ಸಿಸಿಬಿ ಕಾರ್ಯಾಚರಣೆಗೆ ಬೆದರಿದ ಡಾರ್ಕ್ ವೆಬ್ ದಂಧೆಕೋರರು

ಬೆಂಗಳೂರು: ಡಾರ್ಕ್ ವೆಬ್ ಮೂಲಕ ಹೈಡ್ರೊ ಗಾಂಜಾ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ. ಇತ್ತೀಚೆಗಷ್ಟೇ ಸುದ್ದಗುಂಟೆ ಪಾಳ್ಯದಲ್ಲಿ ಅಥೀಪ್, ಸಲೀಂ​ರನ್ನು ಅರೆಸ್ಟ್ ಮಾಡಿದ್ದರು. ಬಳಿಕ ಎರಡು ದಿನಗಳ ಹಿಂದೆ ಕೆಂಗೇರಿ ಬಳಿ ಅಮರ್ಥ್ಯ ರಿಷಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಮರ್ಥ್ಯ ರಿಷಿ ಮತ್ತು ಅಥೀಪ್ ನಡುವೆ ಯಾವುದೇ ಸಂಬಂಧ ಇರಲಿಲ್ಲ. ಅದ್ರೆ ಅಥೀಪ್ ಅರೆಸ್ಟ್ ಆಗಿದ್ದ ವಿಚಾರವನ್ನು ರಿಷಿ ಸೇರಿದಂತೆ ಅನೇಕರು ಡಾರ್ಕ್ ವೆಬ್​ನಲ್ಲಿ ಹಂಚಿಕೊಂಡಿದ್ರು. ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ಡಾರ್ಕ್ ವೆಬ್ ದಂಧೆಕೋರರು […]

ಸಿಸಿಬಿ ಕಾರ್ಯಾಚರಣೆಗೆ ಬೆದರಿದ ಡಾರ್ಕ್ ವೆಬ್ ದಂಧೆಕೋರರು
ಸಾಧು ಶ್ರೀನಾಥ್​

Updated on: Dec 16, 2019 | 1:17 PM

ಬೆಂಗಳೂರು: ಡಾರ್ಕ್ ವೆಬ್ ಮೂಲಕ ಹೈಡ್ರೊ ಗಾಂಜಾ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ. ಇತ್ತೀಚೆಗಷ್ಟೇ ಸುದ್ದಗುಂಟೆ ಪಾಳ್ಯದಲ್ಲಿ ಅಥೀಪ್, ಸಲೀಂ​ರನ್ನು ಅರೆಸ್ಟ್ ಮಾಡಿದ್ದರು. ಬಳಿಕ ಎರಡು ದಿನಗಳ ಹಿಂದೆ ಕೆಂಗೇರಿ ಬಳಿ ಅಮರ್ಥ್ಯ ರಿಷಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅಮರ್ಥ್ಯ ರಿಷಿ ಮತ್ತು ಅಥೀಪ್ ನಡುವೆ ಯಾವುದೇ ಸಂಬಂಧ ಇರಲಿಲ್ಲ. ಅದ್ರೆ ಅಥೀಪ್ ಅರೆಸ್ಟ್ ಆಗಿದ್ದ ವಿಚಾರವನ್ನು ರಿಷಿ ಸೇರಿದಂತೆ ಅನೇಕರು ಡಾರ್ಕ್ ವೆಬ್​ನಲ್ಲಿ ಹಂಚಿಕೊಂಡಿದ್ರು. ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ಡಾರ್ಕ್ ವೆಬ್ ದಂಧೆಕೋರರು ಹಂಚಿಕೊಂಡಿದ್ದಾರೆ. ಬೆಂಗಳೂರು ಸಿಸಿಬಿ ಪೊಲೀಸರು ಡಾರ್ಕ್ ನೆಟ್ ಕ್ರಾಕ್ ಮಾಡಿದ್ದಾರೆ ಎಚ್ಚರಿಕೆ ಎನ್ನುವ ಸಂದೇಶ ಸಾರಲಾಗಿತ್ತು. ಈ ಸಂದೇಶವನ್ನು ರಿಷಿ ಸೇರಿದಂತೆ ಹಲವು ಭಾರತೀಯ ಮೂಲದ ಖಾತೆಗಳಿಂದ ಹಂಚಿಕೆ ಮಾಡಲಾಗಿದೆ.

ಡಾರ್ಕ್ ವೆಬ್ ಖಾತೆ ಕ್ಲೋಸ್​ ಮಾಡಲು ಸಂದೇಶ:
ಡಾರ್ಕ್ ನೆಟ್ ಸೇಫ್ ಅಲ್ಲ. ಬೇರೆ ಮಾರ್ಗ ಹುಡುಕಿ ಜೊತೆಗೆ ಡಾರ್ಕ್ ವೆಬ್ ಖಾತೆ ಕ್ಲೋಸ್​ ಮಾಡಲು ಸಂದೇಶ ರವಾನಿಸಲಾಗಿದೆ. ವಿಶ್ವ ಮಟ್ಟದಲ್ಲಿ ಡಾರ್ಕ್ ವೆಬ್‌ ಬಳಸಿ ಮಾದಕ ವಸ್ತುಗಳು, ಅಕ್ರಮ ಶಸ್ತ್ರಾಸ್ತ್ರ ಮತ್ತು ಮಾನವ ಅಂಗಾಂಗ ಮಾರಾಟ ನಡೆಯುತ್ತಿದೆ ಎಂದು ವಿಚಾರಣೆ ವೇಳೆ ಡ್ರಗ್ ಪೆಡ್ಲರ್ಸ್ ಬಾಯ್ಬಿಟ್ಟಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಇನ್ನು ಹಲವು ಜನರು ಡಾರ್ಕ್ ವೆಬ್ ಮೂಲಕ ಡ್ರಗ್ಸ್​ ಜಾಲದಲ್ಲಿ ಸಕ್ರಿಯವಾಗಿರೋದು ಸಹ ಪತ್ತೆಯಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us