AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ದಿನದಂದೇ ಮನೆಗೆ ಆವರಿಸಿತು ಕತ್ತಲು, ಕೊಲೆಯಾಗಿ ಹೋದ ಸಾಫ್ಟ್ವೇರ್ ಎಂಜಿನಿಯರ್

ತಂದೆ-ತಾಯಿಯೊಂದಿಗೆ ಊಟ ಮಾಡಿ, ತುರ್ತು ಕೆಲಸವೆಂದು ಮನೆಯಿಂದ ಹೋದ ಮಗ ಮರಳಿ ಬಂದಿದ್ದು ಶವವಾಗಿ

ದೀಪಾವಳಿ ದಿನದಂದೇ ಮನೆಗೆ ಆವರಿಸಿತು ಕತ್ತಲು, ಕೊಲೆಯಾಗಿ ಹೋದ ಸಾಫ್ಟ್ವೇರ್ ಎಂಜಿನಿಯರ್
ಪ್ರಾತಿನಿಧಿಕ ಚಿತ್ರ
TV9 Web
| Edited By: ವಿವೇಕ ಬಿರಾದಾರ|

Updated on:Oct 25, 2022 | 8:01 PM

Share

ಬೆಳಕಿನ ಹಬ್ಬ ದೀಪಾವಳಿ ದಿನದಂದು ಎಲ್ಲರ ಮನೆಯಲ್ಲಿ ಬೆಳಕು ಆವರಿಸಿದರೆ, ಈ ಮನೆಯಲ್ಲಿ ಕತ್ತಲು ಆವರಿಸಿದೆ. ಮನೆಯ ಆಧಾರ ಸ್ತಂಭದಂತಿದ್ದ, ಮನೆಗೆ ಬೆಳಕಾಗಿ ಇದ್ದ ಮಗನನ್ನು ಕಳೆದುಕೊಂಡ ತಾಯಿ ರೋದನೆ ಹೇಳತೀರದು. ಶಿವಮೊಗ್ಗ (Shivamogga) ಗಾಂಧಿ ನಗರದ ನಿವಾಸಿ ವಿಜಯ್ ಹಬ್ಬದ ದಿನದಂದು ಕೆಲಸಕ್ಕೆ ಹೋದವ ಮನೆಗೆ ಮರಳಿ ಬಂದಿದ್ದು ಶವವಾಗಿ. ವಿಜಯ್ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಬೆಂಗಳೂರಿನ ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದನು. ಆದರೆ ಕಳೆದ 3 ವರ್ಷದ ಹಿಂದೆ ಐಟಿ ಕಂಪನಿಯಲ್ಲಿ ಉದ್ಯೋಗ ತೊರೆದು ಶಿವಮೊಗ್ಗದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತಿದ್ದನು. ನಿನ್ನೆ (ಅ.24) ರಾತ್ರಿ ಎಂದಿನಂತೆ ಕೆಲಸ ಮುಗಿಸಿ 10 ಗಂಟೆಗೆ ಮನೆಗೆ ಬಂದಿದ್ದನು. ಆದರೆ ಆತನ ತಂದೆ ತಾಯಿ ರಾತ್ರಿ ಚಲನಚಿತ್ರ ವೀಕ್ಷಣೆಗೆಂದು ಹೋಗಿದ್ದರಿಂದ ಊಟಕ್ಕಾಗಿ ತಂದೆ ತಾಯಿಗಾಗಿ ಕಾಯ್ದಿದ್ದಾನೆ.

ಸ್ವಲ್ಪ ಹೊತ್ತಿನ ನಂತರ ತಂದೆ ತಾಯಿ ಮನೆಗೆ ಬಂದ ಬಳಿಕ, ತಡರಾತ್ರಿ ಮೂವರೂ ಸೇರಿ ಊಟ ಮಾಡಿದ್ದಾರೆ. ಊಟ ಮುಗಿದ ಕೆಲವೇ ಹೊತ್ತಿನಲ್ಲಿ ವಿಜಯ್​ಗೆ ಫೋನ್ ಬಂದಿದೆ. ಆಗ ವಿಜಯ ತನ್ನ ತಂದೆ ವೆಂಕಟಾಚಲ ಅವರ ಬಳಿ ಆಸ್ಪತ್ರೆಯಿಂದ ಕರೆ ಬಂದಿದೆ ನನಗೆ ತುರ್ತು ಕೆಲಸ ಇದೆ ಎಂದು ಹೇಳಿ ಮನೆಯಿಂದ ಹೊರಟಿದ್ದಾನೆ. ಆದರೆ ಮನೆಯಿಂದ ತುಸು ದೂರದಲ್ಲೇ ವೆಂಕಟೇಶ್ವರ ನಗರದ ಎ.ಎನ್.ಕೆ ಮೊದಲನೇ ಅಡ್ಡ ರಸ್ತೆಯಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಯಾರೋ ದುಷ್ಕರ್ಮಿಗಳು ವಿಜಯ್​​ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಅಷ್ಟಕ್ಕೂ ನಿನ್ನೆ ತಡರಾತ್ರಿ ಆಸ್ಪತ್ರೆಗೆ ಬರುವಂತೆ ವಿಜಯ್​ಗೆ ಆಸ್ಪತ್ರೆಯಿಂದ ಯಾರೂ ಕರೆ ಮಾಡಿರಲಿಲ್ಲವಂತೆ. ಹೀಗಿರುವಾಗ ತಡರಾತ್ರಿ ವಿಜಯ್​ಗೆ ಕರೆ ಮಾಡಿ ಮನೆಯಿಂದ ಹೊರಬರುವಂತೆ ಹೇಳಿದವರು ಯಾರು? ಮನೆಯಿಂದ ಸ್ವಲ್ಪ ದೂರದಲ್ಲೇ ಆತನಿಗೆ ಚಾಕುನಿಂದ ಇರಿದು ಕೊಂದವರು ಯಾರು? ವಿಜಯ್ ಯಾರ ಜೊತೆಯಾದರೂ ದ್ವೇಷ ಕಟ್ಟಿಕೊಂಡಿದ್ದನೇ? ಎಂಬ ಅನುಮಾನಗಳು ಉದ್ಭವವಾಗಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ವಿಜಯ್​ಗೆ ಮದವೆಯಾಗಿ ಏಳು ವರ್ಷವಾಗಿತ್ತು. ಆದರೆ ದಂಪತಿಗಳು ವಿಚ್ಚೇದನ ಪಡೆದಿದ್ದರು. ದಂಪತಿಗಳಿಗೆ ಒಂದು ಮಗು ಕೂಡ ಇದ್ದು, ಬೆಂಗಳೂರಿನಲ್ಲಿ ತಾಯಿ ಜೊತೆ ವಾಸವಾಗಿದೆ. ಪತ್ನಿ ಕಡೆಯವರೇನಾದರೂ ಕೊಲೆ ಮಾಡಿದ್ದಾರೆಯೇ? ಎಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಬ್ಬರು ದುಷ್ಕರ್ಮಿಗಳು ವಿಜಯ್​ನನ್ನು ಮರ್ಡರ್ ಮಾಡಿ ಎಸ್ಕೇಪ್ ಆಗಿರುವ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಸದ್ಯ ಆ ಇಬ್ಬರು ಹಂತಕರಿಗಾಗಿ ಜಯನಗರ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಖುದ್ದಾಗಿ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿದ್ದಾರೆ. ಆದಷ್ಟು ಬೇಗ ಹಂತಕರನ್ನು ಬಂಧಿಸುವುದಾಗಿ ವಿಶ್ವಾಸ ನೀಡಿದ್ದಾರೆ.

ವರದಿ- ಬಸವರಾಜ್ ಯರಗಣವಿ ಟಿವಿ9 ಶಿವಮೊಗ್ಗ

Published On - 8:00 pm, Tue, 25 October 22

Follow Us
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ