AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ದಂಪತಿ ಅರೆಸ್ಟ್

ಬೆಂಗಳೂರು: ಹೆಣ್ಣು ಮಕ್ಕಳ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ದಂಪತಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜುಳ ಅಲಿಯಾಸ್ ಕಳ್ಳ ಮಂಜಿ ಹಾಗೂ ಚೆಲುವರಾಯಿ ಅಲಿಯಾಸ್ ಚೆಲುವ ಬಂಧಿತ ಆರೋಪಿಗಳು. ಇವರು ಕಳೆದ ಹಲವು ವರ್ಷಗಳಿಂದ 100 ಕ್ಕೂ ಅಧಿಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ರು. ಜ್ಯುವಲ್ಲರಿ ಶಾಪ್ ನಿಂದ ಹೊರಬರುವ ವಯೋವೃದ್ಧೆ, ಮಹಿಳೆಯರನ್ನು ಇವರು ಟಾರ್ಗೆಟ್ ಮಾಡ್ತಿದ್ರು. ಚಿನ್ನಾಭರಣ ಧರಿಸಿ ಬರುವವರನ್ನು ಟಾರ್ಗೆಟ್ ಮಾಡಿ. ಕಂತೆ ಕಂತೆ ನೋಟು ತೋರಿಸಿ ಹಣ ಬಿದ್ದಿದೆ. ಹಣ ನಿಮ್ಮದಲ್ಲಾ […]

ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ದಂಪತಿ ಅರೆಸ್ಟ್
ಸಾಧು ಶ್ರೀನಾಥ್​
|

Updated on: Dec 17, 2019 | 10:06 AM

Share

ಬೆಂಗಳೂರು: ಹೆಣ್ಣು ಮಕ್ಕಳ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ದಂಪತಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜುಳ ಅಲಿಯಾಸ್ ಕಳ್ಳ ಮಂಜಿ ಹಾಗೂ ಚೆಲುವರಾಯಿ ಅಲಿಯಾಸ್ ಚೆಲುವ ಬಂಧಿತ ಆರೋಪಿಗಳು. ಇವರು ಕಳೆದ ಹಲವು ವರ್ಷಗಳಿಂದ 100 ಕ್ಕೂ ಅಧಿಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ರು. ಜ್ಯುವಲ್ಲರಿ ಶಾಪ್ ನಿಂದ ಹೊರಬರುವ ವಯೋವೃದ್ಧೆ, ಮಹಿಳೆಯರನ್ನು ಇವರು ಟಾರ್ಗೆಟ್ ಮಾಡ್ತಿದ್ರು.

ಚಿನ್ನಾಭರಣ ಧರಿಸಿ ಬರುವವರನ್ನು ಟಾರ್ಗೆಟ್ ಮಾಡಿ. ಕಂತೆ ಕಂತೆ ನೋಟು ತೋರಿಸಿ ಹಣ ಬಿದ್ದಿದೆ. ಹಣ ನಿಮ್ಮದಲ್ಲಾ ಅನ್ಸತ್ತೆ, ಯಾರೋ ಬೀಳಿಸಿಕೊಂಡು ಹೋಗಿದ್ದಾರೆ ಎಂದು ಸುಳ್ಳು ಹೇಳಿ. ನಂತರ ಹಣ ಸಿಕ್ಕಿರೋದು ನಮ್ಮಿಬ್ಬರಿಗೆ ಗೊತ್ತು ನಾವಿಬ್ರು ಹಣ ಹಂಚಿಕೊಳ್ಳೋಣ ಎಂದು ನಂಬಿಸಿ.

ಯಾರೂ ಇಲ್ದೆ ಇರೋ ಜಾಗಕ್ಕೆ ಹೋಗಿ ಹಣ ಶೇರ್ ಮಾಡ್ಕೊಳ್ಳೋಣ ಎಂದು ಕರೆದುಕೊಂಡು ಹೋಗುತ್ತಿದ್ದಳು ಮಂಜುಳ. ನಂತರ ನಿರ್ಜನ ಪ್ರದೇಶಕ್ಕೆ ಹೋಗಿ ನಿಮ್ಮ ಕತ್ತಲ್ಲಿರೋ ಒಡವೆ ತೆಗೆಯಿರಿ. ಇಲ್ಲಿ ಚೈನ್ ಸ್ನಾಚರ್ಸ್ ಇದ್ದಾರೆ ಸರ ಕಳ್ಳತನ ಮಾಡಿಕೊಂಡು ಹೋಗ್ತಾರೆ ಅಂತ ಹೆದರಿಸುತ್ತಿದ್ಲು.

ಬಳಿಕ ಸರ ಪಡೆದು ನಮ್ಮ ಮನೆಗೆ ಹೋಗೋಣ ಅಲ್ಲೇ ಹಣ ಲೆಕ್ಕ ಮಾಡೋಣ ಎಂದು ನಂಬಿಸಿ ತನ್ನ ಗಂಡ ಚೆಲುವನನ್ನ ಕರೆ ಮಾಡಿ ಆಕೆ ಇರೋ ಜಾಗಕ್ಕೆ ಕರೆಸಿಕೊಳ್ಳುತ್ತಿದ್ಲು. ತಾನು ಯಾವುದೇ ಕಾರಣಕ್ಕೂ ಮೋಸ ಮಾಡಲ್ಲ ನಂಬಿಕೆಯ ಹೆಣ್ಣು ಎನ್ನವ ರೀತಿ ನಂಬಿಸಿ. ತನ್ನ ನಂಬರ್ ಹಾಗೂ ಅಡ್ರೆಸ್ ಕೊಟ್ಟು ಆಟೋದಲ್ಲಿ ನನ್ನ ಫಾಲೋ ಮಾಡ್ಕೊಂಡು ಬಾ ಎಂದು ಹೇಳಿ ಚಿನ್ನಾಭರಣ ಕೈಗೆ ಸಿಕ್ಕ ಬಳಿಕ ದಂಪತಿಗಳಿಬ್ಬರು ಎಸ್ಕೇಪ್ ಆಗುತ್ತಿದ್ರು. ಸುಬ್ರಮಣ್ಯಪುರ ಎಸಿಪಿ ಮಹಾದೇವ್ ಹಾಗೂ ಇನ್ಸಪೆಕ್ಟರ್ ಧರ್ಮೇಂದ್ರ ಆರೋಪಿಗಳನ್ನು ಹಿಡಿಯಲು ತಂಡ ರೆಡಿ ಮಾಡಿದ್ರು. ಸದ್ಯ ದಂಪತಿಗಳಿಬ್ಬರನ್ನ ಬಂಧಿಸಿರುವ ಪೊಲೀಸರು 7ವರೆ ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ