AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yashasvi Jaiswal: ಟೆಂಟ್​ನಲ್ಲಿ ವಾಸಿಸುತ್ತಿದ್ದ ಕ್ರಿಕೆಟ್ ಸ್ಟಾರ್ ಯಶಸ್ವಿ ಜೈಸ್ವಾಲ್​ರಿಂದ ಐಷಾರಾಮಿ ಮನೆ ಖರೀದಿ; ಪ್ರತಿಷ್ಠಿತ ಏರಿಯಾದಲ್ಲಿದೆ ಈ ಅಪಾರ್ಟ್ಮೆಂಟ್

Rag to Rich Story of Yashasvi Jaiswal: ಯಶಸ್ವಿ ಜೈಸ್ವಾಲ್ ಮುಂಬೈನ ಪ್ರತಿಷ್ಠಿತ ಬಾಂದ್ರಾ ಈಸ್ಟ್ ಏರಿಯಾದಲ್ಲಿ ಅದಾನಿ ಕಂಪನಿ ನಿರ್ಮಿತ ಲಕ್ಷುರಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. 1,110 ಚದರಡಿ ವಿಸ್ತೀರ್ಣದ ಈ ಮನೆಯ ಬೆಲೆ ಐದು ಕೋಟಿ ರೂಗೂ ಹೆಚ್ಚು ಎನ್ನಲಾಗಿದೆ. ಒಂದು ಕಾಲದಲ್ಲಿ ಮುಂಬೈನಲ್ಲಿ ವಾಸಿಸಲು ಹಣ ಇಲ್ಲದೇ ಟೆಂಟ್​​ಗಳಲ್ಲಿ ಇದ್ದು ಪಾನಿ ಪುರಿ ಮಾರಿಕೊಂಡು ಕಲಿಯುತ್ತಿದ್ದವರು ಜೈಸ್ವಾಲ್.

Yashasvi Jaiswal: ಟೆಂಟ್​ನಲ್ಲಿ ವಾಸಿಸುತ್ತಿದ್ದ ಕ್ರಿಕೆಟ್ ಸ್ಟಾರ್ ಯಶಸ್ವಿ ಜೈಸ್ವಾಲ್​ರಿಂದ ಐಷಾರಾಮಿ ಮನೆ ಖರೀದಿ; ಪ್ರತಿಷ್ಠಿತ ಏರಿಯಾದಲ್ಲಿದೆ ಈ ಅಪಾರ್ಟ್ಮೆಂಟ್
ಯಶಸ್ವಿ ಜೈಸ್ವಾಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 21, 2024 | 5:46 PM

Share

ಯಶಸ್ವಿ ಜೈಸ್ವಾಲ್ (Yashasvi Jaiswal) ಈಗ ಭಾರತ ಕ್ರಿಕೆಟ್ ಲೋಕದ ಹೊಸ ಸ್ಟಾರ್ ಆಗಿದ್ದಾರೆ. ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಆರು ಅಡಿ ಎತ್ತರದ ಈ 22 ವರ್ಷದ ಯುವ ಕ್ರಿಕೆಟಿಗನನ್ನು ನೋಡಿದರೆ ಮುಂಬೈನ ಮೇಲ್ಮಧ್ಯಮ ವರ್ಗದ ಕುಟುಂಬದಿಂದ ಬಂದವರು ಎಂದನಿಸಬಹುದು. ಆದರೆ, ವಾಸ್ತವ ಬೇರೆ. ಈಗ ಸುದ್ದಿ ಏನೆಂದರೆ, ಯಶಸ್ವಿ ಜೈಸ್ವಾಲ್ ಮುಂಬೈನಲ್ಲಿ ಬಹಳ ಸುಂದರವಾದ ಒಂದು ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. ಮನಿಕಂಟ್ರೋಲ್​ನಲ್ಲಿ ಬಂದಿರುವ ವರದಿ ಪ್ರಕಾರ 1,110 ಚದರಡಿ ವಿಸ್ತೀರ್ಣದ ಅಪಾರ್ಟ್ಮೆಂಟ್ ಅನ್ನು 5.38 ಕೋಟಿ ರೂಗೆ ಅವರು ಕೊಂಡುಕೊಂಡಿದ್ದಾರೆ. ಅದಾನಿ ರಿಯಾಲ್ಟಿ ಸಂಸ್ಥೆಯ ಟೆನ್ ಬಿಕೆಸಿ ಪ್ರಾಜೆಕ್ಟ್ ಅಡಿಯಲ್ಲಿ ಈ ಅಪಾರ್ಟ್ಮೆಂಟ್ ಇನ್ನೂ ನಿರ್ಮಾಣ ಹಂತದಲ್ಲಿದೆ. ಮುಂಬೈನ ಅತ್ಯಂತ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದೆನಿಸಿದ ಬಾಂದ್ರಾ ಈಸ್ಟ್​ನಲ್ಲಿ (Bandra East) ಈ ಅಪಾರ್ಟ್ಮೆಂಟ್ ಇದೆ. ಈ ವರ್ಷವೇ ಜೈಸ್ವಾಲ್ ಈ ಅಪಾರ್ಟ್ಮೆಂಟ್​ಗೆ ಕಾಲಿಡಬಹುದು ಎನ್ನಲಾಗಿದೆ.

ಟೆಂಟ್​ನಲ್ಲಿ ವಾಸಿಸುತ್ತಿದ್ದ ಹುಡುಗನ ದೆಸೆ ಹೇಗೆ ಬದಲಾಗಿದೆ ನೋಡಿ…

ಉತ್ತರಪ್ರದೇಶದ ಸಂತ್ ರವಿದಾಸ್ ನಗರ್ ಜಿಲ್ಲೆಯವರಾದ ಯಶಸ್ವಿ ಜೈಸ್ವಾಲ್ ಸಾಧಾರಣ ಮಧ್ಯಮವರ್ಗದ ಕುಟುಂಬದವರು. 10ನೇ ವಯಸ್ಸಿನಲ್ಲಿ ಕ್ರಿಕೆಟ್ ತರಬೇತಿಗೆಂದು 2010ರಲ್ಲಿ ಮುಂಬೈಗೆ ಬಂದವರು. ಡೈರಿ ಶಾಪ್​ವೊಂದರಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ಉಳಿದುಕೊಂಡು ಕ್ರಿಕೆಟ್ ಅನ್ನೂ ಪ್ರಾಕ್ಟೀಸ್ ಮಾಡುತ್ತಿದ್ದರು. ಆದರೆ, ಕೆಲಸ ಮಾಡಲು ಸರಿಯಾಗಿ ಸಮಯ ಸಿಗದಿದ್ದರಿಂದ ಶಾಪ್ ಮಾಲೀಕ ಈ ಜೈಸ್ವಾಲ್​ರನ್ನು ಹೊರಕಳುಹಿಸಿದರು.

Yashasvi Jaiswal Buys Luxury Apartment In Mumbai, Know His Rag to Rich Story From Living In a Tent

ಆಜಾದ್ ಮೈದಾನದ ಸಾಂದರ್ಭಿಕ ಚಿತ್ರ

ಆಗ ಯಶಸ್ವಿ ಜೈಸ್ವಾಲ್ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದುದು ಆಜಾದ್ ಮೈದಾನ್ ಗ್ರೌಂಡ್​ನಲ್ಲಿ. ವಸತಿಗೆ ಜಾಗ ಇರಲಿಲ್ಲ. ಲಾಡ್ಜ್, ಹೋಟೆಲ್​ಗಳಲ್ಲಿ ಉಳಿದುಕೊಳ್ಳಲು ದುಡ್ಡು ಇರಲಿಲ್ಲ. ಅವರು ಅನಿವಾರ್ಯವಾಗಿ ಆಜಾದ್ ಮೈದಾನ್​ನ ಗ್ರೌಂಡ್ಸ್​ಮನ್​ಗಳ ಜೊತೆ ಟೆಂಟ್​ನಲ್ಲಿ ವಾಸಿಸುತ್ತಿದ್ದರು. ಹಣಕ್ಕಾಗಿ ಅವರು ಪಾನಿಪುರಿ ಕೂಡ ಮಾರುತ್ತಿದ್ದರು.

ಇದನ್ನೂ ಓದಿ: ವಿರುಷ್ಕಾ ದಂಪತಿಗಳಿಗೆ ಗಂಡು ಮಗು ಜನನ; ಪಾಕಿಸ್ತಾನದಲ್ಲಿ ಮುಗಿಲು ಮುಟ್ಟಿದ ಸಂಭ್ರಮಾಚರಣೆ! ವಿಡಿಯೋ ವೈರಲ್

ಮೂರು ವರ್ಷ ಕಾಲ ಇದೇ ರೀತಿ ಟೆಂಟ್​ನಲ್ಲಿ ವಾಸಿಸುತ್ತಿದ್ದ ಯಶಸ್ವಿ ಜೈಸ್ವಾಲ್ ಅವರ ಲಕ್ ಬದಲಾಗಿದ್ದು ಜ್ವಾಲಾ ಸಿಂಗ್ ಅವರ ಕಣ್ಣಿಗೆ ಬಿದ್ದ ಮೇಲೆ. ಜೈಸ್ವಾಲ್ ಕ್ರಿಕೆಟ್ ಪ್ರತಿಭೆಯನ್ನು ಸಿಂಗ್ ಗುರುತಿಸಿದ್ದರು. ಸಾಂಟಾಕ್ರುಜ್​ನಲ್ಲಿ ಕ್ರಿಕೆಟ್ ಅಕಾಡೆಮಿ ನಡೆಸುತ್ತಿದ್ದ ಅವರು ಯಶಸ್ವಿ ಜೈಸ್ವಾಲ್​ಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು. ಅವರಿಗೆ ಗಾಡ್ ಫಾದರ್ ರೀತಿಯೇ ಆದರು.

Yashasvi Jaiswal Buys Luxury Apartment In Mumbai, Know His Rag to Rich Story From Living In a Tent

ಯಶಸ್ವಿ ಜೈಸ್ವಾಲ್ ಪಾನಿಪುರಿ ಮಾರುತ್ತಿದ್ದ ದಿನಗಳು

ಅಲ್ಲಿಂದ ಜೈಸ್ವಾಲ್ ಅವರ ಗಮನ ಸಂಪೂರ್ಣ ಕ್ರಿಕೆಟ್ ಕಡೆಗೇ ಹೋಯಿತು. ಮುಂಬೈ ಕಿರಿಯರ ತಂಡಗಳಿಗೆ ಸೇರಿದರು. ಭಾರತದ ಅಂಡರ್ 19 ಟೀಮ್​ಗೆ ಆಯ್ಕೆಯಾಗಿ ಅಲ್ಲಿಯೂ ಮಿಂಚಿದರು. 2018ರಲ್ಲಿ ಮುಂಬೈ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದರು. ವಿಜಯ್ ಹಜರೆ ಟ್ರೋಫಿಯಲ್ಲಿ 18ನೇ ವಯಸ್ಸಿನಲ್ಲಿ ಡಬಲ್ ಸೆಂಚುರಿ ಭಾರಿಸಿದರು. ಈ ದಾಖಲೆ ಮಾಡಿದ ಅತಿ ಕಿರಿಯ ಬ್ಯಾಟರ್ ಎನಿಸಿದ್ದಾರೆ.

ಇದನ್ನೂ ಓದಿ: ಕೆಲಸಗಾರರಿಗೆ ಮಾಲೀಕತ್ವ ಕೊಟ್ಟು ಮೃತರಾದ ಶ್ರೀಮಂತ; ಕಂಪನಿಯ ಎಲ್ಲಾ 700 ಉದ್ಯೋಗಿಗಳೂ ಈಗ ಮಾಲೀಕರು

ನಂತರ ಐಪಿಎಲ್​ನಲ್ಲೂ ಅವರು ಮಿಂಚಿ, ಬಳಿಕ ಈಗ ಟೀಮ್ ಇಂಡಿಯಾದಲ್ಲಿ ಸ್ಟಾರ್ ಬ್ಯಾಟರ್ ಎನಿಸಿದ್ದಾರೆ. ಕಿರಿಯ ವಯಸ್ಸಿನಲ್ಲಿ ಎರಡು ದ್ವಿಶತಕ ಭಾರಿಸಿದ ಆಟಗಾರರ ಸಾಲಿಗೆ ಸೇರಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ