ಬಳ್ಳಾರಿ: ಜಾತಿ ನೆಪವೊಡ್ಡಿ ಮದುವೆಗೆ ನಿರಾಕರಿಸಿದ ಪ್ರಿಯಕರ, ಆತ್ಮಹತ್ಯೆಗೆ ಯತ್ನಿಸಿದ ಯುವತಿ

ಮಾಡೋದೆಲ್ಲ ಮಾಡಿ ಕೊನೆಗೆ ಜಾತಿನೆಪವೊಡ್ಡಿ ಮದುವೆಗೆ ನಿರಾಕರಿಸಿದ ಪ್ರಿಯಕರನ ನಡೆಯಿಂದ ಬೇಸತ್ತ ಯುವತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿ: ಜಾತಿ ನೆಪವೊಡ್ಡಿ ಮದುವೆಗೆ ನಿರಾಕರಿಸಿದ ಪ್ರಿಯಕರ, ಆತ್ಮಹತ್ಯೆಗೆ ಯತ್ನಿಸಿದ ಯುವತಿ
ಪ್ರೀತಿಸಿದ ನಂತರ ಮದುವೆಗೆ ಪ್ರಿಯಕರ ನಿರಾಕರಿಸಿದ ಎಂದು ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದು, ಯುವಕನನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ (ಸಾಂದರ್ಭಿಕ ಚಿತ್ರ)
Follow us
| Updated By: Rakesh Nayak Manchi

Updated on:Jun 30, 2023 | 5:48 PM

ಬಳ್ಳಾರಿ: ಪ್ರೀತಿಸಿದ ಯುವಕ ಕೊನೆಗೆ ಜಾತಿನೆಪವೊಡ್ಡಿ ಮದುವೆಗೆ ನಿರಾಕರಿಸಿದಕ್ಕೆ ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ (Suicide Attempt) ಘಟನೆ ಬಳ್ಳಾರಿಯ (Ballari) ನಾಗಲಕೇರಿಯಲ್ಲಿ ನಡೆದಿದೆ. ಸದ್ಯ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಯುವತಿ ಕೈ ಕೊಟ್ಟ ಹುಡುಗನ ಮೋಸದ ಕತೆ ಪತ್ರದ ಮೂಲಕ ಬರೆದಿಟ್ಟಿದ್ದಾಳೆ. ಸ್ನೆಹ, ಪ್ರೀತಿ, ಹಾಸಿಗೆ ಹಂಚಿಕೊಳ್ಳುವಾಗ ಇರದ ಜಾತಿ ಮದುವೆ ಯಾಗುವಾಗ ಏಕೆ ಬಂತು ಎಂದು ಯುವತಿಯ ಪ್ರಶ್ನಿಸಿದ್ದಾಳೆ.

ಸುನೀಲ್ ಎಂಬ ಯುವಕ ತನ್ನ ಸಹೋದರ ಮಂಜು ಅವರ ಪತ್ನಿ ದೀಪ್ತಿಯ ಸ್ನೇಹಿತೆಯಾಗಿದ್ದ ಅಮೃತಾಳ ಪರಿಚಯ ಮಾಡಿಕೊಂಡಿದ್ದನು. ಈ ಪರಿಚಯ ಸ್ನೇಹಕ್ಕೆ ತಿರುಗಿದ ನಂತರ ಸುನೀಲ್ ಅಮೃತಾಳನ್ನ ಮದುವೆಯಾಗುವುದಾಗಿ ನಂಬಿಸಿದ್ದ. ಬಣ್ಣದ ಮಾತುಗಳಿಗೆ ಮರುಳಾದ ಅಮೃತಾ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ದಾಳೆ. ಅದರಂತೆ ಇಬ್ಬರು ಪಾರ್ಕ್, ಹೊಟೇಲ್ ಅಂತೆಲ್ಲಾ ಸುತ್ತಾಡುತ್ತಿದ್ದರು. ತಮ್ಮ ಜನ್ಮದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದರು.

ಇದನ್ನೂ ಓದಿ: ಪದವಿ ಮುಗಿಸಿದ್ದರೂ ಉದ್ಯೋಗವಿಲ್ಲ, ಮದ್ವೆಯಾಗಲು ಹೆಣ್ಣು ಸಿಕ್ಕಿಲ್ಲ; ಖಿನ್ನತೆಗೆ ಒಳಗಾಗಿದ್ದ ಯುವಕ ಆತ್ಮಹತ್ಯೆ

ಸುನೀನ್​ನನ್ನು ಮನಸಾರೆಯಾಗಿ ಪ್ರೀತಿಸಿದ್ದ ಅಮೃತಾ ಸುನೀಲ್​ಗೆ ಎಲ್ಲವನ್ನೂ ಅರ್ಪಿಸಿದ್ದಳು. ಆದರೆ ಪ್ರೀತಿಯ ಹೆಸರಿನಲ್ಲಿ ಅಮೃತಾಳ ಜೊತೆ ದೈಹಿಕ ಸಂಪರ್ಕ ಬೆಳಿಸಿದ್ದ ಸುನೀಲ್ ಮದುವೆ ಮಾತು ಬರುತ್ತಿದ್ದಂತೆ ಮಾತು ಬದಲಿಸಿದ್ದ. ನಿನ್ನ ಜಾತಿ ಬೇರೆ ನನ್ನದು ಮೇಲ್ಜಾತಿಯೆಂದು ಕಿರಿಕ್ ತಗೆದಿದ್ದಾನೆ. ಹೀಗಾಗಿ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದಕ್ಕೆ ಮನನೊಂದ ಅಮೃತಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಸಿದ್ದಾಳೆ. ಕೂಡಲೇ ಷೋಷಕರು ಅಮೃತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿರುವ ಅಮೃತಾ ಇದೀಗ ಪ್ರೀತಿ ಹೆಸರಿನಲ್ಲಿ ಮಾಡಿದ ಮೋಸದಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದಲ್ಲದೇ ಜಾತಿ ನಿಂದನೆ ಮಾಡಿದ ಸುನೀಲ್ ಹಾಗೂ ಕುಟುಂಬದ ವಿರುದ್ಧ ಅಮೃತಾಳ ಪೋಷಕರು ಬಳ್ಳಾರಿಯ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುನೀಲ್ ಮತ್ತು ಆತನಿಗೆ ಸಹಕರಿಸಿದ ಸಹೋದರ ಮಂಜುನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಆತ್ಮಹತ್ಯೆ ಸಹಾಯವಾಣಿ

ಕಾರಣ ಯಾವುದೇ ಇರಲಿ, ಆತ್ಮಹತ್ಯೆಯ ನಿರ್ಧಾರ ಬೇಡ. ಆತ್ಮಹತ್ಯೆಯ ಭಾವನೆಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದರೆ ನಿಮ್ಮ ಆಪ್ತರೊಂದಿಗೆ ಮಾತನಾಡಿ. ಸಾಧ್ಯವಾಗದಿದ್ದರೆ ಆತ್ಮಹತ್ಯೆ ಸಹಾಯವಾಣಿಗೆ ಕರೆ ಮಾಡಿ. ಸಹಾಯವಾಣಿ ಸಂಖ್ಯೆ – 9152987821

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:47 pm, Fri, 30 June 23