ಒಂದು ಡೋಸ್​ ರೆಮ್​ಡೆಸಿವಿರ್​ಗೆ 15 ಸಾವಿರ; ಅರೆಸ್ಟ್​ ಡೋಸ್​ ಕೊಟ್ಟ ಬೆಂಗಳೂರು ಪೊಲೀಸರು, ಆರು ಮಂದಿ ಸೆರೆ

Remdesivir Black Marketing: ಈ ಮಧ್ಯೆ, ಸುಬ್ರಮಣ್ಯ ನಗರ ಪೊಲೀಸರಿಂದಲೂ ಕಾಳಸಂತೆಯಲ್ಲಿ ರೆಮ್​ಡೆಸಿವಿರ್ ಇಂಜಕ್ಷನ್​ ಮಾರಾಟ ಮಾಡ್ತಿದ್ದ ಅರೋಪಿಗಳ ಅರೆಸ್ಟ್ ಆಗಿದೆ. ಸುಬ್ರಮಣ್ಯನಗರ ಪೊಲೀಸರು ಒಟ್ಟು ಮೂವರು ಅರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಒಂದು ಡೋಸ್​ ರೆಮ್​ಡೆಸಿವಿರ್​ಗೆ 15 ಸಾವಿರ; ಅರೆಸ್ಟ್​ ಡೋಸ್​ ಕೊಟ್ಟ ಬೆಂಗಳೂರು ಪೊಲೀಸರು, ಆರು ಮಂದಿ ಸೆರೆ
ಒಂದು ಡೋಸ್​ ರೆಮ್​ಡೆಸಿವಿರ್​ಗೆ 15 ಸಾವಿರ; ಅರೆಸ್ಟ್​ ಡೋಸ್​ ಕೊಟ್ಟ ಬೆಂಗಳೂರು ಪೊಲೀಸರು, ಆರು ಮಂದಿ ಸೆರೆ
ಸಾಧು ಶ್ರೀನಾಥ್​

Updated on: May 06, 2021 | 1:08 PM

ಬೆಂಗಳೂರು: ಕೊರೊನಾ ಮಾಹಾಮಾರಿ ನಡುವೆ ಧನಪಿಶಾಚಿಗಳ ಕಾಟ ಮುಂದುವರಿದಿದೆ. ಬೆಡ್​, ಆಕ್ಸಿಜನ್​, ಆಂಬುಲೆನ್ಸ್, ರೆಮ್​ಡೆಸಿವಿರ್​ ಇಂಜಕ್ಷನ್​ ಕಾಳಸಂತೆ ಮಾರಾಟ ಯಾವುದೇ ಎಗ್ಗಿಲ್ಲದೆ ಜೋರಾಗಿದೆ. ಆದರೆ ಬೆಂಗಳೂರು ಪೊಲೀಸರೂ ಸಹ ಫೀಲ್ಡ್​ಗೆ ಇಳಿದು ಇಂತಹ ರಕ್ಕಸರ ರಣಬೇಟೆಯಾಡುತ್ತಿದ್ದಾರೆ. ರಾಜಧಾನಿಯ ನಾನಾ ಭಾಗಗಳಲ್ಲಿ ಪೊಲೀಸ್​ ಉಪ ಆಯುಕ್ತರ ನೇತೃತ್ವದಲ್ಲಿ ದಾಳಿಗಳು ನಡೆದಿದ್ದು, ಸದ್ಯಕ್ಕೆ ಆರು ಮಂದಿಯನ್ನು ಸರಳುಗಳ ಹಿಂದೆ ಕಳಿಸಿದ್ದಾರೆ. ಜೆ.ಪಿ.ನಗರ, ನಾಗವಾರ, ಸುಬ್ರಮಣ್ಯ ನಗರ ಮತ್ತು ಯಲಹಂಕ ಭಾಗಗಳಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಕಾಳಸಂತೆಯಲ್ಲಿ ರೆಮ್​ಡೆಸಿವಿರ್​ ಮಾರುತ್ತಿದ್ದ ಸುಳಿವು ಪಡೆದು ಬೆಂಗಳೂರಿನ ಜೆ.ಸಿ.ನಗರದ ಎಸಿಪಿ ನೇತೃತ್ವದಲ್ಲಿ ರೇಡ್ ಮಾಡಲಾಗಿದೆ. ಜೆ.ಪಿ. ನಗರದ ಮೆಡಿಕಲ್ ರೆಪ್​ ಜನಾರ್ದನ್​ ಬಳಿ 3 ರೆಮ್​ಡೆಸಿವಿರ್​ ಇಂಜಕ್ಷನ್​, ನಾಗವಾರದ ಮೆಡಿಕಲ್ ರೆಪ್ ದೀಪಕ್ ಬಳಿ 3 ವಯಲ್, ಯಲಹಂಕ ಆಸ್ಪತ್ರೆ ರಿಸೆಪ್ಷನಿಸ್ಟ್ ಲೋಕೇಶ್​ ಬಳಿ 4 ವಶ ಪಡೆಯಲಾಗಿದೆ.

ಮೂವರು ವಿರುದ್ದ ಜೆಸಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರತ್ಯೇಕ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಜೆ ಸಿ ನಗರ ಎಸಿಪಿ ರೀನಾ ಸುರ್ವ ನೇತ್ರತ್ವದಲ್ಲಿ ಕಾರ್ಯಚರಣೆ ನಡೆದಿದೆ.

ಸುಬ್ರಮಣ್ಯ ನಗರ ಪೊಲೀಸರಿಂದಲೂ ರೇಡ್:

ಈ ಮಧ್ಯೆ, ಸುಬ್ರಮಣ್ಯ ನಗರ ಪೊಲೀಸರಿಂದಲೂ ಕಾಳಸಂತೆಯಲ್ಲಿ ರೆಮ್​ಡೆಸಿವಿರ್ ಇಂಜಕ್ಷನ್​ ಮಾರಾಟ ಮಾಡ್ತಿದ್ದ ಅರೋಪಿಗಳ ಅರೆಸ್ಟ್ ಆಗಿದೆ. ಸುಬ್ರಮಣ್ಯನಗರ ಪೊಲೀಸರು ಒಟ್ಟು ಮೂವರು ಅರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.ಅರೋಪಿ ನಂಬರ್ 1: ಜಾನಿ, ಎಸ್ಎಲ್ವಿ ಮೆಡಿಕಲ್ ಸ್ಟೋರ್, ಹೆಸರಘಟ್ಟ ರೋಡ್. ಇವನ ಬಳಿ ಒಟ್ಟು ಮೂರು ರೆಮ್​ಡೆಸಿವಿರ್​ ಇಂಜಕ್ಷನ್​ ಗಳು ಇದ್ದವು. ಅರೋಪಿ ನಂಬರ್ 2: ದಿನೇಶ್, ಲಿಟಲ್ ಪ್ಲವರ್ ನರ್ಸಿಂಗ್ ಕಾಲೇಜು. ಮಾರತ್ ಹಳ್ಳಿ ಬಳಿ. ಮತ್ತು ಅರೋಪಿ ನಂಬರ್ 3 ಶಂಕರ್ ಅಂತಾ, ಗಾಯತ್ರಿ ಡಯಗ್ನಾಸಿಸ್ಟ್ ಸೆಂಟರ್ ನಾಗರ ಬಾವಿ. ಈ ಎಲ್ಲಾ ಅರೋಪಿಗಳು ಒಂದು ಡೋಸ್ ಅನ್ನು ಹದಿನೈದು ಸಾವಿರಕ್ಕಿಂತ ಹೆಚ್ಚಿನ ಹಣಕ್ಕೆ ಮಾರಾಟ ಮಾಡ್ತಿದ್ದರು ಎನ್ನಲಾಗಿದೆ.

(remdesivir injection in black market bengaluru police arrested six persons)

BBMP Bed Blocking Scam: ಮತ್ತೊಂದು ಮಂತ್ರ ದಂಡ ಪ್ರಯೋಗಿಸಿದ ಸಂಸದ ತೇಜಸ್ವಿ ಸೂರ್ಯ; ನಂದನ್ ನಿಲೇಕಣಿ ನೆರವಿಗೆ ಅಸ್ತು

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us