AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ ನೆಪವೊಡ್ಡಿ ಊರಿಗೆ ತೆರಳಿದ ಪತಿ! ಪತ್ನಿ ಕಂಗಾಲು, ಠಾಣೆಯಲ್ಲಿ ದೂರು ದಾಖಲು!

ಬೆಂಗಳೂರು: ಸಾಮಾನ್ಯವಾಗಿ ಗಂಡಂದಿರು ತಮ್ಮ ಹೆಂಡತಿ ತವರು ಮನೆಗೆ ಹೋದ್ರೆ ಸಾಕಪ್ಪಾ ಅಂತಾ ವೇಟ್​ ಮಾಡ್ತಿರ್ತಾರೆ. ಆದರೆ, ಇಲ್ಲೊಬ್ಬ ಮಹಾಶಯ ಲಾಕ್​ಡೌನ್​ ನೆಪವೊಡ್ಡಿ ಊರಿಗೆ ಹೋದವ ಮತ್ತೆ ಇತ್ತ ತಲೆನೇ ಹಾಕ್ತಿಲ್ಲ ಅಂತಾ ಆತನ ಹೆಂಡ್ತಿ ಪೊಲೀಸರ ಮೊರೆ ಹೋಗಿದ್ದಾರೆ. ಹೌದು, ಕಳೆದ ಆರು ತಿಂಗಳ ಹಿಂದೆ ಸೋಮಶೇಖರ್ ಎಂಬಾತನನ್ನ ಕಾರವಾರದಲ್ಲಿ ಮದುವೆಯಾದ ಸಂತ್ರಸ್ತೆ ಪತಿ ಜೊತೆ ಸಿಲಿಕಾನ್​ ಸಿಟಿಗೆ ಬಂದು ನೆಲೆಸಿದ್ದಳು. ಇನ್ನೇನು ನವಜೋಡಿಯ ಸುಖಿ ದಾಂಪತ್ಯ ಶುರುವಾಗಬೇಕಿತ್ತು ಅಷ್ಟರಲ್ಲೇ ವಕ್ಕರಿಸಿತು ಕೊರೊನಾ. ಕೊರೊನಾ ಬೆನ್ನಲ್ಲೇ […]

ಲಾಕ್​ಡೌನ್​ ನೆಪವೊಡ್ಡಿ ಊರಿಗೆ ತೆರಳಿದ ಪತಿ! ಪತ್ನಿ ಕಂಗಾಲು, ಠಾಣೆಯಲ್ಲಿ ದೂರು ದಾಖಲು!
ಸಾಧು ಶ್ರೀನಾಥ್​
| Edited By: |

Updated on:Jun 20, 2020 | 12:20 PM

Share

ಬೆಂಗಳೂರು: ಸಾಮಾನ್ಯವಾಗಿ ಗಂಡಂದಿರು ತಮ್ಮ ಹೆಂಡತಿ ತವರು ಮನೆಗೆ ಹೋದ್ರೆ ಸಾಕಪ್ಪಾ ಅಂತಾ ವೇಟ್​ ಮಾಡ್ತಿರ್ತಾರೆ. ಆದರೆ, ಇಲ್ಲೊಬ್ಬ ಮಹಾಶಯ ಲಾಕ್​ಡೌನ್​ ನೆಪವೊಡ್ಡಿ ಊರಿಗೆ ಹೋದವ ಮತ್ತೆ ಇತ್ತ ತಲೆನೇ ಹಾಕ್ತಿಲ್ಲ ಅಂತಾ ಆತನ ಹೆಂಡ್ತಿ ಪೊಲೀಸರ ಮೊರೆ ಹೋಗಿದ್ದಾರೆ.

ಹೌದು, ಕಳೆದ ಆರು ತಿಂಗಳ ಹಿಂದೆ ಸೋಮಶೇಖರ್ ಎಂಬಾತನನ್ನ ಕಾರವಾರದಲ್ಲಿ ಮದುವೆಯಾದ ಸಂತ್ರಸ್ತೆ ಪತಿ ಜೊತೆ ಸಿಲಿಕಾನ್​ ಸಿಟಿಗೆ ಬಂದು ನೆಲೆಸಿದ್ದಳು. ಇನ್ನೇನು ನವಜೋಡಿಯ ಸುಖಿ ದಾಂಪತ್ಯ ಶುರುವಾಗಬೇಕಿತ್ತು ಅಷ್ಟರಲ್ಲೇ ವಕ್ಕರಿಸಿತು ಕೊರೊನಾ. ಕೊರೊನಾ ಬೆನ್ನಲ್ಲೇ ಬಂತು ಲಾಕ್​ಡೌನ್​.

ನಿನ್ನ ಮೇಲೆ ಇಂಟರೆಸ್ಟ್ ಇಲ್ಲ ಎಂದ ಪತಿ ಮಹಾಶಯ! ಈ ಮಧ್ಯೆ ಲಾಕ್​ಡೌನ್​ ನೆಪವೊಡ್ಡಿ ಪತ್ನಿಯನ್ನ ಬೆಂಗಳೂರಲ್ಲೇ ಬಿಟ್ಟು ಸೋಮಶೇಖರ್​ ವಾಪಸ್​ ಕಾರವಾರಕ್ಕೆ ಹೋಗಿಬಿಟ್ಟನಂತೆ. ಇದೀಗ ಲಾಕ್​ಡೌನ್​ ಮುಗಿದ್ರೂ ಸೋಮಶೇಖರ್​ ಕಿಲ ಕಿಲ ನಾನ್​ ಬರಕ್ಕಿಲ್ಲ ಅಂತಾ ತವರು ಮನೆಯಲ್ಲೇ ಕೂತುಬಿಟ್ಟಿದಾನಂತೆ. ಸಂತ್ರಸ್ತೆ ಎಷ್ಟು ಸಲ ಫೋನ್​ ಮಾಡಿದ್ರು ಇನಿಯ ಮಾತ್ರ ನಾಟ್​ ರೀಚಬಲ್​..!

ಕೊನೆಗೆ ಹೇಗೋ ಮಾಡಿ ಆತನಿಗೆ ಕಾಲ್​ ಕನೆಕ್ಟ್​ ಆಯ್ತು. ಆದರೆ, ಈಗ ನಿನ್ನ ಮೇಲೆ ಇಂಟರೆಸ್ಟ್ ಇಲ್ಲ. ಮೊದಲು ನೀನು ನನ್ನ ಮನೆ ಖಾಲಿ ಮಾಡು ಅಂದನಂತೆ ಪತಿ ಮಹಾಶಯ. ಶಾಕ್​ ಆದ ನವ ವಿವಾಹಿತೆ ಈಗ ಕಂಗಾಲಾಗಿದ್ದಾಳೆ. ಗೃಹಿಣಿಯಾದ ಆಕೆ ಇತ್ತ ಬಾಡಿಗೆ ಕಟ್ಟಲು ಆಗದೆ ಜೀವನ ಸಾಗಿಸಲು ಆಗದೆ ದಿಕ್ಕುತೋಚದಂತಾಗಿದ್ದಾಳೆ. ಕೊನೆಗೂ ಧೈರ್ಯ ಮಾಡಿ ಸುದ್ದಗುಂಟೆಪಾಳ್ಯ ಪೊಲೀಸರ ಮೊರೆ ಹೋಗಿದ್ದಾಳೆ. ಹೇಗಾದರು ಮಾಡಿ ಗಂಡನನ್ನ ಕರೆಸಲು ಅಹವಾಲು ನೀಡಿದ್ದಾರಂತೆ.

Published On - 12:20 pm, Sat, 20 June 20

Follow Us
ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಪ್ರಾಧ್ಯಾಪಕ
ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಪ್ರಾಧ್ಯಾಪಕ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಕ್ ಡ್ರಿಲ್: ಏನೆಲ್ಲ ಪರಿಶೀಲನೆ ನಡೀತು?
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಕ್ ಡ್ರಿಲ್: ಏನೆಲ್ಲ ಪರಿಶೀಲನೆ ನಡೀತು?
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಸಿಸಲು ಬರುವವರಿಗೆ ಹೊಸ ರೂಲ್ಸ್!
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಸಿಸಲು ಬರುವವರಿಗೆ ಹೊಸ ರೂಲ್ಸ್!
ಅದ್ದೂರಿ ರಾಮ ನವಮಿ ಆಚರಣೆಗೆ ಸಜ್ಜಾಗಿದೆ ಅಯೋಧ್ಯೆಯ ರಾಮ ಮಂದಿರ
ಅದ್ದೂರಿ ರಾಮ ನವಮಿ ಆಚರಣೆಗೆ ಸಜ್ಜಾಗಿದೆ ಅಯೋಧ್ಯೆಯ ರಾಮ ಮಂದಿರ
ದೇವಿಯನ್ನು ಹಾಲು ತುಪ್ಪದಿಂದ ಕಾಂಗ್ರೆಸ್‌ ಶುದ್ಧೀಕರಣ
ದೇವಿಯನ್ನು ಹಾಲು ತುಪ್ಪದಿಂದ ಕಾಂಗ್ರೆಸ್‌ ಶುದ್ಧೀಕರಣ
ಶ್ರೀರಾಮ ನವಮಿ ಹಿನ್ನೆಲೆ ಕೆ.ಆರ್. ಮಾರುಕಟ್ಟೆ ಫುಲ್​​ ರಶ್​​
ಶ್ರೀರಾಮ ನವಮಿ ಹಿನ್ನೆಲೆ ಕೆ.ಆರ್. ಮಾರುಕಟ್ಟೆ ಫುಲ್​​ ರಶ್​​
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಂದ ಸುತ್ತೂರು ಮಠಕ್ಕೆ ಭೇಟಿ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಂದ ಸುತ್ತೂರು ಮಠಕ್ಕೆ ಭೇಟಿ
‘ಚಾನ್ಸ್ ಕೊಡಿ ಅಂತ ಕೇಳಿಕೊಂಡ್ರಲ್ಲ’; ಕೃಷ್ಣ ವಿರುದ್ಧ ಕಿಡಿಕಾರಿದ ಗುರು
‘ಚಾನ್ಸ್ ಕೊಡಿ ಅಂತ ಕೇಳಿಕೊಂಡ್ರಲ್ಲ’; ಕೃಷ್ಣ ವಿರುದ್ಧ ಕಿಡಿಕಾರಿದ ಗುರು
ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಬಿಸಿಲನಾಡು ಕಲಬುರಗಿ
ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಬಿಸಿಲನಾಡು ಕಲಬುರಗಿ
ಅಬ್ಬಬ್ಬಾ ಒಂದೆರಡಲ್ಲ... ಒಟ್ಟಿಗೆ ರಸ್ತೆ ದಾಟಿದ್ದು ಬರೋಬ್ಬರಿ 15 ಆನೆಗಳು!
ಅಬ್ಬಬ್ಬಾ ಒಂದೆರಡಲ್ಲ... ಒಟ್ಟಿಗೆ ರಸ್ತೆ ದಾಟಿದ್ದು ಬರೋಬ್ಬರಿ 15 ಆನೆಗಳು!