AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Foxconn: ಬೆಂಗಳೂರು ಏರ್​ಪೋರ್ಟ್​ನ ಹೊಸ ಟರ್ಮಿನಲ್ ಕಂಡು ಅಸ್ತು ಎಂದರಾ ಐಫೋನ್ ತಯಾರಕರು?

Why Foxconn Interested In Bengaluru: ಐಫೋನ್ ಅಸೆಂಬ್ಲಿಂಗ್ ಕಂಪನಿ ಫಾಕ್ಸ್​ಕಾನ್ ತನ್ನ ಘಟಕ ಸ್ಥಾಪಿಸಲು ಬೆಂಗಳೂರನ್ನು ಪರಿಗಣಿಸಲು ಏನು ಕಾರಣ? ಇಲ್ಲಿಯ ಹವಾಮಾನವಾ, ಐಟಿ ತಂತ್ರಜ್ಞರ ಸಂಪನ್ಮೂಲವಾ, ಎಂಜಿನಿಯರುಗಳ ಲಭ್ಯತೆಯಾ? ತಪ್ಪದೇ ಈ ವರದಿ ಓದಿ...

Foxconn: ಬೆಂಗಳೂರು ಏರ್​ಪೋರ್ಟ್​ನ ಹೊಸ ಟರ್ಮಿನಲ್ ಕಂಡು ಅಸ್ತು ಎಂದರಾ ಐಫೋನ್ ತಯಾರಕರು?
ಫಾಕ್ಸ್​ಕಾನ್ ಸಿಇಒ ಜೊತೆ ಸಿಎಂ ಬೊಮ್ಮಾಯಿ ಹಾಗು ಸಚಿವರು, ಅಧಿಕಾರಿಗಳು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 07, 2023 | 6:36 PM

Share

ಬೆಂಗಳೂರು: ಆ್ಯಪಲ್​ನ ಐಫೋನ್ ತಯಾರಕ ಕಂಪನಿಗಳಲ್ಲೊಂದಾದ ಫಾಕ್ಸ್​ಕಾನ್ ಸಂಸ್ಥೆ (Foxconn) ಎಲ್ಲಿ ತನ್ನ ಘಟಕ ಸ್ಥಾಪನೆ ಮಾಡುತ್ತದೆ ಎಂಬುದು ಇನ್ನೂ ನಿಶ್ಚಿತವಾಗಿಲ್ಲ. ಕರ್ನಾಟಕ ಮತ್ತು ತೆಲಂಗಾಣ ಎರಡೂ ಸರ್ಕಾರಗಳೊಂದಿಗೆ ಫಾಕ್ಸ್​ಕಾನ್ ಎಂಒಯು ಅಥವಾ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದು ಹೌದು. ಅಂತಿಮವಾಗಿ ಅವರ ರಾಜ್ಯದ ಸ್ಥಳವನ್ನು ಫಾಕ್ಸ್​ಕಾನ್ ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕು. ಆದರೆ, ಐಫೋನ್ ಫ್ಯಾಕ್ಟರಿ ಸ್ಥಾಪನೆಗೆ ಫಾಕ್ಸ್​ಕಾನ್ ಬೆಂಗಳೂರು ಮತ್ತು ಹೈದರಾಬಾದ್ ನಗರಗಳಲ್ಲಿ ಗಣನೆಗೆ ತೆಗೆದುಕೊಂಡಿರುವುದಂತೂ ಹೌದು. ಕರ್ನಾಟಕ ಈಗಾಗಲೇ ಫಾಕ್ಸ್​ಕಾನ್​ಗಾಗಿ ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಲು ಸಿದ್ಧವಾಗಿದೆ. ಏರ್​ಪೋರ್ಟ್​ನ ಸಮೀಪ ಇರುವ ದೊಡ್ಡಬಳ್ಳಾಪುರದ ಐಟಿಐಆರ್ (ITIR- Information Technology Investment Region) ಇಂಡಸ್ಟ್ರಿಯಲ್ ಏರಿಯಾದಲ್ಲಿ ಫಾಕ್ಸ್​ಕಾನ್​ಗೆ 300 ಎಕರೆ ಭೂಮಿಯನ್ನೂ ಸರ್ಕಾರ ಗುರುತಿಸಿಟ್ಟಿದೆ. ಇನ್ನೇನಿದ್ದರೂ ಫಾಕ್ಸ್​ಕಾನ್ ಬಂದು ಐಫೋನ್ ಘಟಕ ಸ್ಥಾಪಿಸಬೇಕಷ್ಟೇ.

ಅಷ್ಟಕ್ಕೂ ಫಾಕ್ಸ್​ಕಾನ್ ತನ್ನ ಘಟಕ ಸ್ಥಾಪಿಸಲು ಬೆಂಗಳೂರನ್ನು ಪರಿಗಣಿಸಲು ಏನು ಕಾರಣ? ಇಲ್ಲಿಯ ಹವಾಮಾನವಾ, ಐಟಿ ತಂತ್ರಜ್ಞರ ಸಂಪನ್ಮೂಲವಾ, ಎಂಜಿನಿಯರುಗಳ ಲಭ್ಯತೆಯಾ? ಫಾಕ್ಸ್​ಕಾನ್ ಕರ್ನಾಟಕ ಸರ್ಕಾರದೊಂದಿಗೆ ಮಾಡಿಕೊಂಡಿರುವ ಎಂಒಯು ಗಮನಿಸಿದರೆ ಬೆಂಗಳೂರಿನಲ್ಲಿ ಅದು ಯಾಕೆ ಐಫೋನ್ ಘಟಕ ಸ್ಥಾಪಿಸುವ ಮನಸು ಮಾಡಿದೆ ಎಂಬುದಕ್ಕೆ ಕಾರಣ ಸಿಗುತ್ತದೆ.

ತೈವಾನ್ ಮೂಲದ ಫಾಕ್ಸ್​ಕಾನ್ (Hon Hai Technology Group) ಕಂಪನಿಯ ಹಿರಿಯ ಅಧಿಕಾರಿಗಳು ಮಾರ್ಚ್ 3ರಂದು ಬೆಂಗಳೂರಿಗೆ ಬಂದಿದ್ದರು. ಕಂಪನಿಯ ಸಿಇಒ ಕೂಡ ಈ ತಂಡದಲ್ಲಿದ್ದರು. ದೇವನಹಳ್ಳಿ ಏರ್​ಪೋರ್ಟ್​ನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಎರಡನೇ ಟರ್ಮಿನಲ್ (T2) ನೋಡಿ ಫಾಕ್ಸ್​ಕಾನ್ ಅಧಿಕಾರಿಗಳು ಬೆರಗಾದರಂತೆ. ಇಲ್ಲಿರುವ ಕಾರ್ಗೊ ಅಥವಾ ಸರಕು ಸಾಗಣೆ ಸೌಕರ್ಯ ಮತ್ತು ಸೌಲಭ್ಯಗಳು ಇವರಿಗೆ ಬಹಳ ಹಿಡಿಸಿವೆ.

ಇದನ್ನೂ ಓದಿFoxconn iPhone Factory: ಐಫೋನ್ ಫ್ಯಾಕ್ಟರಿ ಕರ್ನಾಟಕಕ್ಕೋ ತೆಲಂಗಾಣಕ್ಕೋ? ಯಾಕಿಷ್ಟು ಗೊಂದಲ? ವಾಸ್ತವ ಏನು?

ಫಾಕ್ಸ್​ಕಾನ್​ಗೆ ಕಾರ್ಗೊ ಸೌಲಭ್ಯ ಬಹಳ ಮುಖ್ಯ. ಎಲೆಕ್ಟ್ರಾನಿಕ್ ವಸ್ತುಗಳನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಾಗಿಸಲು ಅಥವಾ ದೂರದ ಸ್ಥಳಕ್ಕೆ ಸಾಗಿಸಲು ಹಡಗು ಅಥವಾ ಟ್ರಕ್ ಬದಲು ವಿಮಾನದ ಬಳಕೆ ಆಗುತ್ತದೆ. ಹೀಗಾಗಿ, ಸರಕು ಸಾಗಣೆ ವಿಮಾನಗಳು ಬಂದು ಹೋಗಲು ಸೂಕ್ತವಾಗಿರುವ ಏರ್​ಪೋರ್ಟ್ ಇರುವುದು ಫಾಕ್ಸ್​ಕಾನ್​ಗೆ ಬಹಳ ಮುಖ್ಯ. ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್​ನಲ್ಲಿ ಕಾರ್ಗೊ ವಿಮಾನಗಳಿಗೆ ಅದ್ಭುತ ವ್ಯವಸ್ಥೆ ಇದೆ. ಯಾವುದೇ ಕಾರ್ಗೋ ವಿಮಾನ ಏರ್​ಪೋರ್ಟ್​ಗೆ ಬಂದು ಹೋಗಲು 2 ಗಂಟೆಯ ಟರ್ನರೌಂಡ್ ಟೈಮ್ ಆಗುತ್ತದೆ. ಇಷ್ಟು ಕ್ಷಿಪ್ರಗತಿಯಲ್ಲಿ ವ್ಯವಸ್ಥೆ ಇರುವುದು ಫಾಕ್ಸ್​ಕಾನ್ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಫಾಕ್ಸ್​ಕಾನ್ ಸಂಸ್ಥೆ ಕರ್ನಾಟಕ ಸರ್ಕಾರಕ್ಕೆ ಬರೆದಿರುವ ಲೆಟರ್ ಆಫ್ ಇಂಟೆಂಟ್​ನಲ್ಲಿ ಈ ಸಂಗತಿಯನ್ನು ಪ್ರಸ್ತಾಪಿಸಿದೆ.

ಇನ್​ಫ್ರಾಸ್ಟ್ರಕ್ಚರ್ ಮುಖ್ಯ ಎನ್ನುವುದು ಇದಕ್ಕೆಯೇ

ಸರ್ಕಾರ ಸರಿಯಾದ ಸೌಕರ್ಯವ್ಯವಸ್ಥೆ ಮಾಡಿದರೆ ಬಂಡವಾಳ ಸರಾಗವಾಗಿ ಹರಿದುಬರುತ್ತದೆ ಎನ್ನುವುದಕ್ಕೆ ಫಾಕ್ಸ್​ಕಾನ್ ಅತ್ಯುತ್ತಮ ನಿದರ್ಶನ ಎನ್ನುತ್ತಾರೆ ತಜ್ಞರು. ಒಂದು ವೇಳೆ ಫಾಕ್ಸ್​ಕಾನ್ ದೊಡ್ಡಬಳ್ಳಾಪುರದಲ್ಲಿ ಐಫೋನ್ ಅಸೆಂಬ್ಲಿಂಗ್ ಘಟಕ ಸ್ಥಾಪಿಸಿದಲ್ಲಿ ರಾಜ್ಯದಲ್ಲಿ 1 ಲಕ್ಷದಷ್ಟು ಉದ್ಯೋಗ ಸೃಷ್ಟಿಯಾಗಲಿದೆ. ಜೊತೆಗೆ ಐಫೋನ್ ಹಬ್ ಆಗಿಯೂ ಬೆಂಗಳೂರು ಬೆಳೆಯಬಹುದು.

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ