ಅಡವಿಟ್ಟಿದ್ದ ಚಿನ್ನ ಬಿಡಿಸಿಕೊಳ್ಳಲು ಗೋಲ್ಡ್ ಕಂಪನಿಗೆ ದೋಖಾ: ಸೂಟು ಬೂಟು ಧರಿಸಿ ಬಂದ ‘ನರಿ’ ಖಾಕಿ ಬಲೆಗೆ!
ಹಿಂದೂಸ್ಥಾನ್ ಗೋಲ್ಡ್ ಕಂಪನಿಗೆ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾದನಾಯಕನಹಳ್ಳಿ ಠಾಣೆ ಪೊಲೀಸರಿಂದ ನರೇಶ್ ಅಲಿಯಾಸ್ ನರಿ ಎಂಬಾತನ ಬಂಧನವಾಗಿದೆ.

ಬೆಂಗಳೂರು: ಹಿಂದೂಸ್ಥಾನ್ ಗೋಲ್ಡ್ ಕಂಪನಿಗೆ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾದನಾಯಕನಹಳ್ಳಿ ಠಾಣೆ ಪೊಲೀಸರಿಂದ ನರೇಶ್ ಅಲಿಯಾಸ್ ನರಿ ಎಂಬಾತನ ಬಂಧನವಾಗಿದೆ.
ನರೇಶ್ ಅಲಿಯಾಸ್ ನರಿ ವಿದ್ಯಮಾನ್ಯನಗರದ ನಿವಾಸಿ ಎಂದು ತಿಳಿದುಬಂದಿದೆ. ಅಡವಿಟ್ಟಿದ್ದ ಚಿನ್ನ ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ನರೇಶ್ 95,000 ರೂಪಾಯಿ ಪಡೆದು ಪರಾರಿಯಾಗಿದ್ದ. ಯಾರಿಗೂ ಅನುಮಾನ ಬಾರದಂತೆ ಸೂಟು ಬೂಟು ಧರಿಸಿ ಬಂದಿದ್ದ ನರಿ ಗೋಲ್ಡ್ ಕಂಪನಿ ಸಿಬ್ಬಂದಿಗೆ ವಂಚಿಸಿದ್ದ.
ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ರೀತಿ, ಮತ್ತೊಂದು ಖಾಸಗಿ ಫೈನಾನ್ಸ್ ಕಂಪನಿ ಸಿಬ್ಬಂದಿಗೆ ಧೋಖಾ ಮಾಡಲು ಹೊರಟಾಗ ಆರೋಪಿ ಖಾಕಿ ಬಲೆಗೆ ಬಿದ್ದಿದ್ದಾನೆ. ಮಣಪ್ಪುರಂ ಗೋಲ್ಡ್ ಕಂಪನಿ ಕಚೇರಿಯಲ್ಲಿ ನರೇಶ್ ಸಿಕ್ಕಿಬಿದ್ದಿದ್ದಾನೆ. ಸದ್ಯ, ಆರೋಪಿಯಿಂದ 95,000 ನಗದು, ಬೈಕ್ ಮತ್ತು ಮೊಬೈಲ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಲ್ಲಿಕಟ್ಟು ನೋಡುವ ವೇಳೆ.. ಮನೆ ಗೋಡೆ ಕುಸಿತ: ಸ್ಥಳದಲ್ಲೇ ಮೂವರ ದುರ್ಮರಣ
Published On - 6:52 pm, Sun, 10 January 21