AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ ನೆಪವೊಡ್ಡಿ ಊರಿಗೆ ತೆರಳಿದ ಪತಿ! ಪತ್ನಿ ಕಂಗಾಲು, ಠಾಣೆಯಲ್ಲಿ ದೂರು ದಾಖಲು!

ಬೆಂಗಳೂರು: ಸಾಮಾನ್ಯವಾಗಿ ಗಂಡಂದಿರು ತಮ್ಮ ಹೆಂಡತಿ ತವರು ಮನೆಗೆ ಹೋದ್ರೆ ಸಾಕಪ್ಪಾ ಅಂತಾ ವೇಟ್​ ಮಾಡ್ತಿರ್ತಾರೆ. ಆದರೆ, ಇಲ್ಲೊಬ್ಬ ಮಹಾಶಯ ಲಾಕ್​ಡೌನ್​ ನೆಪವೊಡ್ಡಿ ಊರಿಗೆ ಹೋದವ ಮತ್ತೆ ಇತ್ತ ತಲೆನೇ ಹಾಕ್ತಿಲ್ಲ ಅಂತಾ ಆತನ ಹೆಂಡ್ತಿ ಪೊಲೀಸರ ಮೊರೆ ಹೋಗಿದ್ದಾರೆ. ಹೌದು, ಕಳೆದ ಆರು ತಿಂಗಳ ಹಿಂದೆ ಸೋಮಶೇಖರ್ ಎಂಬಾತನನ್ನ ಕಾರವಾರದಲ್ಲಿ ಮದುವೆಯಾದ ಸಂತ್ರಸ್ತೆ ಪತಿ ಜೊತೆ ಸಿಲಿಕಾನ್​ ಸಿಟಿಗೆ ಬಂದು ನೆಲೆಸಿದ್ದಳು. ಇನ್ನೇನು ನವಜೋಡಿಯ ಸುಖಿ ದಾಂಪತ್ಯ ಶುರುವಾಗಬೇಕಿತ್ತು ಅಷ್ಟರಲ್ಲೇ ವಕ್ಕರಿಸಿತು ಕೊರೊನಾ. ಕೊರೊನಾ ಬೆನ್ನಲ್ಲೇ […]

ಲಾಕ್​ಡೌನ್​ ನೆಪವೊಡ್ಡಿ ಊರಿಗೆ ತೆರಳಿದ ಪತಿ! ಪತ್ನಿ ಕಂಗಾಲು, ಠಾಣೆಯಲ್ಲಿ ದೂರು ದಾಖಲು!
ಸಾಧು ಶ್ರೀನಾಥ್​
| Edited By: |

Updated on:Jun 20, 2020 | 12:20 PM

Share

ಬೆಂಗಳೂರು: ಸಾಮಾನ್ಯವಾಗಿ ಗಂಡಂದಿರು ತಮ್ಮ ಹೆಂಡತಿ ತವರು ಮನೆಗೆ ಹೋದ್ರೆ ಸಾಕಪ್ಪಾ ಅಂತಾ ವೇಟ್​ ಮಾಡ್ತಿರ್ತಾರೆ. ಆದರೆ, ಇಲ್ಲೊಬ್ಬ ಮಹಾಶಯ ಲಾಕ್​ಡೌನ್​ ನೆಪವೊಡ್ಡಿ ಊರಿಗೆ ಹೋದವ ಮತ್ತೆ ಇತ್ತ ತಲೆನೇ ಹಾಕ್ತಿಲ್ಲ ಅಂತಾ ಆತನ ಹೆಂಡ್ತಿ ಪೊಲೀಸರ ಮೊರೆ ಹೋಗಿದ್ದಾರೆ.

ಹೌದು, ಕಳೆದ ಆರು ತಿಂಗಳ ಹಿಂದೆ ಸೋಮಶೇಖರ್ ಎಂಬಾತನನ್ನ ಕಾರವಾರದಲ್ಲಿ ಮದುವೆಯಾದ ಸಂತ್ರಸ್ತೆ ಪತಿ ಜೊತೆ ಸಿಲಿಕಾನ್​ ಸಿಟಿಗೆ ಬಂದು ನೆಲೆಸಿದ್ದಳು. ಇನ್ನೇನು ನವಜೋಡಿಯ ಸುಖಿ ದಾಂಪತ್ಯ ಶುರುವಾಗಬೇಕಿತ್ತು ಅಷ್ಟರಲ್ಲೇ ವಕ್ಕರಿಸಿತು ಕೊರೊನಾ. ಕೊರೊನಾ ಬೆನ್ನಲ್ಲೇ ಬಂತು ಲಾಕ್​ಡೌನ್​.

ನಿನ್ನ ಮೇಲೆ ಇಂಟರೆಸ್ಟ್ ಇಲ್ಲ ಎಂದ ಪತಿ ಮಹಾಶಯ! ಈ ಮಧ್ಯೆ ಲಾಕ್​ಡೌನ್​ ನೆಪವೊಡ್ಡಿ ಪತ್ನಿಯನ್ನ ಬೆಂಗಳೂರಲ್ಲೇ ಬಿಟ್ಟು ಸೋಮಶೇಖರ್​ ವಾಪಸ್​ ಕಾರವಾರಕ್ಕೆ ಹೋಗಿಬಿಟ್ಟನಂತೆ. ಇದೀಗ ಲಾಕ್​ಡೌನ್​ ಮುಗಿದ್ರೂ ಸೋಮಶೇಖರ್​ ಕಿಲ ಕಿಲ ನಾನ್​ ಬರಕ್ಕಿಲ್ಲ ಅಂತಾ ತವರು ಮನೆಯಲ್ಲೇ ಕೂತುಬಿಟ್ಟಿದಾನಂತೆ. ಸಂತ್ರಸ್ತೆ ಎಷ್ಟು ಸಲ ಫೋನ್​ ಮಾಡಿದ್ರು ಇನಿಯ ಮಾತ್ರ ನಾಟ್​ ರೀಚಬಲ್​..!

ಕೊನೆಗೆ ಹೇಗೋ ಮಾಡಿ ಆತನಿಗೆ ಕಾಲ್​ ಕನೆಕ್ಟ್​ ಆಯ್ತು. ಆದರೆ, ಈಗ ನಿನ್ನ ಮೇಲೆ ಇಂಟರೆಸ್ಟ್ ಇಲ್ಲ. ಮೊದಲು ನೀನು ನನ್ನ ಮನೆ ಖಾಲಿ ಮಾಡು ಅಂದನಂತೆ ಪತಿ ಮಹಾಶಯ. ಶಾಕ್​ ಆದ ನವ ವಿವಾಹಿತೆ ಈಗ ಕಂಗಾಲಾಗಿದ್ದಾಳೆ. ಗೃಹಿಣಿಯಾದ ಆಕೆ ಇತ್ತ ಬಾಡಿಗೆ ಕಟ್ಟಲು ಆಗದೆ ಜೀವನ ಸಾಗಿಸಲು ಆಗದೆ ದಿಕ್ಕುತೋಚದಂತಾಗಿದ್ದಾಳೆ. ಕೊನೆಗೂ ಧೈರ್ಯ ಮಾಡಿ ಸುದ್ದಗುಂಟೆಪಾಳ್ಯ ಪೊಲೀಸರ ಮೊರೆ ಹೋಗಿದ್ದಾಳೆ. ಹೇಗಾದರು ಮಾಡಿ ಗಂಡನನ್ನ ಕರೆಸಲು ಅಹವಾಲು ನೀಡಿದ್ದಾರಂತೆ.

Published On - 12:20 pm, Sat, 20 June 20

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ