ಮೊನ್ನೆ CCB ಬಲೆಗೆ ಬಿದ್ದ ಧೂರ್ತ ಶ್ರೀ.. ಮನೆಯಲ್ಲೇ ಗಾಂಜಾ ಗಿಡಗಳನ್ನ ಬೆಳೆದಿದ್ದ!

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಈ ನಡುವೆ ಮನೆಯಲ್ಲಿ ತಾರಸಿ ತೋಟಗಳನ್ನ ನಿರ್ಮಿಸಿ ಸ್ವಯಂಕೃಷಿ ನಡೆಸುವ ಹವ್ಯಾಸ ಹೆಚ್ಚಾಗಿದೆ. ದೈನಂದಿನ ಅಡುಗೆಗೆ ಬಳಸುವ ಸೊಪ್ಪು, ತರಕಾರಿ ಹಾಗೂ ಇತರೆ ಔಷಧಿ ಗುಣಗಳುಳ್ಳ ಬಳ್ಳಿಗಳನ್ನು ಬೆಳೆಸುವುದು ರೂಢಿಯಲ್ಲಿದೆ. ಆದರೆ, ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ‌‌ಕ್ಕೆ ಸಂಬಂಧಿಸಿ ಮೊನ್ನೆ CCB ಅಧಿಕಾರಿಗಳ ಕೈಗೆ ತಗಲಾಕೊಂಡ ಆರೋಪಿಯೊಬ್ಬ ಕೊಂಚ ಬೇರೆಯೇ ರೀತಿಯಲ್ಲಿ ಸ್ವಯಂಕೃಷಿಗೆ ಇಳಿದಿದ್ದಾನೆ! ಹೌದು, ಮೊನ್ನೆ ಬಂಧಿತನಾದ ಆರೋಪಿ ಶ್ರೀ ಅಲಿಯಾಸ್ ಶ್ರೀನಿವಾಸ ಸುಬ್ರಮಣ್ಯನ್ ಮನೆ ಮೇಲೆ ದಾಳಿ ಮಾಡಿದ್ದ […]

ಮೊನ್ನೆ CCB ಬಲೆಗೆ ಬಿದ್ದ ಧೂರ್ತ ಶ್ರೀ.. ಮನೆಯಲ್ಲೇ ಗಾಂಜಾ ಗಿಡಗಳನ್ನ ಬೆಳೆದಿದ್ದ!
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Sep 21, 2020 | 12:40 PM

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಈ ನಡುವೆ ಮನೆಯಲ್ಲಿ ತಾರಸಿ ತೋಟಗಳನ್ನ ನಿರ್ಮಿಸಿ ಸ್ವಯಂಕೃಷಿ ನಡೆಸುವ ಹವ್ಯಾಸ ಹೆಚ್ಚಾಗಿದೆ. ದೈನಂದಿನ ಅಡುಗೆಗೆ ಬಳಸುವ ಸೊಪ್ಪು, ತರಕಾರಿ ಹಾಗೂ ಇತರೆ ಔಷಧಿ ಗುಣಗಳುಳ್ಳ ಬಳ್ಳಿಗಳನ್ನು ಬೆಳೆಸುವುದು ರೂಢಿಯಲ್ಲಿದೆ. ಆದರೆ, ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ‌‌ಕ್ಕೆ ಸಂಬಂಧಿಸಿ ಮೊನ್ನೆ CCB ಅಧಿಕಾರಿಗಳ ಕೈಗೆ ತಗಲಾಕೊಂಡ ಆರೋಪಿಯೊಬ್ಬ ಕೊಂಚ ಬೇರೆಯೇ ರೀತಿಯಲ್ಲಿ ಸ್ವಯಂಕೃಷಿಗೆ ಇಳಿದಿದ್ದಾನೆ!

ಹೌದು, ಮೊನ್ನೆ ಬಂಧಿತನಾದ ಆರೋಪಿ ಶ್ರೀ ಅಲಿಯಾಸ್ ಶ್ರೀನಿವಾಸ ಸುಬ್ರಮಣ್ಯನ್ ಮನೆ ಮೇಲೆ ದಾಳಿ ಮಾಡಿದ್ದ CCB ಅಧಿಕಾರಿಗಳಿಗೆ ಆತನ ಮನೆಯಲ್ಲಿ ಗಾಂಜಾ ಗಿಡಗಳು ಸಿಕ್ಕಿದೆ. ದಾಳಿ ವೇಳೆ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಮನೆಯಲ್ಲಿ ಎರಡು ಗಾಂಜಾ ಗಿಡಗಳು ಪತ್ತೆಯಾಗಿವೆ.

ವೈಯಕ್ತಿಕ ಬಳಕೆಗಾಗಿ ಗಾಂಜಾ ಗಿಡಗಳನ್ನು ನೆಟ್ಟಿದ್ದೆ ಈ ಬಗ್ಗೆ ಶ್ರೀ ಅಲಿಯಾಸ್​ ಶ್ರೀನಿವಾಸ ಸುಬ್ರಮಣ್ಯನ್​ನ ಪ್ರಶ್ನಿಸಿದ್ದಕ್ಕೆ ತನ್ನ ವೈಯಕ್ತಿಕ ಬಳಕೆಗಾಗಿ ಗಾಂಜಾ ಗಿಡಗಳನ್ನು ನೆಟ್ಟಿದ್ದೆ ಎಂಬ ಸಬೂಬು ಹೇಳಿದ್ದಾನಂತೆ ಆಸಾಮಿ.

ಅಂದ ಹಾಗೆ, ಶ್ರೀ ಕಷ್ಟಪಟ್ಟು ಬೆಳೆಸಿರುವ ಈ ಗಿಡಗಳು ಆರೋಪಿಯ ಪರಿಶ್ರಮದಿಂದ ಸುಮಾರು ಅರ್ಧ ಅಡಿಯಷ್ಟು ಎತ್ತರ ಬೆಳೆದುನಿಂತಿದೆ. ಶ್ರೀನಿವಾಸನ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸದೆ ಇದ್ದಿದ್ದರೇ ಮುಂಬರುವ ದಿನಗಳಲ್ಲಿ ಇದನ್ನು ಹೆಮ್ಮರವಾಗಿ ಬೆಳೆಸುತ್ತಿದ್ದನೇನೋ!

ಇದಲ್ಲದೆ, ಈತನ ನಿವಾಸಲ್ಲಿ ಹಲವು ಮಾದರಿಯ ಮಾದಕ ವಸ್ತುಗಳು ಸಹ ಪತ್ತೆಯಾಗಿತ್ತು. 13 ಎಕ್ಸಟಸಿ ಮಾತ್ರೆಗಳು, 100 ಗ್ರಾಂ ಗಾಂಜಾ, 1.1 ಗ್ರಾಂ MDMA ಮತ್ತು 0.5 ಗ್ರಾಂ ಹಶೀಷ್​ ಸಹ ಸಿಕ್ಕಿತ್ತು.

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM