AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಂತ ಗಂಡನನ್ನು ಕೊಂದ ಬಳಿಕ ಹತ್ತಿರದವರನ್ನು ಕೆಳೆದುಕೊಂಡ ಮಕ್ಕಳಿಗೆ ಈಕೆ ಬರೆದಿದ್ದಳು ಒಂದು ಸುಂದರ ಪುಸ್ತಕ; ಇದೊಂದು ಅಪರೂಪದ ಕೊಲೆ ಕೇಸ್!

ತನ್ನ ಪತಿ ಎರಿಕ್ ರಿಚಿನ್ಸ್‌ನ ಮರಣದ ನಂತರ ದುಃಖದ ಬಗ್ಗೆ ಮಕ್ಕಳ ಪುಸ್ತಕವನ್ನು ಬರೆದ ಮೂರು ಮಕ್ಕಳ ತಾಯಿಯಾದ ಕೌರಿ ರಿಚಿನ್ಸ್ ಅವರನ್ನು ತಮ್ಮ ಗಂಡನನ್ನು ಕೊಲೆ ಮಾಡಿರುವ ಆರೋಪದ ಮೇಲೆ ಬಂಧಿಸಲಾಯಿತು.

ಸ್ವಂತ ಗಂಡನನ್ನು ಕೊಂದ ಬಳಿಕ ಹತ್ತಿರದವರನ್ನು ಕೆಳೆದುಕೊಂಡ ಮಕ್ಕಳಿಗೆ ಈಕೆ ಬರೆದಿದ್ದಳು ಒಂದು ಸುಂದರ ಪುಸ್ತಕ; ಇದೊಂದು ಅಪರೂಪದ ಕೊಲೆ ಕೇಸ್!
ಕೌರಿ ರಿಚಿನ್ಸ್, ಎರಿಕ್ ರಿಚಿನ್ಸ್
ನಯನಾ ಎಸ್​ಪಿ
|

Updated on:May 27, 2023 | 10:59 AM

Share

ಮಕ್ಕಳ ಪುಸ್ತಕ (Children Books) ಸಾಮಾನ್ಯವಾಗಿ ಮನಸ್ಸಿಗೆ ಮುದ ನೀಡುವ ಶೈಲಿಯಲ್ಲಿ ಬರಹಗಾರರು (Author) ಹೆಣೆದಿರುತ್ತಾರೆ. ಇದೆ ರೀತಿ ಮೂರೂ ಮಕ್ಕಳ ತಾಯಿಯಾದ ಕೌರಿ ರಿಚಿನ್ಸ್ (Kouri Richins) 2022 ರಲ್ಲಿ ತನ್ನ ಗಂಡನನ್ನು ಕಳೆದುಕೊಂಡ ನಂತರ ಮಕ್ಕಳು ಆ ಆಘಾತದಿಂದ ಹೊರ ಬರಲು ‘ಆರ್ ಯು ವಿಥ್ ಮೀ?’ ಎಂಬ ಪುಸ್ತಕ ಬಿಡುಗಡೆ ಮಾಡಿದರು. ಈ ಪುಸ್ತಕ ಬಿಡುಗಡೆಯಾದ ಕೇವಲ 2 ತಿಂಗಳ ನಂತರ ಆಘಾತಕಾರಿ ವಿಷಯ ಒಂದು ಬೆಳಕಿಗೆ ಬಂದಿದೆ. ಉತಾಹ್‌ನ ಕಮಾಸ್ ಎಂಬ ಸ್ಥಳದವರಾದ ಮಕ್ಕಳ ಲೇಖಕಿ ರಿಚಿನ್ಸ್ ಅವರನ್ನು ತಮ್ಮ ಗಂಡನ ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ಈ ವಿಷಯ ಬೆಳಕಿಗೆ ಬಂದ ಕೂಡಲೇ ಈ ಪುಸ್ತಕವನ್ನು ಕೊಂಡ ಅದೆಷ್ಟೋ ಜನ ಶಾಕ್ ಆಗಿದ್ದಾರೆ.

ಪ್ರಾಸಿಕ್ಯೂಟರ್‌ಗಳು ರಿಚಿನ್ಸ್ ವಿರುದ್ಧದ ಕೊಲೆ ಆರೋಪಗಳನ್ನು ಅನಾವರಣಗೊಳಿಸಿದರು, ಅವರು ತಮ್ಮ ಪತಿ ಎರಿಕ್ ರಿಚಿನ್ಸ್‌ಗೆ ಫೆಂಟನಿಲ್‌ನ ಮಾರಣಾಂತಿಕ ಡೋಸ್‌ ನೀಡುವ ಮೂಲಕ ಅವರನ್ನು ಕೊಲೆ ಮಾಡಿದ್ದಾರೆ ಎಂಬುದನ್ನು ತಿಳಿಸಿದರು. ಮಾರ್ಚ್ 2022 ರಲ್ಲಿ ಎರಿಕ್ ಅವರ ಅಕಾಲಿಕ ಮರಣದ ತನಿಖೆಗಳು ಅವರ ಸಾವು ಅನುಮಾನಾಸ್ಪದವಾಗಿದೆ ಎಂದು ಬಹಿರಂಗಪಡಿಸಿತು, ಅವರ ದೇಹದಲ್ಲಿದ್ದ ಫೆಂಟನಿಲ್ ಮಟ್ಟವು ಮಾರಣಾಂತಿಕ ಮಿತಿಗಿಂತ ಐದು ಪಟ್ಟು ಮೀರಿದೆ ಎಂಬುದು ತಿಳಿದು ಬಂದಿತ್ತು.

“ರಿಯಲ್ ಎಸ್ಟೇಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎರಿಕ್ ಒಂದು ಮನೆ ಮಾರಾಟ ಮಾಡಿದ ಖುಷಿಯಲ್ಲಿ ಗಂಡನಿಗೆ ವೋಡ್ಕಾ ಮತ್ತು ಸೋಡಾ ಮಿಕ್ಸ್ ಅನ್ನು ಕುಡಿಯಲು ಕೊಟ್ಟಿದ್ದ”, ಎಂದು ಕೌರಿ ಅಧಿಕಾರಿಗಳಿಗೆ ತಿಳಿಸಿದರು. ಅದರಲ್ಲಿ ಒಂದು ಭಾಗವನ್ನು ತಾನೇ ಸೇವಿಸಿರುವುದಾಗಿ ಹೇಳಿಕೊಂಡರು, ಉಳಿದ ಭಾಗವನ್ನು ಎರಿಕ್‌ಗೆ ನೀಡಿದ್ದರು. ಈ ಸಮಯದಲ್ಲಿ ಅವರ ಮಕ್ಕಳು ಮನೆಗೆ ಬಂದು, ವಾಪಾಸ್ ಆದ ಬಳಿಕ ಕೌರಿ ಹೋಗಿ ನೋಡಿದಾಗ ತನ್ನ ಪತಿ ಸ್ಪಂದಿಸದೆ ಇರುವುದನ್ನು ಕಂಡು, ಆತ ಸತ್ತಿರುವ ವಿಷಯ ತಿಳಿಯಿತಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಇದನ್ನೂ ಓದಿ: ಸ್ವಂತ ಪತಿಯನ್ನೇ ಕೊಂದರು ಈ ಪುಟ್ಟ ಹಳ್ಳಿಗೆ ಇವಳೇ ಹೀರೋ; ಈ ಕೇಸಿನ ವಿಶೇಷತೆ ತಿಳಿಯಿರಿ

ದಿ ಸಾಲ್ಟ್ ಲೇಕ್ ಟ್ರಿಬ್ಯೂನ್ ಪ್ರಕಾರ, ಸರ್ಚ್ ವಾರಂಟ್ ಅಫಿಡವಿಟ್ ಅನ್ನು ಉಲ್ಲೇಖಿಸಿ, ಎರಿಕ್ ಮರಣಹೊಂದಿದ ಮರುದಿನ, ಕೌರಿ ಮನೆ ಮುಚ್ಚುವ ಪ್ರಕ್ರಿಯೆಯನ್ನು ಏಕಾಂಗಿಯಾಗಿ ಪೂರ್ಣಗೊಳಿಸಿದರು. ನಂತರ ಸ್ನೇಹಿತರನ್ನು ಕರೆದು ಒಂದು ದೊಡ್ಡ ಮಟ್ಟದ ಪಾರ್ಟಿ ಮಾಡಿ ಮೋಜು ಮಾಡಿರುವುದು ಕಂಡುಬಂದಿದೆ.

ಕೌರಿಯವರ ಪುಸ್ತಕವನ್ನು ಓದಿದವರು ಈ ಆಘಾತಕಾರಿ ಘಟನೆ ಕೇಳಿ ತತ್ತರಿಸಿದ್ದಾರೆ, ಈಗ ಆಕೆಯ ವಿರುದ್ಧ ಹೊರಿಸಲಾದ ಅನಿರೀಕ್ಷಿತ ಮತ್ತು ಕಠೋರ ಆರೋಪಗಳೊಂದಿಗೆ ಸೆಣಸಾಡುತ್ತಿದ್ದಾರೆ. ಕಾನೂನು ಪ್ರಕ್ರಿಯೆಗಳು ತೆರೆದುಕೊಳ್ಳುತ್ತಿದ್ದಂತೆ, ಪ್ರೀತಿ ಮತ್ತು ನಷ್ಟದ ಹೃದಯವಿದ್ರಾವಕ ಕಥೆಯು ದುರಂತ ಮತ್ತು ದಿಗ್ಭ್ರಮೆಗೊಳಿಸುವ ತಿರುವನ್ನು ತೆಗೆದುಕೊಳ್ಳುತ್ತದೆ. ಒಂದೆಡೆ ಕೆಲವರು ಕೌರಿ ತನ್ನ ಗಂಡನನ್ನು ಯಾಕೆ ಕೊಂದಿರಬಹುದು ಎಂದು ಹುಡುಕುತ್ತಿದ್ದರೆ ಮತ್ತೊಂದೆಡೆ ಹಲವರು ಮಕ್ಕಳ ಪುಸ್ತಕದ ಲೇಖಕಿ ಕೊಲೆ ಮಾಡಲು ಸಾಧ್ಯವೇ ಎಂಬ ಆಳವಾದ ಅಪನಂಬಿಕೆಯ ನಡುವೆ ಸಾಂತ್ವನವನ್ನು ಹುಡುಕುತ್ತಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:57 am, Sat, 27 May 23

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?