AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವರು ಡ್ರಗ್​ ಸಪ್ಲೈ ಮಾಡುತ್ತಿದ್ದ ರೀತಿ ನೋಡಿದರೆ ಓ ಮೈ ಗಾಡ್​ ಅಂತೀರಾ!

ಸ್ಟ್ಯಾಂಪ್​ನಲ್ಲಿ ಬರುವ ಎಲ್​ಎಸ್​​ಡಿ ಡ್ರಗ್​ಗಳನ್ನ ಬಾಯಿಯಲ್ಲಿ ಇಟ್ಟುಕೊಂಡರೆ ಕಿಕ್​ ಸಿಗುವ ಕಾರಣಕ್ಕೆ ಬೇಡಿಕೆಯೂ ಹೆಚ್ಚಿದ್ದು, ಪಬ್ ಮತ್ತು ಶ್ರೀಮಂತರ ಪಾರ್ಟಿಯೇ ಇವರ ಟಾರ್ಗೆಟ್ ಆಗಿತ್ತು.

ಇವರು ಡ್ರಗ್​ ಸಪ್ಲೈ ಮಾಡುತ್ತಿದ್ದ ರೀತಿ ನೋಡಿದರೆ ಓ ಮೈ ಗಾಡ್​ ಅಂತೀರಾ!
ಸಾಂದರ್ಭಿಕ ಚಿತ್ರ
Follow us
Skanda
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 29, 2020 | 10:55 AM

ಆನೇಕಲ್: ಡ್ರಗ್ಸ್ ದಂಧೆಯ ಕುರಿತು ಬಗೆದಷ್ಟೂ ಮಾಹಿತಿ ಸಿಗುತ್ತಿದೆ. ಒಂದಕ್ಕಿಂತ ಒಂದು ಖತರ್ನಾಕ್ ಐಡಿಯಾ ಬಳಸಿ ಡ್ರಗ್ ಸಪ್ಲೈ ಮಾಡುವ ಕಿರಾತಕರನ್ನು ಮಟ್ಟ ಹಾಕಲೇಬೇಕೆಂದು ತನಿಖಾಧಿಕಾರಿಗಳು ಈಗ ಹದ್ದಿನ ಕಣ್ಣಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೀಗೆ ತನಿಖೆಗೆ ಹೊರಟ ಅಧಿಕಾರಿಗಳ ಬಲೆಗೆ ದೇವರ ಹೆಸರಿನಲ್ಲಿ ಡ್ರಗ್ ಸಪ್ಲೈ ಮಾಡುತ್ತಿದ್ದ ನಟೋರಿಯಸ್ ಗ್ಯಾಂಗ್ ಒಂದು ಸಿಕ್ಕಿಬಿದ್ದಿದ್ದು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವರ ಹೆಸರಿನಲ್ಲಿ ಮಾದಕ ಸೇವೆ!

ನೆದರ್​ಲ್ಯಾಂಡ್ಸ್​​ನಿಂದ ಸಪ್ಲೈ ಆಗುತ್ತಿದ್ದ ಡ್ರಗ್​ ಬೆಂಗಳೂರಿಗೆ ಬಂದು ತಲುಪುತ್ತಿದ್ದ ರೀತಿಯೇ ಫುಲ್ ಡಿಫರೆಂಟ್! ಡ್ರಗ್​ ಪ್ಯಾಕ್​ಗಳನ್ನು ಸೀದಾಸೀದಾ ಕಳುಹಿಸಿದರೆ ಅನುಮಾನ ಮೂಡುತ್ತದೆ ಎಂದು ದೇವರ ಭಾವಚಿತ್ರವಿರುವ ಸ್ಟ್ಯಾಂಪ್​ಗಳಿಗೆ ಡ್ರಗ್ಸ್​ ಅಂಟಿಸಿ, ಪೋಸ್ಟ್​ ಅಥವಾ ಕೊರಿಯರ್​ನಲ್ಲಿ ಕಳುಹಿಸುತ್ತಿತ್ತು. ಬರೀ ಇಪ್ಪತ್ತು ರೂಪಾಯಿಯ ಎನವಲಪ್​ ಕವರ್​ನಲ್ಲಿ ಲಕ್ಷಾಂತರ ಮೌಲ್ಯದ ಡ್ರಗ್ ಸಪ್ಲೈ ಮಾಡುತ್ತಿತ್ತು.

ಈ ಜಾಲದ ಸುಳಿವು ಸಿಕ್ಕ ಕೂಡಲೇ ಕಸ್ಟಮ್ಸ್ ಅಧಿಕಾರಿಗಳು ಪೋಸ್ಟ್​, ಕೊರಿಯರ್​ಗಳ ಮೇಲೆ ನಿಗಾ ವಹಿಸಿ ನಂತರ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಿಸಿಬಿ ಅಧಿಕಾರಿಗಳು ಜಾಲದ ಬೆನ್ನುಬಿದ್ದಾಗ ಚಾಮರಾಜಪೇಟೆಯ ಪೋಸ್ಟ್​ ಆಫೀಸ್​ಗೆ ಅನುಮಾನಸ್ಪದ ಪೋಸ್ಟ್​ಗಳು ಬರುತ್ತಿರುವುದು ಗೊತ್ತಾಗಿದೆ. ಅಲ್ಲಿಂದ ತನಿಖೆಯನ್ನು ಚುರುಕುಗೊಳಿಸಿದಾಗ ಮಾದಕ ಸೇವೆಯ ಲೀಲೆ ಎಳೆಎಳೆಯಾಗಿ ಬಿಚ್ಚಿಕೊಂಡಿದೆ.

ಆಸ್ಪತ್ರೆ ಅಡ್ರೆಸ್​ಗೆ ಬರ್ತಾ ಇತ್ತು ಡ್ರಗ್ಸ್​​ ಪೋಸ್ಟ್​!

ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಬಳಿಯ ಸ್ಪರ್ಶ್ ಮತ್ತು ಹೆಲ್ತ್ ಸಿಟಿಯಲ್ಲಿ ಎಕ್ಸ್ ರೇ ಟೆಕ್ನೀಶಿಯನ್ ಆಗಿರುವ ಕೇರಳದ ಕೊಟ್ಟಾಯಂ ಜಿಲ್ಲೆಯ ಅರುಣ್ ಆಂಥೋನಿಗೆ ಆಗಾಗ ಪೋಸ್ಟ್​ ಬರುತ್ತಿತ್ತು. ಅರುಣ್​ ಆಂಥೋನಿಯ ಸ್ನೇಹಿತ ಗಣೇಶ್​ ಕೊಟ್ಟಾಯಂನಿಂದ ಪೋಸ್ಟ್​ ಕಳುಹಿಸುತ್ತಿದ್ದು ಇದನ್ನು ಅಮಲ್​ ಬೈಜು ಎನ್ನುವವನಿಗೆ ಕೊಡು ಎಂದಷ್ಟೇ ಹೇಳುತ್ತಿದ್ದ. ಪೋಸ್ಟ್​ನಲ್ಲಿ ಏನಿದೆ ಎಂದೂ ಗೊತ್ತಿರದ ಅರುಣ್​ ತನ್ನ ಸ್ನೇಹಿತನನ್ನು ನಂಬಿ ಪೋಸ್ಟ್​ ಪಡೆದು ನಂತರ ಅಮಲ್​ ಬೈಜುಗೆ ತಲುಪಿಸುತ್ತಿದ್ದ.

ಕೊಟ್ಟಾಯಂನಿಂದ ಡ್ರಗ್​ ಕಳುಹಿಸುತ್ತಿದ್ದ ಗಣೇಶ್​ ಡ್ರಗ್​ ಸಪ್ಲೈ ಕುರಿತು ಯಾರಿಗೂ ಅನುಮಾನ ಬರಬಾರದು ಎಂಬ ಕಾರಣಕ್ಕೆ ಆಸ್ಪತ್ರೆ ಅಡ್ರೆಸ್​ಗೆ ಪೋಸ್ಟ್​ ಮಾಡುತ್ತಿದ್ದ. ಅಲ್ಲಿಂದ ಡ್ರಗ್​ ಲೇಪಿತ ಸ್ಟ್ಯಾಂಪ್​ಗಳನ್ನ ಪಡೆಯುತ್ತಿದ್ದ ಅಮಲ್​ ಬೈಜು ಬೆಂಗಳೂರಿನ ಗಿರಾಕಿಗಳಿಗೆ ಅದನ್ನು ತಲುಪಿಸುತ್ತಿದ್ದ.

ಬಾಯಲಿ ಇಟ್ಟರೆ ಕರಗುವ ಸ್ಟ್ಯಾಂಪ್​!

ಸ್ಟ್ಯಾಂಪ್​ನಲ್ಲಿ ಬರುವ ಎಲ್​ಎಸ್​​ಡಿ ಡ್ರಗ್​ಗಳನ್ನ ಬಾಯಿಯಲ್ಲಿ ಇಟ್ಟುಕೊಂಡರೆ ಕಿಕ್​ ಸಿಗುವ ಕಾರಣಕ್ಕೆ ಬೇಡಿಕೆಯೂ ಹೆಚ್ಚಿದ್ದು, ಪಬ್ ಮತ್ತು ಶ್ರೀಮಂತರ ಪಾರ್ಟಿಯೇ ಇವರ ಟಾರ್ಗೆಟ್ ಆಗಿತ್ತು. ಕಳೆದ ಮೂರ್ನಾಲ್ಕು ತಿಂಗಳಿನಿಂದ ನಿರಂತರವಾಗಿ ಈ ದಂಧೆಯಲ್ಲಿ ತೊಡಗಿಕೊಂಡಿದ್ದ ಗಣೇಶ್​ ಮತ್ತು ಅಮಲ್​ ಬೈಜು ಒಂದು ಎಲ್​ಎಸ್​ಡಿ ಲೇಪಿತ ಸ್ಟ್ಯಾಂಪ್​ಗೆ 4 ಸಾವಿರ ರೂಪಾಯಿಯಂತೆ ಮಾರಾಟ ಮಾಡುತ್ತಿದ್ದರು.

ಸದ್ಯ ಪೋಸ್ಟ್​ ಚೆಕ್​ ಮಾಡಿದಾಗ ಪೊಲೀಸರಿಗೆ ದೇವರ ಭಾವಚಿತ್ರವಿರುವ 400ಕ್ಕೂ ಹೆಚ್ಚು ಸ್ಟ್ಯಾಂಪ್ಸ್​ ಸಿಕ್ಕಿದ್ದು, ಒಟ್ಟಾರೆ 15 ಲಕ್ಷ ಮಾಲ್ಯದ ಡ್ರಗ್ಸ್ ಎನವಲಪ್​ ಕವರ್​ನಲ್ಲಿ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಮಲ್​ ಬೈಜು ತಲೆಮರೆಸಿಕೊಂಡಿದ್ದು ಪೋಸ್ಟ್​ ಕಳುಹಿಸುತ್ತಿದ್ದ ಗಣೇಶ್ ಮತ್ತು ಅಡ್ರೆಸ್​ ಕೊಟ್ಟಿದ್ದ ಅರುಣ್​ನನ್ನು ಪೊಲೀಸರು ಬಂಧಿಸಿದ್ದಾರೆ.

3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ