ಯಾದಗಿರಿ: ಮದುವೆಯಾಗಲು ನಿರಾಕರಿಸಿದಕ್ಕೆ ಪ್ರಿಯಕರನಿಂದ ಕೊಲೆ; 20 ದಿನಗಳ ಬಳಿಕ ಆರೋಪಿ ಅಂದರ್​

ಆ ಯುವಕ ಯಾದಗಿರಿಯಿಂದ ಕೆಲಸ ಮಾಡಲು ದೂರದ ಮುಂಬೈಗೆ ಹೋಗಿದ್ದ. ಮುಂಬೈನಲ್ಲಿ ಕೆಲಸ ಮಾಡುವಾಗಲೇ ಉತ್ತರ ಪ್ರದೇಶ ಮೂಲದ ಯುವತಿ ಜೊತೆಗೆ ಲವ್ ಆಗಿದೆ. ಇಬ್ಬರು ಕಳೆದ ಒಂದು ವರ್ಷದಿಂದ ಜೊತೆಗೆ ಇದ್ದಾರೆ. ಆದ್ರೆ, ಮದುವೆ ವಿಷಯ ಬಂದಾಗ ಯುವತಿ ನಿರಾಕರಿಸಿದ್ದಾಳೆ. ಇದೆ ವಿಚಾರಕ್ಕೆ ಸುತ್ತಾಡಿಕೊಂಡು ಬರೋಣ ಬಾ ಅಂತ ಮುಂಬೈಯಿಂದ ಯಾದಗಿರಿಗೆ ಯುವತಿಯನ್ನ ಕರೆದುಕೊಂಡು ಬಂದು ಕತ್ತು ಹಿಸುಕಿ ಕೊಲೆ ಮಾಡಿ ದೇಹವನ್ನ ಸುಟ್ಟ ಹಾಕಿದ್ದ. ಇದೀಗ ಕೊಲೆ ನಡೆದ 20 ದಿನಗಳ ಬಳಿಕ ಪೋಲಿಸರು ಆರೋಪಿಯನ್ನ ಲಾಕ್ ಮಾಡಿದ್ದಾರೆ.

ಯಾದಗಿರಿ: ಮದುವೆಯಾಗಲು ನಿರಾಕರಿಸಿದಕ್ಕೆ ಪ್ರಿಯಕರನಿಂದ ಕೊಲೆ; 20 ದಿನಗಳ ಬಳಿಕ ಆರೋಪಿ ಅಂದರ್​
ಕೊಲೆಯಾದ ಯುವತಿ ಅಂತೀಮಾ, ಆರೋಪಿ ಮಾರುತಿ
Follow us
|

Updated on: Apr 24, 2023 | 10:47 AM

ಯಾದಗಿರಿ: ಜಿಲ್ಲೆಯಲ್ಲಿ ಕಳೆದ 22 ದಿನಗಳ ಹಿಂದೆ ಇಡೀ ಜಿಲ್ಲೆಯನ್ನ ಬೆಚ್ಚಿ ಬಿಳಿಸುವ ಘಟನೆಯೊಂದು ನಡೆದು ಹೋಗಿತ್ತು. ರಾತ್ರಿ ವೇಳೆ ಪಂಚಶೀಲ ನಗರದ ಬಳಿಯ ಜಮೀನೊಂದರಲ್ಲಿ ಯುವತಿಯನ್ನ ಕೊಲೆ ಮಾಡಿ ಮೃತದೇಹವನ್ನ ಪೆಟ್ರೋಲ್ ಹಾಕಿ ಸಂಪೂರ್ಣವಾಗಿ ಸುಟ್ಟು ಹಾಕಲಾಗಿತ್ತು. ಮಾರನೆ ದಿನ ಮಧ್ಯಾಹ್ನ ಸುಟ್ಟ ಶವವನ್ನ ನೋಡಿ ಇಡೀ ಗ್ರಾಮದ ಜನರೆ ಬೆಚ್ಚಿ ಬಿದ್ದಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಸ್ಥಳದಲ್ಲಿ ಸಿಕ್ಕ ಸಣ್ಣ ಪುಟ್ಟ ವಸ್ತುವಗಳನ್ನ ತಗೆದುಕೊಂಡು ಹೋಗಿದ್ದರು. ಸಂಪೂರ್ಣವಾಗಿ ಸುಟ್ಟ ರೀತಿಯಲ್ಲಿ ಮೃತದೇಹ ಸಿಕ್ಕಿರುವ ಕಾರಣಕ್ಕೆ ಪೊಲೀಸರಿಗೂ ಯಾರ ಶವ ಎಂದು ಗೊತ್ತಾಗಿರಲಿಲ್ಲ. ಅಕ್ಕ ಪಕ್ಕದ ಗ್ರಾಮಗಳಲ್ಲಿ ಪರಿಶೀಲನೆ ಮಾಡಿದಾಗ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಆದ್ರೆ, 20 ದಿನಗಳ ಬಳಿಕ ಮೃತದೇಹದ ಬಗ್ಗೆ ಪೊಲೀಸರಿಗೆ ಗೊತ್ತಾಗಿದ್ದು, ಆರೋಪಿಯನ್ನ ಇದೀಗ ಅರೆಸ್ಟ್​ ಮಾಡಲಾಗಿದೆ.

ಅಪರಿಚಿತ ಯುವತಿಯ ಸಾವಿನ ತನಿಖೆ ಆರಂಭಿಸಿದ ಪೊಲೀಸರು

ಇನ್ನು ತನಿಖೆ ಆರಂಭಿಸಿದ ಪೊಲೀಸರು, ಅದಕ್ಕೂ ಮೂರು ದಿನಗಳ ಮೊದಲು ಇದೆ ಪಂಚಶೀಲ ನಗರದ 28 ವರ್ಷದ ಯುವಕ ಮಾರುತಿ ತಾನು ಸಾಯೋದಾಗಿ ಹೇಳಿ ಸೆಲ್ಫಿ ವಿಡಿಯೋ ಮಾಡಿ ಕುಟುಂಬಸ್ಥರಿಗೆ ಕಳುಹಿಸಿದ್ದ. ಈ ವಿಡಿಯೋ ಒಬ್ಬರಿಂದ ಇನ್ನೊಬ್ಬರಿಗೆ ಶೇರ್ ಆಗಿದ್ದರಿಂದ ಪೊಲೀಸರಿಗೆ ಈ ಮಾರುತಿ ಮೇಲೆ ಡೌಟ್ ಬಂದಿದೆ. ಯಾವ ಕಾರಣಕ್ಕೆ ಸಾಯುತ್ತಿನಿ ಎಂದು ಹೇಳಿದ್ದೆ ಎಂದು ತನಿಖೆ ಮಾಡಲು ಮುಂದಾಗುತ್ತಾರೆ. ಅಷ್ಟೋತ್ತಿಗೆ ಮುಂಬೈನಲ್ಲಿದ್ದ ಮಾರುತಿ ಕುಟುಂಬಸ್ಥರು ಮಾರುತಿ ಸಾಯೋದಾಗಿ ವಿಡಿಯೋ ಮಾಡಿದ್ದರಿಂದ ಸತ್ತೆ ಹೋಗಿದ್ದಾನೆ ಅಂತ ಮುಂಬೈನಿಂದ ಓಡಿ ಬಂದಿದ್ದರು.

ಇದನ್ನೂ ಓದಿ:ಯಾದಗಿರಿ; ಸುಫಾರಿ ಪಡೆದು ಕೊಲೆಗೆ ಹೊಂಚು ಹಾಕಿದ್ದ ಕ್ಯಾಬ್ ಡ್ರೈವರ್; ಲಾಡ್ಜ್ ಪರಿಶೀಲನೆ ವೇಳೆ ಯುವಕ ಅಂದರ್

ಕೂಡಲೇ ಪೊಲೀಸರು ಮಾರುತಿ ಕುಟುಂಬಸ್ಥರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬೇರೆ ಬೇರೆಯವರ ಕಡೆಯಿಂದ ಮಾರುತಿಗೆ ಫೋನ್ ಮಾಡಿ ಇರುವ ಜಾಗವನ್ನ ಪತ್ತೆ ಮಾಡಿದ್ದಾರೆ. ಆದ್ರೆ, ಇತ್ತ ಕುಟುಂಬಸ್ಥರಿಗೆ ಪೊಲೀಸರು ಎಷ್ಟೇ ತನಿಖೆ ಮಾಡಿದ್ರು ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಮಾರುತಿಯನ್ನ ಕರೆದುಕೊಂಡು ಠಾಣೆಗೆ ಬಂದು ವಿಚಾರಣೆ ನಡೆಸಿದಾಗ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದಾನೆ.

ಕೊಲೆಯನ್ನ ಒಪ್ಪಿಕೊಂಡ ಆರೋಪಿ ಮಾರುತಿ

ಇನ್ನು ಈ ಮಾರುತಿ ಕಳೆದ ಒಂದು ವರ್ಷದ ಹಿಂದೆ ಕುಟುಂಬದ ಜೊತೆಗೆ ಮುಂಬೈಗೆ ಹೋಗಿದ್ದ. ಕುಟುಂಬಸ್ಥರು ಗಾರೆ ಕೆಲಸ ಮಾಡಿಕೊಂಡಿದ್ರೆ, ಮಾರುತಿ ಮಾತ್ರ ತಕ್ಕ ಮಟ್ಟಿಗೆ ವಿದ್ಯೆ ಕಲಿತಿದ್ದ. ಅದೇ ಕಾರಣಕ್ಕೆ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಇತ್ತ ಉತ್ತರ ಪ್ರದೇಶ ಮೂಲದ ಕೊಲೆಯಾದ ಯುವತಿ ಅಂತೀಮಾ ವರ್ಮಾ ಕೂಡ ಮಾರುತಿ ವಾಸವಿದ್ದ ಏರಿಯಾದಲ್ಲೇ ವಾಸವಾಗಿದ್ದಳು. ಅಂತೀಮಾ ಸಹೋದರಿ ಮುಂಬೈನಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ ಕಾರಣಕ್ಕೆ ಅಂತೀಮಾ ಸಹೋದರಿಯ ಮನೆಯಲ್ಲಿದ್ದಳು. ಆದ್ರೆ, ಕಳೆದ ಒಂದು ವರ್ಷದ ಹಿಂದೆ ಮಾರುತಿ ಮತ್ತು ಅಂತೀಮಾ ಮದ್ಯ ಪ್ರೀತಿ ಹುಟ್ಟಿಕೊಂಡಿತ್ತು.

ಇದನ್ನೂ ಓದಿ:ಕೊಲೆ ಬೆದರಿಕೆ ಬಂದಿದೆ ಎಂದು ಹೆಲ್ಮೆಟ್ ಧರಿಸಿ ಓಡಾಡಿದ ರಾಖಿ ಸಾವಂತ್​; ನಾಟಕ ನಿಲ್ಲಿಸಿ ಎಂದ ಫ್ಯಾನ್ಸ್

ಅಂತೀಮಾ ಲವ್​ಗೆ ಬಿದ್ದಿದ್ದ ಮಾರುತಿ ಸರಿಯಾಗಿ ಮನೆಗೂ ಕೂಡ ಬರ್ತಾಯಿರಲಿಲ್ಲ. ಜೊತೆಗೆ ತಾನು ದುಡಿದ ಹಣವನ್ನು ಕೂಡ ಮನೆಗೆ ಕೊಡುತ್ತಿರಲಿಲ್ಲ. ಗಳಸಿದ್ದೆಲ್ಲ ಅಂತೀಮಾಳ ಜೊತೆಗೆ ಸುತ್ತಾಟ, ಮೋಜು ಮಸ್ತಿಗೆ ಖರ್ಚು ಮಾಡುತ್ತಿದ್ದ. ಆರಂಭದಲ್ಲಿಯೇ ಅಂತೀಮಾ ಮದುವೆ ಮಾಡಿಕೊಳ್ಳೋಣ ಎಂದು ಕೇಳಿದ್ದಳು. ಆದ್ರೆ, ಮಾರುತಿ ಮಾತ್ರ ಸದ್ಯಕ್ಕೆ ಬೇಡ ಎಂದು ಹೇಳಿದ್ದಾನೆ. ಇನ್ನು ಈ ಅಂತೀಮಾ ವರ್ಮಾ ಸೋಷಿಯಲ್ ಮಿಡಿಯಾದಲ್ಲಿ ಸಕತ್ ಆಗಿ ಆಕ್ಟಿವ್ ಆಗಿದ್ದು, ದಿನಕ್ಕೆ ನಾಲ್ಕೈದು ರೀಲ್ಸ್ ಮಾಡೋದೆ ಕೆಲಸವಾಗಿತ್ತು. ರೀಲ್ಸ್ ಮಾಡ್ತಾ ಮಾಡ್ತಾ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ರೀಲ್ಸ್ ಮಾಡೋರು ಪರಿಚಯವಾಗಿದೆ.

ದಿನಗಳು ಕಳೆಯುತ್ತಿದ್ದ ಹಾಗೆ ಹೊಸದಾಗಿ ಸಿಕ್ಕ ಸ್ನೇಹಿತರ ಜೊತೆ ಸಲುಗೆಯಿಂದ ಇರೋದು ರೀಲ್ಸ್ ಮಾಡುವ ಕೆಲಸವನ್ನ ಅಂತೀಮಾ ಮಾಡ್ತಾಯಿದ್ದು, ಸಲುಗೆಯಿಂದ ಮಾಡಿದ ರೀಲ್ಸ್ ಗಳನ್ನ ನೋಡಿ, ಮಾರುತಿಗೆ ಅಂತೀಮಾ ನನ್ನ ಬಿಟ್ಟು ಬೇರೆಯವನ ಜೊತೆ ಹೋಗ್ತಾಳೆ ಎಂದು ಸಂಶಯ ಬರುತ್ತೆ. ಇದೆ ಕಾರಣಕ್ಕೆ ಆರಂಭದಲ್ಲಿ ಮದುವೆ ಬೇಡ ಅಂದಿದ್ದ ಮಾರುತಿ ಈಗ ಮದುವೆ ಆಗೋಣ ಎಂದು ದುಂಬಾಲು ಬಿದ್ದಿದ್ದ. ಆದ್ರೆ, ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗುವ ಹುಚ್ಚಲ್ಲಿದ್ದ ಅಂತೀಮಾ ಮದುವೆ ಬೇಡ ಅಂತ ಹೇಳಿದ್ದಾಳೆ.

ಇದನ್ನೂ ಓದಿ:ಹೊನ್ನಾವರ: ಮಾನಸಿಕ ಅಸ್ವಸ್ಥ ಮಗನಿಂದ ತಂದೆಯ ಭೀಕರ ಕೊಲೆ

ಇದೆ ಕಾರಣಕ್ಕೆ ಇದೆ ಏ.2 ರಂದು ಸುತ್ತಾಡಿ ಬರೋಣ ಅಂತ ಹೇಳಿ ಅಂತೀಮಾಳನ್ನ ಯಾದಗಿರಿಗೆ ಕರೆದುಕೊಂಡು ಬಂದಿದ್ದ. ಬೆಳಗ್ಗೆಯಿಂದ ಸಂಜೆ ವರೆಗೆ ಸುತ್ತಾಡಿದ್ದ ಇಬ್ಬರು ಸಂಜೆಯಾಗುತ್ತಿದ್ದ ಹಾಗೆ ಮದುವೆ ವಿಷಯಕ್ಕೆ ಜಗಳವಾಗಿದೆ. ಕೋಪದಲ್ಲಿದ್ದ ಮಾರುತಿ ತನ್ನೂರಾದ ಪಂಚಶೀಲ ನಗರದ ತನ್ನ ಜಮೀನಿನಲ್ಲಿ ಅಂತೀಮಾಳ ಕುತ್ತಿಗೆ ಹಿಸುಕಿ ಕೊಲೆ ಮಾಡುತ್ತಾನೆ. ಬಳಿಕ ಅಲ್ಲೆ ಊರಲ್ಲಿ ಕಿರಾಣಿ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟಿದ್ದ ನಾಲ್ಕೈದು ಬಾಟಲ್ ಪೆಟ್ರೋಲ್ ಖರೀದಿ ಮಾಡಿಕೊಂಡು ಬಂದು ಅಂತೀಮಾಳ ಮೃತ ದೇಹವನ್ನ ಸುಟ್ಟು ಹಾಕಿದ್ದ. ಬಳಿಕ ಊರು ಬಿಟ್ಟು ಓಡಿ ಹೋಗಿದ್ದಾನೆ. ಆದ್ರೆ, ಈಗ 20 ದಿನಗಳ ಬಳಿಕ ಕೊಲೆಗಾರ ಪಾಗಲ್ ಪ್ರೇಮಿ ಮಾರುತಿ ಅರೆಸ್ಟ್ ಆಗಿದ್ದಾನೆ.

ವರದಿ: ಅಮೀನ್ ಹೊಸುರ್ ಟಿವಿ9 ಯಾದಗಿರಿ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು