂದಿದೆ.

ದೇಶದೆಲ್ಲೆಡೆ ಕಾರ್ಮಿಕರಿಗೆ ಗರಿಷ್ಠ 9 ಗಂಟೆ ಅವಧಿಯ ಕೆಲಸ ಪಾಳಿ ಎಂಬ ಕಾನೂನಿದೆ. ಮಹಿಳಾ ಉದ್ಯೋಗಿಗಳನ್ನು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಂತೆ ಕಡ್ಡಾಯಪಡಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಕಾರ್ಮಿಕ ಕಾನೂನು ತಿದ್ದುಪಡಿ ಗಮನ ಸೆಳೆದಿದೆ. ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲವಾಗುವಂತೆ ಕಾರ್ಮಿಕ ಕಾನೂನಿನಲ್ಲಿ ಬದಲಾವಣೆ ತಂದಿದೆ.

ಇದನ್ನೂ ಓದಿFoxconn: ಬೆಂಗಳೂರು ಏರ್​ಪೋರ್ಟ್​ನ ಹೊಸ ಟರ್ಮಿನಲ್ ಕಂಡು ಅಸ್ತು ಎಂದರಾ ಐಫೋನ್ ತಯಾರಕರು?

ಆ್ಯಪಲ್ ಕಂಪನಿಯ ಐಫೋನ್ ಅನ್ನು ತಯಾರಿಸುವ ಮೂರು ಕಂಪನಿಗಳಲ್ಲಿ ಫಾಕ್ಸ್​ಕಾನ್ ಒಂದು. ಚೀನಾದಲ್ಲಿ ಐಫೋನ್ ಫ್ಯಾಕ್ಟರಿಗಳನ್ನು ಹೊಂದಿರುವ ಫಾಕ್ಸ್​ಕಾನ್ ಭಾರತದಲ್ಲಿ ಘಟಕಗಳನ್ನು ತೆರೆಯಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ಪರಿಶೀಲನೆ ನಡೆಸಿರುವ ಫಾಕ್ಸ್​ಕಾನ್, ಕರ್ನಾಟಕ ಮತ್ತು ತೆಲಂಗಾಣ ಸರ್ಕಾರಗಳ ಜೊತೆ ಎಂಒಯು ಮಾಡಿಕೊಂಡಿದೆ. ಆದರೆ, ಈ ಎರಡು ರಾಜ್ಯಗಳಲ್ಲಿ ಅಂತಿಮವಾಗಿ ಯಾವುದು ಬೇಕೆಂದು ಆಯ್ಕೆ ಮಾಡಿಕೊಳ್ಳುವ ಹಕ್ಕು ಫಾಕ್ಸ್​ಕಾನ್​ಗೆ ಇದೆ. ಐಟಿ ಬೀಡು ಎಂದೇ ಖ್ಯಾತವಾಗಿರುವ ಕರ್ನಾಟಕಕ್ಕೆ ಫಾಕ್ಸ್​ಕಾನ್ ಕಾರ್ಖಾನೆ ಶುರುವಾದರೆ ಇನ್ನೊಂದು ಗರಿ ಬಂದಂತೆ. ಹೀಗಾಗಿ, ರಾಜ್ಯ ಸರ್ಕಾರಕ್ಕೆ ಫಾಕ್ಸ್​ಕಾನ್​ಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುವುದು ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ಫಾಕ್ಸ್​ಕಾನ್ ಇಟ್ಟಿದ್ದ ಬೇಡಿಕೆಗೆ ರಾಜ್ಯ ಸರ್ಕಾರ ಮಣಿದು ಕಾರ್ಮಿಕ ಕಾನೂನಿನಲ್ಲಿ ತಿದ್ದುಪಡಿ ಮಾಡಿದೆ ಎಂದು ವರದಿಗಳು ಹೇಳುತ್ತಿವೆ.

ಕಾರ್ಮಿಕ ಕಾನೂನಿನಲ್ಲಿ ಆಗಿರುವ ತಿದ್ದುಪಡಿಗಳೇನು?

  • ಗರಿಷ್ಠ ಅವಧಿಯ ಪಾಳಿ 9 ಗಂಟೆ ಇದ್ದದ್ದು 12 ಗಂಟೆಗೆ ಏರಿಸಲಾಗಿದೆ. ಅಂದರೆ ಒಂದು ಕಂಪನಿಯು ಒಬ್ಬ ಉದ್ಯೋಗಿಯಿಂದ 12 ಗಂಟೆಗಳವರೆಗೆ ಕೆಲಸ ಮಾಡಿಸಿಕೊಳ್ಳಲು ಕಾನೂನು ಸಮ್ಮತಿ ಇರುತ್ತದೆ. ಆದರೆ ಒಂದು ವಾರದಲ್ಲಿ ಗರಿಷ್ಠ ಕೆಲಸದ ಅವಧಿ 48 ಗಂಟೆಗೆ ಮಿತಿಗೊಳಿಸಲಾಗಿದೆ.
  • ಮಹಿಳಾ ಉದ್ಯೋಗಿಗಳಿಂದ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಸಿಕೊಳ್ಳಬಹುದು.
  • ಓವರ್​ಟೈಮ್ ವರ್ಕ್ (ಓಟಿ) 3 ತಿಂಗಳಲ್ಲಿ 145 ಗಂಟೆಗಳವರೆಗೆ ಅವಕಾಶ ಇರುತ್ತದೆ. ಈ ಮುಂಚೆ ಇದು 75 ಗಂಟೆ ಇತ್ತು.

ಫಾಕ್ಸ್​ಕಾನ್ ಕರ್ನಾಟಕಕ್ಕೆ ಬರುವುದು ಖಚಿತವೇ?

ಫಾಕ್ಸ್​ಕಾನ್​ನ ಐಫೋನ್ ಫ್ಯಾಕ್ಟರಿ ಕರ್ನಾಟಕಕ್ಕೆ ಬರುವುದು ಬಹುತೇಕ ಖಚಿತ ಎಂದು ರಾಜ್ಯ ಸರ್ಕಾರದ ಮೂಲಗಳು ಹೇಳುತ್ತಿವೆ. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಮೊದಲಾದವರು ಈಗಾಗಲೇ ಈ ಬಗ್ಗೆ ಸುಳಿವು ನೀಡಿದ್ದಾರೆ. ನಿರಾಣಿ ನಿನ್ನೆ ಗುರುವಾರ ಮಾತನಾಡುತ್ತಾ, ಫಾಕ್ಸ್​ಕಾನ್ ಬರುವುದು ನಿಶ್ಚಿತ ಎಂದು ಖಚಿತವಾಗಿ ಹೇಳಿದ್ದಾರೆ.

ಇದನ್ನೂ ಓದಿVehicles Sale: ಭಾರತದಲ್ಲಿ ವಾಹನಗಳ ಮಾರಾಟ ಭರಾಟೆ; ಫೆಬ್ರುವರಿಯಲ್ಲಿ ಒಟ್ಟು ಸೇಲ್ ಆಗಿದ್ದು ಎಷ್ಟು?

ಸರ್ಕಾರ ಈಗಾಗಲೇ ದೊಡ್ಡಬಳ್ಳಾಪುರದ ಐಟಿಇಎಸ್ ಬಳಿ 300 ಎಕರೆ ಪ್ರದೇಶವನ್ನು ಫಾಕ್ಸ್​ಕಾನ್​ಗೆ ತೆಗೆದಿರಿಸಿದೆ. ಫಾಕ್ಸ್​ಕಾನ್ ಈಗೇನಿದ್ದರೂ ಫ್ಯಾಕ್ಟರಿ ತೆರೆಯುವುದೊಂದೇ ಬಾಕಿ. ಅತ್ತ ತೆಲಂಗಾಣ ಸರ್ಕಾರ ಕೂಡ ಫಾಕ್ಸ್​ಕಾನ್​ಗೋಸ್ಕರ ಹೈದರಾಬಾದ್ ಸಮೀಪ 200 ಎಕರೆ ಜಾಗವನ್ನು ಎತ್ತಿ ಇಟ್ಟಿದೆ. ಅಲ್ಲಿಯ ಸಿಎಂ ಕೆ ಚಂದ್ರಶೇಖರ್ ರಾವ್ ಕೂಡ ಫಾಕ್ಸ್​ಕಾನ್ ಬರುತ್ತೆ ಅನ್ನೋ ಆತ್ಮವಿಶ್ವಾಸದಲ್ಲಿದ್ದಾರೆ. ಆದರೆ, ಈಗ ಕರ್ನಾಟಕ ಮಾಡಿರುವ ಕಾರ್ಮಿಕ ಕಾನೂನು ತಿದ್ದುಪಡಿ ಗೇಮ್ ಚೇಂಜರ್ ಆಗಿ, ಫಾಕ್ಸ್​ಕಾನ್ ಅನ್ನು ಸೆಳೆಯಲು ಯಶಸ್ವಿಯಾಗಬಹುದು.

ಇನ್ನಷ್ಟು ಉದ್ಯಮ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:56 am, Fri, 10 March 23

ತಾಜಾ ಸುದ್ದಿ
ದರ್ಶನ್​ಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದಕ್ಕೆ ಕಾರಣ ನೀಡಿದ ಮಾಜಿ ಮೇಯರ್
ದರ್ಶನ್​ಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದಕ್ಕೆ ಕಾರಣ ನೀಡಿದ ಮಾಜಿ ಮೇಯರ್
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ
Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ
Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ