AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವರು ಡ್ರಗ್​ ಸಪ್ಲೈ ಮಾಡುತ್ತಿದ್ದ ರೀತಿ ನೋಡಿದರೆ ಓ ಮೈ ಗಾಡ್​ ಅಂತೀರಾ!

ಸ್ಟ್ಯಾಂಪ್​ನಲ್ಲಿ ಬರುವ ಎಲ್​ಎಸ್​​ಡಿ ಡ್ರಗ್​ಗಳನ್ನ ಬಾಯಿಯಲ್ಲಿ ಇಟ್ಟುಕೊಂಡರೆ ಕಿಕ್​ ಸಿಗುವ ಕಾರಣಕ್ಕೆ ಬೇಡಿಕೆಯೂ ಹೆಚ್ಚಿದ್ದು, ಪಬ್ ಮತ್ತು ಶ್ರೀಮಂತರ ಪಾರ್ಟಿಯೇ ಇವರ ಟಾರ್ಗೆಟ್ ಆಗಿತ್ತು.

ಇವರು ಡ್ರಗ್​ ಸಪ್ಲೈ ಮಾಡುತ್ತಿದ್ದ ರೀತಿ ನೋಡಿದರೆ ಓ ಮೈ ಗಾಡ್​ ಅಂತೀರಾ!
ಸಾಂದರ್ಭಿಕ ಚಿತ್ರ
Skanda
| Edited By: |

Updated on: Nov 29, 2020 | 10:55 AM

Share

ಆನೇಕಲ್: ಡ್ರಗ್ಸ್ ದಂಧೆಯ ಕುರಿತು ಬಗೆದಷ್ಟೂ ಮಾಹಿತಿ ಸಿಗುತ್ತಿದೆ. ಒಂದಕ್ಕಿಂತ ಒಂದು ಖತರ್ನಾಕ್ ಐಡಿಯಾ ಬಳಸಿ ಡ್ರಗ್ ಸಪ್ಲೈ ಮಾಡುವ ಕಿರಾತಕರನ್ನು ಮಟ್ಟ ಹಾಕಲೇಬೇಕೆಂದು ತನಿಖಾಧಿಕಾರಿಗಳು ಈಗ ಹದ್ದಿನ ಕಣ್ಣಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೀಗೆ ತನಿಖೆಗೆ ಹೊರಟ ಅಧಿಕಾರಿಗಳ ಬಲೆಗೆ ದೇವರ ಹೆಸರಿನಲ್ಲಿ ಡ್ರಗ್ ಸಪ್ಲೈ ಮಾಡುತ್ತಿದ್ದ ನಟೋರಿಯಸ್ ಗ್ಯಾಂಗ್ ಒಂದು ಸಿಕ್ಕಿಬಿದ್ದಿದ್ದು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವರ ಹೆಸರಿನಲ್ಲಿ ಮಾದಕ ಸೇವೆ!

ನೆದರ್​ಲ್ಯಾಂಡ್ಸ್​​ನಿಂದ ಸಪ್ಲೈ ಆಗುತ್ತಿದ್ದ ಡ್ರಗ್​ ಬೆಂಗಳೂರಿಗೆ ಬಂದು ತಲುಪುತ್ತಿದ್ದ ರೀತಿಯೇ ಫುಲ್ ಡಿಫರೆಂಟ್! ಡ್ರಗ್​ ಪ್ಯಾಕ್​ಗಳನ್ನು ಸೀದಾಸೀದಾ ಕಳುಹಿಸಿದರೆ ಅನುಮಾನ ಮೂಡುತ್ತದೆ ಎಂದು ದೇವರ ಭಾವಚಿತ್ರವಿರುವ ಸ್ಟ್ಯಾಂಪ್​ಗಳಿಗೆ ಡ್ರಗ್ಸ್​ ಅಂಟಿಸಿ, ಪೋಸ್ಟ್​ ಅಥವಾ ಕೊರಿಯರ್​ನಲ್ಲಿ ಕಳುಹಿಸುತ್ತಿತ್ತು. ಬರೀ ಇಪ್ಪತ್ತು ರೂಪಾಯಿಯ ಎನವಲಪ್​ ಕವರ್​ನಲ್ಲಿ ಲಕ್ಷಾಂತರ ಮೌಲ್ಯದ ಡ್ರಗ್ ಸಪ್ಲೈ ಮಾಡುತ್ತಿತ್ತು.

ಈ ಜಾಲದ ಸುಳಿವು ಸಿಕ್ಕ ಕೂಡಲೇ ಕಸ್ಟಮ್ಸ್ ಅಧಿಕಾರಿಗಳು ಪೋಸ್ಟ್​, ಕೊರಿಯರ್​ಗಳ ಮೇಲೆ ನಿಗಾ ವಹಿಸಿ ನಂತರ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಿಸಿಬಿ ಅಧಿಕಾರಿಗಳು ಜಾಲದ ಬೆನ್ನುಬಿದ್ದಾಗ ಚಾಮರಾಜಪೇಟೆಯ ಪೋಸ್ಟ್​ ಆಫೀಸ್​ಗೆ ಅನುಮಾನಸ್ಪದ ಪೋಸ್ಟ್​ಗಳು ಬರುತ್ತಿರುವುದು ಗೊತ್ತಾಗಿದೆ. ಅಲ್ಲಿಂದ ತನಿಖೆಯನ್ನು ಚುರುಕುಗೊಳಿಸಿದಾಗ ಮಾದಕ ಸೇವೆಯ ಲೀಲೆ ಎಳೆಎಳೆಯಾಗಿ ಬಿಚ್ಚಿಕೊಂಡಿದೆ.

ಆಸ್ಪತ್ರೆ ಅಡ್ರೆಸ್​ಗೆ ಬರ್ತಾ ಇತ್ತು ಡ್ರಗ್ಸ್​​ ಪೋಸ್ಟ್​!

ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಬಳಿಯ ಸ್ಪರ್ಶ್ ಮತ್ತು ಹೆಲ್ತ್ ಸಿಟಿಯಲ್ಲಿ ಎಕ್ಸ್ ರೇ ಟೆಕ್ನೀಶಿಯನ್ ಆಗಿರುವ ಕೇರಳದ ಕೊಟ್ಟಾಯಂ ಜಿಲ್ಲೆಯ ಅರುಣ್ ಆಂಥೋನಿಗೆ ಆಗಾಗ ಪೋಸ್ಟ್​ ಬರುತ್ತಿತ್ತು. ಅರುಣ್​ ಆಂಥೋನಿಯ ಸ್ನೇಹಿತ ಗಣೇಶ್​ ಕೊಟ್ಟಾಯಂನಿಂದ ಪೋಸ್ಟ್​ ಕಳುಹಿಸುತ್ತಿದ್ದು ಇದನ್ನು ಅಮಲ್​ ಬೈಜು ಎನ್ನುವವನಿಗೆ ಕೊಡು ಎಂದಷ್ಟೇ ಹೇಳುತ್ತಿದ್ದ. ಪೋಸ್ಟ್​ನಲ್ಲಿ ಏನಿದೆ ಎಂದೂ ಗೊತ್ತಿರದ ಅರುಣ್​ ತನ್ನ ಸ್ನೇಹಿತನನ್ನು ನಂಬಿ ಪೋಸ್ಟ್​ ಪಡೆದು ನಂತರ ಅಮಲ್​ ಬೈಜುಗೆ ತಲುಪಿಸುತ್ತಿದ್ದ.

ಕೊಟ್ಟಾಯಂನಿಂದ ಡ್ರಗ್​ ಕಳುಹಿಸುತ್ತಿದ್ದ ಗಣೇಶ್​ ಡ್ರಗ್​ ಸಪ್ಲೈ ಕುರಿತು ಯಾರಿಗೂ ಅನುಮಾನ ಬರಬಾರದು ಎಂಬ ಕಾರಣಕ್ಕೆ ಆಸ್ಪತ್ರೆ ಅಡ್ರೆಸ್​ಗೆ ಪೋಸ್ಟ್​ ಮಾಡುತ್ತಿದ್ದ. ಅಲ್ಲಿಂದ ಡ್ರಗ್​ ಲೇಪಿತ ಸ್ಟ್ಯಾಂಪ್​ಗಳನ್ನ ಪಡೆಯುತ್ತಿದ್ದ ಅಮಲ್​ ಬೈಜು ಬೆಂಗಳೂರಿನ ಗಿರಾಕಿಗಳಿಗೆ ಅದನ್ನು ತಲುಪಿಸುತ್ತಿದ್ದ.

ಬಾಯಲಿ ಇಟ್ಟರೆ ಕರಗುವ ಸ್ಟ್ಯಾಂಪ್​!

ಸ್ಟ್ಯಾಂಪ್​ನಲ್ಲಿ ಬರುವ ಎಲ್​ಎಸ್​​ಡಿ ಡ್ರಗ್​ಗಳನ್ನ ಬಾಯಿಯಲ್ಲಿ ಇಟ್ಟುಕೊಂಡರೆ ಕಿಕ್​ ಸಿಗುವ ಕಾರಣಕ್ಕೆ ಬೇಡಿಕೆಯೂ ಹೆಚ್ಚಿದ್ದು, ಪಬ್ ಮತ್ತು ಶ್ರೀಮಂತರ ಪಾರ್ಟಿಯೇ ಇವರ ಟಾರ್ಗೆಟ್ ಆಗಿತ್ತು. ಕಳೆದ ಮೂರ್ನಾಲ್ಕು ತಿಂಗಳಿನಿಂದ ನಿರಂತರವಾಗಿ ಈ ದಂಧೆಯಲ್ಲಿ ತೊಡಗಿಕೊಂಡಿದ್ದ ಗಣೇಶ್​ ಮತ್ತು ಅಮಲ್​ ಬೈಜು ಒಂದು ಎಲ್​ಎಸ್​ಡಿ ಲೇಪಿತ ಸ್ಟ್ಯಾಂಪ್​ಗೆ 4 ಸಾವಿರ ರೂಪಾಯಿಯಂತೆ ಮಾರಾಟ ಮಾಡುತ್ತಿದ್ದರು.

ಸದ್ಯ ಪೋಸ್ಟ್​ ಚೆಕ್​ ಮಾಡಿದಾಗ ಪೊಲೀಸರಿಗೆ ದೇವರ ಭಾವಚಿತ್ರವಿರುವ 400ಕ್ಕೂ ಹೆಚ್ಚು ಸ್ಟ್ಯಾಂಪ್ಸ್​ ಸಿಕ್ಕಿದ್ದು, ಒಟ್ಟಾರೆ 15 ಲಕ್ಷ ಮಾಲ್ಯದ ಡ್ರಗ್ಸ್ ಎನವಲಪ್​ ಕವರ್​ನಲ್ಲಿ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಮಲ್​ ಬೈಜು ತಲೆಮರೆಸಿಕೊಂಡಿದ್ದು ಪೋಸ್ಟ್​ ಕಳುಹಿಸುತ್ತಿದ್ದ ಗಣೇಶ್ ಮತ್ತು ಅಡ್ರೆಸ್​ ಕೊಟ್ಟಿದ್ದ ಅರುಣ್​ನನ್ನು ಪೊಲೀಸರು ಬಂಧಿಸಿದ್ದಾರೆ.

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ