AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಬೈಲ್ ಕಿತ್ತುಕೊಳ್ಳಲು ಬಂದವನನ್ನ ಕಲ್ಲಿನಿಂದ ಜಜ್ಜಿ ಕೊಂದ: ಕೊಲೆ ಆರೋಪಿ ಈಗ ಪೊಲೀಸರ ಅತಿಥಿ

ವ್ಯಕ್ತಿಯೋರ್ವ ಮೊಬೈಲ್ ಕದಿಯಲು ಬಂದವನನ್ನ ರೊಚ್ಚಿಗೆದ್ದು ಕಲ್ಲಿನಿಂದ ಜಜ್ಜಿ ಕೊಂದಿರುವ ಘಟನೆ ನಡೆದಿದೆ. ಕೊಲೆ ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಮೊಬೈಲ್ ಕಿತ್ತುಕೊಳ್ಳಲು ಬಂದವನನ್ನ ಕಲ್ಲಿನಿಂದ ಜಜ್ಜಿ ಕೊಂದ: ಕೊಲೆ ಆರೋಪಿ ಈಗ ಪೊಲೀಸರ ಅತಿಥಿ
ಸಾಂದರ್ಭಿಕ ಚಿತ್ರ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Feb 16, 2023 | 11:01 PM

Share

ಚಿಕ್ಕಮಗಳೂರು: ಒಂಟಿಯಾಗಿ ಓಡಾಡುವವರಿಂದ ಹಣ, ಆಭರಣ, ಮೊಬೈಲ್‌ ಫೋನ್‌( mobile) ದೋಚುವವರ ಹಾವಳಿ ಹೆಚ್ಚಾಗಿದೆ. ಅದರಂತೆ ಇಲ್ಲೋರ್ವ ವ್ಯಕ್ತಿ ಮೊಬೈಲ್ ಕಿತ್ತುಕೊಳ್ಳಲು ಹೋದವ ದುರಂತ ಅಂತ್ಯಕಂಡಿದ್ದಾನೆ. ಹೌದು..ವ್ಯಕ್ತಿಯೋರ್ವ ಮೊಬೈಲ್ ಕಿತ್ತುಕೊಳ್ಳಲು ಬಂದವನನ್ನ ರೊಚ್ಚಿಗೆದ್ದು ಕಲ್ಲಿನಿಂದ ಜಜ್ಜಿ ಕೊಂದಿರುವ ಘಟನೆ ಚಿಕ್ಕಮಗಳೂರಿನ ಕಡೂರು (kadur Chikkamagaluru )ಸಮೀಪದ ಮರವಂಜಿ ವೃತ್ತದ ಬಳಿ ನಡೆದಿದೆ.

ಇದನ್ನೂ ಓದಿ: ಹಾವು ಹಿಡಿಯಲು ಹೋಗುತ್ತಿದ್ದ ಉರಗ ರಕ್ಷಕ ಮೋಯಿನ್ ಪಾಲಿಗೆ ವಿಧಿಯಾಗಿ ಬಂದ ಶಾಲಾ ಬಸ್

ಕಡೂರು ತಾಲೂಕಿನ ಮಲ್ಲೇದೇವರಹಳ್ಳಿ ನಿವಾಸಿ ಮೋಹನ್(60) ವ್ಯಕ್ತಿಯೋರ್ವನ ಮೊಬೈಲ್ ಕಿತ್ತುಕೊಳ್ಳಲು ಹೋಗಿ ಕೊಲೆಯಾಗಿದ್ದಾನೆ. ಫೆಬ್ರವರಿ 14ರ ರಾತ್ರಿ ಮೋಹನ್ ಕೆಂಚಪ್ಪನ ಮೊಬೈಲ್ ಕಿತ್ತುಕೊಳ್ಳಲು ಬಂದಿದ್ದು, ಈ ವೇಳೆ ಕೆಂಚಪ್ಪ ಕಲ್ಲಿನಿಂದ ಹೊಡೆದು ಮೋಹನ್​ನನ್ನು ಹತ್ಯೆ ಮಾಡಿದ್ದಾನೆ. ಮೋಹನ್ ಎನ್ನುವಾತನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ ಕೆಂಚಪ್ಪನನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.

ಬ್ರಿಡ್ಜ್​ಗೆ ಕಾರು ಡಿಕ್ಕಿಯಾಗಿ ನಾಲ್ವರು ಸಾವು

ಕೊಪ್ಪಳ: ಸೇತುವೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಇಂದು( ಫೆಬ್ರವರಿ 16) ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಬನ್ನಿಕೊಪ್ಪ ಬಳಿ ನಡೆದಿದೆ. ಕಾರಿನಲ್ಲಿದ್ದ ಇಬ್ಬರು ಮಹಿಳೆಯರು, ಇಬ್ಬರು ಪುರುಷರ ದುರ್ಮರಣ ಹೊಂದಿದ್ದಾರೆ. ವೆನಿಲ್ಲಾ(25), ರೂಪವತಿ(26), ಷಣ್ಮುಖ(28) ಮೃತ ದುರ್ದೈವಿಗಳು. ಮೃತರು ತೆಲಂಗಾಣ ಮೂಲದವರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕುಕನೂರು ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Published On - 10:59 pm, Thu, 16 February 23