AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲವ್​ ಮಾಡಿ ಮದುವೆಯಾಗಿದ್ದಕ್ಕೆ ಯುವಕನ ಕೊಲೆ: ಚುನಾವಣೆಗೆ ಸ್ಫರ್ಧಿಸಿದ್ದ ಆರೋಪಿ ಅರೆಸ್ಟ್​

ಚುನಾವಣೆಗೆ ಸ್ಫರ್ಧಿಸಿದ್ದ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾರಾಯಣ್​ ಅಲಿಯಾಸ್ ಕರಿಯಾ ಬಂಧಿತ ಆರೋಪಿ. ತುರುವೇಕೆರೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆಗಿದ್ದ. ನಾರಾಯಣ್​ ಲಗ್ಗೆರಿಯ ಚೇತನ್ ಎಂಬುವವನ ಕೊಲೆ ಪ್ರಕರಣದ ಎ6 ಆರೋಪಿಯಾಗಿದ್ದ.

ಲವ್​ ಮಾಡಿ ಮದುವೆಯಾಗಿದ್ದಕ್ಕೆ ಯುವಕನ ಕೊಲೆ: ಚುನಾವಣೆಗೆ ಸ್ಫರ್ಧಿಸಿದ್ದ ಆರೋಪಿ ಅರೆಸ್ಟ್​
ನಾರಾಯಣ ಅಲಿಯಾಸ್ ಕರಿಯಾ ಬಂಧಿತ ಆರೋಪಿ
ಗಂಗಾಧರ​ ಬ. ಸಾಬೋಜಿ
|

Updated on:Apr 24, 2023 | 6:46 PM

Share

ಬೆಂಗಳೂರು: ಚುನಾವಣೆಗೆ ಸ್ಫರ್ಧಿಸಿದ್ದ ಕೊಲೆ (murder) ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾರಾಯಣ್​ ಅಲಿಯಾಸ್ ಕರಿಯಾ ಬಂಧಿತ ಆರೋಪಿ. ತುರುವೇಕೆರೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆಗಿದ್ದ. ನಾರಾಯಣ್​ ಲಗ್ಗೆರಿಯ ಚೇತನ್ ಎಂಬುವವನ ಕೊಲೆ ಪ್ರಕರಣದ ಎ6 ಆರೋಪಿಯಾಗಿದ್ದ. ಭೂಮಿಕಾ ಎಂಬಾಕೆಯನ್ನು ಪ್ರೀತಿಸಿ ಚೇತನ್​ ಮದುವೆಯಾಗಿದ್ದ. ಭೂಮಿಕಾ ಸಹೋದರ ಮತ್ತು ಇತರರು ಸೇರಿ ಚೇತನನನ್ನು‌ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಸಂಬಂಧ ನಾರಾಯಣ ಅಲಿಯಾಸ್ ಕರಿಯನ ಬಂಧನ ಮಾಡಲಾಗಿತ್ತು. ಕೊಲೆ ಕೇಸ್ ಬಳಿಕ ಆರೋಪಿ ನಾರಾಯಣ್​ ತಲೆಮರೆಸಿಕೊಂಡಿದ್ದ. 2021 ರಲ್ಲಿ ಕೊಲೆ ಪ್ರಕರಣ ನಡೆದಿತ್ತು.

ಭೂಮಿಕಾ ಕುಟುಂಬದವರಿಂದ ಬಲವಂತದ ಮದುವೆ: ಚೇತನ್ ಕೊಡವತ್ತಿ ಗ್ರಾಮದ ಪಕ್ಕದ ಊರಿನ ಯುವಕನಾಗಿದ್ದ. ಇಬ್ಬರು ಲವ್ ಮಾಡುವ ವಿಷಯ ತಿಳಿದು ಬಲವಂತವಾಗಿ ಭೂಮಿಕಾ ಕುಟುಂಬದವರು ಮತ್ತೊಬ್ಬನ ಜೊತೆ ಮದುವೆ ಮಾಡಿದ್ದರು. ಈ ವೇಳೆ ಭೂಮಿಕಾ ಮದುವೆಯಾದ ಒಂದು ವಾರದ ಬಳಿಕ ಲವರ್ ಚೇತನ್​ಗೆ ಪೋನ್ ಮಾಡಿದ್ದಳು. ಚೇತನ್ ಬಳಿ ನೀನು ಬಂದು ಕರೆದುಕೊಂಡು ಹೋಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ.

ಭೂಮಿಕಾ ಮನೆಯವರಿಂದ ಬೆದರಿಕೆ: ವಿಷ ಕುಡಿಯುತ್ತೇನೆ ಎಂದಿದ್ದಕ್ಕೆ ಭೂಮಿಕಾಳನ್ನ ಚೇತನ್​ ಕರೆದುಕೊಂಡು ಹೋಗಿದ್ದ. ಬಳಿಕ ಭೂಮಿಕಾ ಜೊತೆ ಕೆಂಗೇರಿಯ ದೇವಸ್ಥಾನದಲ್ಲಿ ಮದುವೆ ಆಗಿದ್ದಾನೆ. ಭೂಮಿಕಾ ಮನೆಯವರಿಂದ ಬೆದರಿಕೆ ಇರುವ ಹಿನ್ನೆಲೆ ಕುಣಿಗಲ್ ಠಾಣೆಗೆ ದೂರು ಸಹ ನೀಡಿದ್ದಾಳೆ. ಭೂಮಿಕಾ ಕುಟುಂಬದವರನ್ನ ಕರೆಯಿಸಿ ತೊಂದರೆ ಕೊಡದಂತೆ ಕುಣಿಗಲ್ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡಿದ್ದರು.

ಚೇತನ್ ಹತ್ಯೆಗೆ ರೌಡಿಶೀಟರ್ ತಮ್ಮನ ಕುಮ್ಮಕ್ಕು

ಇದಾದ ಬಳಿಕ ಕುಟುಂಬ ಮಾನ ಮರ್ಯಾದೆ ಹೋಗಿದೆ ಎಂದು ದ್ವೇಷ ಇಟ್ಟುಕೊಂಡಿದ್ದ ಕುಟುಂಬಸ್ಥರು, ಇದೇ ದ್ವೇಷದಿಂದ ಚೇತನ್ ಹತ್ಯೆ ಮಾಡಲು ಪ್ಲಾನ್ ಮಾಡಿದ್ದರು. ಇದಕ್ಕೆ ನಟೋರಿಯಸ್ ರೌಡಿಶೀಟರ್ ತಮ್ಮ ಕುಮ್ಮಕ್ಕು ಕೊಟ್ಟಿದ್ದ. ಕೊಲೆಯಾದ ಚೇತನ್ ತಂದೆಗೂ ನಟೋರಿಯಸ್ ರೌಡಿಶೀಟರ್ ತಮ್ಮನ ನಡುವೆ ದ್ವೇಷ ಇತ್ತು.

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋಲಲು ಚೇತನ್ ತಂದೆ ಕಾರಣವಾಗಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳಲು, ಚೇತನ್ ಹತ್ಯೆ ಮಾಡಲು ಕುಮ್ಮಕ್ಕು ನೀಡಿದ್ದ. ಆತನ ಅಣತಿಯಂತೆ ಚೇತನ್​ನನ್ನು ಆರೋಪಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಭೂಮಿಕಾಳ ತಮ್ಮ ಆಕಾಶ, ಯುವತಿಯ ಚಿಕ್ಕಪ್ಪನ ಮಗ ನಂಜೇಶ್, ದೀಪಕ್, ಶ್ರೀಕಂಠ ಮತ್ತು ನಾರಾಯಣ ಅಲಿಯಾಸ್ ಕರಿಯ ನಾರಾಯಣ್​ ಆರೋಪಿಗಳು. ಹತ್ಯೆ ಬಳಿಕ ತಲೆಮರಿಸಿಕೊಂಡಿದ್ದ ನಾರಾಯಣ್​ ಅಲಿಯಾಸ್ ಕರಿಯ ನಾರಾಯಣ್​ ನನ್ನು ಸದ್ಯ ತುರುವೆಕರೆಯ ಬಳಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:46 pm, Mon, 24 April 23

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ