
ಪರೀಕ್ಷೆ ಸಮೀಪಿಸುತ್ತಿದ್ದಂತೆ ಮಕ್ಕಳಲ್ಲಿ ಭಯ, ಆತಂಕ ಶುರುವಾಗೋದು ಸಾಮಾನ್ಯ. ಆದರೆ ಈ ಸಮಸ್ಯೆಯನ್ನು ನಿರ್ಲಕ್ಷ್ಯಿಸಬಾರದು, ಮಕ್ಕಳಿಗೆ ಬೆಂಬಲವಾಗಿ ನಿಲುವುದು ಪೋಷಕರ ಕರ್ತವ್ಯ ಎಂದು ಮನೋವೈದ್ಯರು ಸಲಹೆ ನೀಡುತ್ತಾರೆ. ಪರೀಕ್ಷೆಯ ಭಯ ಮಕ್ಕಳಲ್ಲಿ ಏಕಾಗ್ರತೆಯ ತೊಂದರೆ, ಕಿರಿಕಿರಿ, ನಿದ್ರಾಹೀನತೆ ಮತ್ತು ಹೃದಯ ಬಡಿತ, ಬೆವರುವುದು, ಉಸಿರಾಟದ ತೊಂದರೆ ಮತ್ತು ಕೈಗಳು ನಡುಗುವಿಕೆಯಂತಹ ಹಲವು ಸಮಸ್ಯೆಯನ್ನುಂಟು ಮಾಡುತ್ತದೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ನಿಮ್ಮ ಮಕ್ಕಳು ಕಲಿಕೆಯಲ್ಲಿ ಹಿಂದಿದ್ದರೂ ಕೂಡ ಪರೀಕ್ಷೆಯ ಸಮಯದಲ್ಲಿ ಹೆಚ್ಚಿನ ಒತ್ತಡವನ್ನು ನೀಡಬೇಡಿ ಎಂದು ಪುಣೆಯ ಸಲಹಾ ಮನೋವೈದ್ಯರಾದ ಡಾ. ಪ್ರಸನ್ನ ಫುಟಾನೆ ಎಚ್ಚರಿಸುತ್ತಾರೆ.
ಸಮಯ ಮೀಸಲಿಡಿ:
ನೀವು ಅಧ್ಯಯನ ವೇಳಾಪಟ್ಟಿಯನ್ನು ಹೊಂದಿಸಿಕೊಳ್ಳಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ನೀವು ಪ್ರತಿಯೊಂದು ವಿಷಯಕ್ಕೂ ಎಷ್ಟು ಸಮಯವನ್ನು ಮೀಸಲಿಡಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಿ ಅದಕ್ಕೆ ಅನುಗುಣವಾಗಿ ಅಧ್ಯಯನ ಮಾಡಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ಪ್ರತಿಯೊಂದು ವಿಷಯವನ್ನು ಪರಿಷ್ಕರಿಸಲು ನೀವು ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕು.‘
ಯೋಗ ಧ್ಯಾನ:
ಮೈಂಡ್ಫುಲ್ನೆಸ್ ಮತ್ತು ಆಳವಾದ ಉಸಿರಾಟದಂತಹ ಧ್ಯಾನ ತಂತ್ರಗಳನ್ನು ಅಭ್ಯಾಸ ಮಾಡುವುದರಿಂದ ಆತಂಕವನ್ನು ನಿವಾರಿಸಬಹುದು. ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ನಿಮ್ಮ ಆತಂಕವನ್ನು ದೂರವಾಗಿಸಲು ಯೋಗ ಧ್ಯಾನ ಮಾಡಿ.
ತಡರಾತ್ರಿ ಓದುವ ಅಭ್ಯಾಸ ಬೇಡ:
ಪರೀಕ್ಷೆಯ ಭಯದಿಂದ ಕೆಲವರು ತಡರಾತ್ರಿಯವರೆಗೆ ಎಚ್ಚರವಾಗಿದ್ದು ಅಧ್ಯಯನ ಮಾಡುತ್ತಾರೆ. ಆದರೆ ದಿನದಲ್ಲಿ 8ಗಂಟೆಗಳ ಕಾಲ ನಿದ್ದೆ ಮಾಡಲೇ ಬೇಕು. ನಿದ್ದೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ತುಂಬಾ ಮುಖ್ಯ ಎಂದು ಮನೋವೈದ್ಯರು ಎಚ್ಚರಿಸುತ್ತಾರೆ. ತಡರಾತ್ರಿ ಎದ್ದು ಓದುವುದಕ್ಕಿಂತ ಬೆಳಿಗ್ಗೆ ಬೇಗನೆ ಎದ್ದು ಅಧ್ಯಯನ ಮಾಡುವುದು ಉತ್ತಮ. ನೀವು ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳಲು, ನಿಮ್ಮ ದೇಹಕ್ಕೆ ಸಾಕಷ್ಟು ನಿದ್ರೆ ಒದಗಿಸಬೇಕು. ಅಲ್ಲದೆ, ಅಧ್ಯಯನ ಮಾಡುವಾಗ ಪ್ರತಿ ಅರ್ಧಗಂಟೆಗೊಮ್ಮೆ ವಿರಾಮ ತೆಗೆದುಕೊಳ್ಳುವುದರಿಂದ ನಿಮ್ಮ ಮನಸ್ಸು ಶಾಂತವಾಗುತ್ತದೆ ಮತ್ತು ನೀವು ಓದಿದ್ದನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: SSLC ಬಳಿಕ ಮುಂದೇನು?; ‘ಯಾರದ್ದೋ ಒತ್ತಡಕ್ಕೆ ಮಣಿಯದಿರಿ, ನಿಮ್ಮ ಭವಿಷ್ಯ ನಿಮ್ಮ ಆಯ್ಕೆ’
ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:46 pm, Sun, 9 February 25