AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಂತ ಗಂಡನನ್ನು ಕೊಂದ ಬಳಿಕ ಹತ್ತಿರದವರನ್ನು ಕೆಳೆದುಕೊಂಡ ಮಕ್ಕಳಿಗೆ ಈಕೆ ಬರೆದಿದ್ದಳು ಒಂದು ಸುಂದರ ಪುಸ್ತಕ; ಇದೊಂದು ಅಪರೂಪದ ಕೊಲೆ ಕೇಸ್!

ತನ್ನ ಪತಿ ಎರಿಕ್ ರಿಚಿನ್ಸ್‌ನ ಮರಣದ ನಂತರ ದುಃಖದ ಬಗ್ಗೆ ಮಕ್ಕಳ ಪುಸ್ತಕವನ್ನು ಬರೆದ ಮೂರು ಮಕ್ಕಳ ತಾಯಿಯಾದ ಕೌರಿ ರಿಚಿನ್ಸ್ ಅವರನ್ನು ತಮ್ಮ ಗಂಡನನ್ನು ಕೊಲೆ ಮಾಡಿರುವ ಆರೋಪದ ಮೇಲೆ ಬಂಧಿಸಲಾಯಿತು.

ಸ್ವಂತ ಗಂಡನನ್ನು ಕೊಂದ ಬಳಿಕ ಹತ್ತಿರದವರನ್ನು ಕೆಳೆದುಕೊಂಡ ಮಕ್ಕಳಿಗೆ ಈಕೆ ಬರೆದಿದ್ದಳು ಒಂದು ಸುಂದರ ಪುಸ್ತಕ; ಇದೊಂದು ಅಪರೂಪದ ಕೊಲೆ ಕೇಸ್!
ಕೌರಿ ರಿಚಿನ್ಸ್, ಎರಿಕ್ ರಿಚಿನ್ಸ್
ನಯನಾ ಎಸ್​ಪಿ
ನಯನಾ ಎಸ್​ಪಿ|

Updated on:May 27, 2023 | 10:59 AM

Share

ಮಕ್ಕಳ ಪುಸ್ತಕ (Children Books) ಸಾಮಾನ್ಯವಾಗಿ ಮನಸ್ಸಿಗೆ ಮುದ ನೀಡುವ ಶೈಲಿಯಲ್ಲಿ ಬರಹಗಾರರು (Author) ಹೆಣೆದಿರುತ್ತಾರೆ. ಇದೆ ರೀತಿ ಮೂರೂ ಮಕ್ಕಳ ತಾಯಿಯಾದ ಕೌರಿ ರಿಚಿನ್ಸ್ (Kouri Richins) 2022 ರಲ್ಲಿ ತನ್ನ ಗಂಡನನ್ನು ಕಳೆದುಕೊಂಡ ನಂತರ ಮಕ್ಕಳು ಆ ಆಘಾತದಿಂದ ಹೊರ ಬರಲು ‘ಆರ್ ಯು ವಿಥ್ ಮೀ?’ ಎಂಬ ಪುಸ್ತಕ ಬಿಡುಗಡೆ ಮಾಡಿದರು. ಈ ಪುಸ್ತಕ ಬಿಡುಗಡೆಯಾದ ಕೇವಲ 2 ತಿಂಗಳ ನಂತರ ಆಘಾತಕಾರಿ ವಿಷಯ ಒಂದು ಬೆಳಕಿಗೆ ಬಂದಿದೆ. ಉತಾಹ್‌ನ ಕಮಾಸ್ ಎಂಬ ಸ್ಥಳದವರಾದ ಮಕ್ಕಳ ಲೇಖಕಿ ರಿಚಿನ್ಸ್ ಅವರನ್ನು ತಮ್ಮ ಗಂಡನ ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ಈ ವಿಷಯ ಬೆಳಕಿಗೆ ಬಂದ ಕೂಡಲೇ ಈ ಪುಸ್ತಕವನ್ನು ಕೊಂಡ ಅದೆಷ್ಟೋ ಜನ ಶಾಕ್ ಆಗಿದ್ದಾರೆ.

ಪ್ರಾಸಿಕ್ಯೂಟರ್‌ಗಳು ರಿಚಿನ್ಸ್ ವಿರುದ್ಧದ ಕೊಲೆ ಆರೋಪಗಳನ್ನು ಅನಾವರಣಗೊಳಿಸಿದರು, ಅವರು ತಮ್ಮ ಪತಿ ಎರಿಕ್ ರಿಚಿನ್ಸ್‌ಗೆ ಫೆಂಟನಿಲ್‌ನ ಮಾರಣಾಂತಿಕ ಡೋಸ್‌ ನೀಡುವ ಮೂಲಕ ಅವರನ್ನು ಕೊಲೆ ಮಾಡಿದ್ದಾರೆ ಎಂಬುದನ್ನು ತಿಳಿಸಿದರು. ಮಾರ್ಚ್ 2022 ರಲ್ಲಿ ಎರಿಕ್ ಅವರ ಅಕಾಲಿಕ ಮರಣದ ತನಿಖೆಗಳು ಅವರ ಸಾವು ಅನುಮಾನಾಸ್ಪದವಾಗಿದೆ ಎಂದು ಬಹಿರಂಗಪಡಿಸಿತು, ಅವರ ದೇಹದಲ್ಲಿದ್ದ ಫೆಂಟನಿಲ್ ಮಟ್ಟವು ಮಾರಣಾಂತಿಕ ಮಿತಿಗಿಂತ ಐದು ಪಟ್ಟು ಮೀರಿದೆ ಎಂಬುದು ತಿಳಿದು ಬಂದಿತ್ತು.

“ರಿಯಲ್ ಎಸ್ಟೇಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎರಿಕ್ ಒಂದು ಮನೆ ಮಾರಾಟ ಮಾಡಿದ ಖುಷಿಯಲ್ಲಿ ಗಂಡನಿಗೆ ವೋಡ್ಕಾ ಮತ್ತು ಸೋಡಾ ಮಿಕ್ಸ್ ಅನ್ನು ಕುಡಿಯಲು ಕೊಟ್ಟಿದ್ದ”, ಎಂದು ಕೌರಿ ಅಧಿಕಾರಿಗಳಿಗೆ ತಿಳಿಸಿದರು. ಅದರಲ್ಲಿ ಒಂದು ಭಾಗವನ್ನು ತಾನೇ ಸೇವಿಸಿರುವುದಾಗಿ ಹೇಳಿಕೊಂಡರು, ಉಳಿದ ಭಾಗವನ್ನು ಎರಿಕ್‌ಗೆ ನೀಡಿದ್ದರು. ಈ ಸಮಯದಲ್ಲಿ ಅವರ ಮಕ್ಕಳು ಮನೆಗೆ ಬಂದು, ವಾಪಾಸ್ ಆದ ಬಳಿಕ ಕೌರಿ ಹೋಗಿ ನೋಡಿದಾಗ ತನ್ನ ಪತಿ ಸ್ಪಂದಿಸದೆ ಇರುವುದನ್ನು ಕಂಡು, ಆತ ಸತ್ತಿರುವ ವಿಷಯ ತಿಳಿಯಿತಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಇದನ್ನೂ ಓದಿ: ಸ್ವಂತ ಪತಿಯನ್ನೇ ಕೊಂದರು ಈ ಪುಟ್ಟ ಹಳ್ಳಿಗೆ ಇವಳೇ ಹೀರೋ; ಈ ಕೇಸಿನ ವಿಶೇಷತೆ ತಿಳಿಯಿರಿ

ದಿ ಸಾಲ್ಟ್ ಲೇಕ್ ಟ್ರಿಬ್ಯೂನ್ ಪ್ರಕಾರ, ಸರ್ಚ್ ವಾರಂಟ್ ಅಫಿಡವಿಟ್ ಅನ್ನು ಉಲ್ಲೇಖಿಸಿ, ಎರಿಕ್ ಮರಣಹೊಂದಿದ ಮರುದಿನ, ಕೌರಿ ಮನೆ ಮುಚ್ಚುವ ಪ್ರಕ್ರಿಯೆಯನ್ನು ಏಕಾಂಗಿಯಾಗಿ ಪೂರ್ಣಗೊಳಿಸಿದರು. ನಂತರ ಸ್ನೇಹಿತರನ್ನು ಕರೆದು ಒಂದು ದೊಡ್ಡ ಮಟ್ಟದ ಪಾರ್ಟಿ ಮಾಡಿ ಮೋಜು ಮಾಡಿರುವುದು ಕಂಡುಬಂದಿದೆ.

ಕೌರಿಯವರ ಪುಸ್ತಕವನ್ನು ಓದಿದವರು ಈ ಆಘಾತಕಾರಿ ಘಟನೆ ಕೇಳಿ ತತ್ತರಿಸಿದ್ದಾರೆ, ಈಗ ಆಕೆಯ ವಿರುದ್ಧ ಹೊರಿಸಲಾದ ಅನಿರೀಕ್ಷಿತ ಮತ್ತು ಕಠೋರ ಆರೋಪಗಳೊಂದಿಗೆ ಸೆಣಸಾಡುತ್ತಿದ್ದಾರೆ. ಕಾನೂನು ಪ್ರಕ್ರಿಯೆಗಳು ತೆರೆದುಕೊಳ್ಳುತ್ತಿದ್ದಂತೆ, ಪ್ರೀತಿ ಮತ್ತು ನಷ್ಟದ ಹೃದಯವಿದ್ರಾವಕ ಕಥೆಯು ದುರಂತ ಮತ್ತು ದಿಗ್ಭ್ರಮೆಗೊಳಿಸುವ ತಿರುವನ್ನು ತೆಗೆದುಕೊಳ್ಳುತ್ತದೆ. ಒಂದೆಡೆ ಕೆಲವರು ಕೌರಿ ತನ್ನ ಗಂಡನನ್ನು ಯಾಕೆ ಕೊಂದಿರಬಹುದು ಎಂದು ಹುಡುಕುತ್ತಿದ್ದರೆ ಮತ್ತೊಂದೆಡೆ ಹಲವರು ಮಕ್ಕಳ ಪುಸ್ತಕದ ಲೇಖಕಿ ಕೊಲೆ ಮಾಡಲು ಸಾಧ್ಯವೇ ಎಂಬ ಆಳವಾದ ಅಪನಂಬಿಕೆಯ ನಡುವೆ ಸಾಂತ್ವನವನ್ನು ಹುಡುಕುತ್ತಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:57 am, Sat, 27 May 23

Follow Us
Nayana SP
Nayana SP

ಹುಟ್ಟೂರು ದಕ್ಷಿಣ ಕನ್ನಡ ಬೆಳೆದದ್ದು ನಮ್ಮ ಬೆಂಗಳೂರಿನಲ್ಲಿ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಶಿಕ್ಷಣ, ಜೋತಿಷ್ಯ, ಉದ್ಯೋಗ, ಹೀಗೆ ಹಲವು. ಕಳೆದ ಎರಡು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಓದುಗರ ಅಭಿರುಚಿಗೆ ಅನುಗುಣವಾಗಿ ಲೇಖನಗಳನ್ನು ಬರೆಯುವುದು ನನ್ನ ಪ್ರಯತ್ನ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!