ಮೊದಲ ಮದುವೆ ವಾರ್ಷಿಕೋತ್ಸವ ಆಚರಿಸಲು ಪತ್ನಿಯೊಂದಿಗೆ ಮೆಕ್ಸಿಕೋ ತೆರಳಿದ್ದ ಯುಎಸ್ ವಕೀಲ ಹೆಣವಾಗಿ ಪತ್ತೆ!

2017 ರಲ್ಲಿ ಲಾ ಪರೀಕ್ಷೆ ಪಾಸು ಮಾಡಿದ ಬಳಿಕ ಕ್ಯಾಲಿಫೋರ್ನಿಯಾದ ಆರೇಂಜ್ ಕೌಂಟಿಯಲ್ಲಿ ಎಲಿಯಟ್ ಮತ್ತು ಕಿಮ್ ಸಾರ್ವಜನಿಕರಿಗಾಗಿ ಸಂಕಲ್ಪಭರಿತ ವಕೀಲರಾಗಿ ಕೆಲಸ ಮಾಡಿದ್ದಾರೆ ಎಂದು ರಾಡ್ರಿಗಜ್ ಅವರ ಪೋಸ್ಟ್ ತಿಳಿಸುತ್ತದೆ.

ಮೊದಲ ಮದುವೆ ವಾರ್ಷಿಕೋತ್ಸವ ಆಚರಿಸಲು ಪತ್ನಿಯೊಂದಿಗೆ ಮೆಕ್ಸಿಕೋ ತೆರಳಿದ್ದ ಯುಎಸ್ ವಕೀಲ ಹೆಣವಾಗಿ ಪತ್ತೆ!
ತನ್ನ ಪತ್ನಿ ಕಿಮ್​ಳೊಂದಿಗೆ ವಕೀಲ ಎಲಿಯಟ್ ಬ್ಲೇರ್
Follow us
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 18, 2023 | 7:58 AM

ಅಮೆರಿಕದ 33-ವರ್ಷ-ವಯಸ್ಸಿನ ವಕೀಲರೊಬ್ಬರು ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯದ (Baja California) ರೊಸಾರಿಟೊ ಬೀಚ್ ನಲ್ಲಿರುವ ಲಾಸದ ರೊಕಾಸ್ ರೆಸಾರ್ಟ್ ಮತ್ತು ಸ್ಪಾನಲ್ಲಿ ತಮ್ಮ ಮದುವೆಯ ಮೊದಲ ವಾರ್ಷಿಕೋತ್ಸವ (wedding anniversary) ಆಚರಿಸಲು ಪತ್ನಿಯೊಂದಿಗೆ ತೆರಳಿದ್ದಾಗ, ಕಳೆದ ಶನಿವಾರದಂದು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬದ ಸದಸ್ಯರು ವಕೀಲರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಮೃತ ವಕೀಲನ ಹೆಸರು ಎಲಿಯಟ್ ಬ್ಲೇರ್ (Elliot Blair) ಆಗಿದ್ದು ಅವರು ಯುಎಸ್ ಕ್ಯಾಲಿಫೋರ್ನಿಯಾದ ಅರೇಂಜ್ ಕೌಂಟಿಯ ನಿವಾಸಿಯಾಗಿದ್ದರು. ಅವರ ದೇಹ ನೋಡಿದ ಹೋಟೆಲ್ ಸಿಬ್ಬಂದಿ ಬೆಳಗಿನ ಜಾವ 1.15 ನಿಮಿಷಕ್ಕೆ ತುರ್ತು ಸೇವೆಗಳ ಕಚೇರಿಗೆ ಫೋನ್ ಮಾಡಿ ತಿಳಿಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಸ್ಥಳೀಯ ಮಾಧ್ಯಮ ಪತ್ರುಲ್ಲಾ 646 ಕಾಡಿಗೊ ರೋಜೊಗೆ ತಿಳಿಸಿದೆ. ಮಾಧ್ಯಮಗಳ ವರದಿ ಪ್ರಕಾರ ಎಲಿಯಟ್ ತಮ್ಮ ರೂಮಿನಿಂದ ಕೆಳಗೆ ಬಿದ್ದಿದ್ದಾರೆ ಮತ್ತು ಪ್ರಾಥಮಿಕ ತನಿಖೆಯ ಪ್ರಕಾರ ವಕೀಲ ಸಾಯುವ ಮೊದಲು ಮದ್ಯ ಸೇವನೆ ಮಾಡಿದ್ದರು.

ಸಹಜ ಸಾವಲ್ಲ?

ಆದರೆ, ಎಲಿಯಟ್ ಕುಟುಂಬದ ಸದಸ್ಯರು ಎಲ್ಲ ಆವೃತ್ತಿಗಳನ್ನು ತಳ್ಳಿಹಾಕಿದ್ದು ಪತ್ನಿಯೊಂದಿಗೆ ರೊಮ್ಯಾಂಟಿಕ್ ಆಗಿ ಸಮಯ ಕಳೆಯುತ್ತಿದ್ದ ಅವರ ಮೇಲೆ ಅಪ್ರಚೋದಿತ ದಾಳಿ ನಡೆದಿದೆ ಎಂದು ಅವರು ಹೇಳುತ್ತಿದ್ದಾರೆ.

ಇದನ್ನೂ ಓದಿ:  One Nation One Uniform ಪೊಲೀಸರಿಗೆ ‘ಒಂದು ದೇಶ, ಒಂದು ಸಮವಸ್ತ್ರ’: ಕೇಂದ್ರದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ

ಗೋಫೌಂಡ್ ಮೀ ಪೇಜ್ ನಲ್ಲಿ ಎಲಿಯಟ್ ಅವರ ಸಹೋದ್ಯೋಗಿಯಾಗಿದ್ದ ಅನ್ನೀ ರಾಡ್ರಿಗೆಜ್, ‘ಅವನು ನನ್ನ ಚಿಕ್ಕ ತಮ್ಮನಂತಿದ್ದ,’ ಎಂದಿದ್ದಾರೆ. ಮುಂದುವರಿದು ಹೇಳಿರುವ ಅವರು, ಜನೆವರಿ 14, 2023 ರಂದು ಎಲಿಯಟ್ ಬ್ಲೇರ್ ಮತ್ತವನ ಪತ್ನಿ ಕಿಮ್ ಮೆಕ್ಸಿಕೋದ ರೊಸಾರಿಟೋ ನಲ್ಲಿ ತಮ್ಮ ಮದುವೆಯ ಮೊದಲ ವಾರ್ಷಿಕೋತ್ಸವ ಆಚರಿಕೊಳ್ಳುತ್ತಿದ್ದರು. ಆ ಸಮಯದಲ್ಲೇ ಎಲಿಯಟ್ ನನ್ನು ಕೊಲ್ಲಲಾಗಿದೆ,’ ಎಂದಿದ್ದಾರೆ.

ಅವನನ್ನು ಕೊಲ್ಲಲಾಗಿದೆ

‘ಎಲ್ಲರಿಗೂ ಹೆಚ್ಚುವರಿ ಮಾಹಿತಿ ನೀಡುವ ಉದ್ದೇಶ ನಮಗಿತ್ತಾದರೂ ಮೆಕ್ಸಿಕೋದ ಪೊಲೀಸ್ ಅಧಿಕಾರಿಗಳಿಂದ ನಮಗೆ ಲಭ್ಯವಾಗಿದ್ದು ಸೀಮಿತ ಮಾಹಿತಿ ಮಾತ್ರ. ಭೀಕರವಾದ ಅಪರಾಧವೊಂದಕ್ಕೆ ಅವನು ಬಲಿಯಾಗಿದ್ದಾನೆ. ಅವನ ಕುಟುಂಬ ಸದಸ್ಯರು ಅಮೆರಿಕದ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ,’ ಎಂದು ರಾಡ್ರಿಗೆಜ್ ಹೇಳಿದ್ದಾರೆ.

ಫಂಡ್ ರೇಸರ್ ಗಾಗಿ ಕಳಿಸಿದ ಮೆಸೇಜ್ ಬ್ಲೇರ್ ಅವರ ಫ್ಯಾಮಿಲಿ ಅನುಮೋದನೆ ನೀಡಿದೆ. ಸೋಮವಾರದ ವರೆಗೆ $96,487 (ಸುಮಾರು ರೂ. 80 ಲಕ್ಷ) ಸಂಗ್ರಹವಾಗಿದ್ದು ರೂ. ಒಂದು ಕೋಟಿ ಸಂಗ್ರಹಿಸುವ ನಿರೀಕ್ಷೆಯಿದೆ ಎಂದು ಆಕೆ ಹೇಳಿದ್ದಾರೆ.

2017 ರಲ್ಲಿ ಲಾ ಪರೀಕ್ಷೆ ಪಾಸು ಮಾಡಿದ ಬಳಿಕ ಕ್ಯಾಲಿಫೋರ್ನಿಯಾದ ಆರೇಂಜ್ ಕೌಂಟಿಯಲ್ಲಿ ಎಲಿಯಟ್ ಮತ್ತು ಕಿಮ್ ಸಾರ್ವಜನಿಕರಿಗಾಗಿ ಸಂಕಲ್ಪಭರಿತ ವಕೀಲರಾಗಿ ಕೆಲಸ ಮಾಡಿದ್ದಾರೆ ಎಂದು ರಾಡ್ರಿಗಜ್ ಅವರ ಪೋಸ್ಟ್ ತಿಳಿಸುತ್ತದೆ. ‘ತಮ್ಮ ಹೃದಯಸ್ಪರ್ಶಿ ಸಂದೇಶದಲ್ಲಿ ಅವರು: ಎಲಿಯಟ್ ಒಬ್ಬ ಸಹಾನುಭೂತಿಯುಳ್ಳ ಮತ್ತು ಬಡ ಕಕ್ಷಿದಾರರಿಗೆ ತನ್ನ ಬದುಕನ್ನೇ ಮುಡುಪಾಗಿಟ್ಟ ವಕೀಲನಾಗಿದ್ದ. ಅವನು ತಾಳ್ಮೆಯ ಪ್ರತಿರೂಪವಾಗಿದ್ದ ಮತ್ತು ಅಪಾರ ಕನಿಕರ ಮತ್ತು ಕರುಣೆಯುಳ್ಳ ವ್ಯಕ್ತಿಯಾಗಿದ್ದ,’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸೆನ್ಸೇಷನಲ್ ಕ್ರೈಮ್ ಕತೆಗಳು: ತೂತುಕುಡಿಯ ಅಮಾನುಷ ಜೋಡಿ ಲಾಕಪ್ ಕೊಲೆ ತಮಿಳುನಾಡು ಜನರನ್ನು ತತ್ತರಿಸುವಂತೆ ಮಾಡಿದ್ದವು!

ಕರುಣಾಮಯಿ ಮತ್ತು ಪ್ರತಿಭಾವಂತನಾಗಿದ್ದ

‘ನಮ್ಮ ಎಲ್ಲ ವಕೀಲರ ಪೈಕಿ ಅವನೇ ಹೆಚ್ಚು ಪ್ರತಿಭಾವಂತನಾಗಿದ್ದ ಮತ್ತು ನಮ್ಮ ಕಚೇರಿಯ ಸಿಬ್ಬಂದಿ ಹಾಗೂ ಅಸಂಖ್ಯಾತ ಜನ ಮತ್ತು ಆರೇಂಜ್ ಕೌಂಟಿಯ ಕಾನೂನು ಸಮುದಾಯ ಅವನನ್ನು ಬಹಳ ಇಷ್ಟಪಡುತಿತ್ತು. ಅವನ ಸಾವಿನ ಸುದ್ದಿ ಕೇಳಿ ನಮ್ಮ ಹೃದಯ ಒಡೆದಂತಾಗಿದೆ,’ ಎಂದು ರಾಡ್ರಿಗಜ್ ಹೇಳಿದ್ದಾರೆ.

ಬಾಜಾ ಕ್ಯಾಲಿಫೋರ್ನೀಯಾದ ಅಟಾರ್ನಿ ಜನಲರ್ ಕಚೇರಿಯಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ತನಿಖೆ ಜಾರಿಯಲ್ಲಿದೆ.

ಮತ್ತಷ್ಟು ಕ್ರೈಮ್ ಕತೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
Daily Horoscope: ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು
Daily Horoscope: ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ಮೂರ‍್ಯಾಕೆ ಸಮುದಾಯಕ್ಕೊಬ್ಬ ಡಿಸಿಎಂನನ್ನು ಮಾಡಲಿ; ಕುಹುಕವಾಡಿದ ಬಾಲಕೃಷ್ಣ
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ನಾಲ್ಕೇ ದಿನದಲ್ಲಿ ಪವಿತ್ರಾ ಗೌಡ ಸಹೋದರ ಸೈಲೆಂಟ್​; ವಿಡಿಯೋ ನೋಡಿ..
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಸಿಎಂ ಸಿದ್ದರಾಮಯ್ಯ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ: ಕಾಶೀನಾಥಯ್ಯ
ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!
ಪವಿತ್ರಾ ಗೌಡ ಸಹೋದರ ಇವತ್ತು ಕೆಣಕಿದರೂ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!