
ಬೆಂಗಳೂರು: ಯುವತಿಯ ಅಪಹರಣ ಪ್ರಕರಣ ಸಂಬಂಧ ನಿತ್ಯಾನಂದ ಆಶ್ರಮದ ಇಬ್ಬರು ಕೇರ್ ಟೇಕರ್ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಯುವತಿಯ ಅಪಹರಣ ಆರೋಪದ ಮೇಲೆ ನಿತ್ಯಾನಂದ ಸ್ವಾಮಿ ವಿರುದ್ಧ ಗುಜರಾತ್ನ ಅಹಮದಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯುವತಿಯ ಪೋಷಕರು ನಿತ್ಯಾನಂದ ವಿರುದ್ಧ ದೂರು ದಾಖಲಿಸಿದ್ದರು. ಹೀಗಾಗಿ ಆಶ್ರಮದಲ್ಲಿದ್ದ ಇಬ್ಬರು ಕೇರ್ ಟೇಕರ್ಗಳನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
Published On - 6:43 pm, Wed, 20 November 19