Odisha: 15 ವರ್ಷದ ಬಾಲಕನನ್ನು ರೂ.50 ಲಕ್ಷಕ್ಕಾಗಿ ಅಪಹರಿಸಿ ಕೊಲೆ; ಸರ್ಕಾರವನ್ನು ಖಂಡಿಸಿದ ಧರ್ಮೇಂದ್ರ ಪ್ರಧಾನ್

| Updated By: ನಯನಾ ಎಸ್​ಪಿ

Updated on: Mar 30, 2023 | 1:43 PM

ಕಾನೂನು ರಹಿತ ಒಡಿಶಾದ ವಾಸ್ತವ. ಅಧಿಕಾರದಲ್ಲಿರುವವರು ಇನ್ನಾದರೂ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯಲ್ಲಿನ ದೋಷ-ರೇಖೆಗಳನ್ನು ಗುರುತಿಸಬೇಕು - ಧರ್ಮೇಂದ್ರ ಪ್ರಧಾನ್

Odisha: 15 ವರ್ಷದ ಬಾಲಕನನ್ನು ರೂ.50 ಲಕ್ಷಕ್ಕಾಗಿ ಅಪಹರಿಸಿ ಕೊಲೆ; ಸರ್ಕಾರವನ್ನು ಖಂಡಿಸಿದ ಧರ್ಮೇಂದ್ರ ಪ್ರಧಾನ್
15-year-old Odisha boy killed by kidnappers Dharmendra Pradhan slams Odisha government
Follow us on

ಒಡಿಶಾದ ಝಾರ್ಸುಗುಡಾ (Jharsuguda, Odisha) ಜಿಲ್ಲೆಯಲ್ಲಿ 15 ವರ್ಷದ ಬಾಲಕನನ್ನು ಅಪಹರಿಸಿ (Kidnap), ಆತನನ್ನು ಕತ್ತು ಸೀಳಿ ಒಂದು ದಿನದೊಳಗೆ ಸುಟ್ಟು ಹಾಕಲಾಗಿದೆ (Murder) ಎಂದು ಪೊಲೀಸರು ಬುಧವಾರ (ಮಾರ್ಚ್ 29) ತಿಳಿಸಿದ್ದಾರೆ. ಪ್ರಕರಣದಲ್ಲಿ ಇಬ್ಬರು ಆರೋಪಿಗಳಾದ ಅಮಿತ್ ಶರ್ಮಾ (Amith Sharma) ಮತ್ತು ದಿನೇಶ್ ಅಗರ್ವಾಲ್ (Dinesh Agarwal) ಅವರನ್ನು ಬಂಧಿಸಲಾಗಿದೆ ಎಂದು ಜಾರ್ಸುಗುಡಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸ್ಮಿತ್ ಪರ್ಮಾರ್ ತಿಳಿಸಿದ್ದಾರೆ. ಆದರೆ ಎರಡು ತಿಂಗಳಿನ ಹಿಂದೆಯಷ್ಟೇ ಒಡಿಶಾದ ಅರೋಗ್ಯ ಸಚಿವರಾದ ನಭಾ ದಾಸ್ (Naba Das)ಅವರು ಗುಂಡಿನ ದಾಳಿಯಿಂದ ಮೃತ ಪಟ್ಟಿದ್ದಾರೆ. ಈ ಎಲ್ಲ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಟ್ವಿಟ್ಟರ್​ನಲ್ಲಿ ಒಡಿಶಾ ಸರ್ಕಾರವನ್ನು ಖಂಡಿಸಿದ್ದಾರೆ.

“ಕಾನೂನು ರಹಿತ ಒಡಿಶಾದ ವಾಸ್ತವ. ಅಧಿಕಾರದಲ್ಲಿರುವವರು ಇನ್ನಾದರೂ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯಲ್ಲಿನ ದೋಷ-ರೇಖೆಗಳನ್ನು ಗುರುತಿಸಬೇಕು. ಹಗಲು ಹೊತ್ತಿನಲ್ಲಿ ಸಚಿವೆ ನಭಾ ದಾಸ್ ಹತ್ಯೆಯಾದ ಎರಡು ತಿಂಗಳೊಳಗೆ ಯುವ ಸಮರ್ಥನ ಹತ್ಯೆಯಾಗಿದೆ, ಇದು ಒಡಿಶಾ ಸರ್ಕಾರದ ಇಂತಹ ಆಡಳಿತ ನಡೆಸುತ್ತಿದೆ ಎಂಬುದನ್ನು ಬಹಿರಂಗಪಡಿಸುತ್ತದೆ” ಎಂದು ಧರ್ಮೇಂದ್ರ ಪ್ರಧಾನ್ ಟ್ವಿಟ್ಟರ್​ನಲ್ಲಿ ಬರೆದಿದ್ದಾರೆ.

“ಮಾರ್ಚ್ 27 ರಂದು, ಸಮರ್ಥ್ (ಕೊಲೆಯಾದ ಹುಡುಗ) ಮಧ್ಯಾಹ್ನ 3:30 ರ ಸುಮಾರಿಗೆ ನಾಪತ್ತೆಯಾಗಿದ್ದನು. ರಾತ್ರಿ 8:30ರ ಸುಮಾರಿಗೆ ಆತನ ತಂದೆಗೆ ಕರೆ ಬಂದಿದ್ದು, ಮಗುವನ್ನು ಬಿಡುಗಡೆ ಮಾಡಲು ಕರೆ ಮಾಡಿದ ವ್ಯಕ್ತಿ ₹ 50 ಲಕ್ಷ ಬೇಡಿಕೆ ಇಟ್ಟಿದ್ದ. ಆತನ ತಂದೆ ಎಫ್‌ಐಆರ್ ದಾಖಲಿಸಿದ ನಂತರ ನಾಪತ್ತೆಯಾಗಿರುವ ಬಾಲಕನ ಪತ್ತೆಗೆ ನಾವು ಮೂರು ವಿಶೇಷ ತಂಡಗಳನ್ನು ರಚಿಸಿದ್ದೆವು. ಆದರೆ, ಮಂಗಳವಾರ ಬಾಲಕನ ಸುಟ್ಟ ಶವ ಬರ್ಗಢ ಜಿಲ್ಲೆಯಲ್ಲಿ ಪತ್ತೆಯಾಗಿದೆ” ಎಂದು ಎಸ್‌ಪಿ ತಿಳಿಸಿದ್ದಾರೆ.

ಇದನ್ನೂ ಓದಿ:

“ಹಣದ ಉದ್ದೇಶಕ್ಕೆ ಬಾಲಕನನ್ನು ಅಪಹರಿಸಿರಲಿಲ್ಲ. ಹಣದ ವಿಷಯಕ್ಕೆ ಅಪಹರಿಸಿದ್ದಾರೆ, ಅವರು ಹುಡುಗನನ್ನು ಏಕೆ ಕೊಲ್ಲುತ್ತಾರೆ? ಕೊಲೆಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ನಾವು ಇನ್ನೂ ಪ್ರಯತ್ನಿಸುತ್ತಿದ್ದೇವೆ” ಎಂದು SP ಹೇಳಿದರು.

ಆರೋಪಿಗಳನ್ನು ಪೊಲೀಸ್ ತಂಡಗಳು ಬಂಧಿಸಿವೆ. ಆರೋಪಿ ಅಮಿತ್ ಕುಮಾರ್ ಶರ್ಮಾ, ಉದ್ಯಮಿಯ ಕುಟುಂಬಕ್ಕೆ ಪರಿಚಯವಿದ್ದ ಕಾರಣ ಯಾವುದೇ ತೊಂದರೆಯಿಲ್ಲದೆ ಬಾಲಕನನ್ನು ಅಪಹರಿಸಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.