ರಾಯಚೂರು: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆ; ಕೊಲೆಯಲ್ಲಿ ಅಂತ್ಯ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ನಾಗರಾಳ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ಇಬ್ಬರು ಸ್ನೇಹಿತರ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದ್ದು, ರವಿಕುಮಾರ (33) ಕೊಲೆಯಾದ ಯುವಕ. ಈ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆ; ಕೊಲೆಯಲ್ಲಿ ಅಂತ್ಯ
ರಾಯಚೂರು
Edited By: ಕಿರಣ್ ಹನುಮಂತ್​ ಮಾದಾರ್

Updated on: Aug 16, 2023 | 2:54 PM

ರಾಯಚೂರು, ಆ.16: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ರಾಯಚೂರು(Raichur) ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದೆ. ರವಿಕುಮಾರ (33) ಕೊಲೆಯಾದ ಯುವಕ. ನಿನ್ನೆ(ಆ.15) ರಾತ್ರಿ ಮೃತನ ಮನೆಯ ಟೆರಸ್ ಮೇಲೆ ಮದ್ಯಪಾನ ಮಾಡಿದ್ದ ಆರೋಪಿ ಪವನ್ ಕುಮಾರ್ ಕುಡಿದ ಮತ್ತಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಶರುವಾಗಿದೆ. ಈ ವೇಳೆ ನೈಟ್ ಪ್ಯಾಂಟ್​ನ ಲೇಸ್​ನಿಂದ ಕುತ್ತಿಗೆಗೆ ಬಿಗಿದು ಸ್ನೇಹಿತನನ್ನು ಕೊಲೆ ಮಾಡಿದ್ದಾನೆ.

ನಶೆಯಲ್ಲಿಯೇ ಸ್ನೇಹಿತನ ಪರಲೋಕ ಕಳುಹಿಸಿದ

ಕಳೆದ ಕೆಲ ವರ್ಷಗಳ ಹಿಂದೆ ಮೃತನ ತಂದೆ ತಾಯಿ ಮೃತಪಟ್ಟಿದ್ದರು. ಇತ್ತ ಮೃತ ರವಿ ಕುಮಾರ್​ನನ್ನು ಪತ್ನಿ‌ ಬಿಟ್ಟು ಹೋಗಿದ್ದಳು. ಹೀಗಾಗಿ ಬಾರ್​ನಲ್ಲಿ ಕೆಲಸ ಮಾಡಿಕೊಂಡು ಓಬ್ಬನೇ ವಾಸವಿದ್ದ. ಆಗಾಗ ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಮಾಡುತ್ತಿದ್ದ ಮೃತ ರವಿಕುಮಾರ್. ನಿನ್ನೆ(ಆ.16) ಕೂಡ ಮದ್ಯಪಾನ ಮಾಡುತ್ತ. ಆರೋಪಿ ಪವನ್ ಕುಮಾರ್ ನಶೆಯಲ್ಲಿ ರವಿಕುಮಾರ್​ನನ್ನು ಕೊಂದಿದ್ದಾನೆ. ಘಟನೆ ಬಳಿಕ ಆರೋಪಿ ಪವನ್ ಕುಮಾರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Mysore police: ಐಶಾರಾಮಿ ಕಾರು, ಶ್ರೀಮಂತರ ಮನೆಯೇ ಇವನ ಟಾರ್ಗೆಟ್: 56 ಕಳ್ಳತನ ಮಾಡಿದ್ದರೂ ಪೊಲೀಸರಿಗೆ ಮಾತ್ರ ಸಿಕ್ಕಿರಲಿಲ್ಲ- ಕೊನೆಗೂ ಅಂದರ್​

ಕೆನರಾ ಬ್ಯಾಂಕ್ ATMನಲ್ಲಿ ಕಳ್ಳರ ಕೈಚಳಕ; ಎಟಿಎಂನಲ್ಲಿದ್ದ 14 ಲಕ್ಷ ಹಣ ಕಳ್ಳತನ

ಚಿಕ್ಕಮಗಳೂರು: ನಗರದ ಹೌಸಿಂಗ್​ ಬೋರ್ಡ್​​ನಲ್ಲಿದ್ದ ಕೆನರಾ ಬ್ಯಾಂಕ್​ ಎಟಿಎಂನಿಂದ ರಾತ್ರೋರಾತ್ರಿ 14 ಲಕ್ಷ ರೂ ಹಣವನ್ನು ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು, ಕೆನರಾ ಬ್ಯಾಂಕ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರು ಸಾವು

ಬೆಂಗಳೂರು: ಬೈಕ್​ಗಳ ನಡುವೆ ಭೀಕರ ಅಪಘಾತವಾಗಿ ಇಬ್ಬರ ಸಾವನ್ನಪ್ಪಿರುವ ಬೆಂಗಳೂರಿನ ಮಾರುತಿನಗರ ಮುಖ್ಯರಸ್ತೆಯಲ್ಲಿ ತಡರಾತ್ರಿ 11.45 ಸುಮಾರಿಗೆ ನಡೆದಿದೆ. ಸರ್ಕಾರಿ ಪ್ರಾಧ್ಯಾಪಕ ನರಸಪ್ಪ(51) ಹಾಗೂ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಯುವತಿ ರಕ್ಷಾ (21) ಸಾವನ್ನಪ್ಪಿದ ರ್ದುದೈವಿಗಳು. ಮೃತ ರಕ್ಷಾ ಹಾಗೂ ಚಂದನ್ ಇಬ್ಬರು ಸ್ನೇಹಿತರಾಗಿದ್ದು, ರಕ್ಷಾ ಕಿಡ್ ಕೇರ್​ನಲ್ಲಿ ಕೆಲಸ ಮಾಡುತಿದ್ದರೆ, ಚಂದನ್​ ಕಾಲೇಜು ವಿದ್ಯಾರ್ಥಿ. ತಡರಾತ್ರಿ ಇಬ್ಬರು ಪಲ್ಸರ್ ಬೈಕ್​ನಲ್ಲಿ ವೇಗವಾಗಿ ಬಂದಿದ್ದಾರೆ. ಅಜಾಗರೂಕವಾಗಿ ವೇಗದ ಚಾಲನೆಯಿಂದ ಮತ್ತೊಂದು ಬೈಕ್ ನಲ್ಲಿ ಸಾಗುತಿದ್ದ ನರಸಪ್ಪಗೆ ಡಿಕ್ಕಿ ಹೊಡೆದಿದ್ದಾರೆ. ಈ ಕುರಿತು ಕೆಂಗೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us