AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ ನೆಪವೊಡ್ಡಿ ಊರಿಗೆ ತೆರಳಿದ ಪತಿ! ಪತ್ನಿ ಕಂಗಾಲು, ಠಾಣೆಯಲ್ಲಿ ದೂರು ದಾಖಲು!

ಬೆಂಗಳೂರು: ಸಾಮಾನ್ಯವಾಗಿ ಗಂಡಂದಿರು ತಮ್ಮ ಹೆಂಡತಿ ತವರು ಮನೆಗೆ ಹೋದ್ರೆ ಸಾಕಪ್ಪಾ ಅಂತಾ ವೇಟ್​ ಮಾಡ್ತಿರ್ತಾರೆ. ಆದರೆ, ಇಲ್ಲೊಬ್ಬ ಮಹಾಶಯ ಲಾಕ್​ಡೌನ್​ ನೆಪವೊಡ್ಡಿ ಊರಿಗೆ ಹೋದವ ಮತ್ತೆ ಇತ್ತ ತಲೆನೇ ಹಾಕ್ತಿಲ್ಲ ಅಂತಾ ಆತನ ಹೆಂಡ್ತಿ ಪೊಲೀಸರ ಮೊರೆ ಹೋಗಿದ್ದಾರೆ. ಹೌದು, ಕಳೆದ ಆರು ತಿಂಗಳ ಹಿಂದೆ ಸೋಮಶೇಖರ್ ಎಂಬಾತನನ್ನ ಕಾರವಾರದಲ್ಲಿ ಮದುವೆಯಾದ ಸಂತ್ರಸ್ತೆ ಪತಿ ಜೊತೆ ಸಿಲಿಕಾನ್​ ಸಿಟಿಗೆ ಬಂದು ನೆಲೆಸಿದ್ದಳು. ಇನ್ನೇನು ನವಜೋಡಿಯ ಸುಖಿ ದಾಂಪತ್ಯ ಶುರುವಾಗಬೇಕಿತ್ತು ಅಷ್ಟರಲ್ಲೇ ವಕ್ಕರಿಸಿತು ಕೊರೊನಾ. ಕೊರೊನಾ ಬೆನ್ನಲ್ಲೇ […]

ಲಾಕ್​ಡೌನ್​ ನೆಪವೊಡ್ಡಿ ಊರಿಗೆ ತೆರಳಿದ ಪತಿ! ಪತ್ನಿ ಕಂಗಾಲು, ಠಾಣೆಯಲ್ಲಿ ದೂರು ದಾಖಲು!
ಸಾಧು ಶ್ರೀನಾಥ್​
| Edited By: |

Updated on:Jun 20, 2020 | 12:20 PM

Share

ಬೆಂಗಳೂರು: ಸಾಮಾನ್ಯವಾಗಿ ಗಂಡಂದಿರು ತಮ್ಮ ಹೆಂಡತಿ ತವರು ಮನೆಗೆ ಹೋದ್ರೆ ಸಾಕಪ್ಪಾ ಅಂತಾ ವೇಟ್​ ಮಾಡ್ತಿರ್ತಾರೆ. ಆದರೆ, ಇಲ್ಲೊಬ್ಬ ಮಹಾಶಯ ಲಾಕ್​ಡೌನ್​ ನೆಪವೊಡ್ಡಿ ಊರಿಗೆ ಹೋದವ ಮತ್ತೆ ಇತ್ತ ತಲೆನೇ ಹಾಕ್ತಿಲ್ಲ ಅಂತಾ ಆತನ ಹೆಂಡ್ತಿ ಪೊಲೀಸರ ಮೊರೆ ಹೋಗಿದ್ದಾರೆ.

ಹೌದು, ಕಳೆದ ಆರು ತಿಂಗಳ ಹಿಂದೆ ಸೋಮಶೇಖರ್ ಎಂಬಾತನನ್ನ ಕಾರವಾರದಲ್ಲಿ ಮದುವೆಯಾದ ಸಂತ್ರಸ್ತೆ ಪತಿ ಜೊತೆ ಸಿಲಿಕಾನ್​ ಸಿಟಿಗೆ ಬಂದು ನೆಲೆಸಿದ್ದಳು. ಇನ್ನೇನು ನವಜೋಡಿಯ ಸುಖಿ ದಾಂಪತ್ಯ ಶುರುವಾಗಬೇಕಿತ್ತು ಅಷ್ಟರಲ್ಲೇ ವಕ್ಕರಿಸಿತು ಕೊರೊನಾ. ಕೊರೊನಾ ಬೆನ್ನಲ್ಲೇ ಬಂತು ಲಾಕ್​ಡೌನ್​.

ನಿನ್ನ ಮೇಲೆ ಇಂಟರೆಸ್ಟ್ ಇಲ್ಲ ಎಂದ ಪತಿ ಮಹಾಶಯ! ಈ ಮಧ್ಯೆ ಲಾಕ್​ಡೌನ್​ ನೆಪವೊಡ್ಡಿ ಪತ್ನಿಯನ್ನ ಬೆಂಗಳೂರಲ್ಲೇ ಬಿಟ್ಟು ಸೋಮಶೇಖರ್​ ವಾಪಸ್​ ಕಾರವಾರಕ್ಕೆ ಹೋಗಿಬಿಟ್ಟನಂತೆ. ಇದೀಗ ಲಾಕ್​ಡೌನ್​ ಮುಗಿದ್ರೂ ಸೋಮಶೇಖರ್​ ಕಿಲ ಕಿಲ ನಾನ್​ ಬರಕ್ಕಿಲ್ಲ ಅಂತಾ ತವರು ಮನೆಯಲ್ಲೇ ಕೂತುಬಿಟ್ಟಿದಾನಂತೆ. ಸಂತ್ರಸ್ತೆ ಎಷ್ಟು ಸಲ ಫೋನ್​ ಮಾಡಿದ್ರು ಇನಿಯ ಮಾತ್ರ ನಾಟ್​ ರೀಚಬಲ್​..!

ಕೊನೆಗೆ ಹೇಗೋ ಮಾಡಿ ಆತನಿಗೆ ಕಾಲ್​ ಕನೆಕ್ಟ್​ ಆಯ್ತು. ಆದರೆ, ಈಗ ನಿನ್ನ ಮೇಲೆ ಇಂಟರೆಸ್ಟ್ ಇಲ್ಲ. ಮೊದಲು ನೀನು ನನ್ನ ಮನೆ ಖಾಲಿ ಮಾಡು ಅಂದನಂತೆ ಪತಿ ಮಹಾಶಯ. ಶಾಕ್​ ಆದ ನವ ವಿವಾಹಿತೆ ಈಗ ಕಂಗಾಲಾಗಿದ್ದಾಳೆ. ಗೃಹಿಣಿಯಾದ ಆಕೆ ಇತ್ತ ಬಾಡಿಗೆ ಕಟ್ಟಲು ಆಗದೆ ಜೀವನ ಸಾಗಿಸಲು ಆಗದೆ ದಿಕ್ಕುತೋಚದಂತಾಗಿದ್ದಾಳೆ. ಕೊನೆಗೂ ಧೈರ್ಯ ಮಾಡಿ ಸುದ್ದಗುಂಟೆಪಾಳ್ಯ ಪೊಲೀಸರ ಮೊರೆ ಹೋಗಿದ್ದಾಳೆ. ಹೇಗಾದರು ಮಾಡಿ ಗಂಡನನ್ನ ಕರೆಸಲು ಅಹವಾಲು ನೀಡಿದ್ದಾರಂತೆ.

Published On - 12:20 pm, Sat, 20 June 20

Follow Us
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ