ಶಾಸಕನ ಮಗನೆಂದು ನಂಬಿಸಿ, ರೇಪ್​ ಮಾಡ್ತಿದ್ದ ಎಂಬಿಎ ಪದವೀಧರ ಸಿಕ್ಕಿಬಿದ್ದ

ಬೆಂಗಳೂರು: ಶಾಸಕನ ಮಗ ಎಂದು ಹೆದರಿಸಿ ರೇಪ್ ಮಾಡಿದ್ದ ಆರೋಪಿಯನ್ನ ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಹಂಗೀರ್ ಅಲಿಯಾಸ್ ಕಾರ್ತಿಕ್ ರೆಡ್ಡಿ ಬಂಧಿತ ಅರೋಪಿ. ಈತ ತಮಿಳುನಾಡಿನ ತಿರುಚ್ಚಿ ಮೂಲದ ಎಂಬಿಎ ಪದವೀಧರ. ಇವನ ವಿರುದ್ದ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ವಂಚನೆ ಸೇರಿದಂತೆ 6 ಪ್ರಕರಣಗಳು ತಮಿಳುನಾಡು, ಕರ್ನಾಟಕದಲ್ಲಿ ದಾಖಲಾಗಿವೆ. ಈತ ಪ್ರತಿಷ್ಠಿತ ಮಾಲ್, ಹೋಟೆಲ್​ಗಳಲ್ಲಿ ಯುವತಿಯರನ್ನು ಭೇಟಿ ಮಾಡಿ, ತಾನು ಮಾಲ್ ಮ್ಯಾನೇಜರ್, ಎಂ.ಡಿ. ಎಂದು ಹೇಳಿ ಪರಿಚಯ ಮಾಡಿಕೊಳ್ಳುತಿದ್ದ. ಬಳಿಕ ಯುವತಿಯರ ಹಿನ್ನೆಲೆ ತಿಳಿದು […]

ಶಾಸಕನ ಮಗನೆಂದು ನಂಬಿಸಿ, ರೇಪ್​ ಮಾಡ್ತಿದ್ದ ಎಂಬಿಎ ಪದವೀಧರ ಸಿಕ್ಕಿಬಿದ್ದ
ಸಾಧು ಶ್ರೀನಾಥ್​

Updated on: Nov 22, 2019 | 2:39 PM

ಬೆಂಗಳೂರು: ಶಾಸಕನ ಮಗ ಎಂದು ಹೆದರಿಸಿ ರೇಪ್ ಮಾಡಿದ್ದ ಆರೋಪಿಯನ್ನ ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಹಂಗೀರ್ ಅಲಿಯಾಸ್ ಕಾರ್ತಿಕ್ ರೆಡ್ಡಿ ಬಂಧಿತ ಅರೋಪಿ. ಈತ ತಮಿಳುನಾಡಿನ ತಿರುಚ್ಚಿ ಮೂಲದ ಎಂಬಿಎ ಪದವೀಧರ. ಇವನ ವಿರುದ್ದ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ವಂಚನೆ ಸೇರಿದಂತೆ 6 ಪ್ರಕರಣಗಳು ತಮಿಳುನಾಡು, ಕರ್ನಾಟಕದಲ್ಲಿ ದಾಖಲಾಗಿವೆ.

ಈತ ಪ್ರತಿಷ್ಠಿತ ಮಾಲ್, ಹೋಟೆಲ್​ಗಳಲ್ಲಿ ಯುವತಿಯರನ್ನು ಭೇಟಿ ಮಾಡಿ, ತಾನು ಮಾಲ್ ಮ್ಯಾನೇಜರ್, ಎಂ.ಡಿ. ಎಂದು ಹೇಳಿ ಪರಿಚಯ ಮಾಡಿಕೊಳ್ಳುತಿದ್ದ. ಬಳಿಕ ಯುವತಿಯರ ಹಿನ್ನೆಲೆ ತಿಳಿದು ಕೆಲಸ ಕೊಡಿಸುವ ಆಫರ್ ನೀಡಿ, ಹಂತ ಹಂತವಾಗಿ ಯುವತಿಯರನ್ನು ತನ್ನತ್ತ ಸೆಳೆದು ಕೆಲಸ ಕೊಡಿಸುವುದಾಗಿ ನಂಬಿಸುತಿದ್ದ.

ಪ್ರತಿಷ್ಠಿತ ಹೊಟೆಲ್​ಗಳಲ್ಲಿ ಕೆಲಸದ ಸಂದರ್ಶನ ಇದೆ ಎಂದು ಕರೆಸಿಕೊಂಡು, ಹೋಟೆಲ್ ರೂಮ್ ಸೇರಿದ ಬಳಿಕ ಲೈಂಗಿಕ ದೌರ್ಜನ್ಯ ನಡೆಸಿ ಅತ್ಯಾಚಾರ ಮಾಡಿ, ಯುವತಿಯರ ಬಳಿ ಇದ್ದ ಮೊಬೈಲ್ ಹಣ ಒಡವೆಗಳನ್ನು ದೋಚಿದ ಬಳಿಕ, ತಾನು ಶಾಸಕನ ಮಗ. ಯಾರ ಬಳಿಯೂ ಈ ವಿಷಯವನ್ನು ಹೇಳಬಾರದು ಎಂದು ಹೆದರಿಸುತ್ತಿದ್ದಎಂದು ಪೊಲೀಸರು ತಿಳಿಸಿದ್ದಾರೆ.

Published On - 9:57 am, Fri, 22 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us