ಸಾಲ ಮಾಡಿ ಮನೆ ಬಿಟ್ಟ ಮಗ.. ಸಾಲಗಾರರ ಕಾಟ ತಾಳದೆ ವಿಷ ಸೇವಿಸಿ ತಂದೆ ಆತ್ಮಹತ್ಯೆ, ಅಂತ್ಯಸಂಸ್ಕಾರಕ್ಕೆ ಬರುವಂತೆ ತಾಯಿ ಮನವಿ

ಮಗ ಮಂಜುನಾಥ್ 25 ಲಕ್ಷಕ್ಕೂ ಹೆಚ್ಚು ಸಾಲ ಮಾಡಿ ಊರು ಬಿಟ್ಟು ಹೋಗಿದ್ದ. ಮಗ ಸಾಲಮಾಡಿ ಊರು ಬಿಡುತ್ತಲೆ ಪೋಷಕರಿಗೆ ಸಾಲಗಾರರ ಕಾಟ ಹೆಚ್ಚಾಗಿತ್ತು. ಸಾಲಗಾರರ ಕಾಟ ತಾಳಲಾರದೆ ಮಂಜುನಾಥ್ ಮೂರು ತಿಂಗಳ ಹಿಂದೆಯೇ ಊರು ಬಿಟ್ಟಿದ್ದ.

ಸಾಲ ಮಾಡಿ ಮನೆ ಬಿಟ್ಟ ಮಗ.. ಸಾಲಗಾರರ ಕಾಟ ತಾಳದೆ ವಿಷ ಸೇವಿಸಿ ತಂದೆ ಆತ್ಮಹತ್ಯೆ, ಅಂತ್ಯಸಂಸ್ಕಾರಕ್ಕೆ ಬರುವಂತೆ ತಾಯಿ ಮನವಿ
ಮಗ ಮಂಜುನಾಥ್ ಹಾಗೂ ತಂದೆ ಶಿವಣ್ಣ

Updated on: Jan 13, 2021 | 1:19 PM

ಹಾಸನ: ಮಗ ಮಾಡಿದ ಸಾಲದಿಂದಾಗಿ ಸಾಲಗಾರರ ಕಿರುಕುಳ ತಡೆಯಲಾರದೆ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ತಾಲ್ಲೂಕಿನ ಸಜ್ಜೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಿವಣ್ಣ (50) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ಮಗ ಮಂಜುನಾಥ್ 25 ಲಕ್ಷಕ್ಕೂ ಹೆಚ್ಚು ಸಾಲ ಮಾಡಿ ಊರು ಬಿಟ್ಟು ಹೋಗಿದ್ದ. ಮಗ ಸಾಲ ಮಾಡಿ ಊರು ಬಿಡುತ್ತಲೆ ಪೋಷಕರಿಗೆ ಸಾಲಗಾರರ ಕಾಟ ಹೆಚ್ಚಾಗಿತ್ತು. ಸಾಲಗಾರರ ಕಾಟ ತಾಳಲಾರದೆ ಮಂಜುನಾಥ್ ಮೂರು ತಿಂಗಳ ಹಿಂದೆಯೇ ಊರು ಬಿಟ್ಟಿದ್ದ. ಹೀಗಾಗಿ ಸಾಲಗಾರರು ಮನೆ ಬಳಿಗೆ ಬಂದು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದರು.

ಸಾಲಗಾರರ ಕಾಟ ತಾಳಲಾರದೆ ಮನನೊಂದ ಶಿವಣ್ಣ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಸಾವಿನಿಂದ ಕಂಗ್ಗೆಟ್ಟಿರುವ ಮಡದಿ, ತಂದೆ ಅಂತ್ಯಸಂಸ್ಕಾರಕ್ಕೆ ಆಗಮಿಸುವಂತೆ ಮಗನಿಗೆ ಕಣ್ಣೀರ ಮನವಿ ಮಾಡುತ್ತಿದ್ದಾರೆ. ತಾಯಿ ಹಾಗೂ ಅಕ್ಕ ಎಲ್ಲಿದ್ದರೂ ಬಂದು ತಂದೆ ಅಂತ್ಯಸಂಸ್ಕಾರ ಮಾಡುವಂತೆ ಮಂಜುನಾಥ್​ನನ್ನು ಬೇಡಿಕೊಳ್ಳುತ್ತಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಮೀಟರ್‌ಬಡ್ಡಿ ದಂಧೆಕೋರರ ಕಿರುಕುಳಕ್ಕೆ ನಂದಿ ಗ್ರಾಮದ ಅರ್ಚಕ ಬಲಿ

Published On - 1:16 pm, Wed, 13 January 21

Loading...
Unable to load recommendations.
Follow Us